ಮಾಗಡಿ ಶ್ರೀ ರಂಗನಾಥಸ್ವಾಮಿ

ಈ ಧನುರ್ಮಾಸದ ಸಮಯದಲ್ಲಿ ಭಗವಾನ್ ವಿಷ್ಣುವಿನನ್ನು ಒಮ್ಮೆ ದರ್ಶನ ಮಾಡಿದಲ್ಲಿ ಸಾವಿರ ವರ್ಷಗಳ ದರ್ಶನದ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ನಾವಿಂದು ಬೆಂಗಳೂರಿನಿಂದ ಸುಮಾರು 50-55 ಕಿಮೀ ದೂರದಲ್ಲಿರುವ ಕೆಂಪೇಗೌಡರ ಊರಾದ ಮಾಗಡಿಯಲ್ಲಿರುವ ಚೋಳರ ಕಾಲದ ಪ್ರಸಿದ್ಧ ದೇವಾಲಯವಾದ ತಿರುಮಲೈ ಶ್ರೀ ರಂಗನಾಥಸ್ವಾಮಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ. ಮಾಂಡವ್ಯ ಋಷಿಗಳಿಂದ ಸ್ಥಾಪಿತವಾದ ಈ ಕ್ಷೇತ್ರ ಮಾಂಡವ್ಯ ಕ್ಷೇತ್ರ ಎಂದು ಹೆಸರಾಗಿದೆ. ಆರಂಭದಲ್ಲಿ ಮಾಂಡವ್ಯಕುಟಿ ಎಂದಿಂದ್ದು ನಂತರ ಜನರ ಆಡು ಮಾತಿನಲ್ಲಿ ಅಪಭ್ರಂಷವಾಗಿ ಮಾಕುಟಿ,… Read More ಮಾಗಡಿ ಶ್ರೀ ರಂಗನಾಥಸ್ವಾಮಿ

ವೈಕುಂಠ ಏಕಾದಶಿ  

ವರ್ಷದಲ್ಲಿ ಬರುವ 24 ಏಕಾದಶಿಗಳ ಪೈಕಿ,
ಉಳಿದೆಲ್ಲಾ ಏಕಾದಶಿಗಿಂತಲೂ, ಪುಷ್ಯಮಾಸ/ಧನುರ್ಮಾಸದ ಶುಕ್ಲಪಕ್ಷದಂದು ಬರುವ ವೈಕುಂಠ ಏಕಾದಶಿಯ ವಿಶೇಷವೇನು? ಇದರ ಪೌರಾಣಿಕ ಹಿನ್ನಲೆ ಏನು? ಇದೇ ದಿನವೇ ವೈಕುಂಠದ/ಸ್ವರ್ಗದ ಬಾಗಿಲು ತೆರೆದಿರಲು ಕಾರಣ ಏನು? ಎಂಬೆಲ್ಲಾ ವಿಷಯಗಳ ಕುರಿತಾದ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ವೈಕುಂಠ ಏಕಾದಶಿ  

ಗೋವು ಕಳ್ಳರು

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ… Read More ಗೋವು ಕಳ್ಳರು

ಆಂತರಿಕ ಹಿತಶತ್ರುಗಳು

ಮೊನ್ನೆ ಪಂಜಾಬಿನಲ್ಲಿ ವಿವಿಧ ಯೋಜನೆಗಳನ್ನು ಉಧ್ಘಾಟಿಸುವ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳು ನಿಗಧಿಯಂತೆ ಹೆಲಿಕ್ಯಾಪ್ಟರಿನಲ್ಲಿ ಪ್ರಯಾಣಿಸಲು ನಿರ್ಧಾರವಾಗಿದ್ದರೂ, ಹವಾಮಾನದ ವೈಪರೀತ್ಯದಿಂದಾಗಿ ಕೂಡಲೇ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಲು ನಿರ್ಧರಿಸಿ, ಆದರ ಸಂಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿ ಅವರ ರಕ್ಷಣೆಯ ಜವಾಬ್ಛಾರಿಯನ್ನು ನೋಡಿಕೊಳ್ಳಲು ಸೂಚಿಸಲಾಗಿರುತ್ತದೆ. ನಂತರ ವಿವಿಧ ಕಾರಣಗಳಿಂದಾಗಿ ನಮ್ಮ ಪ್ರಧಾನ ಮಂತ್ರಿಗಳನ್ನು ರಸ್ತೆಯ ಮಾರ್ಗದ ಮಧ್ಯದಲ್ಲೇ ಸುಮಾರು 15-20 ನಿಮಿಷಗಳ ಕಾಲ ಮೇಲ್ಸೇತುವೆ ಮೇಲೆ ತಡೆದು ನಿಲ್ಲಿಸುವ ಮೂಲಕ ಈ ದೇಶದಲ್ಲಿ ಹಿಂದೆಂದೂ ಕಾಣದ ವಿಛಿದ್ರಕಾರಿ… Read More ಆಂತರಿಕ ಹಿತಶತ್ರುಗಳು

ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

ಈ ಚಿತ್ರವನ್ನು ನೋಡುತ್ತಿದ್ದಂತೆಯೇ, ನಮ್ಮ ಮನಸ್ಸಿಗೆ ಹೊಳೆಯುವುದು,  ಅರೇ ಇದೇನಿದು? ಈ ಸಣಕಲ ದೇಹದ  ಮಾವುತನು  ಅಷ್ಟು  ದೊಡ್ಡ ಆನೆಯನ್ನು ಟ್ರಕ್ಕಿನೊಳಗೆ ದೂಡುತ್ತಿದ್ದಾನಾ? ಎಂದು  ಹುಬ್ಬನ್ನು ಹಾರಿಸತ್ತೇವೆ. ಆದರೆ ನಿಜ ಹೇಳಬೇಕೆಂದರೆ, ಅಲ್ಲಿ  ಮಾವುತನ ಕೈ ಆಸರೆ ಕೇವಲ ನಿಮಿತ್ತ ಮಾತ್ರವಾಗಿದ್ದು ಆನೆಯ ತನ್ನ ಬಲದಿಂದ ಟ್ರಕ್ಕನ್ನು ಹತ್ತುತ್ತಿರುತ್ತದೆ.  ಆನೆಗೆ ತನ್ನ ಸ್ವಸ್ವಾಮರ್ಥ್ಯದ ಮೇಲೆ ನಂಬಿಕೆ ಇರದ ಕಾರಣ, ಮಾವುತನ ಕೈ ತನ್ನ ಬೆನ್ನಿನ ಮೇಲೆಿ ಕೈ ಇಟ್ಟಿರುವ ತನ್ನ ಯಜಮಾನ ಸದಾ ಕಾಲವೂ ತನ್ನ ಸಹಾಯಕ್ಕೆ … Read More ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

ತಿರುಪತಿ ಬೆಟ್ಟದ ನೈಸರ್ಗಿಕ ಶ್ರೀ ವೆಂಕಟೇಶ್ವರ ಸ್ವಾಮಿ

ತಿರುಮಲ ತಿರುಪತಿ ಎಂದರೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವಿರುವ ಸ್ಥಳ ಎಂದಷ್ಟೇ ಬಹುತೇಕರ ಭಾವನೆಯಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯವು ಅಲ್ಲಿನ ಪ್ರಧಾನ ಆಕರ್ಷಣೆಯೂ ಹೌದಾದರೂ ಅದರ ಹೊರತಾಗಿಯೂ ತಿರುಮಲ ಬೆಟ್ಟ ಹಾಗೂ ತಿರುಪತಿ ನಗರದ ಸುತ್ತ ಮುತ್ತ ಸಾಕಷ್ಟು ರಮಣೀಯವಾದ ಸ್ಥಳಗಳು ಇದ್ದು ಅವುಗಳಲ್ಲಿ ಬಹುತೇಕರು ಗಮನಿಸದಿರದ ನೈಸರ್ಗಿಕ ವೆಂಕಟೇಶ್ವರ ಸ್ವಾಮಿ ಪ್ರತಿಮೆ ಇದೆ. ನಾವಿಂದು ಕುಳಿತಲ್ಲಿಂದಲೇ ಆ ಸ್ವಾಮಿಯ ದಿವ್ಯ ದರ್ಶನವನ್ನು ಪಡೆಯೋಣ ಬನ್ನಿ. ಧನುರ್ಮಾಸದಲ್ಲಿ ಕೇವಲ ಒಂದು ದಿನ ವಿಷ್ಣುವಿನನ್ನು ದರ್ಶನ ಮಾಡಿದಲ್ಲಿ ಅದು… Read More ತಿರುಪತಿ ಬೆಟ್ಟದ ನೈಸರ್ಗಿಕ ಶ್ರೀ ವೆಂಕಟೇಶ್ವರ ಸ್ವಾಮಿ

ಸಿಂಧೂ ತಾಯಿ ಸಪ್ಕಾಲ್, ಅನಾಥ ಮಕ್ಕಳ ಅಕ್ಕರೆಯ ಆಯಿ

ಮಹಾರಾಷ್ಟ್ರದಲ್ಲಿ ಸಿಂಧೂ ತಾಯಿ ಎಂದರೆ ಅನಾಥರ ಪಾಲಿನ ಆಯಿ ಎಂದೇ ಖ್ಯಾತಿ ಪಡೆದಿದ್ದವರು. ಸುಮಾರು 50 ವರ್ಷಗಳಿಂದಲೂ  ಅನಾಥ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ದಿಕ್ಕು ದೆಸೆ ಇಲ್ಲದ ಸಾವಿರಾರು ಅನಾಥ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರಿಗೆ ಸೂಕ್ತವಾದ ವಿದ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಮಾಡಿರುವ ಕಾರಣ ಆಕೆ ತನಗೆ  207 ಅಳಿಯಂದಿರು ಮತ್ತು 36 ಸೊಸೆಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನವೆಂಬರ್ 14, 1948 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ ಸಿಂಧು… Read More ಸಿಂಧೂ ತಾಯಿ ಸಪ್ಕಾಲ್, ಅನಾಥ ಮಕ್ಕಳ ಅಕ್ಕರೆಯ ಆಯಿ

ಸಾವಿತ್ರಿಬಾಯಿ ಫುಲೆ

ಮಹಿಳಾ ಹಕ್ಕಿನ ಗಂಧಗಾಳಿಯೂ ಗೊತ್ತಿಲ್ಲದ ದಿನಗಳಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಹೋರಾಟ ನಡೆಸಿದ ಶ್ರೀಮತಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನವನ್ನು ಬಾಲಿಕಾ ದಿನ್ ಎಂದು ಆಚರಿಸಲಾಗುತ್ತಿದ್ದು, ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಸಾವಿತ್ರಿಬಾಯಿ ಫುಲೆ

ಮಾಸ ಶಿವರಾತ್ರಿ

ನಮಗೆಲ್ಲಾ ತಿಳಿದಿರುವಂತೆ  ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ  ಮಾಗಿಯ ಚಳಿಯ ಇನ್ನೂ ಹೋಗದೇ ಇದ್ದಾಗ,  ಶಿಶಿರ ಋತುವಿನ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿ ಹಬ್ಬ ಕಳೆದ ಕೂಡಲೇ ಚಳಿ ಎಲ್ಲವೂ ಮಂಗಮಾಯ ಎಂದು ಮಾತನಾಡುವುದನ್ನುಕೇಳಿದ್ದೇವೆ. ಶಿವರಾತ್ರಿ ಹಬ್ಬದ  ದಿನವಿಡೀ ಉಪವಾಸ ಮಾಡಿ ರಾತ್ರಿ  ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಭಗವಾನ್ ಶಂಕರನನ್ನು  ಪ್ರಾರ್ಥಿಸಿ ಮಾರನೇಯ ದಿನ  ದಿನ ವಿವಿಧ ರೀತಿಯ ಭಕ್ಷ ಭೋಜನಗಗಳನ್ನು ತಯಾರಿಸಿ  ಭಗವಂತನಿಗೆ ನೈವೇದ್ಯ ಮಾದಿ ಹಂಚಿ ತಿನ್ನುವ… Read More ಮಾಸ ಶಿವರಾತ್ರಿ