ಕೈ ಮುಗಿದು ನಮಸ್ಕರಿಸುವ ಅಗತ್ಯತೆ

ನಮ್ಮ ಧರ್ಮ ಶಾಸ್ತ್ರದ ಪ್ರಕಾರ ಪ್ರತಿಯೊಂದು ಜೀವರಾಶಿಗಳಲ್ಲಿಯೂ ದೇವರಿರುತ್ತಾನೆ ಹಾಗಾಗಿ ಪ್ರತಿಯೊಬ್ಬರಿಗೂ ನಮ್ಮ ಎರಡೂ ಕರಗಳನ್ನು  ಜೋಡಿಸಿ ಅದನ್ನು ನಮ್ಮ ಸೂರ್ಯಚಕ್ರಕ್ಕೆ  (ಎದೆಯ ಗೂಡು) ತಾಗಿಸಿಗೊಂಡು ಭಕ್ತಿಯಿಂದ ತಲೆಬಾಗಿಸಿ ವಂದಿಸುವುದು ಆಚರಣೆಯಲ್ಲಿದೆ.  ಅದಕ್ಕೆ ಪ್ರತಿಯಾಗಿ ಎದುರಿಗಿರುವ ವ್ಯಕ್ತಿಯೂ ಅದೇ ರೀತಿಯಲ್ಲಿಯೇ ಭಕ್ತಿ ಪೂರ್ವಕವಾಗಿ ವಂದಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಇಬ್ಬರೂ ವ್ಯಕ್ತಿಗಳ  ನಡುವೆ ಕನಿಷ್ಠ ಪಕ್ಷ 3 ಅಡಿ ಅಂತರವನ್ನು ಕಾಯ್ದುಕೊಳ್ಳುತ್ತೇವೆ ಮತ್ತು ಎಂದಿಗೂ ಅವರನ್ನು ಮುಟ್ಟುವುದಿಲ್ಲ.  ಈ ಕ್ರಿಯೆಯನ್ನು ಆಚರ, ಮಡಿ ಅಥವಾ ಅನುಷ್ಠಾನ ಎಂದು ಕರೆಯಲಾಗುತ್ತದೆ. … Read More ಕೈ ಮುಗಿದು ನಮಸ್ಕರಿಸುವ ಅಗತ್ಯತೆ

ವಿನಾಯಕ ದಾಮೋದರ ಸಾವರ್ಕರ್ ಸಂಸ್ಮರಣೆ

ಅಂದು 1910 ಮಾರ್ಚ್ 13, ಭಾನುವಾರ. ಆ ವ್ಯಕ್ತಿ ಪ್ಯಾರಿಸ್ ನಿಂದ ಲಂಡನ್ನಿನ ಕಡೆಗೆ ಹೊರಡುವ ರೈಲು ಹತ್ತಿದ್ದರು. ಲಂಡನ್ನಿನ ವಿಕ್ಟೋರಿಯಾ ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ರಾತ್ರಿ 2 ಗಂಟೆ. ನಾಲ್ಕಾರು ಗುಪ್ತಚರರು ಧಡಧಡನೆ ಬಂದು ಅವರನ್ನು ಬಂಧಿಸಿದರು. ರಾಜದ್ರೋಹ, ಜಾಕ್ಸನ್ ಕೊಲೆಗೆ ನೆರವಾದ ಅಪರಾಧ, ಲಂಡನ್ನಿನಲ್ಲಿ ಶಸ್ತ್ರಾಸ್ತ್ರ ಶೇಖರಣೆ, ಭಾರತ ಹಾಗೂ ಲಂಡನ್ನಿನಲ್ಲಿ ಮಾಡಿದ ರಾಜದ್ರೋಹ ಭಾಷಣಗಳು, ಪರಾರಿ ಹೀಗೆ ಹತ್ತಾರು ಆರೋಪಗಳ ಅಡಿಯಲ್ಲಿ ಅವರನ್ನು ಬಂಧಿಸಿದರು. ಜೂನ್ ಪ್ರಾರಂಭದಲ್ಲಿ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್… Read More ವಿನಾಯಕ ದಾಮೋದರ ಸಾವರ್ಕರ್ ಸಂಸ್ಮರಣೆ

ಶ್ರೀ ಮದನ್ ಲಾಲ್ ಡಿಂಗ್ರಾ

ಆಗ 1900 ಆರಂಭದ ದಿನಗಳು. ಇಂಗ್ಲೇಂಡಿನ ನೈಟ್ ಕ್ಲಬ್ಬಿನಲ್ಲಿ ಚೆನ್ನಾಗಿ ಉಡುಪು ಧರಿಸಿಕೊಂಡು ಅಲ್ಲಿಯ ರಂಗು ರಂಗಿನ ಬೆಳೆಕಿನಲ್ಲಿ ರಂಗಾದ ಹುಡುಗಿಯರೊಂದಿಗೆ ಶೋಕಿ ಮಾಡುತ್ತಿದ್ದ ಭಾರತೀಯ ತರುಣನೊಬ್ಬ ಶ್ಯಾಮ್ ಜೀ ವರ್ಮ ಮತ್ತು ವೀರಸಾವರ್ಕರ್ ಅವರ ಪ್ರಖರ ಮಾತುಗಳಿಂದ ಪ್ರೇರಿತನಾಗಿ ಇದ್ದಕ್ಕಿದ್ದಂತೆಯೇ ತನ್ನ ಶೋಕಿಗಳನ್ನೆಲ್ಲಾ ಬದಿಗೊತ್ತಿ ತನ್ನ ತಾಯ್ನಾಡು ಭಾರತವನ್ನು ದಾಸ್ಯದಲ್ಲಿ ಇಟ್ಟುಕೊಂಡಿದ್ದ ಬ್ರಿಟೀಷರಿಗೆ ಅವರ ನೆಲದಲ್ಲಿಯೇ ಬುದ್ದಿ ಕಲೆಸಬೇಕೆಂದು ಫಣ ತೊಟ್ಟು ಇಂಗ್ಲೆಂಡಿನಲ್ಲಿಯೇ ಮರಣ ದಂಡನೆಗೆ ಒಳಗಾಗಿ ಬ್ರಿಟೀಷರನ್ನು ಭಾರತದಿಂದ ಹೊರಹಾಕಲು ತನ್ನ ಪ್ರಾಣವನ್ನೇ ತ್ಯಾಗ… Read More ಶ್ರೀ ಮದನ್ ಲಾಲ್ ಡಿಂಗ್ರಾ

ದೇಹ ಮತ್ತು ದುಡಿತ

ನನ್ನ ಶಾಲಾ ಸಹಪಾಠಿಯೊಬ್ಬ ನೆನ್ನೆಯ ದಿನ ಸಂಜೆ ಶಟಲ್ ಆಡುವ ವೇಳೆಯಲ್ಲಿ ಶಟಲ್ ಕೋರ್ಟಿನಲ್ಲಿಯೇ ಬಿದ್ದು ತೀವ್ರತರವಾದ ಹೃದಯಸ್ಥಂಭನದಿಂದಾಗಿ ಮೃತನಾದ ಎಂದು ಇಂದು ಬೆಳಿಗ್ಗೆ ಗೆಳೆಯನೊಬ್ಬ ಫೋಟೋದೊಂದಿಗೆ ಕಳುಹಿದ್ದ ವ್ಯಾಟ್ಯಾಪ್ ಸಂದೇಶವೊಂದನ್ನು ನೋಡಿ ಮನಸ್ಸಿಗೆ ಬಹಳ ದುಃಖವುಂಟಾಯಿತು. ಪಾಶ್ವಾತ್ಯ ಬದುಕಿಗೆ ಒಗ್ಗಿಹೋಗಿರುವ ಇಂದಿನ ಯುವ ಜನತೆ ವಾರಪೂರ್ತಿ ಹೊತ್ತಲ್ಲದ ಹೊತ್ತಿನಲ್ಲಿ ನಿಶಾಚರರಂತೆ ದುಡಿಯುತ್ತಾರೆ ಮತ್ತು ವಾರಾಂತ್ಯದಲ್ಲಿ ಆ ದುಡಿತದ ದಣಿವಾರಿಸಿಕೊಳ್ಳಲು ನಾನಾ ರೀತಿಯ ಹವ್ಯಾಸಗಳಿಗೆ ದಾಸರಾಗಿ ತಮ್ಮ ದೇಶ ಮತ್ತು ದೇಹದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸದ… Read More ದೇಹ ಮತ್ತು ದುಡಿತ

ಬಸ್ರೂರು ಸ್ವಾತಂತ್ರ್ಯ ದಿವಸ

361 ವರ್ಷಗಳ ಹಿಂದೆ ಇದೇ ಫೆಬ್ರವರಿ 13ರಂದು ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನೌಕಾದಳ ನಮ್ಮ ಕುಂದಾಪುರದ ಬಸ್ರೂರಿನ ಬಂದರನ್ನು ಪೋರ್ಚುಗೀಸರ ಕಪಿಮುಷ್ಟಿಯಿಂದ ಸ್ವತಂತ್ರಗೊಳಿಸಿದ ದಿನವನ್ನು ಬಸ್ರೂರಿನ ಸ್ವಾತಂತ್ರ್ಯ ದಿವಸವನ್ನಾಗಿ ಆಚರಿಸಲಾಗುತ್ತಿದ್ದು ಆ ಹೋರಾಟದ ರೋಚಕತೆ ಇದೋ ನಿಮಗಾಗಿ… Read More ಬಸ್ರೂರು ಸ್ವಾತಂತ್ರ್ಯ ದಿವಸ

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಏಳು ಕೋಟಿ ಕನ್ನಡಿಗರು ಇರುವ ಈ ಕರ್ನಾಟಕದ ಕನ್ನಡ ಪರ ಹೋರಾಟಗಾರರು ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಹೊಂದಾಣಿಕೆಗಳೇ ಇಲ್ಲದೇ, ತಮ್ಮ ತಮ್ಮ ಅಹಂ ಮತ್ತು ಅಸ್ತಿತ್ವಕ್ಕಾಗಿ ಪದೇ ಪದೇ ಕರ್ನಾಟಕ ಬಂದ್ ಕರೆ ನೀಡುವುದು ಎಷ್ಟು ಸರಿ? ಈ ರೀತಿಯ ಬಂದ್ ನಿಂದ ಸಾಧಿಸುವುದಾದರೂ ಏನು?… Read More ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -3

ಕಳೆದ ಎರಡು ಸಂಚಿಕೆಗಳಲ್ಲಿ ನಮ್ಮ ಪಿಂಟು ಅರ್ಥಾತ್ ಶ್ರೀನಿವಾಸನ ಬಾಲ್ಯ, ಕುಟುಂಬ ಮತ್ತು ಅವನ ಯೌವನದ ಆಟಪಾಠಗಳ ಬಗ್ಗೆ ತಿಳಿದುಕೊಂಡಿದ್ದೆವು ಈ ಸಂಚಿಕೆಯಲ್ಲಿ ಅವನ ವಿದ್ಯಾಭ್ಯಾಸದ ನಂತರದ ಅವನ ಜೀವನದ ಪ್ರಮುಖ ಘಟ್ಟದ ಬಗ್ಗೆ ತಿಳಿಯೋಣ. ಈ ಮೊದಲೇ ತಿಳಿಸಿದಂತೆ ನಮ್ಮ ಪಿಂಟೂವಿನ ಅಪ್ಪಾ ಮತ್ತು ಅಮ್ಮಾ ಇಬ್ಬರೂ ಕೇಂದ್ರಸರ್ಕಾರಿ ಕೆಲಸದಲ್ಲಿ ಇದ್ದದ್ದರಿಂದ ಆರ್ಥಿಕವಾಗಿ ತಕ್ಕ ಮಟ್ಟಿಗೆ ಇದ್ದರೂ ಸಹಾ, ಉದ್ಯೋಗಂ ಪುರುಷ ಲಕ್ಷಣಂ ಎನ್ನುವಂತೆ ನಮ್ಮ ಪಿಂಟು ಸಹಾ ತನ್ನ ಡಿಪ್ಲಮೋ ಕೋರ್ಸ್ ಮುಗಿಸಿದ ಮೇಲೆ… Read More ಸುಗ್ಗಿಯ ಸಮಯದಲ್ಲಿ ಶ್ರೀನಿವಾಸನ ಸ್ಮರಣೆ -3

ಅನಿಲ್ ಕುಂಬ್ಲೆ – 10/10

1998-99 ರಲ್ಲಿ ಭಾರತಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನದ ಕ್ರಿಕೆಟ್ ತಂಡ ಟೆಸ್ಟ್ ಪಂದ್ಯಾವಳಿಯನ್ನು ಆಡಲು ಬಂದಿತ್ತು ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಚೆನ್ನೈನಲ್ಲಿ ಸಚಿನ್ ‌ತೆಂಡೂಲ್ಕರ್ ಅವರ ಕೆಚ್ಚೆದೆಯ ಹೋರಾಟದ ಹೊರತಾಗಿಯೂ 12 ರನ್‌ಗಳಿಂದ ಪಂದ್ಯವನ್ನು ಸೋತು ಸರಣಿಯಲ್ಲಿ 1-0 ಯ ಹಿನ್ನಡೆಯಲ್ಲಿದ ಕಾರಣ ದೆಹಲಿಯ ಎರಡನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮ ಸಮ ಮಾಡಿಕೊಳ್ಳಲೇ ಬೇಕು ಎಂಬ ಧೃಢ ನಿರ್ಧಾರದಿಂದ ಕಣಕ್ಕೆ ಇಳಿದಿತ್ತು.. ಹಾಗಾಗಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಈ… Read More ಅನಿಲ್ ಕುಂಬ್ಲೆ – 10/10

ಬೇಡುವ ಕೈಗಳ ಹಿಂದಿನ ಕಹಿ ಸತ್ಯ

ಶಂಕರ ಮೊನ್ನೆ ವಾರಾಂತ್ಯದಲ್ಲಿ ಮಡದಿಯೊಂದಿಗೆ ಮಲ್ಲೇಶ್ವರಂಗೆ ಹೋಗಿದ್ದ. ಸಂಜೆಗತ್ತಲು ವಾಹನ ನಿಲ್ಲಿಸಲು ಸ್ಥಳ ಸಿಗದೇ ಪರದಾಡುತ್ತಿದ್ದಾಗ ಯಾರೋ ಒಬ್ಬರು ವಾಹನ ತೆಗೆಯುತ್ತಿದ್ದದ್ದನ್ನು ನೋಡಿ ಮರುಭೂಮಿಯಲ್ಲಿ ನೀರುವ ಸಿಗುವ ಓಯಸಿಸ್ ನಂತೆ ಕಂಡು ಕೂಡಲೇ ಆಲ್ಲಿಗೆ ಹೋಗಿ ವಾಹನ ನಿಲ್ಲಿಸುತ್ತಿದ್ದಾಗ ಹಿಂದುಗಡೆಯಿಂದ ಯಾರೋ ಕೈ ಚಾಚಿದಂತಾಯಿತು. ಬೆನ್ನ ಹಿಂದ್ದಿದ್ದರಿಂದ ಆ ವ್ಯಕ್ತಿ ಯಾರು ಎಂದು ಸ್ಪಷ್ಟವಾಗಿ ತಿಳಿಯದಿದ್ದರೂ ಕೈಗಳಲ್ಲಿದ್ದ ಚಿಲ್ಲರೇ ಕಾಸು ಮತ್ತು ನಡುಗುತ್ತಿದ್ದ ಕೈಗಳಿಂದಾಗಿ ಯಾರೋ ವಯೋವೃದ್ಧರು ಹೊಟ್ಟೆಯ ಪಾಡಿಗೆ ಭಿಕ್ಷೇ ಬೇಡುತ್ತಿದ್ದಾರೆ ಎಂದು ತಿಳಿದ ಶಂಕರ,… Read More ಬೇಡುವ ಕೈಗಳ ಹಿಂದಿನ ಕಹಿ ಸತ್ಯ