ಶೂನ್ಯ ನೆರಳು ದಿನ

ಸೂರ್ಯನ ಬೆಳಕು ಯಾವುದೇ ಸಜೀವ/ನಿರ್ಜೀವ ವಸ್ತುವಿನ ಮೇಲೆ ಬಿದ್ದರೆ ಅಲ್ಲಿ ನೆರಳು ಉಂಟಾಗುವುದು ಸಹಜ ಪ್ರಕ್ರಿಯೆ. ಆದರೆ ಪ್ರಕೃತಿಯಲ್ಲಿ ವರ್ಷಕ್ಕೆ ಎರಡು ಬಾರಿ, ವಿಶಿಷ್ಟ ಸಮಯದಲ್ಲಿ ಆ ರೀತಿ ನೆರಳು ಬೀಳದಿರುವ ವಿಸ್ಮಯಕಾರಿ ಘಟನೆ ಸಂಭವಿಸುತ್ತದೆ.

ಹಾಗಾದರೆ ಶೂನ್ಯ ನೆರಳು ದಿನ ಎಂದರೆ ಏನು? ಏಪ್ರಿಲ್ 25ರ ಮಧ್ಯಾಹ್ನ 12.17 ಕ್ಕೆ ಬೆಂಗಳುರಿನಲ್ಲಿ ಆಗುವ ಈ ವಿಸ್ಮಯಕಾರಿ ಘಟನೆ ಉಳಿದ ಪ್ರದೇಶಗಳಲ್ಲಿ ಎಂದು ಕಾಣಿಸಿಕೊಳ್ಳುತ್ತದೆ ಎಂಬೆಲ್ಲಾ ಕುತೂಹಲಕಾರಿ ಮಾಹಿತಿ ಇದೋ ನಿಮಗಾಗಿ… Read More ಶೂನ್ಯ ನೆರಳು ದಿನ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಮೊನ್ನೆ ಮಂತ್ರಾಲಯದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಭಕ್ತಾದಿಗಳನ್ನು ದೇವಾಲಯದ ಪ್ರಾಕಾರದಲ್ಲಿ ಕಾಪಾಡಿ ಗಳಿಸಿಕೊಂಡಿದ್ದ ನಂಬಿಕೆಯನ್ನು ನೆನ್ನೆ ವಿಗ್ರಹ ಆರಾಧನೆಯನ್ನೇ ನಂಬದವರನ್ನು ಕರೆಸಿ ರಾಯರ ಸನ್ನಿಧಾನದಲ್ಲಿ ರಂಜಾನ್ ಹಬ್ಬವನ್ನು ಆಚರಿಸುವ ಮೂಲಕ ಹಿಂದೂಗಳ ನಂಬಿಕೆಗಳನ್ನು ಮಣ್ಣು ಪಾಲು ಮಾಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಸೌಹಾರ್ದತೆ ಎಂದರೆ ನಮ್ಮ ನಂಬಿಕೆಗಳ ವಿರುದ್ಧವಾಗಿ ಮತ್ತೊಂದು ಧರ್ಮದ ಆಚರಣೆಗಳನ್ನು ನಮ್ಮ ಶ್ರದ್ದೇಯ ಧಾರ್ಮಿಕ ಸ್ಥಳಗಳಲ್ಲಿ ಮಾಡುವುದು ಎಂದು ಯಾವ ಧರ್ಮ ಗ್ರಂಥದಲ್ಲಿ ಬರೆದಿದೆ? … Read More ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಬಿಜೆಪಿ ಬಿಟ್ಟು ಹೊರಗೆ ಹೋಗುತ್ತಿರುವವರಲ್ಲಿ ಸವದಿ ಮತ್ತು ಶೆಟ್ಟರ್ ಮೊದಲೇನಲ್ಲಾ. ಈ ಮುಂಚೆ ಅನೇಕ ನಾಯಕರು ವಿವಿಧ ಕಾರಣಗಳಿಂದಾಗಿ ಬಿಜೆಪಿಯನ್ನು ಬಿಟ್ಟು ಹೊರಗೆ ಹೋಗಿ ತಮ್ಮದೇ ಪಕ್ಷವನ್ನು ಕಟ್ಟಿದರೇ ಹೊರತು ತಾವು ನಂಬಿದ್ದ ಸಿದ್ಧಾಂತದ ವಿರುದ್ಧವಾಗಿ ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೇಸ್ ಪಕ್ಷವನ್ನು ಸೇರಿಕೊಂಡಿರಲಿಲ್ಲ.

ಇಂದು ಬಿಜಿಪಿಯ ಬಂಡಾಯದಲ್ಲಿ ತಮ್ಮ ರಾಜಕೀಯ ಬೇಳೆ ಬೆಳಸಿಕೊಳ್ಳಲು ನಿಮ್ಮಂತಹವರು ನಮ್ಮ ಪಕ್ಷಕ್ಕೆ ಸೇರಿಕೊಂಡಿದ್ದು ಆನೆಯ ಬಲ ಬಂದಂತೆ ಎಂದು ಹೇಳುವ ಕಾಂಗ್ರೇಸ್, ನಾಳೆ ಅಧಿಕಾರಕ್ಕೆ ಬಾರದೇ ಹೋದಾಗ ಇವರನ್ನು ಕಾಲ ಕಸದಂತೆ ಕಂಡಾಗ, ಭ್ರಮನಿರಸರಾಗುವುದು ನಿಶ್ಚಿತ.… Read More ಪಕ್ಷ ಮತ್ತು ಸಿದ್ದಾಂತ ಅನ್ನೋದು ಅಧಿಕಾರದ ಮುಂದೆ ಪುಸ್ತಕದ ಬದನೇಕಾಯಿ

ಪಕ್ಷನಿಷ್ಠೆ ಮತ್ತು ಸಿದ್ಧಾಂತ

ಪ್ರಜೆ ಮತ್ತು ಪಕ್ಷಗಳಿಂದ ತಾವು ಎನ್ನುವುದನ್ನು ಮರೆತು ತಮ್ಮಿಂದಲೇ ಪಕ್ಷ ಮತ್ತು ಪ್ರಜೆ ಎಂದು ಭಾವಿಸುವವರು ಖಂಡಿತವಾಗಿಯೂ ನಂಬಿಕೆಗೆ ಅರ್ಹರಲ್ಲ. ವ್ಯಕ್ತಿ ಮತ್ತು ಅಧಿಕಾರ ಎಂದಿಗೂ ಶಾಶ್ವತವಲ್ಲಾ. ಹಾಗಾಗಿ ಅಧಿಕಾರದಲ್ಲಿ ಕಡೆಯವರೆಗೂ ಇದ್ದು ಎಲ್ಲಾ ರೀತಿಯ ಅಧಿಕಾರವನ್ನೂ ಸವಿದು ನಂತರ ಮತ್ತೆ ಅಧಿಕಾರಕ್ಕೆ ಆರು ಕೊಟ್ಟರೆ ಅತ್ತೇ ಕಡೇ, ಮೂರು ಕೊಟ್ಟರೆ ಸೊಸೇ ಕಡೇ ಎಂಡು ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರಿಗಳನ್ನು ನಿಸ್ಸಂಕೋಚವಾಗಿ ಸೋಲಿಸುವ ಮೂಲಕ ಅವರ ತಪ್ಪನ್ನು ಅವರಿಗೆ ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮಿಲ್ಲರ ಮೇಲೆಯೇ ಇದೆ ಅಲ್ವೇ?… Read More ಪಕ್ಷನಿಷ್ಠೆ ಮತ್ತು ಸಿದ್ಧಾಂತ

ನೂಲಿನಂತೆ ಸೀರೆ ತಾಯಿಯಂತೆ ಮಗಳು

ತಾಯಿ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿ, ಮಗಳು ಇಂಗ್ಲೇಂಡಿನ ಪ್ರಧಾನ ಮಂತ್ರಿಯ ಪತ್ನಿಯಾಗಿ ಇಂಗ್ಲೇಂಡಿನ ದೇಶದ ಪ್ರಥಮ ಮಹಿಳೆ. ಅವರಿಬ್ಬರು ಅಷ್ಟು ದೊಡ್ಡ ಗಣ್ಯ ಮಹಿಳೆಯರಾಗಿದ್ದರೂ ಮೊನ್ನೆ ರಾಷ್ಟ್ರಪತಿಗಳ ಭವನದಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಅನನ್ಯ, ಅದ್ಭುತ ಮತ್ತು ಅನುಕರಣಿಯ. ಅಮ್ಮಾ ಮಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ನೂಲಿನಂತೆ ಸೀರೆ ತಾಯಿಯಂತೆ ಮಗಳು

ಸ್ವಘೋಷಿತ ದೊಣ್ಣೇ ನಾಯಕರು

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು. ಅಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ, ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? … Read More ಸ್ವಘೋಷಿತ ದೊಣ್ಣೇ ನಾಯಕರು

ನಂದಿನಿ ಮತ್ತು ಅಮುಲ್ ವಾಸ್ತವ ಚಿತ್ರಣ

ಕಳೆದ ಡಿಸೆಂಬರ್ ನಲ್ಲಿ ಮನ್ ಮೂಲ್ ಕಾರ್ಯಕ್ರಮಕ್ಕಾಗಿ ಮಂಡ್ಯಾಕ್ಕೆ ಆಗಮಿಸಿದ್ದ ದೇಶದ ಗೃಹಮಂತ್ರಿಗಳಾದ ಅಮಿತ್ ಶಾ, 1970ರಲ್ಲಿ ಕೇರಳ ಮೂಲದ ವರ್ಗೀಸ್_ಕುರಿಯನ್ ಗುಜರಾತಿನಲ್ಲಿ ಯಾವುದೇ ಜಾತಿ ಮತ ಪಂಥಗಳ ಯಾವದೇ ರಾಗ ದ್ವೇಷವಿರದೇ ಅಮೂಲ್ ಎಂಬ ಸಹಕಾರಿ ಸಂಘದ ಮೂಲಕ ಗುಜರಾತ್ ನಲ್ಲಿ ಕಳೆದ ಐದು ದಶಕಗಳಿಂದಲೂ ಈ ದೇಶದಲ್ಲಿ ಕ್ಷೀತ್ರಕ್ರಾಂತಿಯನ್ನುಂಟು ಮಾಡಿದ್ದನ್ನು ಹೊಗಳುತ್ತಾ, ಅದೇ ರೀತಿ ದೇಶದಲ್ಲಿ ಹಾಲಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ KMF ನಂದಿನಿ ಎರಡೂ ಸಹಾ ಪರಸ್ಪರ ಸಹಯೋಗದೊಂದಿಗೆ ಹೋದಲ್ಲಿ ಈ ದೇಶದಲ್ಲಿ… Read More ನಂದಿನಿ ಮತ್ತು ಅಮುಲ್ ವಾಸ್ತವ ಚಿತ್ರಣ

ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ವಯಸ್ಸು 80+ ಎಲ್ಲಾ ರೀತಿಯ ರಾಜಕೀಯ ಅಧಿಕಾರವನ್ನೂ ಸವಿದ ನಂತರ, ಈಗ ಸ್ವತಂತ್ರವಾಗಿ ನಡೆಯಲಾಗದೇ, ಸ್ಪಷ್ಟವಾಗಿ ಮಾತನಾಡಲಾಗದೇ, ಡೈಪರ್ ಹಾಕಿಕೊಂಡು ವೀಲ್ ಛೇರ್ ಮೇಲೆ ಕುಳಿತು ಕೊಳ್ಳುವವರೆಲ್ಲಾ ಇನ್ನೂ ಅಧಿಕಾರದ ಆಸೆಯಿಂದಾಗಿ ಸಕ್ರೀಯ ಚುನಾವಣಾ ರಾಜಕಾರಣ ಮಾಡುತ್ತಾ, ತಮ್ಮ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರನ್ನು ಅಧಿಕಾರಕ್ಕೆ ತರುವುದಕ್ಕೇ ಒದ್ದಾಡುತ್ತಿರುವವರಿಗೆ, ಐದು ಬಾರಿ ಜನಪ್ರಿಯ ಶಾಸಕರಾಗಿಯೂ ಮಂತ್ರಿಗಿರಿಗೆ ಲಾಭಿಯನ್ನು ನಡೆಸದೇ ತಮ್ಮ 72ನೇ ವಯಸ್ಸಿನಲ್ಲಿಯೇ ಸ್ವಯಂಪ್ರೇರಿತರಾಗಿ ಸಕ್ರೀಯ ಚುನಾವಣಾ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸಿರುವ ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಿರ್ಧಾರ ಮೇಲ್ಪಂಕ್ತಿ ಆಗಬೇಕು ಅಲ್ವೇ?… Read More ಅಜಾತ ಶತ್ರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ

ದಹಿಗೆ ನಹಿ ಎನ್ನುವವರಿಗೆ ಹಲಾಲ್ ಸಹಿ?

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಮತ್ತು ಕನ್ನಡಿಗನೇ ಸಾರ್ವಭೌಮ. ಇದರಲ್ಲಿ ಯಾವುದೇ ಎರಡು ಮಾತಿಲ್ಲ. ಅನಗತ್ಯವಾಗಿ ಅನ್ಯ ಭಾಷೆ ಅಥವಾ ಧರ್ಮ ಹೇರಿಕೆಯಾದಲ್ಲಿ ಅದನ್ನು ಖಂಡಿತವಾಗಿಯೂ ಪ್ರತಿಭಟಿಸಲೇ ಬೇಕಿದೆ. ಇಂದು ಮೊಸರಿನಲ್ಲಿ ದಹಿ ಎಂಬ ಕಲ್ಲು ಹುಡುಕಿದವರು ಅವ್ಯಾವಹತವಾಗಿ ಹಿಂದೂಗಳ ಮೇಲೆ ಆಗುತ್ತಿರುವ ಹಲಾಲ್ ಹೇರಿಕೆಯನ್ನೇಕೇ ವಿರೋಧಿಸುತ್ತಿಲ್ಲಾ? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ!… Read More ದಹಿಗೆ ನಹಿ ಎನ್ನುವವರಿಗೆ ಹಲಾಲ್ ಸಹಿ?