ನಿರ್ದೇಶಕ ದೊರೈ-ಭಗವಾನ್

ಸದಭಿರುಚಿಯ ಚಿತ್ರಗಳು ಅದರಲ್ಲೂ 24 ಕಾದಂಬರಿ ಚಿತ್ರ ಆಧಾರಿತ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ರಾಜಕುಮಾರ್ ಅವರನ್ನು ಜೇಮ್ಸ್ ಬಾಂಡ್ ರೂಪದಲ್ಲಿ ಕನ್ನಡದಲ್ಲಿ ತೋರಿಸಿದ್ದ, ೮೦ರ ದಶಕದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮೀ ಯಶಸ್ವಿ ಜೋಡಿಯನ್ನಾಗಿಸಿದ್ದ ಎಸ್. ಕೆ. ಭಗವಾನ್ ಎಂಟಾಣೆಯ ಮೂಲಕ ದೊರೈ-ಭಗವಾನ್ ಎಂಬ ಯಶಸ್ವಿ ಜೋಡಿಯಾದ ರೋಚಕದ ಕಥೆಯ ಜೊತೆ ಭಗವಾನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ನುಡಿ ನಮಗಳು ಇದೋ ನಿಮಗಾಗಿ… Read More ನಿರ್ದೇಶಕ ದೊರೈ-ಭಗವಾನ್

ಗುರು ಶಿಷ್ಯರು ಸಿನಿಮಾ ವಿಮರ್ಶೆ

ಕನ್ನಡದಲ್ಲಿ ಕ್ರೀಡೆಗೆ ಸಂಬದ್ಧ ಪಟ್ಟ ಸಿನಿಮಾಗಳು ಕಡಿಮೆಯೇ ಇರುವಾಗ ನಿರ್ದೇಶಕ ಜಡೇಶ್ ಕಲ್ಪನೆಯನ್ನು ನಿರ್ಮಾಕಕರಾದ ತರುಣ್ ಸುಧೀರ್ ಮತ್ತು ಶರಣ್ ಕ್ರಿಕೆಟ್‌, ಫುಟ್‌ಬಾಲ್‌ ಆಟಗಳ ಮುಂದೆ ಸೊರಗಿ ಹೋಗಿ ಭಾಗಶಃ ಕಣ್ಮರೆಯೇ ಆಗಿ ಹೋಗುತ್ತಿರುವ ಅಪ್ಪಟ ದೇಸೀ ಆಟವಾದ ಕೊಕ್ಕೊ ಆಟವನ್ನು ಮುಂದಿಟ್ಟುಕೊಂಡು, ಮುಗ್ಧ ಹಳ್ಳಿಯ ಜನರು ಜಮೀನ್ದಾರನ ಪಾಳೇಗಾರಿಕೆಯನ್ನು ಹೇಗೆ ಮುರಿಯುತ್ತಾರೆ ಎಂಬುದರ ಕುರಿತಾದ ಸಿನಿಮಾವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.… Read More ಗುರು ಶಿಷ್ಯರು ಸಿನಿಮಾ ವಿಮರ್ಶೆ

ಕಾಂತಾರ ಒಂದು ದಂತಕಥೆ

ಮಾನವ ಹಾಗೂ ಪರಿಸರದ ನಡುವಿನ ಸಂಘರ್ಷ, ಜಮೀನ್ದಾರರ ಕಾಡು ಒತ್ತುವರಿ, ಅರಣ್ಯಾಧಿಕಾರಿಗಳ ಕಿರಿಕಿರಿಯ ಜೊತೆಗೆ ಕರಾವಳಿಯ ಸಂಸ್ಕೃತಿ, ಕಂಬಳದ ಸೊಬಗು, ಭೂತಕೋಲದ ಬಗ್ಗೆ ಅಲ್ಲಿಯ ಜನರ ನಂಬಿಕೆಯನ್ನು ಅಧ್ಭುತವಾಗಿ ತೆರೆ ಮೇಲೆ ತರಲಾಗಿರುವ ಕಾಂತಾರ ಚಿತ್ರದ ವಸ್ತುನಿಷ್ಠ ವಿಮರ್ಶೆ ಇದೋ ನಿಮಗಾಗಿ.… Read More ಕಾಂತಾರ ಒಂದು ದಂತಕಥೆ

ಕಶ್ಮೀರ್ ಫೈಲ್ಸ್ ಅನುಭವ

ಮಾರ್ಚ್ ೧೧ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದರೂ ತಪ್ಪಾಗದು. ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸವನ್ನು ಕರಾರುವಾಕ್ಕಾಗಿ ತಿಳಿದಿರುವ ನಮಗೆ ಕೇವಲ 32 ವರ್ಷಗಳ ಹಿಂದೆ ನಡೆದಿದ್ದ ಕಾಶ್ಮೀರೀ ಪಂಡಿತರ ನರಮೇಧದ ಕುರಿತಾಗಿ ನಿಜವಾದ ಇತಿಹಾಸವನ್ನೇ ತಿಳಿಯದಿದ್ದ ನಮಗೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿಯವರ ಕಾಶ್ಮೀರಿ ಫೈಲ್ಸ್ ಚಲನಚಿತ್ರ ಬಿಡುಗಡೆಯಾದ ದಿನ. ಈ ಚಿತ್ರದ ಮೂಲಕ ಆ ನಿರ್ದೇಶಕ ಕಾಶ್ಮೀರದ ಕುರಿತಾದ ನೈಜ ಇತಿಹಾಸನ್ನು ಜಗತ್ತಿಗೇ ತಿಳಿಸಿದ್ದಕ್ಕಾಗಿ ಮೊದಲು ಅಭಿನಂದನೆಗಳನ್ನು ಸಲ್ಲಿಸೋಣ. ಚಿತ್ರ… Read More ಕಶ್ಮೀರ್ ಫೈಲ್ಸ್ ಅನುಭವ

ಸಂಚಾರಿ ವಿಜಯ್

ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು.| ಮದುವೆಗೋ ಮಸಣಕೋ ಹೋಗೆಂದ ಕಡೆ ಗೋಡು ಪದ ಕುಸಿಯೆ ನೆಲವಿಹುದು ಮಂಕುತಿಮ್ಮ || ಡಿವಿಜಿಯವರು ಅಂದು ಯಾರನ್ನು ತಲೆಯಲ್ಲಿ ಇಟ್ಟುಕೊಂಡು ಈ ಕಗ್ಗವನ್ನು ಬರೆದರೋ ಏನೋ? ಆದರೆ ಈ ಪದ್ಯ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ರಂಗಭೂಮಿ ಮತ್ತು ಚಲನಚಿತ್ರನಟ ಮತ್ತು ನಿರ್ದೇಶಕ ಸಂಚಾರಿ ವಿಜಯ್ ಅವರ ಪಾಲಿಗಂತೂ ಅನ್ವಯವಾಗುತ್ತದೆ ಎಂದರೂ ತಪ್ಪಾಗಲಾರದು. ಕೆಲ ವರ್ಷಗಳ ಹಿಂದೆ, ದಯಾಳ್ ಪದ್ಮನಾಭ್ ಅವರ ನಿರ್ದೇಶನದ ಸತ್ಯಹರಿಶ್ಚಂದ್ರ… Read More ಸಂಚಾರಿ ವಿಜಯ್

ಬಾಲ್ಯದ ಬಯಾಸ್ಕೋಪ್

ಬೇಸಿಗೆಯಲ್ಲಿ ಪರೀಕ್ಷೆ ಮುಗಿದು ಫಲಿತಾಂಶ ಬಂದಿದ್ದೇ ತಡಾ ಗಂಟು ಮೂಟೆ ಕಟ್ಟಿಕೊಂಡು ತಾತನ ಮನೆಗೆ ಹೋಗುವುದು ನಮ್ಮ ಮನೆಯ ವಾಡಿಕೆ. ನಮ್ಮೂರಿಗೆ ಹೋಗಲು ಪ್ರಮುಖ ಆಕರ್ಷಣೆಯೆಂದರೆ ಅದೇ ಸಮಯದಲ್ಲಿ ಎರಡು ವಾರಗಳ ಕಾಲ ನಡೆಯುತ್ತಿದ್ದ ಊರ ಹಬ್ಬ, ಜಾತ್ರೆ, ದೇವಸ್ಥಾನದ ಮುಂದಿದ್ದ ಕಲ್ಯಾಣಿ, ಅಜ್ಜಿ ಮಾಡಿಕೊಡುತ್ತಿದ್ದ ಕೆಂಡ ರೊಟ್ಟಿ ಗಟ್ಟಿ ಚಟ್ನಿ ಮತ್ತು ಬೆಣ್ಣೆ, ತಾತನ ತೊಡೆ ಮೇಲೆ ಕುಳಿತುಕೊಂಡು ಕೇಳುತ್ತಿದ್ದ ಕಥೆಗಳಲ್ಲದೇ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಸಿನಿಮಾ ಪ್ರೊಜೆಕ್ಷನ್. ನಮ್ಮೂರು ಬಾಳಗಂಚಿ ಸುಮಾರು ಮುನ್ನೂರರಿಂದ ನಾಲ್ಕು… Read More ಬಾಲ್ಯದ ಬಯಾಸ್ಕೋಪ್

ಶಂಖನಾದ ಅರವಿಂದ್

ಜನರು ತಮ್ಮೆಲ್ಲಾ ದೈನಂದಿನದ ಕಷ್ಟ ಸುಖಃಗಳನ್ನು ಮರೆಯುವುದಕ್ಕಾಗಿ ಮನೋರಂಜನೆಗಾಗಿ ಕೆಲ ಕಾಲ ನಾಟಕ ಮತ್ತು ಚಲನಚಿತ್ರಗಳನ್ನು ನೋಡಿ ಅದರಲ್ಲಿ ಬರುವ ನಾಯಕ ಮತ್ತು ನಾಯಕಿಯರೊಂದಿಗೆ ತಮ್ಮ ಬದುಕನ್ನು ಹೋಲಿಸಿಕೊಂಡು ತಮ್ಮ ಕಷ್ಟಗಳನ್ನು ಮರೆಯುತ್ತಾರೆ. ಇವೆಲ್ಲವೂ ನಾಯಕ ನಾಯಕಿ ಪ್ರಧಾನವಾಗಿದ್ದರೂ ಅವರಿಬ್ಬರ ಕಥೆಯ ಏಕತಾನತೆಯನ್ನು ತಡೆಯುವ ಸಲುವಾಗಿ ನಾಯಕ ಮತ್ತು ನಾಯಕಿಯ ಕಥೆಗೆ ಸಮಾನಾಂತರವಾಗಿ ಹಾಸ್ಯ ದೃಶ್ಯಗಳನ್ನು ಅಳವಡಿಸಿಕೊಂಡಿರುತ್ತಾರೆ. ಹಾಗಾಗಿ ಅಂದೂ ಇಂದು ಮತ್ತು ಮುಂದೆಯೂ ಹಾಸ್ಯನಟರ ಕಾಲ್ ಶೀಟ್ ಮೊದಲು ಪಡೆದುಕೊಂಡು ನಂತರ ನಾಯಕರನ್ನು ಆರಿಸಿಕೊಳ್ಳುವ ಸಂಪ್ರದಾಯ… Read More ಶಂಖನಾದ ಅರವಿಂದ್

ನನಗೆ ಹಿಂದೀ ಬರೋದಿಲ್ಲ, ನಾವು ದ್ರಾವಿಡರು

ಕಳೆದ ಒಂದೂವರೆ ವರ್ಷಗಳಿಂದ ಕೂರೋನಾ ಮಹಾಮಾರಿ ವಕ್ಕರಿಸಿ ಇಡೀ ವಿಶ್ವವೇ ಒಂದು ರೀತಿ ಸ್ಥಬ್ಧವಾಗಿದ್ದು ಎಲ್ಲೆಡೆಯೂ ಲಾಕ್ ಡೌನ್ ಪರಿಸ್ಥಿತಿ ಇದ್ದು ಈಗ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿಯೋ ಇಲ್ಲವೇ, ನಾವೇ ಅದರೊಂದಿಗೇ ಜೀವನ ನಡೆಸುವ ಕಲೆಯನ್ನು ಕಲಿತುಕೊಂಡಿದ್ದೇವೆ ಎನ್ನಬಹುದಾದ ಪರಿಸ್ಥಿತಿಯಲ್ಲಿ, ಕೂರೋನಾಕ್ಕಿಂತಲೂ ಹೆಚ್ಚಾಗಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಪ್ರತೀ ದಿನವೂ ಮಾಧ್ಯಮದವರ ಕೂರೋನಾ ಕುರಿತಾದ ಕಾರ್ಯಕ್ರಮಗಳಿಂದ ಭಯಭೀತರನ್ನಾಗಿ ಮಾಡಿಸುವ ಜೊತೆಗೆ ಹಾಗೇ ಸುಮ್ಮನೆ ವಿಷಯಾಂತರ ಮಾಡುತ್ತಾ,, ಪ್ರಕಾಶ್ ರೈ ಕೆ.ಜಿ.ಎಫ್ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ,… Read More ನನಗೆ ಹಿಂದೀ ಬರೋದಿಲ್ಲ, ನಾವು ದ್ರಾವಿಡರು

ಭೀಮನ ಅಮಾವಾಸ್ಯೆ ಅಣ್ಣಾವ್ರ ನೆನಪು

ಕಹಿ ಘಟನೆಗಳನ್ನು ಆದಷ್ಟು ಬೇಗ ಮರೆತು ಬಿಡಬೇಕು ಅಂತಾ ದೊಡ್ಡವರು ಹೇಳ್ತಾರೆ. ಆದ್ರೇ ಏನ್ಮಾಡೋದು? ಕೆಲವೊಂದು ಘಟನೆಗಳು ಒಂದೊಂದು ಜಾಗ ಒಂದೊಂದು ಹಬ್ಬ ಇಲ್ಲವೇ ವಸ್ತುಗಳೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಅದನ್ನು ನೋಡಿದ ತಕ್ಷಣವೇ ಥಟ್ ಅಂತಾ ನೆನಪಾಗಿ ಬಿಡುತ್ತವೆ. ಅದೇ ರೀತಿಯಲ್ಲಿ ಭೀಮನ ಅಮಾವಾಸ್ಯೆ ಬಂದ್ರೇ ಗಂಡನ ಪೂಜೆ, ಭಂಡಾರ ಒಡೆಯುವ ಜೊತೆ ವರ‌ನಟ ಅಣ್ಣಾವ್ರೇ ನೆನಪಾಗ್ತಾರೆ ನೋಡಿ. ಅದು 2000ನೇ ಇಸವಿ ಜುಲೈ ತಿಂಗಳು ಭೀಮನ ಅಮಾವಾಸ್ಯೆಯ ದಿನ. ನಮ್ಮ ಮನೆಗೆ ಮಹಾಲಕ್ಷ್ಮಿಯಾಗಿ ಮಗಳು ಬಂದು… Read More ಭೀಮನ ಅಮಾವಾಸ್ಯೆ ಅಣ್ಣಾವ್ರ ನೆನಪು