ಪಂಜಾಬಿನ ಅಚ್ಚರಿಯ ಆತಂಕಕಾರಿ ಬೆಳವಣಿಗೆ

ಮಾರ್ಚ್ 10, 2022 ಶುಕ್ರವಾರದಂದು ಪ್ರಪಂಚಾದ್ಯಂತ ಹರಡಿರುವ ಬಹುತೇಕ ಭಾರತೀಯರ ಚಿತ್ತವೆಲ್ಲಾ ಇದ್ದದ್ದೇ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ಪಂಚರಾಜ್ಯಗಳ ಚುನಾವಣಾ ಫಲಿತಾಂಶದತ್ತ. ಚುನಾವಣೆಯ ಪೂರ್ವೋತ್ತರ ಮತ್ತು ಚುನಾವಣೆಯ ನಂತರದ ಎಕ್ಸಿಟ್ ಪೋಲಿನಲ್ಲಿ ಪಂಜಾಬಿನಲ್ಲಿ ಸರಳ ಬಹುಮತದೊಂದಿಗೆ ಆಮ್ ಆದ್ಮೀ ಪಕ್ಷ, ಉತ್ತರ ಪ್ರದೇಶ ಮತ್ತು ಮಣಿಪುರಲ್ಲಿ ಬಿಜೆಪಿ ಸರಳ ಬಹುಮತ ಗಳಿಸುತ್ತದೆ ಹಾಗೂ ಉತ್ತರಾಖಂಡ್ ಮತ್ತು ಗೋವಾದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ನಡುವೆ ಹಣಾಹಣಿಯ ಸ್ಪರ್ಥೆ ಏರ್ಪಟ್ಟು ಅತಂತ್ರವಾಗಬಹುದು ಎಂದೇ ಬಹುತೇಕ ಸಮೀಕ್ಷೆಗಳು… Read More ಪಂಜಾಬಿನ ಅಚ್ಚರಿಯ ಆತಂಕಕಾರಿ ಬೆಳವಣಿಗೆ

ಗೋಕುಲಾಷ್ಥಮಿಗೂ ಇಮಾಂ ಸಾಬಿಗೂ ಏನು ಸಂಬಂಧ?

ವಿಜ್ಞಾನದದಲ್ಲಿ ನಾವೆಲ್ಲರೂ ಚಿಕ್ಕವಯಸ್ಸಿನಲ್ಲಿಯೇ ಓದಿರುವ ನ್ಯೂಟನ್ನನ ಮೂರನೇ ನಿಯಮದಂತೆ ಪ್ರತಿಯೊಂದು ಕ್ರಿಯೆಗೂ ಅಷ್ಟೇ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಕಳೆದ ಒಂದೆರಡು ತಿಂಗಳುಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿಧ್ಯಮಾನಗಳನ್ನು ಸೂಕ್ಶ್ಮವಾಗಿ ಗಮನಿಸಿದ್ದವರಿಗೆ ಈ ವಿಷಯದ ಪ್ರಸ್ತಾಪದ ಅರಿವಿರುತ್ತದೆ. ಎರಡು ತಿಂಗಳುಗಳ ಹಿಂದೆ ಕೆಲ ಮತಾಂಧ ಪಟ್ಟಭದ್ರ ಹಿತಾಸಕ್ತಿಯ ಜನರು ಬೆರಳೆಣಿಕೆಯ ಕಾಲೇಜು ಹುಡುಗಿಯರ ತಲೆಯನ್ನು ಕೆಡಸಿ ಉಡುಪಿನ ವಿಷಯವಾಗಿ ಉಡುಪಿಯ ಸರ್ಕಾರೀ ಕಾಲೇಜಿನಲ್ಲಿ ಸಣ್ಣ ಪ್ರಮಾಣದಲ್ಲಿ ಹುಟ್ಟು ಹಾಕಿದ ವಿವಾದ ಈ ಪರಿಯಾಗಿ ಬೆಳೆದು ತಮ್ಮ… Read More ಗೋಕುಲಾಷ್ಥಮಿಗೂ ಇಮಾಂ ಸಾಬಿಗೂ ಏನು ಸಂಬಂಧ?

ಶಿರಸಿ ಮಾರಿಕಾಂಬಾ

ಕರ್ನಾಟಕದ ಮಲೆನಾಡಿನ ಸಾಂಸ್ಕೃತಿಕ ಹೆಬ್ಬಾಗಿಲು ಎಂದೇ ಖ್ಯಾತವಾಗಿರುವ, ಶಿರಸಿಯ ಶ್ರೀ ಮಾರಿಕಾಂಬೆಯ ದರ್ಶನ ಪಡೆಯುವುದರ ಜೊತೆಗೆ ಪ್ರತೀ ಎರಡು ವರ್ಷಗಳಿಗೊಮ್ಮೆ ವೈಭವೋಪೇತವಾಗಿ ನಡೆಯುವ ಮಾರಿ ಜಾತ್ರೆಯ ಸುಂದರ ಅನುಭವ ಮತ್ತು ಅಲ್ಲಿಯ ದೇವಾಲಯದ ಪ್ರಸಿದ್ಧ ಕೋಣ ಮತ್ತು ಆ ಜಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ಶಿರಸಿ ಮಾರಿಕಾಂಬಾ

ಛೇ, ಛೇ, ಛೇ, ಹೀಗಾಗ್ಬಾರ್ದಿತ್ತು

ಭಾರತೀಯ ಚಿತ್ರರಂಗದಲಿ ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದ ಇತಿಹಾಸವಿದ್ದು ಪ್ರತೀವರ್ಷವೂ ಸರ್ಕಾರ ಕೊಡುವ ಸ್ವರ್ಣ ಕಮಲ ಪ್ರಶಸ್ತಿಗಳಲ್ಲಿ ಮೊದಲ ಮೂರು ಸ್ಥಾನದಲ್ಲಿ ಕರ್ನಾಟಕದ ಹೆಸರೂ ಇದ್ದೇ ಇದೆ. ಈ ರೀತಿಯ ಸಾಥನೆಯನ್ನು ಮಾಡಲು ವರನಟ ಡಾ.ರಾಜಕುಮಾರ್, ವಿಷ್ಣುವರ್ಥನ್, ಅನಂತ್ ನಾಗ್, ರಮೇಶ್ ಅಂತಹ ದಿಗ್ಗಜ ನಟರುಗಳಲ್ಲದೇ ಜಿವಿ ಐಯ್ಯರ್, ಬಿ. ಆರ್ ಪಂತಲು, ಲಕ್ಷ್ಮೀನಾರಾಯಣ, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ ಶೇಷಾದ್ರಿ ಅವರಂತಹ ನಿರ್ದೇಶಕರ ಪಾಲೂ ಇದೆ ಎನ್ನುವುದೂ ಸತ್ಯ. ನಟನೆಯಲ್ಲಿ ಕುರಿಗಳು, ಕೋತಿಗಳು, ಕತ್ತೆಗಳ ಚಿತ್ರಗಳಿಗಷ್ಟೇ… Read More ಛೇ, ಛೇ, ಛೇ, ಹೀಗಾಗ್ಬಾರ್ದಿತ್ತು

ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ಪಂಚರಥೋತ್ಸವ ಅರ್ಥಾತ್ ದೊಡ್ಡ ಜಾತ್ರೆಯ ಸಂಭ್ರಮ ಕ್ಷಣಗಳನ್ನು ಕುಳಿತಲ್ಲಿಂದಲೇ ನೋಡಿ ಶ್ರೀ ನಂಜುಂಡೇಶ್ವರನ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ.… Read More ನಂಜನಗೂಡು ಪಂಚ ಮಹಾರಥೋತ್ಸವ (ದೊಡ್ಡ ಜಾತ್ರೆ)

ಉಕ್ರೇನಿನ ನೈಜ ಮುಖ

ಕಾಲು ಕೆರೆದುಕೊಂಡು ರಷ್ಯಾದ ವಿರುದ್ಧ ಯುದ್ದ ಮಾಡಲು ಹೋಗಿ ತಪರಾಕಿ ಹಾಕಿಸಿಕೊಳ್ಳುತ್ತಿರುವ ಉಕ್ರೇನಿನ ನೆರೆ ರಾಷ್ಟ್ರಗಳಿಂದ ಉಕ್ರೇನಿನಲ್ಲಿ ಸಿಲಿಕಿಕೊಂಡಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಆಪರೇಷನ್ ಗಂಗಾ ಮೂಲಕ ಭಾರತಕ್ಕೆ ಕರೆತರುವ ಪ್ರಯಾಸದಲ್ಲಿದ್ದರೆ, ಕಮ್ಯೂನಿಷ್ಟ್ ಮನಸ್ಥಿತಿಯ ಬಹುತೇಕ ಮಾಧ್ಯಮಗಳು ಹುಡುಕಿ ಹುಡುಕೀ ಭಾರತ ಸರ್ಕಾರದ ಉಚಿತ ವಿಮಾನದಲ್ಲೇ ಬಂದು ಅದೇ ಭಾರತ ಸರ್ಕಾರ ವಿರುದ್ಧ ಮಾತನಾಡುವವರ ಸಂದರ್ಶನವನ್ನು ಪ್ರಸರಿಸಿ ಪರೋಕ್ಷವಾಗಿ ಆಪರೇಷನ್ ಗಂಗಾ ಎನ್ನುವುದು ವಿಫಲ ಪ್ರಯತ್ನ… Read More ಉಕ್ರೇನಿನ ನೈಜ ಮುಖ

ದೇವರಾಯನ ದುರ್ಗ

ಬೆಂಗಳೂರಿನ ಹತ್ತಿರವೇ ಸುಂದರವಾದ ರಮಣೀಯವಾದ ಪ್ರಕೃತಿ ತಾಣವಿರಬೇಕು. ಅದು ಪುಣ್ಯಕ್ಷೇತ್ರವೂ ಆಗಿರಬೇಕು. ಹಿರಿಯರು ಕಿರಿಯರೂ ಎಲ್ಲರೂ ಮೆಚ್ಚುವಂತಿರಬೇಕು ಎನ್ನುವ ಸುಂದರವಾದ ತಾಣಕ್ಕೆ ಅರಸುತ್ತಿದ್ದೀರೆ ಎಂದರೆ ಬೆಂಗಳೂರಿನಿಂದ ಕೇವಲ 72 km ದೂರದಲ್ಲಿರುವ ಸುಮಾರು 1 ಗಂಟೆ 30 ನಿಮಿಷಗಳಲ್ಲಿ ಆರಾಮವಾಗಿ ತಲುಪಬಹುದಾದಂತಹ ಪುರಾಣ ಪ್ರಸಿದ್ಧ ಪಕೃತಿತಾಣವೇ ದೇವರಾಯನ ದುರ್ಗ ಎಂದರೆ ಅತಿಶಯೋಕ್ತಿ ಎನಿಸದು. ದೇವರಾಯನದುರ್ಗವು ತುಮಕೂರು ಜಿಲ್ಲೆಗೆ ಸೇರಿರುವ ಬೆಟ್ಟ ಗುಡ್ಡ, ಅರಣ್ಯಗಳಿಂದ ಆವೃತವಾಗಿರುವ ಹತ್ತು ಹಲವಾರು ದೇವಾಲಯಗಳನ್ನು ಒಳಗೊಂಡಿರುವ ಒಂದು ಸುಂದರವಾದ ಗಿರಿಧಾಮವಾಗಿರುವುದಲ್ಲದೇ, ಪ್ರಕೃತಿ ಪ್ರಿಯರಿಗೆ… Read More ದೇವರಾಯನ ದುರ್ಗ

ಅರ್ಥಪೂರ್ಣ ಮಹಿಳಾ ದಿನಾಚರಣೆ

ಮಾರ್ಚ್ 8 ರಂದು ವಿಶ್ವಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಚರಿಸಿಕೊಂಡು ಬರಲಾಗುತ್ತದೆ. ಇದೇ ಅಂಗವಾಗಿ ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿ ಇರುವ ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಸಹಾ ಕಳೆದ ಕೆಲವು ವರ್ಷಗಳಿಂದಲೂ ನಮ್ಮ ನಿಮ್ಮೆಲ್ಲರ ನಡುವೆಯೇ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಾಧಕಿಯರ ಸಾಧನೆಯನ್ನು ಗುರುತಿಸಿ ಅವರ ಸಾಧನೆಗಳು ಮತ್ತಷ್ಟು ಮಗದಷ್ಟು ಹೆಚ್ಚಾಗಲಿ ಎಂದು ಅವರಿಗೆ ಗೌರವ ಸಲ್ಲಿಸಿಕೊಂಡು ಬರುತ್ತಿದೆ. ಈ ಬಾರಿ ಯಲಹಂಕ ವಿಭಾಗದ ಆರೋಗ್ಯಭಾರತಿ ಸಹಯೋಗದೊಂದಿಗೆ ದಿನಾಂಕ 13-3-2022 ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ… Read More ಅರ್ಥಪೂರ್ಣ ಮಹಿಳಾ ದಿನಾಚರಣೆ

ಅಡುಗೆ ಎಣ್ಣೆ ಕಾಳದಂಧೆ

ಕಳೆದ ಒಂದು ತಿಂಗಳಿನಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಯಾದವೀ ಕಲಹ ನಡೆಯುತ್ತಿದ್ದರೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಆ ಯುದ್ಧದ ದುಷ್ಪರಿಣಾಮ ಭಾರತದ ಮೇಲೆ ಆಗುತ್ತಿದೆ. ಯುದ್ಧದಿಂದಾಗಿ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಪೆಟ್ರೋಲ್ ಬೆಲೆ ಏರುತ್ತದೆ ಎಂದರೆ ಒಪ್ಪಿಕೊಳ್ಳಬಹುದು ಆದರೆ ಉಕ್ರೇನ್ ನಿಂದ ಸೂರ್ಯಕಾಂತಿಯ ಎಣ್ಣೆ ಭಾರತಕ್ಕೆ ಆಮದು ಆಗ್ತಾ ಇಲ್ಲಾ ಎಂಬ ನೆಪವೊಡ್ಡಿ ಇದ್ದಕ್ಕಿದಂತೆಯೇ ಭಾರತದಲ್ಲಿ ಅಡುಗೆ ಎಣ್ಣೆ ಯದ್ವಾ ತವ್ದಾ ಏರುತ್ತಿರುವುದು ಕಳವಳಕಾರಿಯಾಗಿದೆ. ಕೊರೋನಾ ಮುಂಚೆ 80-100 ರೂಪಾಯಿ ಆಸುಪಾಸಿನಲ್ಲಿ… Read More ಅಡುಗೆ ಎಣ್ಣೆ ಕಾಳದಂಧೆ