ಭರವಸೆಯ ಹಾದಿಯಲ್ಲಿ ಭಾರತೀಯ ಕ್ರೀಡಾರಂಗ

ಪ್ರತೀ ಬಾರೀ ಓಲಂಪಿಕ್ಸ್ ಕ್ರೀಡಾಕೂಟಗಳು ನಡೆದಾಗ ಪದಕಗಳ ಪಟ್ಟಿಯಲ್ಲಿ ಅಮೇರಿಕಾ, ಚೀನಾ, ಜಪಾನ್ ದೇಶಗಳದ್ದೇ ಪ್ರಾಬಲ್ಯ ಮೆರೆದು, ನಮ್ಮ ಭಾರತವನ್ನು  ಕೆಳಗಿನ ಸ್ಥಾನದಲ್ಲಿ ನೋಡುತ್ತಿದ್ದಾಗ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಥಟ್ ಅಂತಾ ಮೂಡಿ ಬರುವುದೇ ನಾವೂ ನಮ್ಮ ದೇಶದ ಪರಿಸ್ಥಿತಿ ಹೀಗೇಕೆ? ಎನ್ನುವ ನಿರಾಶೆ. ಅದೇ ಗುಂಗಿನಲ್ಲಿ ತÀಮ್ಮೆಲ್ಲಾ ಗೆಳೆಯರೊಡನೇ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಸಹನೆಯನ್ನು ವ್ಯಕ್ತಪಡಿಸುವ ಜನರೇನು ಕಡಿಮೆ ಇಲ್ಲ. ಆದರೆ ಈಗಷ್ಟೇ ಸಂಪನ್ನಗೊಂಡ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳ ಪ್ರದರ್ಶನವನ್ನು ಗಮನಿಸಿದರೆ ದೇಶದ… Read More ಭರವಸೆಯ ಹಾದಿಯಲ್ಲಿ ಭಾರತೀಯ ಕ್ರೀಡಾರಂಗ

ಈ ಗೆಲುವನ್ನು ನೋಡಲು ಅಪ್ಪಾ ಇರ್ಬೇಕಿತ್ತು

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಡುವ ಮತ್ತು ಅದೇ ಕುರಿತಾಗಿ ಆಗಾಗ ವಿವಾದವೂ ಏರ್ಪಡುವ ವಿಷಯವೆಂದರೆ ಕ್ರಿಕೆಟ್. ಅಗಲಿದ ಅಪ್ಪ ಅಮ್ಮಾ ನಿಂದ ಹಿಡಿದು ನಾನು ನಮ್ಮಾಕಿ, ಮುದ್ದಿನ ಮಗಳು ಮತ್ತು ನಮ್ಮ ಮನೆಯ ಸ್ವಘೋಷಿತ ಕ್ರಿಕೆಟ್ ಎಕ್ಸಪರ್ಟ್ ಮಗ ಎಲ್ಲರೂ ಕ್ರಿಕೆಟ್ ಪ್ರಿಯರೇ. ಆದರೆ ಬೆಂಬಲಿಸುವ ಆಟಗಾರರು ಮತ್ತು ತಂಡಗಳು ಮಾತ್ರಾ ವಿಭಿನ್ನ. ವಿಶ್ವ ಟೆಸ್ಟ್ ಕ್ರಿಕೆಟ್ ಛಾಂಪಿಯನ್ ಶಿಪ್ಪಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವಿನ ಹಾದಿಯಲ್ಲಿದ್ದು ಕಡೆಯಲ್ಲಿ ಆದ ಕೆಲವು ಅನಿರೀಕ್ಷಿತ… Read More ಈ ಗೆಲುವನ್ನು ನೋಡಲು ಅಪ್ಪಾ ಇರ್ಬೇಕಿತ್ತು

ಉಪಕಾರ ಸ್ಮರಣೆ

ಆಂಗ್ಲ ಭಾಷೆಯಲ್ಲಿ ಒಂದು ನಾಣ್ಣುಡಿ ಇದೆ. success has many fathers, failure is an orphan. ಅಂದರೆ, ಯಾರಾದರೂ ಯಶಸ್ಸನ್ನು ಗಳಿಸಿದಲ್ಲಿ ಅದಕ್ಕೆ ಪ್ರತಿಫಲವನ್ನು ಬಯಸುವವರೇ ಹೆಚ್ಚಿನವರಿರುತ್ತಾರೆ. ಅದೇ ತಪ್ಪಾದಲ್ಲಿ ಅದಕ್ಕೆ ಹೊಣೆಗಾರರಾಗಲು ಯಾರೂ ಬಯಸುವುದಿಲ್ಲ. ಈಗಾಗಲೇ ನಮಗೆಲ್ಲರಿಗೂ ಗೊತ್ತಿರುವಂತೆ ಈ ಬಾರಿಯ ಓಲಂಪಿಕ್ಸ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಗಳಿಸುವ ಮೂಲಕ ಹೆಮ್ಮೆ ತಂದಿದ್ದು ವೇಯ್ಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು. ಈ ಪದಕದ ಹಿಂದೆ ಇರುವ ಪರಿಶ್ರಮ ನಿಜಕ್ಕೂ ಅಧ್ಭುತ ಮತ್ತು ಅನನ್ಯವೇ… Read More ಉಪಕಾರ ಸ್ಮರಣೆ

ಬಿ ವಿಜಯಕೃಷ್ಣ

ಅದು ಎಪ್ಪತ್ತು ಮತ್ತು ಎಂಭತ್ತರ ದಶಕ. ಕರ್ನಾಟಕ ರಾಜ್ಯದ ರಣಜಿ ತಂಡದಲ್ಲಿ ಘಟಾನುಘಟಿಗಳು ಇದ್ದಂತಹ ಕಾಲ. ಕಾರ್ಲ್ಟನ್ ಸಲ್ಡಾನ, ಬಿನ್ನಿ, ಅಭಿರಾಂ, ಸುಧಾಕರ್ ರಾವ್, ಎ ವಿ ಜಯಪ್ರಕಾಶ್, ಬ್ರಿಜೇಶ್ ಪಟೇಲ್, ಅವಿನಾಶ್ ವೈದ್ಯ, ರಘುರಾಂ ಭಟ್ ಅವರುಗಳು ಇದ್ದ ಕಾಲ. ಅವರ ಜೊತೆಯಲ್ಲಿಯೇ ಮತ್ತೊಬ್ಬ ಸಧೃಢವಾದ ಚಂಡು ಇರುವುದೇ ಬಾರೀ ಹೊಡೆತಕ್ಕೇ ಎಂದು ಭರ್ಜರಿಯಾಗಿ ಸಿಕ್ಸರ್ ಗಳನ್ನು ಬಾರಿಸುತ್ತಿದ್ದ ಇನ್ನು ಚಂಡನ್ನು ಕೈಯಲ್ಲಿ ಹಿಡಿದು ಬೋಲಿಂಗ್ ಮಾಡಿದರೆ ದಾಂಡಿಗರನ್ನು ವಂಚಿಸಿ ಸೀದಾ ವಿಕೆಟ್ ಉರುಳಿಸುತ್ತಿದ್ದಂತಹ ಚಾಣಾಕ್ಷ… Read More ಬಿ ವಿಜಯಕೃಷ್ಣ

ಹಾರುವ ಸಿಖ್, ಮಿಲ್ಕಾ ಸಿಂಗ್

ಅದು 1960ರ ಸಮಯ ರೋಮ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಲಿದೆ. ಎಂದಿನಂತೆ ಭಾರತದಿಂದಲೂ ಕೆಲ ಆಟಗಾರರು ಹೋದಾ ಪುಟ್ಟಾ ಬಂದಾ ಪುಟ್ಟಾ ಎನ್ನುವಂತೆ ಬರಿಗೈಯಲ್ಲಿ ವಾವಾಸಾಗುತ್ತಿದ್ದ ದಿನಗಳಾದರೂ ಈ ಒಲಿಂಪಿಕ್ಸ್ ಭಾರತೀಯರ ಪಾಲಿಗೆ ಅತ್ಯಂತ ವಿಶೇಷವಾಗಿತ್ತು. ಭಾರತದ ಪರ 31ರ ತರುಣ ಅಥ್ಲೆಟಿಕ್ಸ್ ನಲ್ಲಿ ಏನಾದರೂ ಸಾಧಿಸಬಹುದು ಎಂಬ ನಿರೀಕ್ಷೆ ಇತ್ತು. ಏಕೆಂದರೆ 1956ರಲ್ಲಿ ನಡೆದ ಮೆಲ್ಬೊರ್ನ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲಬಾರಿಗೆ ಭಾಗವಹಿಸಿದ್ದ ಇದೇ ಓಟಗಾರ, ಸಾಕಷ್ಟು ಅನುಭವವಿಲ್ಲದ ಕಾರಣ ಅಷ್ಟೆನೂ ಸಾಧನೆ ಮಾಡಲಾಗದಿದ್ದರೂ, ಆ ಕ್ರೀಡಾಕೂಟದಿಂದ ಕಲಿತು,… Read More ಹಾರುವ ಸಿಖ್, ಮಿಲ್ಕಾ ಸಿಂಗ್

ದಾಖಲೆಗಳು, ವಿಚಿತ್ರ ಎನಿಸಿದರೂ ಸತ್ಯ

ಯಾವುದೇ ಆಟಗಳೇ ಆಗಲಿ ಪಂದ್ಯ ಆರಂಭವಾಗಿ ಆಟಗಾರರು ಮೈದಾನದಲ್ಲಿ/ಆಖಾಡದಲ್ಲಿ ಆಡುತ್ತಾ ಹೋದಂತೆಲ್ಲಾ, ಅಲ್ಲಿ ದಾಖಲೆಗಳು ನಿರ್ಮಾಣವಾಗುವುದು, ಅದನ್ನು ಮತ್ತೊಬ್ಬರು ಮತ್ತೊಂದು ದಿನ ಮುರಿಯುವುದು ಸರ್ವೇ ಸಾಮಾನ್ಯವಾಗಿದೆ. ದಾಖಲೆಗಳಿಗಾಗಿಯೇ ಯಾವ ಆಟಗಾರರೂ ಆಡುವುದಿಲ್ಲವಾದರೂ, ಅವರುಗಳು ಆಡಿದಾಗಲೆಲ್ಲಾ ದಾಖಲೆಗಳು ಆವರ ಅರಿವಿಗೆ ಬಾರದೆಯೇ ಹುಟ್ಟುಕೊಳ್ಳುತ್ತವೆ. ಅದಕ್ಕೆ ಈ ಬಾರಿಯ ಐಪಿಎಲ್ 2021 ಕೂಡಾ ಹೂರತಾಗಿಲ್ಲ. ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಮೊದಲ ಪಂದ್ಯದಿಂದ ಹಿಡಿದು ನೆನ್ನೆ ನಡೆದ ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದವರೆಗೂ ಈ ವರೆಗೂ… Read More ದಾಖಲೆಗಳು, ವಿಚಿತ್ರ ಎನಿಸಿದರೂ ಸತ್ಯ

ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್

ಈ ಬಾರಿ ಹುಣ್ಣಿಮೆ ಭಾನುವಾರ ಮತ್ತು ಸೋಮವಾರ ಬಂದಿದ್ದ ಕಾರಣ ಬಹುತೇಕ ಭಾರತೀಯರು ಎರಡೂ ದಿನ ಹೋಳಿ ಹಬ್ಬದ ಆಚರಣೆಯಲ್ಲಿದ್ದ ಕಾರಣವೋ ಅಥವಾ ಇಂಗ್ಲೇಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಷ್ಟ ಪಟ್ಟು ಗೆದ್ದದ್ದರ ಸಂಭ್ರಮದಲ್ಲಿ ಮಾರ್ಚ್​ 29, 2004 ರಂದು ಅಂದರೆ ಸರಿಯಾಗಿ 17 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಸ್ಪೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಪಾಕಿಸ್ತಾನದ ಮುಲ್ತಾನಿನಲ್ಲಿ ಸುಲ್ತಾನನಾಗಿ ಮೆರೆದು ಭಾರತದ ಪರ ಚೊಚ್ಚಲು ತ್ರಿಶತಕವನ್ನು ಬಾರಿಸಿ, ಪಾಕೀಸ್ಥಾನಿಗಳಿಗೆ… Read More ಮುಲ್ತಾನ್ ಕಾ ಸುಲ್ತಾನ್ ವೀರೇಂದ್ರ ಸೆಹ್ವಾಗ್

ಛಲದಂಕ ಮಲ್ಲ ಕೆ. ವೈ. ವೆಂಕಟೇಶ್

ಚಿಕ್ಕಂದಿನಲ್ಲಿಯೇ, ಖಾಯಿಲೆಯಿಂದಾಗಿ ಕೇವಲ 4.2″ ಎತ್ತರ ಬೆಳೆದಾಗ ಸುತ್ತಮುತ್ತಲಿನವರೆಲ್ಲರೂ ಕುಳ್ಳಾ ಕುಳ್ಳಾ ಎಂದು ಆಡಿಕೊಂಡಾಗ, ತನ್ನ ಅಂಗವೈಕುಲ್ಯವನ್ನೇ ಮೆಟ್ಟಿ ನಿಂತು. ನಾನು ಎತ್ತರವಾಗಿಲ್ಲದಿದ್ದರೆ ಏನಂತೇ? ನನ್ನ ಶಕ್ತಿ ಮತ್ತು ಸಾಮರ್ಥ್ಯದಿಂದ ಭಾರತದ ತ್ರಿವರ್ಣಧ್ವಜವನ್ನು ಭಾನೆತ್ತರಕ್ಕೆ ಹಾರಿಸುತ್ತೇನೆ ಎಂಬ ಛಲದಿಂದ ಪ್ಯಾರಾ ಓಲಂಪಿಕ್ಸ್ ನಲ್ಲಿ ಭಾರತ ಗೌರವವನ್ನು ಎತ್ತಿ ಹಿಡಿದ ಕೆ. ವೈ. ವೆಂಕಟೇಶ್ ಅವರ ಸಾಧನೆಯನ್ನು ಗುರುತಿಸಿ ಕೇಂದ್ರಸರ್ಕಾರ 2020ರ ಸಾಲಿನ ಪದ್ಮಶ್ರಿ ಪ್ರಶಸ್ತಿಗೆ ಆಯ್ಕೆಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಂತಹ ಹೆಮ್ಮೆ ಸಾಧಕನ ಯಶೋಗಾಥೆಯನ್ನು ನಮ್ಮ ಕನ್ನಡದ… Read More ಛಲದಂಕ ಮಲ್ಲ ಕೆ. ವೈ. ವೆಂಕಟೇಶ್

2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ

ಭಾರತ ತಂಡದ ಆಟಗಾರರು ಸುಮಾರು ಆರೆಂಟು ತಿಂಗಳುಗಳ ಕಾಲ ಕರೋನಾ ಪ್ರಭಾವದಿಂದಾಗಿ ಯಾವುದೇ ಕ್ರಿಕೆಟ್ ಆಟವಾಡದೇ, ಎಲ್ಲರೂ ನೇರವಾಗಿ ದುಬೈನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ಮೈ ಕೈ ಸಡಿಲಗೊಳಿಸಿದರು. ಅಲ್ಲಿಂದ ನೇರವಾಗಿ ಆಸ್ಟ್ರೇಲಿಯಾಕ್ಕೆ ಏಕದಿನ, ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಪ್ರಯಾಣಿಸಿ, ೧೪ ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಸಿಡ್ನಿಯಲ್ಲಿ ಮೊದಲ ಏಕದಿನ ಪಂದ್ಯದಲ್ಲಿ 66 ರನ್ ಗಳ ಹೀನಾಯ ಸೋಲನ್ನು ಕಂಡಾಗ, ಭಾರತದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಇನ್ನೂ ಎರಡು ಪಂಡ್ಯಗಳು ಇದೆಯಲ್ಲಾ!… Read More 2020-21 ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸ ಪಕ್ಷಿನೋಟ