ಸರ್ಕಾರೀ ಶಾಲೆಗಳೋ? ಗಂಜೀ ಕೇಂದ್ರಗಳೋ?

ಅದು ಎಪ್ಪತ್ತರ ದಶಕ ನಾನು ಸರ್ಕಾರೀ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾಗ, ನಮ್ಮ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ರುಕ್ಮಿಣಿಯ ಮಗ ಉಮೇಶ, ನನ್ನ ಕೂದಲು ಕತ್ತರಿಸುತ್ತಿದ್ದ ನವೀನ್ ಸಲೂನ್ ಅಂಗಡಿಯವರ ಮಗ ನವೀನ, ನಾಗರಾಜ ಶೆಟ್ಟರ ಮಗ ರಂಗನಾಥ, ಸೈಕಲ್ ಶಾಪ್ ಶಫಿಯವರ ಮಗ ಅಬ್ದುಲ್ಲಾ ಎಲ್ಲರೂ ಒಟ್ಟಿಗೇ ಒಂದೇ ತರಗತಿಯಲ್ಲಿ ಪಕ್ಕ ಪಕ್ಕದಲ್ಲಿಯೇ ಕುಳಿತುಕೊಂಡು ಓದುತ್ತಿದ್ದೆವು. ಅಮ್ಮಾ ಬಟ್ಟೆ ಹಾಕಿ ಎಣ್ಣೆ ಹಚ್ಚಿ ಬೈತಲೆ ತೆಗೆದು ಕೂದಲು ಬಾಚಿದರೆ ಹೆಗಲ ಮೇಲೊಂದು ಹಡಪ, ಆ… Read More ಸರ್ಕಾರೀ ಶಾಲೆಗಳೋ? ಗಂಜೀ ಕೇಂದ್ರಗಳೋ?

ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿತ್ಯ ಶಾಖೆಗಳಿಗೆ ಹೋಗುವ  ಆಬಾವೃದ್ದರಾದಿಯಾದ ಸ್ವಯಂಸೇವಕರಿಗೆ  ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..  ಹಾಡು ಖಂಡಿತವಾಗಿಯೂ ತಿಳಿದೇ ಇರುತ್ತದೆ. ಈ ಹಾಡಿನ ಪಲ್ಲವಿ ಮತ್ತು ಚರಣಗಳಲ್ಲಿ ಬರುವ ಪ್ರತಿಯೊಂದು ಪದವೂ ಸ್ವಯಂಸೇವಕನ ಬಾಳಿನಲ್ಲಿ ಅಕ್ಷರಶಃ ಸತ್ಯವಾಗಿರುವುದಕ್ಕೆ ನನ್ನಂತಹ ಕೋಟ್ಯಾಂತರ ಸ್ವಯಂಸೇವಕರೇ ಸಾಕ್ಷಿಯಾಗಿದೆ. ಹಾಗಾಗಿ, ವಯಕ್ತಿಕವಾಗಿ ನನಗಂತೂ ಪ್ರತೀ ಬಾರಿ ಈ ಹಾಡು ಹಾಡುವಾಗಲಾಗಲೀ ಇಲ್ಲವೇ ಕೇಳುವಾಗಲೀ ಮೈ ರೋಮಾಂಚನ ಗೊಳ್ಳುತ್ತದೆ. ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ? ಎಂದು ನೀವೆಲ್ಲ ಯೋಚಿಸುತ್ತಿರುವುದಕ್ಕೆ ಕಾರಣವಿದೆ. ಇತ್ತೀಚೆಗೆ ಸಾಮಾಜಿಕ… Read More ಎಂಥ ಸುಮಧುರ ಬಂಧನಾ ಸಂಘಕಿಂದು ಬಂದೆನಾ..

ಕುಕ್ಕೇ ಸುಬ್ರಹ್ಮಣ್ಯದ ಚಂಪಾ ಷಷ್ಠಿ

ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಪಾರ್ವತೀ ಪರಮೇಶ್ವರರ ದ್ವಿತೀಯ ಪುತ್ರ ಷಣ್ಮುಖನನನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಗುವ ಶ್ರೀ ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠಿಯ ರಥೋತ್ಸವದ ಹಿನ್ನಲೆ ಮತ್ತು ಅದರ ವೈಭವದ ಸಂಭ್ರಮ ಸಡಗರಗಳನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ.… Read More ಕುಕ್ಕೇ ಸುಬ್ರಹ್ಮಣ್ಯದ ಚಂಪಾ ಷಷ್ಠಿ

ಎದುರು ಮನೆಯಲ್ಲಿ ಮಕ್ಕಳು ಹುಟ್ಟಿದ್ರೇ ನಮ್ಮನೆಲೀ ತೊಟ್ಟಿಲು ಆಡ್ಸೋದೇ?

ಕಳೆದ ಒಂದು ವಾರದಲ್ಲಿ ಭಾರತೀಯ ಮೂಲದ ಇಬ್ಬರು ಹೆಸರುಗಳು ಎಲ್ಲೆಡೆಯಲ್ಲೂ ಪ್ರಸಿದ್ದಿ ಪಡೆದಿತ್ತು. ಮೊದಲನೆಯದ್ದು ಭಾರತೀಯ ಮೂಲದ ಅಮೆರಿಕನ್ ಪರಾಗ್ ಅಗರವಾಲ್, ಟ್ವಿಟರ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದಾದರೆ, ಎರಡನೆಯದ್ದು ಮುಂಬೈನಲ್ಲಿ ಹುಟ್ಟಿ ಬಾಲ್ಯದಲ್ಲಿಯೇ ಕುಟುಂಬದೊಂದಿಗೆ ನ್ಯೂಜಿಲೆಂಡಿಗೆ ಹೋಗಿ ಅಲ್ಲಿಯ ಕ್ರಿಕೆಟ್ ತಂಡದ ಭಾಗವಾಗಿ ಭಾರತದ ವಿರುದ್ದ ಮುಂಬೈ ಕ್ರಿಕೆಟ್ ಟೆಸ್ಟಿನ ಮೊದಲನೇ ಇನ್ನಿಂಗ್ಸಿನಲ್ಲಿ ಎಲ್ಲಾ 10 ವಿಕೆಟ್ ಪಡೆದು ವಿಶ್ವ ದಾಖಲೆಯನ್ನು ಸರಿಗಟ್ಟಿದ ಅಜಾಜ್ ಪಟೇಲ್ ಬಗ್ಗೆ. ಪ್ರತೀ ಬಾರಿಯೂ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಜಾಗತಿಕ… Read More ಎದುರು ಮನೆಯಲ್ಲಿ ಮಕ್ಕಳು ಹುಟ್ಟಿದ್ರೇ ನಮ್ಮನೆಲೀ ತೊಟ್ಟಿಲು ಆಡ್ಸೋದೇ?

ನಂಜನಗೂಡಿನ ಕಪಿಲಾ ಆರತಿ

ಉತ್ತರ ಭಾರತದ ಋಷಿಕೇಶ್, ಹರಿದ್ವಾರ ಮತ್ತು ವಾರಾಣಸಿಯಲ್ಲಿ ಗಂಗಾ ನದಿಗೆ ಪ್ರತಿ ದಿನ ಸಂಜೆ ಗಂಗಾ ಆರತಿ ಮಾಡಲಾಗುತ್ತದೆ. ಈ ಆರತಿಯನ್ನು ನೋಡಲೆಂದೇ ದೇಶ ವಿದೇಶಗಳಿಂದ ಸಹಸ್ರಾರು ಭಕ್ತಾದಿಗಳು ಪ್ರತಿ ದಿನವೂ ಅಲ್ಲಿ ಸೇರಿ ಬಹಳ ವೈವಿಧ್ಯಮಯವಾಗಿ ಅದ್ದೂರಿಯಿಂದ ಮಾಡುವ ಗಂಗಾ ಆರತಿಯನ್ನು ನೋಡಿ ಹೃನ್ಮನಗಳನ್ನು ತಣಿಸಿಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ದಕ್ಷಿಣ ಭಾರತದ ಜೀವನದಿಯಾದ ಕಾವೇರಿ ಮಾತೆಗೂ ಮೊದಲ ಬಾರಿಗೆ ಶ್ರೀರಂಗಪಟ್ಟಣದ ಸ್ನಾನ ಘಟ್ಟದಲ್ಲಿ ಆರತಿಯನ್ನು ಯುವಾಬ್ರಿಗೇಡ್ ಸಾರಥ್ಯದಲ್ಲಿ ಅಕ್ಟೋಬರ್ 17 ಭಾನುವಾರ ಸಂಜೆ 7 ಗಂಟೆಗೆ… Read More ನಂಜನಗೂಡಿನ ಕಪಿಲಾ ಆರತಿ

ಧರ್ಮಸ್ಥಳದ ಲಕ್ಷದೀಪೋತ್ಸವ

ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಕೇವಲ ನದಿಗಳಿಗಷ್ಟೇ ಅಲ್ಲದೇ, ದೇವಾಲಯಗಳಿಗೂ ಪ್ರಸಿದ್ಧವಾಗಿದೆ. ಅಲ್ಲಿ ಹರಿಯುವ ಪ್ರತೀ ನದಿ ಹಳ್ಳ ಕೊಳ್ಳಗಳ ತಟದಲ್ಲಿ ಪ್ರತಿ ಹತ್ತಿಪ್ಪತ್ತು ಕಿಮೀ ದೂರದಲ್ಲಿ ಒಂದೊಂದು ಒಂದೊಂದು ದೇವಸ್ಥಾನಗಳಿದ್ದು, ಅವುಗಳಲ್ಲಿ ಜೀವನದಿ ನೇತ್ರಾವತಿಯ ತಟದಲ್ಲಿರುವ ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಸಕಲ ಹಿಂದೂಗಳ ಧಾರ್ಮಿಕ ಕ್ಷೇತ್ರವೇ ಪುರಾಣ ಪ್ರಸಿದ್ಧ ಧರ್ಮಸ್ಥಳವಾಗಿದೆ. ಹೆಸರಿಗೆ ಅನ್ವರ್ಥದಂತೆ ಅದು ಶಾಂತಿ ಮತ್ತು ಧರ್ಮದ ಬೀಡಾಗಿದ್ದು ಧರ್ಮಸ್ಥಳದ ಮಂಜುನಾಥನ ಸ್ವಾಮಿಗೆ ಇಡೀ ದೇಶಾದ್ಯಂತ ಭಕ್ತಾದಿಗಳು ಇದ್ದು ಬಹಳ ನಂಬಿಕೆಗೆ ಹೆಸರುವಾಸಿಯಾಗಿದೆ.… Read More ಧರ್ಮಸ್ಥಳದ ಲಕ್ಷದೀಪೋತ್ಸವ

ಅವಿತಿಟ್ಟ ಇತಿಹಾಸ  

ಕಳೆದ ಭಾನುವಾರ ಬೆಂಗಳೂರಿನಲ್ಲಿ ಖ್ಯಾತ ಲೇಖಕರಾದ ಶ್ರೀ ಪ್ರವೀಣ್ ಮಾವಿನಕಾಡು ಮತ್ತು ಡಾ. ಸುಧಾಕರ್ ಹೊಸಳ್ಳಿ ಈ ಇಬ್ಬರು ಲೇಖಕರು ಬರೆದಿರುವ ಅವಿತಿಟ್ಟ ಅಂಬೇಡ್ಕರ್ ಎಂಬ ಕೃತಿ ಖ್ಯಾತ ರಂಗಕರ್ಮಿಗಳಾದ ಶ್ರೀ ಪ್ರಕಾಶ್ ಬೆಳವಾಡಿ ಶ್ರೀ ಆಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿಗಳದ ಶ್ರೀ ರಘುನಂದನ್ ಭಟ್ ಮತ್ತು ರಾಜ್ಯ ವಕೀಲರ ಪರಿಷತ್ತಿನ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಕುಮಾರ್ ಅವರ ಸಮ್ಮುಖದಲ್ಲಿ ಲೋಕಾರ್ಪಣೆ ಆಯಿತು. ಈ ಪುಸ್ತಕ ಬಿಡುಗಡೆಯ ಕುರಿತಂತೆ ನಾಡಿನ ಬಹುತೇಕ ದೃಶ್ಯ ಮತ್ತು… Read More ಅವಿತಿಟ್ಟ ಇತಿಹಾಸ  

ಬಸವನಗುಡಿ ಕಡಲೇಕಾಯಿ ಪರಿಷೆ

ಬೆಂಗಳೂರು ಸಿಲಿಕಾನ್ ಸಿಟಿ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಆಧುನಿಕತೆಗೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಅತ್ಯಂತ ವೇಗವಾಗಿ ಒಗ್ಗಿಕೊಂಡಿರುವ ನಗರವಾದರೂ ಇನ್ನೂ ತನ್ನ ಗ್ರಾಮೀಣ ಸೊಗಡನ್ನು ಹಾಗೆಯೇ ಉಳಿಸಿಕೊಂಡು ಬಂದಿರುವುದು ಮೆಚ್ಚುವಂತಹ ವಿಷಯವಾಗಿದೆ. ಶ್ರಾವಣ ಮಾಸ ಮತ್ತು ಆಶ್ವಯುಜ ಮಾಸದ ಸಾಲು ಸಾಲು ಹಬ್ಬಗಳು ಮುಗಿದು ಇನ್ನೇನು ಮಾಗಿಯ ಚಳಿ ನಮ್ಮೆಲ್ಲರನ್ನು ಅಪ್ಪುವುದಕ್ಕೆ ಶುರುವಾಗುತ್ತಿದ್ದಂತೆಯೇ ಬರುವುದೇ ಕಾರ್ತೀಕ ಮಾಸ. ಶೈವಾರಾಧಕರಿಗೆ ಪ್ರತೀ ಕಾರ್ತೀಕ ಸೋಮವಾರವೂ ಅತ್ಯಂತ ಪುಣ್ಯಕರವಾದ ದಿನ. ಬಹುತೇಕರು ಕಾರ್ತೀಕ ಸೋಮವಾರ ಶ್ರಧ್ಥೆಯಿಂದ… Read More ಬಸವನಗುಡಿ ಕಡಲೇಕಾಯಿ ಪರಿಷೆ

ಸ್ವದೇಶಿ ದಿನ

ವಿಜ್ಞಾನಿಯಾಗಿ ಕೈ ತುಂಬಾ ಸಂಪಾದಿಸುತ್ತಿದ್ದ, ಸ್ವಾಮೀ ವಿವೇಕಾನಂದ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಮುಂತಾದವರಿಂದ ಪ್ರೇರಿತರಾಗಿ ದೇಶ, ಧರ್ಮ, ಸಂಸ್ಕಾರ ಮತ್ತು ಸನಾತನ ಸಂಸ್ಕೃತಿ ಅನುಗುಣವಾಗಿ ದೇಸೀ ಚಿಂತನೆ, ಸ್ವದೇಶೀ ವಸ್ತುಗಳ ಜಾಗೃತಿ ಮೂಡಿಸುವ ಸಲುವಾಗಿ ಸ್ವದೇಶೀ ಜಾಗರಣ ಮಂಚ್ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಿಂಹಸ್ವಪ್ನವಾಗಿದ್ದ ಶ್ರೀ ರಾಜೀವ್ ದೀಕ್ಷಿತ್ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ಸ್ವದೇಶಿ ದಿನ