ಅಜೇಯ

ಅಜೇಯ ಎಂದರೆ ಎಂದೂ ಸೋಲಿಲ್ಲದ ಸರದಾರ ಎಂದರ್ಥ. ಚಂದ್ರಶೇಖರ್ ಆಝಾದ್ ಅದಕ್ಕೆ ಅನ್ವರ್ಥ. ಚಿಕ್ಕಚಯಸ್ಸಿನಲ್ಲಿ ನನ್ನ ಮೇಲೇಯೂ ಮತ್ತು ಹಲವಾರು ಜನರ ಮೇಲೆ ಅತ್ಯಂತ ಪ್ರಭಾವ ಬೀರಿರುವ ಪುಸ್ತಕ ಒಂದಿದ್ದರೆ ಅದು ಬಾಬು ಕೃಷ್ಣಮೂರ್ತಿಯವರ ವಿರಚಿತ ಅಜೇಯ ಎಂದರೆ ತಪ್ಪಾಗಲಾರದು. ಒಮ್ಮೆ ಆ ಪುಸ್ತಕ ಹಿಡಿದರೆ ಇಡೀ ಪುಸ್ತಕವನ್ನು ಓದಿ ಮುಗಿಸದೆ ಪಕ್ಕಕ್ಕೆ ಎತ್ತಿಡಲಾಗದ ಪುಸ್ತಕವದು. ಯಾವುದೇ ಪುಸ್ತಕದ ಎರಡು ಪುಟಗಳನ್ನು ನಾವು ಓದಬೇಕು. ನಂತರ ಉಳಿದ ಪುಟಗಳನ್ನು ಲೇಖಕ ತನ್ನ ಭಾಷಾ ಪಾಂಡಿತ್ಯದಿಂದ, ಆಸಕ್ತಿಕರ ವಿಷಯಗಳಿಂದ… Read More ಅಜೇಯ

ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಇವತ್ತು ರಾತ್ರಿ ಮುಗಿದು ಬೆಳಕು ಹರಿಯುತ್ತಿದ್ದಂತೆಯೇ, ನವೆಂಬರ್ 1 ನೇ ತಾರೀಖು. ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಸಂಭ್ರವೋ ಸಂಭ್ರಮ. ಖನ್ನಡ ಓರಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟಗಳ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು… Read More ಕನ್ನಡದ ಅಸ್ಥಿತ್ವ ಮತ್ತು ಅಸ್ಮಿತೆ

ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು

ಸೆಪ್ಟೆಂಬರ್ ೫ ಭಾರತದ ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣರವರ ಜಯಂತಿ. ಇದನ್ನು ನಾವು ಪ್ರೀತಿಯಿಂದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಇತ್ತೀಚೆಗಷ್ಟೇ ಶ್ರೀಯುತ ರಾಧಾಕೃಷ್ಣರವರು ನನ್ನ ಪ್ರಾಣ ಸ್ನೇಹಿತ ಹರಿಯವರ ಅಜ್ಜನ  ಸೋದರತ್ತೆಯ ಮಗ  ಎಂದು ತಿಳಿದುಬಂದಿದ್ದರಿಂದ ಶ್ರೀಯುತರು ನಮ್ಶ ಹತ್ತಿರದ ಸಂಬಂಧಿಯೇನೂ ಎನ್ನುವ ಭಾವನೆ ಮೂಡುತ್ತಲಿದೆ.   ನಮ್ಮ ಸಂಸ್ಕೃತಿಯಲ್ಲಿ  ತಂದೆ ತಾಯಿಯರ  ನಂತರದ ಸ್ಥಾನವನ್ನು ಗುರುಗಳಿಗೇ ಮೀಸಲಿಟ್ಟಿದ್ದೇವೆ.  ಮನೆಯೇ ಮೊದಲ ಪಾಠಶಾಲೆ  ತಂದೆ, ತಾಯಿಯರೇ ಮೊದಲ ಗುರುಗಳಾಗಿ, ಬಾಲ ಪಾಠಗಳನ್ನು ಕಲಿಸಿಕೊಟ್ಟರೂ ವ್ಯವಸ್ಥಿತವಾಗಿ ವಿದ್ಯೆಯನ್ನು ಕಲಿತು… Read More ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು

ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ  ಆಹಾರ ಸೇವಿಸಬೇಕೇ ಹೊರತು   ಆಹಾರ ಸೇವಿಸುವಕ್ಕೇ ಬದುಕಬಾರದು

ಸಾಲು ಸಾಲು ಹಬ್ಬ, ಮದುವೆ ಮುಂಜಿ ‌ನಾಮಕರಣಗಳ ಸಂಭ್ರಮದಲ್ಲಿ ತರಕಾರಿ, ಹೂವು ಹಣ್ಣು ವ್ಯಾಪಾರಿಗಳಿಗೆ, ದಿನಸಿ, ಬಟ್ಟೆ ವ್ಯಾಪಾರಿಗಳಿಗೆ, ಎಲ್ಲ ರೀತಿಯ ಛತ್ರದವರಿಗೆ, ಬಾಣಸಿಗರಿಗೆ, ಪುರೋಹಿತರಿಗೆ ಪುರುಸೊತ್ತೇ ಇರುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಮಹೂರ್ತದ ಜೊತೆಗೆ ಛತ್ರ, ಅಡುಗೆಯವರ ಮತ್ತು ಪುರೋಹಿತರ ಸಮಯವನ್ನೂ ನೋಡಿಕೊಂಡೇ ಮದುವೆ ಮುಂಜಿಗಳನ್ನು ನಿರ್ಧರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಇನ್ನು ಎರಡು ಮೂರು ವಾರಗಳಲ್ಲಿ ಮೂರ್ನಾಲ್ಕು ಗೃಹಪ್ರವೇಶಗಳು, ಒಂದೆರೆಡು ನಿಶ್ಚಿತಾರ್ಥ, ಒಂದೆರಡು ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ತುಂಬಾ… Read More ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ  ಆಹಾರ ಸೇವಿಸಬೇಕೇ ಹೊರತು   ಆಹಾರ ಸೇವಿಸುವಕ್ಕೇ ಬದುಕಬಾರದು

ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ಯೋಗಾನರಸಿಂಹ ಸ್ವಾಮಿ ಜಗದ್ವಿಖ್ಯಾತವಾದ ದೇವಾಲಯಗಳು. ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುನುಜಾಚಾರ್ಯರ ಆರಾಧ್ಯ ದೈವವೂ ಹೌದು. ಪ್ರತಿನಿತ್ಯ ನೂರಾರೂ ಮತ್ತು ವಾರಾಂತ್ಯದಲ್ಲಿ ಸಾವಿರಾರು ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈರಮುಡಿ ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರುವ ಸ್ಥಳವಾಗಿದೆ. ಕಡಿದಾದ ಬೆಟ್ಟದ ತುದಿಯಲ್ಲಿ ಕಟ್ಟಿರುವ ದೇವಾಲಯ ನಿಜಕ್ಕೂ ಅಂದಿನ ದಿನದ ವಾಸ್ತುಪಂಡಿತರ ಮತ್ತು ಕುಶಲ ಕರ್ಮಿಗಳ ಅಧ್ಭುತ ಪರಿಣಿತಿಯ ದ್ಯೋತಕವಾಗಿದೆ. ಸುಮಾರು 300 ರಷ್ಟು ಕಡಿದಾದ ಎತ್ತರದ ಮೆಟ್ಟುಲುಗಳ… Read More ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

https://enantheeri.com/2019/03/10/appa/

ಸಂಕಟ ಬಂದಾಗಲೇ ವೆಂಕಟರಮಣನನ್ನು ನೆನಸಿಕೊಂಡು, ಕಣ್ಣಿಗೆ ಕಾಣದ ಆ ಭಗವಂತನನ್ನು, ಅಯ್ಯಾ ತಂದೇ ನಮ್ಮನ್ನು ಕಾಪಾಡು ಎಂದು ಕೋರಿಕೊಳ್ಳುವ ಈ ಸಮಾಜ, ಅದೇ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರುಗಳಾದ ತಂದೆ ತಾಯಿಯರನ್ನೇ ವಯಸ್ಸಾದ ನಂತರ ದೂರ ಇಡುವುದು ಎಷ್ಟು ವಿಪರ್ಯಾಸ ಅಲ್ವೇ?… Read More ಭಗವಂತ  ನಮ್ಮಿಂದ ಎಷ್ಟು ದೂರವಿದ್ದಾನೆ?

ದಸರಾ ಹಬ್ಬ

ದಸರಾ ಹಬ್ಬ  ನಮ್ಮ ಕನ್ನಡಿಗರ ನಾಡಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಹಿಡಿದು ದಶಮಿಯವರೆಗು ಹತ್ತು ದಿನಗಳವರೆಗೆ ಆಚರಿಸಲ್ಪಡುವ ವಿಶೇಷವಾದ ಹಬ್ಬ. ದೇಶಾದ್ಯಂತ ದುರ್ಗೆಯ ವಿವಿಧ ರೂಪಗಳಾದ ಶೈಲಪುತ್ರಿ ,  ಬ್ರಹ್ಮಚಾರಿಣಿ , ಚಂದ್ರಘಂಟಾ , ಖುಷ್ಮಾಂಡ, ಸ್ಕಂದಮಾತ, ಕಾತ್ಯಾಯನಿ, ಕಾಳರಾತ್ರಿ,  ಮಹಾಗೌರಿ  ಮತ್ತು ಸಿದ್ಧಿ ಧಾತ್ರಿ ಹೀಗೆ ನಾನಾ ರೂಪಗಳಿಂದ ಅಲಂಕರಿಸಲ್ಪಟ್ಟು ಹತ್ತನೇ ದಿನ ಲಕ್ಷಾಂತರ ಜನರ ಸಮ್ಮುಖದಲ್ಲಿ  ಭಾರೀ ಮೆರವಣಿಗೆಯೊಂದಿಗೆ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಲ್ಪಡುವ ಹಬ್ಬ.  ಉತ್ತರ ಭಾರತದಲ್ಲಂತೂ ಈ ಹತ್ತೂ ದಿನಗಳು ಬಹುತೇಕ ಜನರು… Read More ದಸರಾ ಹಬ್ಬ

ವಾರನ್ನ

ಇತ್ತೀಚೆಗೆ ಮುಖಪುಟದಲ್ಲಿ ಒಬ್ಬರು ವಾರನ್ನದ ಬಗ್ಗೆ  ಹೇಳುತ್ತಾ ಹಿಂದೆಲ್ಲಾ ನಮ್ಮ ಮನೆಗೆ ವಾರಾನ್ನದ ಹುಡುಗರು ಊಟಕ್ಕೆ ಬರ್ತಾ ಇದ್ದರು..ಅವರು ವಾರದ ಏಳು ದಿನಗಳೂ ..ದಿನಕ್ಕೊಬ್ಬರ ಮನೆಯಂತೆ ಒಪ್ಪಂದ ಮಾಡ್ಕೊಳ್ತಿದ್ರು..ನಮ್ಮ ಮನೆಗೂ ಒಬ್ಬ ಕಾಲೇಜು ಓದುವ ಹುಡುಗ ಸೋಮವಾರದ ದಿನ ಎರಡೂ ಹೊತ್ತು ಬಂದು ಊಟ ಮಾಡಿ ಹೋಗ್ತಿದ್ದ..ಕಷ್ಟದ ಕಾಲ..ವಿಧ್ಯೆ ಕಲಿಯುವ ಆಸೆ..ತುಂಬಾ ಕಷ್ಟ ಪಟ್ಟು ಓದಿ ,ವಾರಾನ್ನ ತಿಂದವರೂ ಈಗಲೂ ಅದೆಷ್ಟೋ ಮಂದಿ ಇಂದು ಒಳ್ಳೊಳ್ಳೆ ಉದ್ಯೋಗದಲ್ಲಿರಬಹುದು ಅಲ್ವೇ ಬಂಧುಗಳೇ..ನಿಮಗೂ ಗೊತ್ತೆ ? ಅಂತಾ ಪ್ರಶ್ನಿಸಿದ್ದರು. ಹಿಂದೆಲ್ಲಾ… Read More ವಾರನ್ನ

ಡೆಬಿಟ್ ಕಾರ್ಡ್ ಅವಾಂತರ

ಇನ್ನೇನು ಸಂಕ್ರಾಂತಿ ಹಬ್ಬ‌‌ ಬರ್ತಾ‌ಇದೆ. ಸಂಕ್ರಾಂತಿಯಿಂದ ರಥ ಸಪ್ತಮಿ ಮುಗಿಯುವವರೆಗೂ ಎಲ್ಲರ ಮನೆಯಲ್ಲಿ ಸಂಭ್ರಮದ ವಾತಾವರಣ. ಸಂಬಂಧೀಕರ ಮತ್ತು ಆಪ್ತ ಸ್ನೇಹಿತರ ಮನೆಗೆಳಿಗೆ ಹೋಗಿ ಎಳ್ಳು ಬೀರುತ್ತಾ, ಎಳ್ಳು ಬೆಲ್ಲಾ ತಿಂದು ಒಳ್ಳೇ ಮತಾನಾಡೋಣ ಎನ್ನುತ್ತಾ ಬಾಂಧ್ಯವ್ಯ/ಗೆಳೆತನ ಹೆಚ್ಚಿಸುಕೊಳ್ಳುವ ಉತ್ತಮ ಕಾರ್ಯಕ್ರಮ. ನಮ್ಮ ಎಲ್ಲಾ ಹಬ್ಬಗಳ ಹಿಂದಿನ ಸಾರವೂ ಅದೇ. ಹಬ್ಬಗಳ ನೆಪದಲ್ಲಿ ಎಲ್ಲಾ ಕಷ್ಟಗಳನ್ನು, ದ್ವೇಷಗಳನ್ನು ಮರೆತು ಒಟ್ಟಿಗೆ ಒಂದೆಡೆ ಸೇರಿ ಯಥಾಶಕ್ತಿ ಅಥಿತಿ ಸತ್ಕಾರ ಮಾಡುತ್ತಲೋ ಇಲ್ಲವೇ ಮಾಡಿಸಿಕೊಳ್ಳುವ ಸತ್ ಸಂಪ್ರದಾಯ ನಮ್ಮಲ್ಲಿ ಹಿಂದಿನಿಂದಲೂ… Read More ಡೆಬಿಟ್ ಕಾರ್ಡ್ ಅವಾಂತರ