ಅತ್ತೆ ಮತ್ತು ಸೊಸೆ ಬಂಧ – ಅನುಬಂಧ

ಅದೂ೦ದು ದೊಡ್ಡ ನಗರ ಅಲ್ಲೊಬ್ಬ ಪ್ರಖ್ಯಾತ ವೈದ್ಯರು, ಅವರ ಅಚ್ಚು ಮೆಚ್ಚಿನ ಮಡದಿ, ಮುದ್ದಾದ ಮಗಳೊ೦ದಿಗೆ ಸ್ವರ್ಗಕ್ಕೇ ಕಿಚ್ಚು ಹಚ್ಚಿಸುವ೦ತಹ ಸು೦ದರ ಸ೦ಸಾರ ನಡೆಸುತ್ತಿದ್ದ ಸಮಯದಲ್ಲಿ, ಅಚಾನಕ್ಕಾಗಿ ಬರ ಸಿಡಿಲು ಎರಗಿದ೦ತೆ ವೈದ್ಯರ ಪತ್ನಿ ಆಕಾಲಿಕವಾಗಿ ಮರಣ ಹೊ೦ದಿದಾಗ ದಿಕ್ಕೇ ತೋಚದೇ ವೈದ್ಯರು ಅಧೀರರಾಗುತ್ತಾರೆ. ಪತ್ನಿಯ ವೈದೀಕ ಕಾರ್ಯಗಳೆಲ್ಲವೂ ಮುಗಿದ ನ೦ತರ ಕುಟು೦ಬದವರೆಲ್ಲಾ ಸೇರಿ, ಹೇಗೆ ದೀಪವಿಲ್ಲದೆ ದೇಗುಲ ಬೆಳಗುವುದಿಲ್ಲವೋ, ಹಾಗೆ ಹೆಣ್ಣಿನ ದಿಕ್ಕಿಲ್ಲದೆ ಮನೆಯೂ ಬೆಳಗುವುದಿಲ್ಲ. ಹೇಗೂ ನಿನಗೂ ಚಿಕ್ಕವಯಸ್ಸು, ಮಗಳೂ ಸಣ್ಣವಳಿದ್ದಾಳೆ ಅವಳನ್ನು ನೋಡಿಕೊಳ್ಳುವ… Read More ಅತ್ತೆ ಮತ್ತು ಸೊಸೆ ಬಂಧ – ಅನುಬಂಧ

ಸ್ವಾಮಿ ವಿವೇಕಾನಂದರ ದಿಗ್ವಿಜಯ

ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿ. 1893, ಸೆಪ್ಟಂಬರ್ 11ಕ್ಕೆ ಅಮೇರಿಕಾದ ಚಿಕಾಗೋದಲ್ಲಿ ಅವರು ಮಾಡಿದ ದಿಕ್ಸೂಚಿ ಭಾಷಣ. ಈ ಎರಡೂ ಸಂಧರ್ಭಗಳನ್ನು ನೆನಪಿಸಿಕೊಳ್ಳುವ ಸಲುವಾಗಿಯೇ ಸ್ವಾಮಿ ವಿವೇಕಾನಂದರ ದಿಗ್ವಿಜಯ ಎಂಬೀ ಲೇಖನ. ಕ್ರಿ.ಶ. 1893 ಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1492 ಕ್ಕೆ ಭಾರತಕ್ಕೆ ಬರಲು ಹವಣಿಸಿ ಹಡಗನ್ನೇರಿ ಹೊರಟಿದ್ದ ನಾವಿಕ ಕ್ರಿಸ್ಟೋಫರ್ ಕೋಲಂಬಸ್ ನೌಕೆ ದಿಕ್ಕು ತಪ್ಪಿ ಅಮೇರಿಕಾಕ್ಕೆ ತಲುಪಿ ಅಲ್ಲಿನ ಜನರನ್ನೇ ಅವನು ಭಾರತೀಯರೆಂದು ತಿಳಿದು ಆವರನ್ನೇ… Read More ಸ್ವಾಮಿ ವಿವೇಕಾನಂದರ ದಿಗ್ವಿಜಯ

ಸಂಬಂಧಗಳು

ಅಕ್ಕ-ತಂಗಿ, ಅಣ್ಣ-ತಮ್ಮ, ಭಾವ-ಭಾವಮೈದ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ, ಅತ್ತೆ-ಮಾವ, ನಾದನಿ-ಷಡ್ಕ, ಇಂದು ನಮಗೆಲ್ಲಾ ಈ ಪದಗಳು ಚಿರಪರಿಚಿತ. ನಮ್ಮ‌ ಸಂಬಂಧಿಕರನ್ನು ಈ ಪದಗಳ ಮೂಲಕವೇ ಸಂಭೋದಿಸುವುದು ವಾಡಿಕೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಪದಗಳಿಗೆ ಬೆಲೆಯೇ ಇಲ್ಲದೆ ಹೋಗಿ ಕೇವಲ ನಿಘಂಟಿನಲ್ಲಿ ಹುದುಗಿ‌ ಹೋಗುತ್ತದೆ ಎಂದರೆ ನಂಬಲು ಸಾಧ್ಯವೇ? ಖಂಡಿತವಾಗಿಯೂ ನಂಬಲೇ ಬೇಕಾಗಿದೆ. ಹಿಂದೆಲ್ಲಾ ಮತ್ತೊವ್ಬರಿಗೆ ನಮ್ಮ ಸಂಬಂಧೀಕರನ್ನು ಪರಿಚಯಿಸಿಕೊಡುವಾಗ ಅವರವರ ಸಂಬಂಧಕ್ಕೆ ಅನುಗುಣವಾಗಿ ಇವರು ನಮ್ಮ ಸೋದರ ಮಾವ ಎಂದಾಗ, ತಾಯಿಯ ತಮ್ಮನೋ ಇಲ್ಲವೇ ಅಣ್ಣನೋ… Read More ಸಂಬಂಧಗಳು

ರಾಮ ಹೆಚ್ಚೋ, ರಾವಣ ಹೆಚ್ಚೋ‌

ಎರಡನೆಯ ಮಗುವಿನ‌ ನಿರೀಕ್ಷೆಯಲ್ಲಿದ್ದ ಒಬ್ಬ ತಾಯಿ ತನ್ನ ಎಂಟು ವರ್ಷದ ಮಗಳನ್ನು ರಾತ್ರಿ ಮೆಲ್ಲಗೆ ತಲೆ ಸವರುತ್ತಾ ಹಾಸಿಗೆಯ ಮೇಲೆ ಮಲಗಿಸುತ್ತಾ ಕುತೂಹಲದಿಂದ ಮಗಳನ್ನು ಕೇಳುತ್ತಾಳೆ. ಪುಟ್ಟೀ ನಿನಗೆ ತಮ್ಮ ಪಾಪು ಬೇಕಾ, ಇಲ್ಲವೇ ತಂಗಿ ಪಾಪು ಬೇಕಾ ಎಂದು. ತಾಯಿ ಕೇಳಿದ ಪ್ರಶ್ನೆಗೆ ಮಗಳು ಅಷ್ಟೇ ಮುಗ್ಧವಾಗಿ ನನಗೆ ತಂಗಿ ಪಾಪು ಬೇಡ ತಮ್ಮ ಪಾಪು ಬೇಕು ಅಂತ ಹೇಳುತ್ತಾಳೆ. ಪಾಪ ಮುಗ್ಧ ಮಗುವಿಗೆ ಏನೂ ತಿಳಿಯದು ‌ಎಂದು ಭಾವಿಸಿದ ತಾಯಿ ಮಾತು ಮುಂದುವರೆಸುತ್ತಾ, ಅಲ್ಲಾ… Read More ರಾಮ ಹೆಚ್ಚೋ, ರಾವಣ ಹೆಚ್ಚೋ‌

ಒತ್ತು‌ ಶ್ಯಾವಿಗೆ

ತಿಂಡಿಗಳ ರಾಜ ಒತ್ತು ಶ್ಯಾವಿಗೆ ತಿನ್ನಲು ಸುಲಭವಾದರೂ ತಯಾರಿಸಲು ತುಸು ತ್ರಾಸದಾಯಕವೇ ಎನ್ನಬಹುದಾದರೂ, ಸಂಬಂಧಗಳನ್ನು ಬೆಸೆಯುವ ಈ ಒತ್ತು ಶ್ಯಾವಿಗೆಯ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಒತ್ತು‌ ಶ್ಯಾವಿಗೆ

ಹಂಸ ಕ್ಷೀರ ನ್ಯಾಯ

ಸರಿ ಸುಮಾರು 90ರ ದಶಕ, ನಾನಿನ್ನೂ ಆಗ ತಾನೇ ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಕೆಲಸ ಹುಡುಕುತ್ತಿದ್ದೆ. ಸರಿಯಾದ ಕೆಲಸ ಸಿಗುವವರೆಗೆ ಸಣ್ಣ ಪುಟ್ಟ ಕಂಪ್ಯೂಟರ್ ರಿಪೇರಿಗಳನ್ನು ಮಾಡುತ್ತಾ, ಅವಶ್ಯಕತೆ ಇದ್ದವರಿಗೆ ಅವರು ಕೇಳುತ್ತಿದ್ದ ಸಾಫ್ಟವೇರ್ ಇನ್ಸ್ಟಾಲ್ ಮಾಡುತ್ತಾ ಅಷ್ಟೋ ಇಷ್ಟು ಸಂಪಾದನೆ ಮಾಡುತ್ತಾ ತಂದೆಗೆ ಹೊರೆಯಾಗದೆ, ಕಂತಿನಲ್ಲಿ ಕೊಂಡಿದ್ದ ಹೀರೋ ಪುಕ್ ಸಾಲವನ್ನು ತೀರಿಸುತ್ತಾ ಜೀವನ ನಡೆಸುತ್ತಿದ್ದ ಕಾಲವದು. ಅಂದೆಲ್ಲಾ ಫ್ಲಾಫಿ ಡಿಸ್ಕ್ ಜಮಾನ, ಏನೇ ಸಾಫ್ಟ್ವೇರ್ ಬೇಕಿದ್ದರೂ ಫ್ಲಾಫಿ ಡಿಸ್ಕನಲ್ಲಿ ಕಾಪಿ ಮಾಡಿಕೊಂಡು ತಂದು ಇನ್ಸ್ಟಾಲ್… Read More ಹಂಸ ಕ್ಷೀರ ನ್ಯಾಯ

ವೀರ ಸಾವರ್ಕರ್

ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ. ಕ್ರಾಂತಿಕಾರಿಗಳಿಗೆ ಸ್ಪೂರ್ತಿ. ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ.… Read More ವೀರ ಸಾವರ್ಕರ್

ಸುಬ್ರಹ್ಮಣ್ಯ ಷಷ್ಠಿ ಅವಾಂತರ

ಬೆಟ್ಟದ ನೆಲ್ಲಿ ಕಾಯಿ ಸಮುದ್ರ ಉಪ್ಪು ಎತ್ತಲಿಂದೆತ್ತ ಸಂಬಂಧವಯ್ಯಾ? ಎನ್ನುವಂತೆ ಕ್ರಿಕೆಟ್ ಮ್ಯಾಚ್ ಮತ್ತು ಸುಬ್ರಹ್ಮಣ್ಯ ಷಷ್ಥಿಯ ನಡುವೆ ಬ್ರಹ್ಮಚಾರಿ ವಟುವಿನ ಪರದಾಟದ ಸ್ವಾರಸ್ಯಕರ ಪ್ರಸಂಗ ಇದೋ ನಿಮಗಾಗಿ. … Read More ಸುಬ್ರಹ್ಮಣ್ಯ ಷಷ್ಠಿ ಅವಾಂತರ

ನಾನು ಹೇಗೆ ಸಣ್ಣಗಾದೆ

ಈ ಹಿಂದೆ ನಾನೇ ಹಲವಾರು ನನ್ನ ಬರಹಗಳಲ್ಲಿ ತಿಳಿಸಿದ್ದಂತೆ ನಾನು ಕಾಲೇಜು ಓದುತ್ತಿರುವಾಗಲೂ ಸಣ್ಣಗೆ ಕುಳ್ಳಗಿದ್ದು , ನಮ್ಮ ತಾಯಿವರು ಕುಟುಂಬದ ವೈದ್ಯರ ಬಳಿ ಹಲವಾರು ಸಲ ತೋರಿಸಿ, ನಮ್ಮ ಮಗನಿಗೆ ಸ್ವಲ್ಪ ಉದ್ದ ಹಾಗು ದಷ್ಟ ಪುಷ್ಟವಾಗಿ  ಆಗುವಂತೆ ಏನಾದರೂ ಔಷಧಿ ಇದ್ದರೆ ಕೊಡಿ ಎಂದು ಕೇಳಿದ್ದದ್ದು ಇನ್ನೂ ಹಚ್ಚ ಹಸುರಾಗಿದೆ. ನಂತರ ವಯೋಗುಣವಾಗಿ ಬೆಳೆದನಾದರೂ ಸಣ್ಣಗೇ ಇದ್ದೆ.  ಮದುವೆ ಸಮಯದಲ್ಲೂ  ಮದುವೆಗೆ ಬಂದಿದ್ದ ನೆಂಟರಿಷ್ಟರೂ, ಸ್ನೇಹಿತರುಗಳು ನನ್ನನ್ನೂ  ಮತ್ತು ನನ್ನ ಅರ್ಧಾಂಗಿಯನ್ನು ನೋಡಿ, ಇದೇನು… Read More ನಾನು ಹೇಗೆ ಸಣ್ಣಗಾದೆ