ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

ಪುಟ್ಬಾಲ್ ಆಟ ಆಟಗಾರರ ಕಾಲ್ಚಳಕದ ಅನುಗುಣವಾಗಿ ಅತ್ಯಂತ ವೇಗವಾಗಿ ಆಡುವ ಆಟವಾಗಿದ್ದು, ಚಂಡಿನ ಚಲನವಲನದ ಬಗ್ಗೆ ನಿಖರವಾದ ತೀರ್ಪು ನೀಡುವುದು ತುಸು ತ್ರಾಸವಾಗಿರುವುದನ್ನು ಮನಗಂಡ FIFA, ಈ ಬಾರಿಯ ಕತಾರ್ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶೇಷ ತಂತ್ರಜ್ಣಾನ ಅಳವಡಿಸಿರುವ ಅಲ್ ರಿಹ್ಲಾ ಚಂಡುಗಳನ್ನು ಬಳಸುತ್ತಿರುವುದು ವಿಶೇಷವಾಗಿದೆ.

ಹಾಗಾದರೆ ಈ ಅಲ್ ರಿಹ್ಲಾ ಚಂಡುಗಳ ವಿಶೇಷತೆ ಏನು? ಅದನ್ನು ಆವಿಷ್ಕರಿಸಿದವರು ಯಾರು? ಈ ಚಂಡುಗಳು ಪಂದ್ಯಗಳ ಫಲಿತಾಂಶದ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎಂಬುದರ ಸವಿವರ ಇದೋ ನಿಮಗಾಗಿ… Read More ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಕೇಳಿದಷ್ಟು ಹಣವನ್ನು ಕೊಟ್ಟ ಪೋಷಕರ ಔದಾರ್ಯತೆ, ಮನೆ ಮತ್ತು ಶಾಲೆಗಳ ಉತ್ತಮ ಸಂಸ್ಕಾರದ ಕೊರತೆ, ಸಿನಿಮಾ, ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ, ಇನ್ನೂ ಮಕ್ಕಳಂತೆ ಆಟವಾಡ ಬೇಕಾದ ವಯಸ್ಸಿನಲ್ಲಿ, ಮಕ್ಕಳನ್ನು ಮಾಡಿಕೊಳ್ಳುವ ಆಟವನ್ನು ಕದ್ದು ಮುಚ್ಚಿ ಆಡುವಷ್ಟ್ರ ಮಟ್ಟಿಗೆ ಬೆಳೆದು ಬಿಟ್ಟಿರುವುದು ದೇಶದ ಹಿತದೃಷ್ಟಿಯಿಂದ ಮಾರಕವೇ ಸರಿ. ನಿಜವಾಗಿಯೂ ಕಾಲ ಕೆಟ್ಟಿಲ್ಲ, ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ಆನುಚರಣೆ ಅಲ್ವೇ?… Read More ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಉಮೇಶ್ ರೆಡ್ಡಿಯಂತಹ ವಿಕೃತಕಾಮಿಗೆ ಮರಣೆ ದಂಡನೆ ತಪ್ಪಿಸುವುದು, ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವುದು, ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವವನಿಗೆ ತಮ್ಮ ಕುಟುಂಬದೊಡನೆ ಏಕಾಂತದಲ್ಲಿ ಕಾಲ ಕಳೆಯುಂವಂತಹ ಆದೇಶವನ್ನು ಘನವೆತ್ತ ನ್ಯಾಯಾಲಯಗಳು ಕೊಡುತ್ತವೆ ಎಂದರೆ, ಅಪರಾಧಿಗಳಿಗೆ ಶಿಕ್ಷೆ ಎನ್ನುವುದು ಸಜಾ ಬದಲು ಮಜವಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವುದಿಲ್ಲವೇ? ಹಾಗಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆ ಅಗಬೇಕಲ್ಲವೇ?… Read More ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಪ್ರಪಂಚದಾದ್ಯಂತ ಇರುವ 196 ದೇಶಗಳಲ್ಲಿ ಸುಮಾರು 7,117 ಭಾಷೆಗಳಲ್ಲಿ ಮಾತನಾಡುತ್ತಾರೆ. ಭಾರತದಲ್ಲಿ ಸುಮಾರು 700ಕ್ಕೂ ಹೆಚ್ಚು ಭಾಷೆಗಳಿದ್ದು 22 ಅಧಿಕೃತ ಭಾಷೆಗಳಿದ್ದು, 2000ಕ್ಕೂ ಹೆಚ್ಚಿನ ಉಪಭಾಷೆಗಳಿದ್ದು, ವಿಶಾಲವಾದ ಭಾಷಾ ಸಂಪತ್ತನ್ನು ಹೊಂದಿದ್ದರೂ, ಬ್ರಿಟೀಷರ ದಾಸ್ಯದ ಸಂಕೇತವಾಗಿರುವ ಇಂಗ್ಲೀಷ್ ಭಾಷೆಯನ್ನೇ ಇಂದಿಗೂ ಭಾರತೀಯರು ಒಪ್ಪಿಕೊಂಡು ಅಪ್ಪಿಕೊಂಡಿರುವುದು ನಿಜಕ್ಕೂ ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕಾರಕ್ಕೆ ಮಾಡುವ ಅಪಮಾನವೇ ಸರಿ.… Read More ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಬಿಗ್ ಬಾಸ್ ಮತ್ತು ಹೋರಾಟಗಾರರು

ತಮ್ಮ ಛಾನೆಲ್ಲಿನ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ ಪರಸ್ಪರ ವಿರೋಧಾಭಾಸವಿರುವ ಮತ್ತು ಈ ಮೊದಲೇ ವಯಕ್ತಿಕವಾಗಿ ಶೀತಲ ಸಮರ ಹೊಂದಿರುವ ವ್ಯಕ್ತಿಗಳನ್ನು ಬಿಗ್ ಬಾಸ್ ನ ಒಂದೇ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿ, ಅವರಿಬ್ಬರ ಜಗಳವನ್ನು ಮನೋರಂಜನೆ ಎಂದು ತೋರಿಸುವುದು ನಂತರ ಕ್ಷಮೆ ಕೇಳಿಸುವುದು ಒಂದು ರೀತಿಯಾಗಿ ಕಂಡೋರ ಮನೆಯ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವಂತಿದೆ ಎಂದರೂ ತಪ್ಪಾಗದು ಅಲ್ವೇ?… Read More ಬಿಗ್ ಬಾಸ್ ಮತ್ತು ಹೋರಾಟಗಾರರು

ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡ ಚಲನಚಿತ್ರಗಳ ಅರ್ಥವೇ ಇಲ್ಲದ ಅಸಂಬದ್ಧ ಹಾಡುಗಳಿಗೆ ಅಷ್ಟೇ ಅಸಹ್ಯಕರವಾಗಿ ಮೈ ಕೈ ಕುಲುಕಿಸುತ್ತಾ ನರ್ತಿಸುವುದೇ ಸಾಂಸ್ಕೃತಿಕ ಕಾರ್ಯಕ್ರಮ ಎಂದು ಭಾವಿಸಿರುವವರಿಗೆ ಬೆಂಗಳೂರಿನ ಥಣಿಸಂದ್ರ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯಲ್ಲಿ ವೈಭವದ ವಿಜಯನಗರ ಸಾಮ್ರಾಜ್ಯ ಎಂಬ ವಿಷಯಾಧಾರಿತವಾದ ಅದ್ಭುತ ಕಾರ್ಯಕ್ರಮದ ಮೂಲಕ 67ನೇ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ಸಡಗರ ಸಂಭ್ರಮ ಇದೋ ನಿಮಗಾಗಿ… Read More ರಾಷ್ಟ್ರೋತ್ಥಾನ ಶಾಲೆಯ ರಾಜ್ಯೋತ್ಸವ ಆಚರಣೆ

ಕನ್ನಡ ಚಿತ್ರರಂಗ ಅಂದು ಇಂದು

ಕನ್ನಡದ ಮೊದಲ ಟಾಕೀ ಸಿನಿಮಾ ಸತಿ ಸುಲೋಚನದಿಂದ ಹಿಡಿದು ಇಂದಿನ ಕಾಂತಾರ ಮತ್ತು ಹೆಡ್ ಬುಷ್ ವರೆಗೂ ಕನ್ನಡ ಚಿತ್ರರಂಗ ಬೆಳೆದು ಬಂದ ದಾರಿಯ ಜೊತೆ ಅಂದಿನ ನಿರ್ದೇಶಕರು/ನಟರಿಗೂ ಇಂದಿನ ನಿರ್ದೇಶಕರು/ನಟರಿಗೂ ಇರುವ ವ್ಯತ್ಯಾಸದ ಕುರಿತಾದ ಒಂದು ವಸ್ತುನಿಷ್ಠ ವಿಶ್ಲೇಷಣೆ ಇದೋ ನಿಮಗಾಗಿ.… Read More ಕನ್ನಡ ಚಿತ್ರರಂಗ ಅಂದು ಇಂದು

ಅಪಘಾತಕ್ಕೆ ಅವಸರವೇ ಕಾರಣ

ಹೆದ್ದಾರಿಗಳಲ್ಲಿ ಅಪಘಾತಕ್ಕೆ ಅವಸರವೇ ಕಾರಣ, ಇಲ್ಲವೇ, ಅತಿ ವೇಗ ತಿಥಿ ಬೇಗ ಎಂಬ ಫಲಕವೋ ಕಣ್ಣಿಗೆ ಬಿದ್ದರೂ ಅದನ್ನು ನೋಡೀಯೋ ನೋಡದಂತೆ ಇಲ್ಲವೇ ನೋಡಿದರೂ ಅದನ್ನು ಅಪಹಾಸ್ಯ ಮಾಡಿಕೊಂಡು ವೇಗವಾಗಿ ವಾಹನವನ್ನು ಚಲಾಯಿಸಿದಾಗ ಆದ ಹೃದಯವಿದ್ರಾವಕ ಪ್ರಸಂಗ ಮತ್ತು ಅಂತಹ ಪ್ರಸಂಗವನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಅಪಘಾತಕ್ಕೆ ಅವಸರವೇ ಕಾರಣ

ನೈಜ ಕನ್ನಡ ಪ್ರೇಮ ಮತ್ತು ಕನ್ನಡ ಸೇವೆ

ಸದ್ಯಕ್ಕೆ ಅಕ್ಟೋಬರ್ ಮೂರನೇ ವಾರ ನಡೆಯುತ್ತಿದ್ದು ಇನ್ನೇನು ಎರಡು ವಾರಕ್ಕೆ ನವೆಂಬರ್ 1ನೇ ತಾರೀಖು ಬಂದಿತೆಂದರೆ ಕನ್ನಡಿಗರ ಹೆಮ್ಮೆಯ ಮತ್ತು ಸಂಭ್ರಮದ ಕನ್ನಡ ರಾಜ್ಯೋತ್ಸವಕ್ಕೆ ಸಿದ್ದಗೊಳ್ಳುತ್ತೇವೆ. ಈ ಹಿನ್ನಲ್ಲೆಯಲ್ಲಿ ಕರ್ನಾಟಕ ರಾಜ್ಯಸರ್ಕಾರವೂ ಸಹಾ ಅಕ್ಟೋಬರ್ 28ರಂದು ಕರ್ನಾಟಕದಾದ್ಯಂತ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಕನ್ನಡದ ಕವಿಗಳ ಜನಪ್ರಿಯ ಗೀತೆಗಳನ್ನು ಏಕಕಾಲದಲ್ಲಿ ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಇದರ ನಿಮಿತ್ತ ಅ.28ರಂದು ಬೆಳಗ್ಗೆ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಡಾ.ಚನ್ನವೀರ… Read More ನೈಜ ಕನ್ನಡ ಪ್ರೇಮ ಮತ್ತು ಕನ್ನಡ ಸೇವೆ