ರಾಷ್ಟ್ರೀಯತೆ ವಿವಿಧತೆಯಲ್ಲಿ ಏಕತೆ

ಕಳೆದ ಕೆಲವು ತಿಂಗಳುಗಳಿಂದ ಕರ್ನಾಟಕದಲ್ಲಿ ನಡೆಯುತ್ತಿದ್ದ ಧರ್ಮ ದಂಗಲ್, ಗ್ಯಾನವ್ಯಾಪಿ ಮಸೀದಿಯಿಂದ ದೇಶವ್ಯಾಪಿಯಾಗಿ ಹರಡಿ ಹತ್ತಾರು ಮುಸ್ಲಿಂ ರಾಷ್ಟ್ರಗಳು ಭಾರತದ ವಿರುದ್ಧ ತಿರುಗಿ ಬಿದ್ದಾಗಲೂ ಇಲ್ಲಿನ ಮುಸಲ್ಮಾನರು ದೇಶದ ಪರ ಚಕಾರವೂ ಎತ್ತದೆ, ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಪರೋಕ್ಷವಾಗಿ ಮುಸಲ್ಮಾನ ದೇಶಗಳ ಪರ ನಿಂತದ್ದರಿಂದ ಬೇಸರಿಸಿಕೊಂಡ ಆತ್ಮೀಯ ಮಿತ್ರರೊಬ್ಬರು, ಜಗತ್ತಿನ ಎಲ್ಲ ಮುಸ್ಲಿಮ್ ದೇಶಗಳು ಭಾರತದ ವಿರುದ್ಧ ನಿಂತಾಗ, ಭಾರತೀಯ ಮುಸ್ಲಿಮರು ಭಾರತದ ಪರ ನಿಲ್ಲುವುದಿಲ್ಲ. ಇದು ಸಾರ್ವಕಾಲಿಕ ಸತ್ಯ. ಹಾಗಾಗಿ ಈ ಮತಾಂಧರರ ಬಗ್ಗೆ… Read More ರಾಷ್ಟ್ರೀಯತೆ ವಿವಿಧತೆಯಲ್ಲಿ ಏಕತೆ

ಸಂಘ ಪರಿವಾರ ಮತ್ತು ಕಾರ್ಯಕರ್ತರು

ಸ್ವಾತ್ರಂತ್ರ್ಯ ಪೂರ್ವದಲ್ಲಿ ಸ್ವಾತ್ರಂತ್ರ್ಯ ಹೋರಾಟಗಾರರೆಂದೇ ತಮ್ಮನ್ನು ತಾವು ಬಿಂಬಿಸಿಕೊಂಡು ಚಳುವಳಿಯಲ್ಲಿ ಮುಂದಿದ್ದ ಕೆಲವು ಹಿಂದೂ ನಾಯಕರೇ ತಮ್ಮನ್ನು ಹಂದಿ ಎಂದ ಕರೆದರೂ ಬೇಸರವಿಲ್ಲ. ಆದರೆ ದಯವಿಟ್ಟು ತಮ್ಮನ್ನು ಹಿಂದೂ ಎಂದು ಕರೆಯದಿರಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಲ್ಲದೇ, 1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಗೋಹತ್ಯೆ ಮತ್ತು ಖಿಲಾಫತ್ ಚಳುವಳಿಯ ಬಗ್ಗೆ ಸೂಕ್ತವಾದ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಆ ಅಧಿವೇಶನದ ಉಸ್ತುವಾರಿಯನ್ನು ಹೊತ್ತಿದ್ದ ಮತ್ತು ಸ್ಥಳೀಯ ಕಾಂಗ್ರೇಸ್ಸಿನ ಸಹಕಾರ್ಯದರ್ಶಿಯಾಗಿದ್ದ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಕೇಳಿಕೊಂಡಾಗ, ಇದು… Read More ಸಂಘ ಪರಿವಾರ ಮತ್ತು ಕಾರ್ಯಕರ್ತರು

ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ

ವಿದ್ಯಾರಣ್ಯಪುರದ ವಿಶ್ವಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವಪರಿಸರ ದಿನವಾದ ಜೂನ್ 6 2022ರಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿತ್ತು. ಕಾರ್ಯಕ್ರಮದ ಅತಿಥಿಗಳಾಗಿದ್ದ ಶ್ರೀ ಗಂಗಾಧರನ್ (ಆರೋಗ್ಯ ಭಾರತಿಯ ಪ್ರಾಂತ ಸಹಕೋಶಾಧ್ಯಕ್ಷರು) ಮತ್ತು ಶ್ರೀಮತಿ ಮನಿಲಾ ರೆಡ್ಡಿ, (ಸ್ವದೇಶಿ ಚಾಗರಣ ಮಂಚ್ ಮಹಿಳಾ ಘಟಕದ ಪ್ರಮುಖ್) ಮತ್ತು ಸಭೆಯಲ್ಲಿ ಸೇರಿದ್ದ ಕೆಲವು ಮಾತೆಯರಿಂದ ದೀಪವನ್ನು ಪ್ರಜ್ವಲಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರೆ, ರಾಮಚಂದ್ರಪುರದ ಕಲಾಸದ ಅಕಾಡೆಮಿ ಮಕ್ಕಳು ಸುಶ್ರಾವ್ಯವಾಗಿ ಹಾಡಿದ… Read More ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆಯ ಆಚರಣೆ

ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು… Read More ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ಅಹಲ್ಯಬಾಯಿ ಹೋಳ್ಕರ್

18ನೇ ಶತಮಾನದಲ್ಲಿಯೇ ಸತಿ ಸಹಗಮನ ಪದ್ದತಿಯನ್ನು ವಿರೋಧಿಸಿ ತನ್ನ ಪತಿಯ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮೊಘಲರ ಹೆಡೆಮುರಿ ಕಟ್ಟಿದ್ದಲ್ಲದೇ, ಕಾಶೀ ವಿಶ್ವನಾಥ ಮತ್ತು ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳೂ ಸೇರಿದಂತೆ ಸುಮಾರು 3500ಕ್ಕೂ ಅಧಿಕ ಹಿಂದೂ ದೇವಾಲಯಗಳ ಜೀರ್ಣೋದ್ಧಾರ ಮಾಡಿದ ಪ್ರಾರ್ಥಸ್ಮರಣೀಯರಾದ ವೀರವನಿತೆ ಅಹಲ್ಯಾಬಾಯಿ ಹೋಳ್ಕರ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಹಸ ಯಶೋಗಾಥೆಯನ್ನು ಆಕೆಯ ವರ್ಧಂತಿಯಂದು ಇದೋ ನಿಮಗಾಗಿ… Read More ಅಹಲ್ಯಬಾಯಿ ಹೋಳ್ಕರ್

ವಟ ಸಾವಿತ್ರಿ ವ್ರತ

ಪತಿವ್ರತೆ ಸಾವಿತ್ರಿಯು ಯಮಧರ್ಮರಾಯನಿಂದ ತನ್ನ ಪತಿ ಸತ್ಯವಾನನ ಆಯುಷ್ಯವನ್ನು ವೃದ್ಧಿ ಮಾಡಿದ ದಿನವಾದ ಜೇಷ್ಠ ಮಾಸದ ಹುಣ್ಣಿಮೆಯಂದು ವಟಸಾವಿತ್ರಿ ವ್ರತ ಎಂದು ಆಚರಿಸುವ ಸಂಪ್ರದಾಯವಿದ್ದು, ಆ ವ್ರತಾಚರಣೆ ಮತ್ತು ಅದರ ಫಲಾಫಲಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ವಟ ಸಾವಿತ್ರಿ ವ್ರತ

ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಈ ದೇಶಕ್ಕಾಗಿ ಅಪಾರವಾಗಿ ಕೊಡುಗೆಯನ್ನು ನೀಡಿದ್ದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಯ ಸುಳ್ಳು ಆರೋಪಗಳಿಂದ ಅವರಿಗೆ ನಿಜವಾಗಿಯೂ ಸಲ್ಲಬೇಕಾಗದ ಗೌರವಗಳಿಂದ ವಂಚಿತರಾಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಮುಂತಾದವರ ಅನೇಕರ ಪಟ್ಟಿಯಲ್ಲಿ ಡಾ.ಕೇಶವ ಬಲಿರಾಮ ಹೆಡಗೇವಾರ್ ಎಲ್ಲರ ಪ್ರೀತಿಯ ಡಾಕ್ಟರ್ ಜೀ ಅವರೂ ಸೇರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಈ ದೇಶದ ಬಗ್ಗೆ ಅವರಿಗಿದ್ದ ದೂರದೃಷ್ಟಿಯಿಂದಾಗಿ ಅವರು ಕಟ್ಟಿದ ಸಂಸ್ಥೆ ಅವರ ನಿಧನವಾಗಿ 8 ದಶಕಗಳ ನಂತರವೂ ಅವರ ಆದರ್ಶಗಳನ್ನು ಮುಂದುವರೆಸಿಕೊಂಡು 2025 ರಲ್ಲಿ… Read More ಡಾ.ಕೇಶವ ಬಲಿರಾಮ ಹೆಡಗೇವಾರ್ (ಡಾಕ್ಟರ್ ಜೀ)

ಅಆಇಈ ಯಲ್ಲೂ ಅಪಸವ್ಯವೇ?

ನಾವು ಚಿಕ್ಕವರಿದ್ದಾಗ ಸಮಾಜ ಶಾಸ್ತ್ರದಲ್ಲಿ ಭಾರತವನ್ನು ಕಂಡುಹಿಡಿದವರು ಯಾರು? ಎಂಬ ಪ್ರಶ್ನೆಗೆ 1492 ರಲ್ಲಿ ಪೋರ್ಚುಗೀಸ್ ಮೂಲದ ನಾವಿಕನಾದ ವಾಸ್ಕೋ ಡಿ ಗಾಮಾ ಪೋರ್ಚುಗಲ್‌ನ ಲಿಸ್ಬನ್‌ನಿಂದ ನೌಕಾಯಾನ ಮಾಡುತ್ತಾ ಅಟ್ಲಾಂಟಿಕ್ ಸಾಗರದ ಮೂಲಕ ಕೇಪ್ ಆಫ್ ಗುಡ್ ಹೋಪ್ ಅನ್ನು ಬಳಸಿಕೊಂಡು ಆಫ್ರಿಕಾದ ಪೂರ್ವ ಕರಾವಳಿಯ ಮಲಿಂಡಿಯಲ್ಲಿ ಕೆಲಕಾಲ ಲಂಗರು ಹಾಕಿ ಅಂತಿಮವಾಗಿ ಕೇರಳದ ಮಲಬಾರ್ ಕರಾವಳಿಯ ಕ್ಯಾಲಿಕಟ್‌ಗೆ ಬರುವ ಮೂಲಕ ಭಾರತವನ್ನು ಕಂಡು ಹಿಡಿದರು ಎಂದೇ ಹೇಳಿಕೊಡಲಾಗುತ್ತಿತ್ತು. ಹಾಗಾದರೆ ಅದಕ್ಕೂ ಮುಂಚೆ ಭಾರತದ ಅಸ್ತಿತ್ವವೇ ಇರಲಿಲ್ಲವೇ?… Read More ಅಆಇಈ ಯಲ್ಲೂ ಅಪಸವ್ಯವೇ?

ಪತ್ರಿಕಾ ಧರ್ಮ

ಯಾವುದೇ ಕಾರ್ಯ ಅಥವಾ ಕಾರ್ಯಕ್ರಮವನ್ನು ನಡೆಸಿದ ನಂತರ ಅದರ ಫಲವನ್ನು ಯಾರು ಯಾರು ಅನುಭವಿಸಬಹುದು? ಎಂಬುದನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಈ ಸಂಸ್ಕೃತ ಸುಭಾಷಿತದಲ್ಲಿ ಉಲ್ಲೇಖಿಸಿಲಾಗಿದೆ. ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ | ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ || ಯಾವುದೇ ಒಳ್ಳೆಯ ಕೆಲಸವೇ ಇರಲಿ ಅಥವಾ ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸದೇ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರು. ಈ ನಾಲ್ಕೂ ಜನರೂ… Read More ಪತ್ರಿಕಾ ಧರ್ಮ