ಹೂವಿನ ಹಾರ

ಹಬ್ಬ ಹರಿ ದಿನಗಳಲ್ಲಿ ದೇವರ ಅಲಂಕಾರ ಮಾಡಲು ಯಾವುದೇ ರೀತಿಯ ಎಷ್ಟೇ ಆಭರಣಗಳಿಂದ ದೇವರನ್ನು ಅಲಂಕರಿಸಿದರೂ ವಿಧ ವಿಧದ ಹೂವುಗಳು ಮತ್ತು ಹೂವಿನ ಹಾರಗಳ ಅಲಂಕಾರದ ಮುಂದೆ ಉಳಿದೆಲ್ಲವೂ ನಗಣ್ಯವೇ ಸರಿ. ಅದೇ ರೀತಿ ಮುನಿಸಿಕೊಂಡಿರುವ ನಾರಿಯರನ್ನು ಸರಳವಾಗಿ ಮತ್ತು ಸುಲಭವಾಗಿ ಒಲಿಸಿಕೊಳ್ಳಲು ಒಂದು ಮೊಳ ಮಲ್ಲೇ ಅಥವಾ ಮಲ್ಲಿಗೆ ಹೂ ಸಾಕು ಎನ್ನುವುದು ಕೆಲವು ಅನುಭವಸ್ತರ ಅಂಬೋಣ. ಸುಮಾರು ವರ್ಷಗಳ ಹಿಂದೆ ಕೃಷ್ಣರಾಜಾ ಮಾರುಕಟ್ಟೆಯಲ್ಲಿ ಹಬ್ಬದ ಹಿಂದಿನ ದಿನ ಹೂವಿನ ಹಾರ ಕೊಂಡು ಕೊಳ್ಳಲು ಹೋದಾಗ… Read More ಹೂವಿನ ಹಾರ

ಶ್ರೀ ಕೃಷ್ಣ ಜನ್ಮಾಷ್ಟಮಿ

ಶ್ರಾವಣ ಬಹುಳ ಅಷ್ಟಮಿಯಂದು ದೇಶಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲಾಗುವ ಶ್ರೀ ಕೃಷ್ಣಜನ್ಮಾಷ್ಟಮಿ ಹಬ್ಬದ ವೈಶಿಷ್ಠ್ಯಗಳು ಮತ್ತು ಅದರ ಆಚರಣೆಯ ಜೊತೆಗೆ ಶ್ರೀ ಕೃಷ್ಣನ ಜನ್ಮದಿನವನ್ನು ಎರಡು ವಿಭಿನ್ನ ದಿನಗಳಲ್ಲಿ ಏಕೆ ಆಚರಿಸುತ್ತಾರೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶ್ರೀ ಕೃಷ್ಣ ಜನ್ಮಾಷ್ಟಮಿ

ಉಪಾಕರ್ಮ

ಉಪಾಕರ್ಮ ಎಂದರೆ ಏನು? ಅದನ್ನು ಯಾರು? ಎಂದು? ಏತಕ್ಕಾಗಿ? ಮತ್ತು ಹೇಗೆ ಆಚರಿಸುತ್ತಾರೆ?

ಋಗ್ ಉಪಾಕರ್ಮ ‌ಮತ್ತು ಯಜುರ್ ಉಪಾಕರ್ಮ ಬೇರೆ ಬೇರೆ ದಿನಗಳಲ್ಲಿ ಏಕೆ ಬರುತ್ತದೆ?

ಒಂದು, ಎರಡು, ಮೂರು, ನಾಲ್ಕು ಮತ್ತೇ ಕೆಲವರು ಐದನೇ ಜನಿವಾರವನ್ನೂ ಧರಿಸುವುದು ಏತಕ್ಕಾಗಿ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಉಪಾಕರ್ಮ

ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳು

ತಮ್ಮ ಸುಮಂಗಲಿತನವು ಸುದೀರ್ಘವಾಗಿರಲಿ ಎಂಬ ಆಶಯದಿಂದ ಆಚರಿಸಲಾಗುವ ವರಮಹಾಲಕ್ಶ್ಮಿ ಹಬ್ಬದಲ್ಲಿ ಇಂದು ಭಕ್ತಿಗಿಂತ, ಆಡಂಬರವೇ ಹೆಚ್ಚಾಗಿ ದೇವರ ಪೂಜೆಗಿಂತ ತಮ್ಮ ಸಿರಿ ಸಂಪತ್ತುಗಳನ್ನು ಪ್ರದರ್ಶಿಸುವ ಹಬ್ಬವಾಗುತ್ತಿರುವ ಹಿನ್ನಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳ ವಿವರಗಳು ಇದೋ ನಿಮಗಾಗಿ… Read More ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳು

ನಾಗರ ಪಂಚಮಿ

ಗ್ರೀಷ್ಮ ಋತುವಿನ ಜೇಷ್ಠ ಮತ್ತು ಆಷಾಡ ಮಾಸಗಳಲ್ಲಿ ಬಿದ್ದ ಅಲ್ಪ ಸ್ವಲ್ಪ ಮಳೆಯಲ್ಲಿ ಕೃಷಿಯ ಬಿತ್ತನೆ ಕಾರ್ಯ ಮುಗಿಸಿ ಬಳಲಿ, ವರ್ಷ ಋತುವಿನಲ್ಲಿ ಒಳ್ಳೆಯ ಮಳೆಯಾಗಿ ಉತ್ತಮ ಬೆಳೆಯಲ್ಲಿರುವಾಗಲೇ ಬರುವ ಮಾಸವೇ ಶ್ರಾವಣ ಮತ್ತು ಭಾದ್ರಪತ . ಶ್ರಾವಣ ಮತ್ತು ಭಾದ್ರಪತ ಮಾಸಗಳೆಂದರೆ ಹಬ್ಬಗಳ ಮಾಸಗಳು ಎಂದರೆ ತಪ್ಪಾಗಲಾರದು. ಸಾಲು ಸಾಲುಗಳ ಹಬ್ಬಗಳಲ್ಲಿ ಎರಡನೆಯ (ಆಷಾಡದ ಕಡೆಯ ದಿನ ಭೀಮನಮಾವಾಸ್ಯೆ) ಹಬ್ಬವೇ ನಾಗರ ಪಂಚಮಿ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ವಿಶೇಷ ಭಯ, ಭಕ್ತಿ ಮತ್ತು ಮಡಿಯಿಂದ… Read More ನಾಗರ ಪಂಚಮಿ

ಶ್ರಾವಣ ಶನಿವಾರ ಪಡಿ ಬೇಡುವುದು

ಶ್ರಾವಣ ಮಾಸದ ಶನಿವಾರಗಳಂದು, ಶ್ರೀನಿವಾಸಾಯ ಮಂಗಳಂ, ರಂಗನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ ಎಂದು ಭಗವಂತನ ಹೆಸರಿನಲ್ಲಿ ಪಡಿ ಬೇಡುವುದು ಎಂದರೇನು? ಶ್ರಾವಣ ಮಾಸದಲ್ಲಿಯೇ ಈ ರೀತಿ ಪಡಿಯನ್ನು ಬೇಡುವುದರ ಹಿನ್ನಲೆ ಏನು? ಪಡಿ ಬೇಡಿದ್ದನ್ನು ಏನು ಮಾಡುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಶ್ರಾವಣ ಶನಿವಾರ ಪಡಿ ಬೇಡುವುದು

ಭೀಮನ ಅಮಾವಾಸ್ಯೆ

ಪತಿಯ ಶ್ರೇಯೋಭಿವೃದ್ಧಿ ಮತ್ತು ತನ್ನ ಸುಮಂಗಲೀತನ ದೀರ್ಘವಾಗಿರಲೀ ಎಂದು ಪತ್ನಿಯು ಗಂಡನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ ಎಂದು ಎಲ್ಲರೂ ತಿಳಿದಿರುವಾಗ, ಭೀಮನಿಗೂ ಈ ಹಬ್ಬಕ್ಕೂ ಎಲ್ಲಿಯ ಸಂಬಂಧ? ಭೀಮನ ಅಮಾವಾಸ್ಯೆ ಹಬ್ಬದ ವೈಶಿಷ್ಟ್ಯತೆಗಳು ಮತ್ತು ಆದರ ಆಚರಣೆಗಳು ಇದೋ ನಿಮಗಾಗಿ… Read More ಭೀಮನ ಅಮಾವಾಸ್ಯೆ

ಅರಿವೇ ಗುರು

ಅರಿವೇ ಗುರು ಅದೊಂದು ಶಿಶುವಿಹಾರ ಅಲ್ಲಿ ಅನೇಕ ಪುಟ್ಟ ಪುಟ್ಟ ಮಕ್ಕಳು ಕಲಿಯುತ್ತಿದ್ದವು. ಅದೊಂದು ದಿನ ಸಂಜೆ ಆ ಶಿಶುವಿಹಾರಕ್ಕೆ ಒಂದು ವಯಸ್ಸಾದ ದಂಪತಿಗಳು ಫಲ ಪುಷ್ಪ ಕಾಣಿಕೆಗಳೊಂದಿಗೆ ಬಂದು ಉಮಾ ಮಿಸ್ ಎಲ್ಲಿದ್ದಾರೆ ಎಂದು ಕೇಳುತ್ತಾರೆ. ಅಲ್ಲಿದ್ದ ಆಯಾ ಆ ವಯೋದಂಪತಿಗಳನ್ನು ಅಲ್ಲಿಯೇ ಕುಳ್ಳರಿಸಿ ಕುಡಿಯಲು ನೀರು ತಂದು ಕೊಟ್ಟು, ಸ್ವಲ್ಪ ಸಮಯ ಕುಳಿತಿರಿ ಅವರನ್ನು ಕರೆದು ಕೊಂಡು ಬರುತ್ತೇನೆ ಎಂದು ಹೋಗಿ ಸ್ವಲ್ಪ ಸಮಯದ ನಂತರ ಉಮಾ ಮಿಸ್ ಬಂದವರೇ ನಮಸ್ಕಾರ ನಾನೇ ಉಮಾ.… Read More ಅರಿವೇ ಗುರು

ಪಟಾ ಪಟಾ ಹಾರೋ ಗಾಳಿಪಟ

ಹೊಸದಾಗಿ ಮದುವೆಯಾದ ಸಹೋದ್ಯೋಗಿ ಸುಮಾರು ಎಂಟು ಗಂಟೆಯಾದರೂ ಇನ್ನೂ  ಕಛೇರಿಯಲ್ಲಿಯೇ ಇದ್ದದ್ದನ್ನು ಗಮನಿಸಿದ ನಾನು, ಏನಪ್ಪಾ ರಾಜಾ, ಮನೆಗೆ ಹೋಗುವುದಿಲ್ಲವಾ?  ಮೊನ್ನೆ ಮೊನ್ನೆ ತಾನೇ  ಮದುವೆ ಆಗಿದ್ದೀಯಾ,ನಿಮ್ಮ ಮನೆಯಲ್ಲಿ ನಿಮ್ಮ ಮನೆಯವರು ಒಬ್ಬರೇ ಇರುತ್ತಾರೆ ಮತ್ತು ನಿನ್ನ ಆಗಮನವನ್ನೇ ಕಾಯುತ್ತಿರುತ್ತಾರೆ.  ಪರವಾಗಿಲ್ಲಾ ನಾಳೆ ಕೆಲಸ ಮುಂದುವರಿಸುವಂತೆ ಎಂದು ತಿಳಿಹೇಳಿದೆ.  ಅದಕ್ಕವನು ಸಾರ್, ಹಾಗೇನಿಲ್ಲ ಸಾರ್. ಮನೆಯಲ್ಲಿ ಯಾರೂ ಇಲ್ಲಾ. ಸುಮ್ಮನೆ ಮನೆಗೆ ಹೋಗಿ ಮಾಡಲು ಏನೂ ಕೆಲಸ ಇಲ್ಲ. ಅದೇ ಟಿವಿ ನೋಡುವ ಬದಲು  ಎಲ್ಲಾ ಕೆಲಸ… Read More ಪಟಾ ಪಟಾ ಹಾರೋ ಗಾಳಿಪಟ