ಭಾರತ ದರ್ಶನ ಶ್ರೀ ವಿದ್ಯಾನಂದ ಶಣೈ

https://enantheeri.com/2022/11/16/vidyananda_shenoy/

ದೇಶದ ಇತಿಹಾಸದ ಅರಿವಿಲ್ಲದವರು, ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಕಾರಣದಿಂದ ದೇಶದ ಯುವಜನತೆಗೆ ಭಾರತದ ಮಾತೃಸ್ವರೂಪ, ಪಿತೃಸ್ವರೂಪ, ಗುರು ಸ್ವರೂಪಗಳ ಪರಿಚಯವಲ್ಲದೇ, ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು, ಪ್ರಮುಖ ತೀರ್ಥಗಳು, ಅಗಲಿದ ಕ್ಷೇತ್ರಗಳು, ಅಖಂಡ ಭಾರತದ ಆರಾಧನೆಯ ಜೊತೆಗೆ ಬ್ರಿಟೀಷರು ಹೇಗೆ ರಾಜ್ಯಗಳನ್ನು ಮೋಸದಿಂದ ತಮ್ಮ ಕೈವಶಕ್ಕೆ ತೆಗೆದುಕೊಂಡರು ಎಂಬುದನ್ನು ತಮ್ಮ ಭಾರತ ದರ್ಶನ ಕಾರ್ಯಕ್ರಮದಲ್ಲಿ ರೋಚಕವಾಗಿ ವಿವರಿಸುತ್ತಾ, ವರನಟ ರಾಜಕುಮಾರ್, ವಿಷ್ಣುವರ್ಧನ್, ಭದ್ರಗಿರಿ ಅಚ್ಯುತದಾಸ ಅದಿಯಾಗಿ ಲಕ್ಷಾಂತರ ಯುವಕರನ್ನು ಜಾಗೃತಗೊಳಿಸಿದ ಧೀಮಂತ ವ್ಯಕ್ತಿ ಶ್ರೀ ವಿದ್ಯಾನಂದ ಶಣೈ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಯಶೋಗಾಥೆ ಇದೋ ನಿಮಗಾಗಿ… Read More ಭಾರತ ದರ್ಶನ ಶ್ರೀ ವಿದ್ಯಾನಂದ ಶಣೈ

ಡಾ. ವಿಜಯಲಕ್ಷ್ಮಿ ದೇಶಮಾನೆ

ಗುಲ್ಬರ್ಗಾದ ಕೊಳಗೇರಿಯ ದಲಿತ ವರ್ಗದ ತರಕಾರಿ ಮಾರುತ್ತಿದ್ದ ಹೆಣ್ಣುಮಗಳು, ಕಿತ್ತು ತಿನ್ನುವ ಬಡತನ, ಅಪಮಾನ, ಸಾಮಾಜಿಕ ಅಸಡ್ಡೆಯ ನಡುವೆಯೂ ಈ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆಯಾಗಿ, ಜನ ಸೇವೆಯೇ ಜನಾರ್ದನ ಸೇವೆ ಎಂದು ನೊಂದವರ ಕಂಬನಿ ಒರೆಸುವುದೇ ದೈವಾರಾಧನೆ ಎಂದು ತಿಳಿದು ಸಮಾಜಕ್ಕಾಗಿಯೇ ತಮ್ಮ ಬದುಕನ್ನೇ ಮೀಸಲಾಗಿಟ್ಟಿರುವ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿಯಾಗಿರುವ ನಮ್ಮ ಹೆಮ್ಮೆಯ ಡಾ. ವಿಜಯಲಕ್ಷ್ಮಿ ದೇಶಮಾನೆಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಡಾ. ವಿಜಯಲಕ್ಷ್ಮಿ ದೇಶಮಾನೆ

ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಕರ್ನಾಟಕದ ಕಂಡ ಖ್ಯಾತ ಸ್ಪಿನ್ನರ್ ಚಂದ್ರಶೇಖರ್ ಮತ್ತು ಪ್ರಸನ್ನ ಅವರ ನಂತರ ಕರ್ನಾಟಕದ ಕ್ರಿಕೆಟ್ ತಂಡದ ಪ್ರಮುಖ ಎಡಗೈ ಸ್ಪಿನ್ನರ್ ಆಗಿ, ಕರ್ನಾಟಕಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದ ಎ ರಘುರಾಂ ಭಟ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ವೇದ ಬ್ರಹ್ಮ ಡಾ.ಆರ್.ಎಲ್‌.ಕಶ್ಯಪ್

ವೇದ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ಈ ಎಲ್ಲಾ ಕ್ಷೇತ್ರಗಳಲ್ಲೂ ಅಪಾರವಾದ ಸಾಧನೆ ಮಾಡಿ, ವೇದಾಧ್ಯಯನಕ್ಕಾಗಿಯೇ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು ಹಲವು ಪ್ರಥಮಗಳಿಗೆ ಕಾರಣೀಭೂತರಾಗಿದ್ದರೂ,, ಎಲೆ ಮರೆಕಾಯಿಯಂತೆಯೇ ಮರೆಯಾಗಿ ಹೋದ ಶ್ರೀಯುತ ವೇದ ಬ್ರಹ್ಮ ಡಾ.ಆರ್.ಎಲ್‌.ಕಶ್ಯಪ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ವೇದ ಬ್ರಹ್ಮ ಡಾ.ಆರ್.ಎಲ್‌.ಕಶ್ಯಪ್

ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಉಮೇಶ್ ರೆಡ್ಡಿಯಂತಹ ವಿಕೃತಕಾಮಿಗೆ ಮರಣೆ ದಂಡನೆ ತಪ್ಪಿಸುವುದು, ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವುದು, ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವವನಿಗೆ ತಮ್ಮ ಕುಟುಂಬದೊಡನೆ ಏಕಾಂತದಲ್ಲಿ ಕಾಲ ಕಳೆಯುಂವಂತಹ ಆದೇಶವನ್ನು ಘನವೆತ್ತ ನ್ಯಾಯಾಲಯಗಳು ಕೊಡುತ್ತವೆ ಎಂದರೆ, ಅಪರಾಧಿಗಳಿಗೆ ಶಿಕ್ಷೆ ಎನ್ನುವುದು ಸಜಾ ಬದಲು ಮಜವಾಗಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವುದಿಲ್ಲವೇ? ಹಾಗಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲೂ ಆಮೂಲಾಗ್ರ ಬದಲಾವಣೆ ಅಗಬೇಕಲ್ಲವೇ?… Read More ಶಿಕ್ಷೆ ಕೊಡುವುದು ಸಜನೋ ಇಲ್ಲಾ ಮಜಾನೋ?

ಹರಿಕಥಾ ವಿದ್ವಾನ್ ಶ್ರೀ ಗುರುರಾಜಲು ನಾಯ್ದು

ಕರ್ನಾಟಕ ಸಂಗೀತ, ನಾಟಕ, ಸಿನಿಮಾರಂಗ ಮತ್ತು ಎಲ್ಲಕ್ಕಿಂತಲೂ ವಿಶೇಷವಾಗಿ ಹರಿಕಥಾ ವಿದ್ವಾನರಾಗಿ ಹರಿಕಥಾ ಪಿತಾಮಹ ಎಂದೇ ನಾಡಿನಾದ್ಯಂತ ಪ್ರಖ್ಯಾತರಾಗಿದ್ದ ಶ್ರೀ ಗುರುರಾಜಲು ನಾಯ್ಡು ಅವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ನಮ್ಮ ಕನ್ನಡದ ಕಲಿಗಳು ಮಲಿಕೆಯಲ್ಲಿ ಮೆಲುಕು ಹಾಕೋಣ… Read More ಹರಿಕಥಾ ವಿದ್ವಾನ್ ಶ್ರೀ ಗುರುರಾಜಲು ನಾಯ್ದು

ಶ್ರೀ ಕನಕದಾಸರು

15ನೇ ಶತಮಾನದಲ್ಲಿ ತಮ್ಮ ಹರಿದಾಸ ಸಾಹಿತ್ಯದ ಮೂಲಕ ಶ್ರೇಷ್ಠ ಹರಿದಾಸ ಸಂತರು ಮತ್ತು ದಾರ್ಶನಿಕರಾಗಿದ್ದ, ಕರ್ನಾಟಕ ಸಂಗೀತದ ಪ್ರಸಿದ್ಧ ಸಂಯೋಜಕರು, ಕವಿಗಳು, ಸಮಾಜ ಸುಧಾರಕರಾಗಿದ್ದಲ್ಲದೇ, ತಮ್ಮ ಕೀರ್ತನೆಗಳು ಮತ್ತು ಉಗಾಭೋಗಗಳ ಮೂಲಕ ಕನ್ನಡ ಸಾರಸ್ವತಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಶ್ರೀ ಕನಕದಾಸರ ಸಾಧನೆಗಳನ್ನು ಅವರ ಜಯಂತಿಯಂದು ಪ್ರತಿಯೊಬ್ಬ ಕನ್ನಡಿಗರೂ ಸ್ಮರಿಸುವುದು ಆದ್ಯ ಕರ್ತವೇ ಹೌದು… Read More ಶ್ರೀ ಕನಕದಾಸರು

ಆನೇಕಲ್ ಸುಬ್ಬರಾಯ ಶಾಸ್ತ್ರಿ

ಸಾಮಾನ್ಯವಾಗಿ ವಿಮಾನವನ್ನು ಕಂಡುಹಿಡಿದವರು ಯಾರು? ಎಂದು ಕೇಳಿದ ತಕ್ಷಣವೇ ಡಿಸೆಂಬರ್ 17, 1903ರಂದು ಆರ್ವಿಲ್ಲೆ ಮತ್ತು ವಿಲ್ಬರ್ ರೈಟ್ ಅರ್ಥಾತ್ ಎಲ್ಲರಿಗೂ ಚಿರಪರಿಚಿತವಾಗಿರುವ ರೈಟ್ ಸಹೋದರರು ಎಂದೇ ಸಣ್ಣ ಮಕ್ಕಳೂ ಉತ್ತರಿಸುತ್ತಾರೆ. ಏಕೆಂದರೆ ಇದೇ ಸತ್ಯ ಎಂದು ವಿಶ್ವಾದ್ಯಂತ ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಕಲಿಸಿಕೊಡಲಾಗಿದೆ. ನಿಜ ಹೇಳಬೇಕಂದರೆ, ರೈಟ್ ಸಹೋದರರಿಗೂ ಮುನ್ನವೇ ಕರ್ನಾಟಕದದ ಬೆಂಗಳೂರು ಬಳಿಯೇ ಇರುವ ಆನೇಕಲ್ಲಿನ ಶ್ರೀ ಸುಬ್ಬರಾಯ ಶಾಸ್ತ್ರಿಗಳು 1895ರಲ್ಲೇ ಮಾರುತ ಸಖ ಎಂಬ ಪ್ರಪ್ರಥಮ ಪ್ರಯೋಗಾತ್ಮಕ ವಿಮಾನದ ಹಾರಾಟವನ್ನು ಯಶಸ್ವಿಯಾಗಿ ಸಾಧಿಸಿದ್ದರು.… Read More ಆನೇಕಲ್ ಸುಬ್ಬರಾಯ ಶಾಸ್ತ್ರಿ

ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ತಮ್ಮ ಮನೋಜ್ಞ ಅಭಿನಯದ ಮೂಲಕ ನೂರಾರು ನಾಟಕಗಳು, ಲೆಕ್ಕವಿಲ್ಲದಷ್ಟು ಧಾರಾವಾಹಿಗಳು ಮತ್ತು ಸುಮಾರು 500 ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಸದಾಕಾಲವೂ ಹಚ್ಚ ಹಸುರಾಗಿದ್ದ ಮತ್ತು ನೆನ್ನೆ ತಾನೇ ಹೃದಯಾಘಾತದಿಂತ ನವೆಂಬರ್ 8, 2022ರಂದು ನಿಧನರಾದ ಕಂಚಿನ ಕಂಠದ ಶ್ರೀ ಟಿ.ಎಸ್. ಲೋಹಿತಾಶ್ವ ಅವರ ವ್ಯಕ್ತಿ ಚಿತ್ರಣ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ