ವಿ. ಶಾಂತಾರಾಮ್

ಕರ್ನಾಟಕದಲ್ಲಿ ಹುಟ್ಟಿ, ಮಹಾರಾಷ್ಟ್ರದಲ್ಲಿ ಬೆಳೆದು, ಹುಬ್ಬಳ್ಳಿಯ ಸಿನಿಮಾ ಮಂದಿರದಲ್ಲಿ ಗೇಟ್ ಕೀಪರ್ ಆಗಿ ಸಿನಿಮಾಗಳ ಬಗ್ಗೆ ಒಲವನ್ನು ಮೂಡಿಸಿಕೊಂಡು, ಈ ದೇಶ ಕಂಡ ಅತ್ಯುತ್ತಮ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿದ್ದಲ್ಲದೇವೀರ ಸಾವರ್ಕರ್ ಅವರ ಅಪ್ಪಟ ಅಭಿಮಾನಿಯಾಗಿ ಪ್ರಖ್ಯಾತಿ ಪಡೆದ್ದಿದ್ದಂತಹ ಶ್ರೀ ವಿ. ಶಾಂತಾರಾಮ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ವಿ. ಶಾಂತಾರಾಮ್

ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ

1883 ಮೇ 28, ಅಪ್ರತಿಮ ಸ್ವಾತ್ರಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮದಿನವಾದರೆ, ಮೇ 27, ಬ್ರಿಟೀಷರ ವಿರುದ್ಧ ದಂಗೆ ಎದ್ದು, 1837 ಎಪ್ರಿಲ್ 5 ರಂದು ಮಂಗಳೂರಿನ ಬಾವುಟಗುಡ್ಡದಲ್ಲಿ ಬ್ರೀಟೀಷರ ಧ್ವಜವನ್ನು ಇಳಿಸಿ, ಕನ್ನಡಿಗರ ಹಾಲೇರಿ ಧ್ವಜವನ್ನು ಹಾರಿಸಿ, ೧೩ ದಿನಗಳ ಕಾಲ ಅಂದಿನ ದಕ್ಷಿಣ ಕನ್ನಡವನ್ನು ಬ್ರಿಟೀಷರಿಂದ ಸ್ವಾತ್ರಂತ್ರ್ಯ ಗೊಳಿಸಿದ್ದಂತಹ ವೀರ ಸೇನಾನಿ ಉಪ್ಪಿನಂಗಡಿ ಮಂಜ ಬೈದ್ಯ ಹುತಾತ್ಮನಾದ ದಿನ. ಅಂತಹ ಪ್ರಾಥಃಸ್ಮರಣೀಯ, ಎಲೆಮರೆಕಾಯಿಯಂತೆ ಬೆಳಕಿಗೇ ಬಾರದೇ ಹೋದ ವೀರ ಸಾಹಸಿಯ ಯಶೋಗಾಥೆ ಇದೋ ನಿಮಗಾಗಿ… Read More ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ

ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಒಬ್ಬ ವ್ಯಕ್ತಿ, ಕೆಲವು ಕುಟುಂಬಗಳ ಹೋರಾಟ, ತ್ಯಾಗ ಮತ್ತು ಬಲಿದಾನಗಳಿಂದ ಈ ದೇಶಕ್ಕೆ ಸ್ವಾತ್ರಂತ್ರ್ಯ ದೊರೆತಿದೆ. ಹಾಗಾಗಿ ತಾವು ಈ ದೇಶದ ಕಾನೂನಿಗಿಂತಲೂ ಅತೀತರು ಎಂದು ಬೊಬ್ಬಿರುತ್ತಿರುವ ಈ ಸಂದರ್ಭದಲ್ಲಿ, ಬ್ರಿಟೀಷಶ್ ಸರ್ಕಾರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ವಿರುದ್ಧ ಸೆಟೆದೆದ್ದು, ತಮ್ಮ ಕೆಲಸಕ್ಕೆ ರಾಜೀನಾಮೇ ನೀಡಿ, ಲಂಡನ್ನಿನಲ್ಲಿ ಬ್ರಿಟೀಷರ ವಿರುದ್ಧ ನ್ಯಾಯಯುತವಾಗಿ ಹೋರಾಡಿ, ವಿರೋಚಿತ ಸೋಲನ್ನು ಅನುಭವಿಸಿದರೂ, ಬ್ರಿಟೀಷರು ಮಾಡಿದ ಆ ಅಮಾನವೀಯ ಕೃತ್ಯವನ್ನು ಇಡೀ ಪ್ರಪಂಚಕ್ಕೆ ತಿಳಿಸಿದಂತಹ ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ.… Read More ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಸ್ವಯಂಕೃತ ಅಪರಾಧ

https://enantheeri.com/2023/03/25/rahul_ghandhi/

ಉಗುರಿನಲ್ಲಿ ಚಿವುಟಿ ಹಾಕಬಹುದಾಗಿದ್ದದ್ದಕ್ಕೆ ಕೊಡಲಿಯನ್ನು ತೆಗೆದುಕೊಂಡರು ಎನ್ನುವಂತೆ, ರಾಹುಲ್ ಗಾಂಧಿ ತನ್ನ ಸಡಿಲ ನಾಲಿಕೆ, ಸ್ವಪ್ರತಿಷ್ಟೆ, ಅಹಂಮಿಕೆ ಮತ್ತು ಈ ಪ್ರಕರಣದ ಗಂಭೀರತೆ ಅರಿಯದೇ ಉಡಾಫೆ ತನದಿಂದ ಸ್ವಯಂ ಕೃತ ಅಪರಾಧವಾಗಿ ಮಾದಿದ್ದುಣ್ಣೋ ಮಹರಾಯ ಎನ್ನುವಂತೆ ಶಿಕ್ಷ ಅನುಭವಿಸಬೇಕಾಗಿದೆಯೇ ಹೊರತು ಬಿಜೆಪಿ, ಕೇಂದ್ರ ಸರ್ಕಾರ ಮೋದಿಯವರ ಮೇಲೆ ಹರಿ ಹಾಯುತ್ತಿರುವುದು ಹಾಸ್ಯಾಸ್ಪದವಾಗಿದೆ ಅಲ್ವೇ?… Read More ಸ್ವಯಂಕೃತ ಅಪರಾಧ

ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಈ ದೇಶಕ್ಕಾಗಿ ಅಪಾರವಾಗಿ ಕೊಡುಗೆಯನ್ನು ನೀಡಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಯ ಸುಳ್ಳು ಆರೋಪಗಳಿಂದ ಅವರಿಗೆ ನಿಜವಾಗಿಯೂ ಸಲ್ಲಬೇಕಾಗದ ಗೌರವಗಳಿಂದ ವಂಚಿತರಾಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಮುಂತಾದವರ ಅನೇಕರ ಪಟ್ಟಿಯಲ್ಲಿ ಡಾ.ಕೇಶವ ಬಲಿರಾಮ ಹೆಡಗೇವಾರ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರೂ ಸೇರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ದೇಶದ ಬಗ್ಗೆ ಅವರಿಗಿದ್ದ ದೂರದೃಷ್ಟಿಯಿಂದಾಗಿ ಅವರು ಕಟ್ಟಿದ ಸಂಸ್ಥೆ ಅವರ ನಿಧನವಾಗಿ 8 ದಶಕಗಳ ನಂತರವೂ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು 2025 ರಲ್ಲಿ… Read More ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆಗಳಿಗೆ ಹೋಗುವ  ಆಬಾವೃದ್ದರಾದಿಯಾದ ಸ್ವಯಂಸೇವಕರಿಗೆ  ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..  ಹಾಡು ಖಂಡಿತವಾಗಿಯೂ ತಿಳಿದೇ ಇರುತ್ತದೆ. ಈ ಹಾಡಿನ ಪಲ್ಲವಿ ಮತ್ತು ಚರಣಗಳಲ್ಲಿ ಬರುವ ಪ್ರತಿಯೊಂದು ಪದವೂ ಸ್ವಯಂಸೇವಕನ ಬಾಳಿನಲ್ಲಿ ಅಕ್ಷರಶಃ ಸತ್ಯವಾಗಿರುವುದಕ್ಕೆ ನನ್ನಂತಹ ಕೋಟ್ಯಾಂತರ ಸ್ವಯಂಸೇವಕರೇ ಸಾಕ್ಷಿಯಾಗಿದೆ. ಹಾಗಾಗಿ, ವಯಕ್ತಿಕವಾಗಿ ನನಗಂತೂ ಪ್ರತೀ ಬಾರಿ ಈ ಹಾಡು ಹಾಡುವಾಗಲಾಗಲೀ ಇಲ್ಲವೇ ಕೇಳುವಾಗಲೀ ಮೈ ರೋಮಾಂಚನ ಗೊಳ್ಳುತ್ತದೆ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ? ಎಂದು ನೀವೆಲ್ಲ ಯೋಚಿಸುತ್ತಿರುವುದಕ್ಕೆ ಕಾರಣವಿದೆ. ಇತ್ತೀಚೆಗೆ ಸಾಮಾಜಿಕ… Read More ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ವಿನಾಯಕ ದಾಮೋದರ ಸಾವರ್ಕರ್ ಸಂಸ್ಮರಣೆ

ಅಂದು 1910 ಮಾರ್ಚ್ 13, ಭಾನುವಾರ. ಆ ವ್ಯಕ್ತಿ ಪ್ಯಾರಿಸ್ ನಿಂದ ಲಂಡನ್ನಿನ ಕಡೆಗೆ ಹೊರಡುವ ರೈಲು ಹತ್ತಿದ್ದರು. ಲಂಡನ್ನಿನ ವಿಕ್ಟೋರಿಯಾ ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ರಾತ್ರಿ 2 ಗಂಟೆ. ನಾಲ್ಕಾರು ಗುಪ್ತಚರರು ಧಡಧಡನೆ ಬಂದು ಅವರನ್ನು ಬಂಧಿಸಿದರು. ರಾಜದ್ರೋಹ, ಜಾಕ್ಸನ್ ಕೊಲೆಗೆ ನೆರವಾದ ಅಪರಾಧ, ಲಂಡನ್ನಿನಲ್ಲಿ ಶಸ್ತ್ರಾಸ್ತ್ರ ಶೇಖರಣೆ, ಭಾರತ ಹಾಗೂ ಲಂಡನ್ನಿನಲ್ಲಿ ಮಾಡಿದ ರಾಜದ್ರೋಹ ಭಾಷಣಗಳು, ಪರಾರಿ ಹೀಗೆ ಹತ್ತಾರು ಆರೋಪಗಳ ಅಡಿಯಲ್ಲಿ ಅವರನ್ನು ಬಂಧಿಸಿದರು. ಜೂನ್ ಪ್ರಾರಂಭದಲ್ಲಿ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್… Read More ವಿನಾಯಕ ದಾಮೋದರ ಸಾವರ್ಕರ್ ಸಂಸ್ಮರಣೆ

ಶ್ರೀ ಮದನ್ ಲಾಲ್ ಡಿಂಗ್ರಾ

ಆಗ 1900 ಆರಂಭದ ದಿನಗಳು. ಇಂಗ್ಲೇಂಡಿನ ನೈಟ್ ಕ್ಲಬ್ಬಿನಲ್ಲಿ ಚೆನ್ನಾಗಿ ಉಡುಪು ಧರಿಸಿಕೊಂಡು ಅಲ್ಲಿಯ ರಂಗು ರಂಗಿನ ಬೆಳೆಕಿನಲ್ಲಿ ರಂಗಾದ ಹುಡುಗಿಯರೊಂದಿಗೆ ಶೋಕಿ ಮಾಡುತ್ತಿದ್ದ ಭಾರತೀಯ ತರುಣನೊಬ್ಬ ಶ್ಯಾಮ್ ಜೀ ವರ್ಮ ಮತ್ತು ವೀರಸಾವರ್ಕರ್ ಅವರ ಪ್ರಖರ ಮಾತುಗಳಿಂದ ಪ್ರೇರಿತನಾಗಿ ಇದ್ದಕ್ಕಿದ್ದಂತೆಯೇ ತನ್ನ ಶೋಕಿಗಳನ್ನೆಲ್ಲಾ ಬದಿಗೊತ್ತಿ ತನ್ನ ತಾಯ್ನಾಡು ಭಾರತವನ್ನು ದಾಸ್ಯದಲ್ಲಿ ಇಟ್ಟುಕೊಂಡಿದ್ದ ಬ್ರಿಟೀಷರಿಗೆ ಅವರ ನೆಲದಲ್ಲಿಯೇ ಬುದ್ದಿ ಕಲೆಸಬೇಕೆಂದು ಫಣ ತೊಟ್ಟು ಇಂಗ್ಲೆಂಡಿನಲ್ಲಿಯೇ ಮರಣ ದಂಡನೆಗೆ ಒಳಗಾಗಿ ಬ್ರಿಟೀಷರನ್ನು ಭಾರತದಿಂದ ಹೊರಹಾಕಲು ತನ್ನ ಪ್ರಾಣವನ್ನೇ ತ್ಯಾಗ… Read More ಶ್ರೀ ಮದನ್ ಲಾಲ್ ಡಿಂಗ್ರಾ

ವೀರ ಸಾವರ್ಕರ್

ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ. ಕ್ರಾಂತಿಕಾರಿಗಳಿಗೆ ಸ್ಪೂರ್ತಿ. ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ.… Read More ವೀರ ಸಾವರ್ಕರ್