ಅಕ್ಷರಗಳ ಬ್ರಹ್ಮರಾಕ್ಷಸ ರವಿ ಬೆಳಗೆರೆ

ಅದು ಎಪ್ಪತ್ತರ ದಶಕ. ಬಳ್ಳಾರಿಯ ಸಂಪ್ರದಾಯಸ್ಥ ಮನೆತನದ ಚಿಗುರು ಮೀಸೆಯ ಚುರುಕು ಹುಡುಗನೊಬ್ಬ ಸಹವಾಸ ದೋಷದಿಂದ ಹಳಿಬಿಟ್ಟು ಶಾಲೆಗೆ ಸರಿಯಾಗಿ ಹೋಗದೇ ಪೋಲಿಯಾಗಿ ಅಲೆಯುತ್ತಿದ್ದಾಗ ಮತ್ತೆ ಅಮ್ಮನ ಪ್ರೋತ್ಸಾಹದ ಮೇರೆಗೆ ಅಮ್ಮಾ ಮಗ ಒಟ್ಟೊಟ್ಟಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಅಮ್ಮಾ ತೇರ್ಗಡೆಯಾದರೆ, ಮಗ ನಪಾಸ್. ಮತ್ತೆ ಛಲ ಬಿಡದ ತ್ರಿವಿಕ್ರಮನಂತೆ, ಪುನಃ ಪರೀಕ್ಷೇ ಬರೆದು ತೇರ್ಗಡೆ ಹೊಂದಿ, ತನ್ನೂರಿನಲ್ಲೇ ಪದವಿ ಪಡೆದು ನಂತರ ದೂರದ ಧಾರವಾಡದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರೆಗೂ ಹಿಂದಿರುಗಿ ನೋಡಲೇ… Read More ಅಕ್ಷರಗಳ ಬ್ರಹ್ಮರಾಕ್ಷಸ ರವಿ ಬೆಳಗೆರೆ

ಕಾರ್ತಿಕ್ ಸಾಹುಕಾರ್

ಬಿಹಾರದ ಗಯಾ ಜಿಲ್ಲೆಯ ಗೆಹ್ಲಾರ್‌ ಎಂಬ ಕುಗ್ರಾಮದಲ್ಲಿನ ಒಬ್ಬಾಕೆಗೆ ಆರೋಗ್ಯ ಸರಿ ಇಲ್ಲದಿದ್ದಾಗ ಚಿಕಿತ್ಸೆಗೆಂದು ಗುಡ್ಡ ಹಿಂದಿರುವ ಊರಿಗೆ ತಲುಪಲು ಸುಮಾರು 40 ಕಿಮೀ ಹೋಗಲಾರದೇ, ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೇ ಮೃತಪಟ್ಟಾಗ ಆಕೆಯ ಪತಿ ದಶರಥ್‌ ಮಾಂಝಿ ಸುತ್ತಿಗೆ, ಹಾರೆಗಳಿಂದ ಏಕಾಂಗಿಯಾಗಿ ಸುಮಾರು 22 ವರ್ಷಗಳ ಕಾಲ ಕಡಿದು ಆ ಎರಡೂ ಊರುಗಳ ನಡುವಿನ ಅಂತರವನ್ನು ಕೆಲವೇ ಕೆಲವು ನಿಮಿಷಗಳಷ್ಟು ದೂರಕ್ಕೆ ತಂದಾಗ ಇಡೀ ಪ್ರಪಂಚವೇ ನಿಬ್ಬೆರಗಾಗಿತ್ತು. ಅದೇ ರೀತಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ… Read More ಕಾರ್ತಿಕ್ ಸಾಹುಕಾರ್

ಶಾಂತಾ ರಂಗಸ್ವಾಮಿ

ಬ್ರಿಟೀಷರು ಭಾರತವನ್ನು ಬಿಟ್ಟು ಹೋದರೂ, ಭಾರತೀಯರು ಬ್ರೀಟಿಷರಿಂದ ಕಲಿತ ಇಂಗ್ಲೀಷ್ ಭಾಷೆ, ಅವರ ವೇಷ ಭೂಷಣ ಮತ್ತು ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಅವರು ಕಲಿಸಿಕೊಟ್ಟ ಕ್ರಿಕೆಟ್ ಆಟವನ್ನು ಅಪ್ಪಿ ಮುದ್ದಾಡುತ್ತಿದ್ದೇವೆ. ಇತ್ತೀಚೆಗಂತೂ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಒಂದು ರೀತಿಯ ಧರ್ಮವಾಗಿದೆ ಎಂದರೂ ತಪ್ಪಾಗಲಾರದು. ಈ ರೀತಿಯ ಬದಲಾವಣೆಯಾದದ್ದು ಕಪಿಲ್ ದೇವ್ ಅವರ ತಂಡ 1983ರ ವರ್ಲ್ಡ್ ಕಪ್ ಗೆದ್ದ ನಂತರ ಎನ್ನುವುದು ಗಮನಿಸಬೇಕಾದ ಅಂಶ ಅದಕ್ಕೂ ಮೊದಲು ಕ್ರಿಕೆಟ್ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಆಟಕ್ಕುಂಟು ಲೆಕ್ಕಕ್ಕಿಲ್ಲ. ಎಪ್ಪತ್ತರ… Read More ಶಾಂತಾ ರಂಗಸ್ವಾಮಿ

ಸುಧೀರ್

ಅದು ಎಂಬತ್ತರ ದಶಕ ಮಲ್ಲೇಶ್ವರದ ಕೋದಂಡರಾಮಪುರದ ರಾಮಮಂದಿರದ ಎರುರಿಗಿದ್ದ ಕೆಲವು ಸಣ್ಣ ಸಣ್ಣ ಮನೆಯೊಂದರಲ್ಲಿ ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಅಭಿನಯಿಸುತ್ತಿದ್ದ ನಟರೊಬ್ಬರು ಇದ್ದರು. ವರನಟ ರಾಜಕುಮಾರರ ತಮ್ಮ ವರದಪ್ಪನವರ ಮನೆ ಅಲ್ಲಿಂದ ಕೂಗಳತೆಯ ದೂರದಲ್ಲಿತ್ತು. ನಾಟಕ ಅಥವಾ ಚಿತ್ರೀಕರಣವಿಲ್ಲದಿದ್ದಲ್ಲಿ ಸಂಜೆ ನೀಟಾಗಿ ಡ್ರೆಸ್ ಮಾಡಿಕೊಂಡು ಕೈ ಬೆರಳಲ್ಲೊಂದು ಕೀ ಚೈನ್ ತಿರುಗಿಸಿಕೊಂಡು ಸಿಳ್ಳೇ ಹಾಕುತ್ತಾ ತಮ್ಮ ಮನೆಯಿಂದ ಹೊರಡುತ್ತಿದ್ದ ವೈಯ್ಯಾಳಿಕಾವಲ್ ರಾಜೇಶ್ ಹೋಟೆಲ್ ಕಡೆಗೆ ಹೋಗುತ್ತಿದ್ದ ಆ ಅಜಾನುಬಾಹು ನಟನನ್ನು ನೋಡಿದರೆ ನಿಜಕ್ಕೂ ಭಯವೆನಿಸುತ್ತಿತ್ತು. ನಮ್ಮಂತಹ ಚಿಕ್ಕಮಕ್ಕಳು… Read More ಸುಧೀರ್

ಪರಿಸರ ಪ್ರೇಮಿ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ

ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, 385 ಆಲದ ಮರಗಳು ಸೇರಿದಂತೆ 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ 114 ವರ್ಷದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ ಆಗಿರುವ ಸಂಧರ್ಭದಲ್ಲಿ ಅವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಪರಿಸರ ಪ್ರೇಮಿ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ

ತೂಗು ಸೇತುವೆ ಸರದಾರ ಗಿರೀಶ್ ಬಾರದ್ವಾಜ್

ಸೇತುವೆ ಎಂದರೆ ಎರಡು ಭೂಪ್ರದೇಶಗಳು ಅಥವಾ ಸಂಬಂಧಗಳನ್ನು ಬೆಸೆಯುವ ಸುಂದರ ಸಾಧನ. ತ್ರೇತಾಯುಗದಲ್ಲಿ ಸೀತೆಯನ್ನು ರಾವಣ ಅಪಹರಿಸಿ ಲಂಕೆಯಲ್ಲಿ ಇಟ್ಟಿರುವ ವಿಷಯವನ್ನು ಹನುಮಂತ ಪ್ರತ್ಯಕ್ಷಿಸಿ ನೋಡೀ ತಿಳಿಸಿದ ಮೇಲೆ ಸೀತಾದೇವಿಯನ್ನು ಬಿಡಿಸಿಕೊಂಡು ಬರಲು ಕಪೀ ಸೇನೆಯೊಂದಿಗೆ ಹೊರಟ ರಾಮ ರಾಮೇಶ್ವರದ ಧನುಷ್ಕೋಟಿಯಿಂದ ಲಂಕೆಯ ಮಧ್ಯೆ ನಳ ನೀಲರ ಸಾರಥ್ಯದಲ್ಲಿ ಕಪಿಗಳ ನೆರವಿನಿಂದ ಸೇತುವೆಯನ್ನು ನಿರ್ಮಿಸಿ ಲಂಕೆಗೆ ಹೋಗಿ ರಾವಣನ್ನು ಸಂಹರಿಸಿ ಸೀತಾ ಮಾತೆಯನ್ನು ಕರೆತಂದದ್ದನ್ನು ನಾವೆಲ್ಲರೂ ರಾಮಾಯಣದಲ್ಲಿ ನೋಡಿದ್ದೇವೆ. ಅದೇ ರೀತಿ ಕೂಗಳತೆಯ ದೂರದಲ್ಲೇ ಇರುವ ಎರಡು… Read More ತೂಗು ಸೇತುವೆ ಸರದಾರ ಗಿರೀಶ್ ಬಾರದ್ವಾಜ್

ಕ್ಯಾಪ್ಟನ್ ಗೋಪಿನಾಥ್

ನಾವೆಲ್ಲಾ ಚಿಕ್ಕವರಿರುವಾಗ ನಮ್ಮ ಮನೆಗಳ ಮೇಲೆ ಭಾರೀ ಶಭ್ಧವನ್ನು ಮಾಡುತ್ತಾ ಹೋಗುತ್ತಿದ್ದನ್ನು ನೋಡಿ ಅದಕ್ಕೆ ಕೈ ಬೀಸುವುದೇ ಭಾರೀ ಖುಷಿಯನ್ನು ಕೊಡುವ ಸಂಗಂತಿಯಾಗಿತ್ತು. ಏಕೆಂದರೆ ವಿಮಾನಯಾನ ಜನಸಾಮಾನ್ಯರಿಗೆ ಗಗನ ಕುಸುಮವಾಗಿತ್ತು. ಸಾಮಾನ್ಯ ಜನರು ದೂರದ ಊರುಗಳಿಗೆ ಹೋಗುವುದಕ್ಕೆ ರೈಲುಗಳನ್ನೇ ಅವಲಂಭಿಸಿ ಎರಡು ಮೂರು ದಿನಗಳ ಪ್ರಯಾಸಕರ ಪ್ರಯಾಣವನ್ನು ಮಾಡಬೇಕಿತ್ತು. ಆದರೆ 2003 ರಲ್ಲಿ ಆರಂಭವಾದ ಕಡಿಮೆ ದರದ ಡೆಕ್ಕನ್ ಏರ್ಲೈನ್ಸ್ ಮೂಲಕ ಎಲ್ಲಾ ಜನಸಾಮಾನ್ಯರೂ ವಿಮಾನದಲ್ಲಿ ಕೆಲವೇ ಗಂಟೆಗಳಲ್ಲಿ ತಮ್ಮ ನೆಚ್ಚಿನ ಊರುಗಳಿಗೆ ತಲುಪಬಹುದಾದಂತಹ ಸುವರ್ಣಾವಕಾಶವನ್ನು ಕಲ್ಪಿಸಿದವರೇ… Read More ಕ್ಯಾಪ್ಟನ್ ಗೋಪಿನಾಥ್

ಇಬ್ರಾಹಿಂ ಸುತಾರ್

ಇತ್ತೀಚೆಗೆ ಪ್ರಪಂಚಾದ್ಯಂತ ನಡೆಯುತ್ತಿರುವ ಬಹುತೇಕ ಭಯೋತ್ಪಾದನೆಯ ಹಿಂದೆ ಧಾರ್ಮಿಕ ಕಾರಣಗಳು ಇರುವುದನ್ನು ಮನಗೊಂಡು ಭಯೋತ್ಪಾದನೆಗೆ ಮತ್ತು ಭಯೋತ್ಪಾದಕರಿಗೆ ಧರ್ಮವಿಲ್ಲ. ದೇವನೊಬ್ಬ ನಾಮ ಹಲವು ಹಾಗಾಗಿ ಎಲ್ಲರೂ ಸಹಬಾಳ್ವೆ ನಡೆಸಬೇಕೆಂದು ಓತಾನುಪ್ರೋತವಾಗಿ ಹೇಳುವುದನ್ನು ಕೇಳಿದ್ದೇವೆ. ನಿಜ ಹೇಳಬೇಕೆಂದರೆ ಅದೆಲ್ಲವೂ ಕೇವಲ ಬಾಯಿ ಚಪಲಕ್ಕೆ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ತಪ್ಪಿಸಿಕೊಳ್ಳಲು ಹೇಳುವ ಮಾತಾಗಿ ನಿಜ ಜೀವನದಲ್ಲಿ ಅಂತಹ ಸಾಮರಸ್ಯ ಇಲ್ಲವಾಗಿದೆ. ಆದರೆ ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯ ಕಥಾ ನಾಯಕರಾದ ಶ್ರೀ ಇಬ್ರಾಹಿಂ… Read More ಇಬ್ರಾಹಿಂ ಸುತಾರ್

ಹಾಸ್ಯ ಚಕ್ರವರ್ತಿ ನರಸಿಂಹರಾಜು

ಕೆಲ ವರ್ಷಗಳ ಹಿಂದೆ ಸುಧಾ ನರಸಿಂಹರಾಜು ಅವರು ದೂರದರ್ಶನದಲ್ಲಿ ನಡೆಸಿಕೊಡುತ್ತಿದ್ದ ಸಂದರ್ಶನದಲ್ಲಿ ಭಾಗವಹಿಸಿದ್ದ ವರನಟ ರಾಜ್ ಕುಮಾರ್ ಅವರು ಅರವತ್ತು ಮತ್ತು ಎಪ್ಪತ್ತರ ದಿನಗಳಲ್ಲಿ ಬಹಳ ಉತ್ತಂಗದ ಶಿಖರವೇರಿದ್ದರೂ, ಅಂದಿನ ದಿನದಲ್ಲಿ ನಿರ್ಮಾಪಕ ನಿರ್ದೇಶಕರು, ತಮ್ಮ ಚಲನಚಿತ್ರಗಳಿಗೆ ಮೊದಲು ಆ ಹಾಸ್ಯ ನಟನ ಕಾಲ್ ಶೀಟ್ ಇದೆಯೇ ಎಂದು ನಿಗಧಿಪಡಿಸಿಕೊಂಡು ನಂತರ ನಾಯಕ, ನಾಯಕಿ ಮತ್ತು ಉಳಿದ ಸಹಕಲಾವಿದರನ್ನು ಸಂಪರ್ಕಿಸುತ್ತಿದ್ದರು ಎಂದು ಹೇಳಿದರು ಎಂದರೆ ಆ ಹಾಸ್ಯ ನಟ ಎಂತಹ ಮಹಾನ್ ನಟನಿರಬೇಕು ಎಂಬುದು ತಿಳಿಯುತ್ತದೆ. ಈ… Read More ಹಾಸ್ಯ ಚಕ್ರವರ್ತಿ ನರಸಿಂಹರಾಜು