ತಲಕಾವೇರಿ, ತೀರ್ಥೋಧ್ಭವ ಮತ್ತು ತುಲಾ ಸಂಕ್ರಮಣ

ನಾವು ಪ್ರತಿನಿತ್ಯವೂ ಸ್ನಾನ ಮಾಡುವಾಗ ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಹೇಳಿಕೊಂಡೇ ಸ್ನಾನ ಮಾಡುತ್ತೇವೆ. ಅಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಏಳು ನದಿಗಳಾದ – ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತಾಗಿದೆ. ಅದರಲ್ಲೂ ದಕ್ಷಿಣ ಭಾರತ ಮತ್ತು ಕರ್ನಾಟಕಕ್ಕೆ ಈ ಕಾವೇರಿ ನದಿಯು ಜೀವ ನದಿಯಾಗಿರುವುದರಿಂದಲೇ ಅದನ್ನು ಕೇವಲ ನದಿ ಎಂದು ಭಾವಿಸದೇ, ಕಾವೇರಿ ತಾಯಿ… Read More ತಲಕಾವೇರಿ, ತೀರ್ಥೋಧ್ಭವ ಮತ್ತು ತುಲಾ ಸಂಕ್ರಮಣ

ಶೃಂಗೇರಿ ದಸರಾ

ನವರಾತ್ರಿ ನಮ್ಮ ರಾಷ್ಟ್ರೀಯ ಹಬ್ಬವಾಗಿದ್ದು ಇದನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ ಈ ರೀತಿಯ ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದೇ ಇಲ್ಲವಾಗಿರುವುದು ವಿಪರ್ಯಾಸವೇ ಸರಿ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯ ಕುರಿತಾಗಿ ತಿಳಿಯೋಣ ಬನ್ನಿ. 1336 ರಲ್ಲಿ ಉತ್ತರಭಾರತದವನ್ನು… Read More ಶೃಂಗೇರಿ ದಸರಾ

ಮಾಡಾಳು ಸ್ವರ್ಣಗೌರಿ

ನಮ್ಮ ಭರತಖಂಡ ನಮ್ಮ ಸನಾತನ ಧರ್ಮದ ತವರೂರು. ದೇವಾಲಯಗಳ ಬೀಡು. ಬ್ರಹ್ಮ ವಿಷ್ಣು ಮಹೇಶ್ವರ, ಗಣೇಶ ಸುಬ್ರಹ್ಮಣ್ಯ, ಲಕ್ಷ್ಮೀ ಸರಸ್ವತಿ ಪಾರ್ವತಿಯರಲ್ಲದೇ, ನಮ್ಮ ದೇಶದ ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿಯೂ ಗ್ರಾಮದೇವರ್ತೆಗಳಿದ್ದು ನಮ್ಮ ದೇಶದ ಜನಸಂಖ್ಯೆ ಸುಮಾರು 130-140 ಕೋಟಿಗಳಿದ್ದರೇ ನಾವು ನಂಬುವ ಮತ್ತು ಪರಮ ಭಕ್ತಿಯಿಂದ ಆರಾಧಿಸುವ ದೇವಾನು ದೇವತೆಗಳ ಸಂಖ್ಯೆಯೇ ಸುಮಾರು 33ಕೋಟಿ. ಪ್ರತಿಯೊಂದು ದೇವಾಲಯಕ್ಕೂ ಮತ್ತು ಅಲ್ಲಿಯ ದೇವತೆಗೂ ಒಂದು ಐತಿಹ್ಯವಿದ್ದು ಅಲ್ಲಿಯದೇ ಆದ ಸುಂದರವಾತ ಮತ್ತು ಅಷ್ಟೇ ರೋಚಕವಾದ ಕಥೆ ಇರುತ್ತದೆ. ನಾವಿಂದು… Read More ಮಾಡಾಳು ಸ್ವರ್ಣಗೌರಿ

ಕಿನ್ನರ್ ಕೈಲಾಸ್ ಯಾತ್ರೆ

ನಮ್ಮ ಸನಾತನ ಧರ್ಮದಲ್ಲಿ ಶಿವನ ವಾಸಸ್ಥಾನಗಳು ಎಂದು ಹೇಳುವ ಐದು ಪವಿತ್ರ ಕ್ಷೇತ್ರಗಳಿವೆ. ಅವುಗಳೆಂದರೆ, ಕೈಲಾಸ ಮಾನಸ ಸರೋವರ್, ಆದಿ ಕೈಲಾಸ್, ಕಿನ್ನರ್ ಕೈಲಾಸ್, ಶ್ರೀಖಂಡ್ ಮಹಾದೇವ್ ಕೈಲಾಸ್ ಮತ್ತು ಮಣಿಮಹೇಶ್ ಕೈಲಾಸ್. ಪ್ರತಿಯೊಬ್ಬ ಹಿಂದೂವಿಗೂ ಈ ಕ್ಷೇತ್ರಗಳಿಗೆ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ ಈ ಶ್ರೀಕ್ಷೇತ್ರಗಳಿಗೆ ಹೋಗಿ ಶಿವನ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಬಯಸುತ್ತಾರೆ. ನಾವಿಂದು ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ದುರ್ಗಮವಾದ ಆದರೆ ಅತ್ಯಂತ ರೋಚಕವಾದ ಕಿನ್ನರ್ ಕೈಲಾಸ್ ನೋಡಿ ಕೊಂಡು ಬರೋಣ ಬನ್ನಿ. ಕಿನ್ನರ್ ಕೈಲಾಸ… Read More ಕಿನ್ನರ್ ಕೈಲಾಸ್ ಯಾತ್ರೆ

ಹೆಣ್ಣು ರೂಪದ ಆಂಜನೇಯಸ್ವಾಮಿ

ನಮಗೆಲ್ಲಾ ಗೊತ್ತಿರುವಂತೆ ಪ್ರಭು ಶ್ರೀರಾಮನ ಭಂಟ ಹನುಮಂತ ಮಹಾನ್ ಪರಾಕ್ರಮಿ. ಆತನ ಪೌರುಷವನ್ನು ಮೆಚ್ಚಿ ಕೊಂಡಾಡವರೇ ಇಲ್ಲಾ. ಶಕ್ತಿ ಮತ್ತು ಸಾಹಸಗಳಿಗೆ ಹನುಮಂತನೇ ಸಾಟಿ.. ಹಾಗಾಗಿಯೇ ಅನಾದಿಕಾಲದಿಂದಲೂ ಪ್ರತೀ ಊರುಗಳ ಹೆಬ್ಬಾಗಿಲಿನಲ್ಲಿಯೇ ಆಂಜನೇಯಸ್ವಾಮಿಯ ಗುಡಿಗಳನ್ನು ಕಟ್ಟಿಸಿ ಅದರ ಅಕ್ಕ ಪಕ್ಕಗಳಲ್ಲಿಯೇ ಗರಡೀ ಮನೆಗಳು ಇರುವುದನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ಪೈಲ್ವಾನರೂ ಜೈ ಭಜರಂಗಬಲಿ ಎಂದು ಹನುಮಂತನನ್ನೇ ಪ್ರಾರ್ಥಿಸಿಯೇ ಅಖಾಡಕ್ಕೆ ಇಳಿಯುತ್ತಾರೆ. ಹಾಗಾಗಿ ಸಂಶಾಸ್ಪದವಿಲ್ಲದೇ ಹನುಮಂತ‌ ನಿಜವಾದ ಗಂಡಸು ಎನ್ನುವುದು ನಿರ್ವಿವಾದ. ಆದರೆ ಸ್ತ್ರೀ ರೂಪದಲ್ಲಿರುವ ಅಪರೂಪದ ಹನುಮಂತನ ದೇವಸ್ಥಾನವೊಂದು… Read More ಹೆಣ್ಣು ರೂಪದ ಆಂಜನೇಯಸ್ವಾಮಿ

ಕಾಶಿಗೆ ಹೋದಾಗ, ಇಷ್ಟವಾದದ್ದನ್ನು ಏಕೆ ಬಿಟ್ಟು ಬರಬೇಕು?

ಸನಾತನ ಧರ್ಮದಲ್ಲಿ ದೇಶಾದ್ಯಂತ ಇರುವ ತೀರ್ಥಕ್ಷೇತ್ರಗಳಿಗೆ ಹೋಗುವ ಮುಖಾಂತರ ಹಿಂದೂಗಳ ಭಾವೈಕ್ಯತೆ ಸೌಹಾರ್ದತೆಯೊಂದಿಗೆ, ನಾವೆಲ್ಲರೂ ಒಂದು ಎಂದು ಸಾರುವ ಸತ್ ಸಂಪ್ರದಾಯವನ್ನು ಸಾವಿರಾರು ವರ್ಷಗಳ ಹಿಂದಿನಿಂದಲೂ ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಪ್ರತಿಯೊಬ್ಬ ಹಿಂದೂವೂ ಸಹಾ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿಯೇ ತೀರುತ್ತಾರೆ. ಅಂತಹ ತೀರ್ಥಕ್ಷೇತ್ರಗಳಲ್ಲಿ ವಾರಣಾಸಿ ಅಥವಾ ಕಾಶಿ ಪ್ರಮುಖವಾಗಿದೆ. ಕಾಶೀಯಲ್ಲಿ ಹರಿಯುವ ಗಂಗಾ ನದಿಯ 64 ಘಾಟ್ ಗಳಲ್ಲಿ ಪುಣ್ಯ ಸ್ನಾನ ಮಾಡಿ ಶ್ರೀ ಕಾಶೀ ವಿಶ್ವನಾಥ ಮತ್ತು ಶ್ರೀ… Read More ಕಾಶಿಗೆ ಹೋದಾಗ, ಇಷ್ಟವಾದದ್ದನ್ನು ಏಕೆ ಬಿಟ್ಟು ಬರಬೇಕು?

ಕಣ್ಣೀರು ಸುರಿಸುವ ಅಂಜನೇಯ

ಸಾಮಾನ್ಯವಾಗಿ ಮನುಷ್ಯರು ಸಂತೋಷ ಮತ್ತು ದುಃಖವನ್ನು ವ್ಯಕ್ತ ಪಡಿಸುವ ಸಲುವಾಗಿ ಕಣ್ಣೀರು ಸುರಿಸುವುದು ಸಹಜ.ಪ್ರಕ್ರಿಯೆಯಾಗಿದೆ. ಬೆಂಗಳೂರಿನ ದೇವಸ್ಥಾನವೊಂದರ ಆಂಜನೇಯಸ್ವಾಮಿ ವರ್ಷಕ್ಕೊಮ್ಮೆ ಕಣ್ಣೀರು ಸುರಿಸುವ ಆಶ್ಚರ್ಯಕರವಾದ ಸಂಗತಿಯ ಬಗ್ಗೆ ತಿಳಿದು ಕೊಳ್ಳೋಣ. ಬಾಣಸವಾಡಿ ಬೆಂಗಳೂರಿನ ಈಶಾನ್ಯಕ್ಕೆ ನಗರದ ಕೇಂದ್ರದಿಂದ ಸುಮಾರು 6-8 ಕಿ.ಮೀ ದೂರದಲ್ಲಿದ್ದು ಈ ಹಿಂದೆ ಚಿಕ್ಕ ಬಾಣಸವಾಡಿ ಮತ್ತು ದೊಡ್ಡ ಬಾಣಸವಾಡಿ ಎಂಬ ಎರಡು ಗ್ರಾಮಗಳು ಇದ್ದವು. ಹೆಚ್ಚಾಗುತ್ತಿರುವ ನಗರೀಕರಣದಿಂದ ಈ ಎರಡೂ ಹಳ್ಳಿಗಳೂ ಕಣ್ಮರೆಯಾಗಿ ಕೇವಲ ದೊಡ್ಡ ಬಾಣಸವಾಡಿ ಎಂಬ ಸುಸಜ್ಜಿತವಾದ ಬಡಾವಣೆಯು ಇಂದು… Read More ಕಣ್ಣೀರು ಸುರಿಸುವ ಅಂಜನೇಯ

ಪುರಿ ಜಗನ್ನಾಥ ರಥಯಾತ್ರೆ

ಒರಿಸ್ಸಾದ ಪುರಿಯಲ್ಲಿ ಪ್ರತೀ ವರ್ಷವೂ ಲಕ್ಷಾಂತರ ಜನರ ಸಮ್ಮುಖದಲ್ಲಿ ವೈಭವವಾಗಿ ಶ್ರೀ ಜಗನ್ನಾಥ, ಬಲಭದ್ರ ಮತ್ತು ಸುಭದ್ರಯ ರಥಯಾತ್ರೆಯ ಸಡಗರ ಸಂಭ್ರಮಗಳನ್ನು ಕುಳಿತಲ್ಲಿಂದಲೇ ಕಣ್ತುಂಬಿಸಿಕೊಳ್ಳೋಣ ಬನ್ನಿ.… Read More ಪುರಿ ಜಗನ್ನಾಥ ರಥಯಾತ್ರೆ

ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ

ಸಾಧಾರಣವಾಗಿ ನಮಗೆ ಬಿಸಿ ನೀರಿನ ಬುಗ್ಗೆ ಎಂದಾಕ್ಷಣ ಥಟ್ ಅಂತಾ ನೆನಪಾಗೋದೇ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಇರುವ ಕುಲುವಿನ ವಶಿಷ್ಠ ಬಿಸಿನೀರಿನ ಬುಗ್ಗೆ, ಮಣಿಕರಣ್ ನ ಬಿಸಿ ನೀರಿನ ಬುಗ್ಗೆ, ಮಂಡಿ ಜಿಲ್ಲೆಯ ತಟ್ಟಪಾಣಿ, ಖಿರ್ಗಂಗಾ ಮತ್ತು ಕಸೋಲ್ ಬಿಸಿನೀರಿನ ಬುಗ್ಗೆಗಳು ಆದರೆ ಕರ್ನಾಟಕದ ದಕ್ಷಿಣ ಕನ್ನಡದ ಪುತ್ತೂರಿನ ಬಳಿಯೂ ಅದೇ ರೀತಿಯ ಬಿಸಿ ನೀರಿನ ಬುಗ್ಗೆಯಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಹೌದು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 60 ಕಿ.ಮೀ, ಪುತ್ತೂರಿಗೆ 15 ಕಿ. ಮಿ… Read More ಬೇಂದ್ರ್ ತೀರ್ಥ ಬಿಸಿ ನೀರಿನ ಬುಗ್ಗೆ