ಶ್ರೀಕಂಠ, ವಿಷಕಂಠ, ನೀಲಕಂಠ

ಸಮುದ್ರ ಮಂಥನದ ಸಮಯ, ಕೈಲಾಸ ಪರ್ವತವನ್ನೇ ಕಡಗೋಲಾಗಿಸಿಕೊಂಡು ಆದಿಶೇಷನ ಒಂದು ತುದಿ ದೇವತೆಗಳು ಮತ್ತು ಮತ್ತೊಂದು ತುದಿಯನ್ನು ಅಸುರರು ಹಿಡಿದುಕೊಂಡು ಮಜ್ಜಿಗೆ ಕಡೆದಂತೆ ಸಮುದ್ರವನ್ನು ಕಡೆಯುತ್ತಿದ್ದಾಗ ಉಕ್ಕಿಬಂದ ಕಾರ್ಕೋಟಕ ವಿಷವನ್ನು ತಾಳಲಾರದೇ, ಎಲ್ಲರೂ ಆ ಪರಶಿವನ ಮೊರೆ ಹೊಕ್ಕಾಗಾ ಹಿಂದೂ ಮುಂದೇ ನೋಡದ ಶಿವಾ ಆ ಕಾರ್ಕೋಟಕ ವಿಷವನ್ನು ತನ್ನ ಎರಡೂ ಕೈಗಳಿಗೆ ಬರುವಂತೆ ಮಾಡಿಕೊಂಡು ಗಟ ಗಟನೆ ಆಪೋಷನೆ ಮಾಡುತ್ತಿರುವ ವಿಷಯ ತಿಳಿದು, ಪಾರ್ವತಿದೇವಿ ಓಡೋಡಿ ಬರುವಷ್ಟರಲ್ಲಿ ಶಿವ ವಿಷವನ್ನು ಸೇವಿಸಿಯಾಗಿರುತ್ತದೆ. ಇದನ್ನು ಕಂಡ ಪಾರ್ವತೀ… Read More ಶ್ರೀಕಂಠ, ವಿಷಕಂಠ, ನೀಲಕಂಠ

online shopping

ಎಲ್ಲರಿಗೂ ತಿಳಿದಿರುವಂತೆ ದಸರಾ ಮತ್ತು ದೀಪಾವಳಿ ಹಬ್ಬ ಬಂದಿತೆಂದರೆ ಇಡೀ ದೇಶಾದ್ಯಂತ ಸಂಭ್ರಮದ ಹಬ್ಬದ ವಾತಾವರಣ. ಈ ಸಂಭ್ರಮದ ಸಮಯದಲ್ಲಿ ಎಲ್ಲರ ಮನೆ ಮತ್ತು ಮನಗಳು ಏನಾದರೊಂದು ಹೊಸತೊಂದನ್ನು ಕೊಂಡು ತರಲು ಬಯಸಿ ವರ್ಷವಿಡೀ ಅದಕ್ಕಾಗಿ ಹಣವನ್ನು ಉಳಿಸಿ ಅದನ್ನು ಖರೀದಿಸಿ ತಂದರಂತೂ ಆಂದಕ್ಕೆ ಎಣೆಯೇ ಇಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಬಹುತೇಕ ದಕ್ಷಿಣ ಭಾರತದ ಕೈಗಾರಿಕೆಗಳು ಆಯುಧಪೂಜೆಯ ಸಂದರ್ಭಕ್ಕೆ ತಮ್ಮ ನೌಕರಿಗೆ ಬೋನಸ್ ನೀಡಿದರೆ, ಇನ್ನು ದೇಶಾದ್ಯಂತ ದೀಪಾವಳಿ ಹಬ್ಬಕ್ಕೆ ತಮ್ಮ ನೌಕರಿಗೆ ಯಥೇಚ್ಚವಾದ ಬೋನಸ್ ನೀಡುವ… Read More online shopping

ಶೆಟ್ಟೀಕೆರೆ

ಭೌಗೋಳಿಕವಾಗಿ ಕಲ್ಪತರುನಾಡು ತುಮಕೂರಿನ ಭಾಗವಾಗಿ, ಆ ಜಿಲ್ಲೆಯ ತುತ್ತ ತುದಿಯಲ್ಲಿ , ತುಮಕೂರಿನಿಂದ ಸುಮಾರು 70 ಕಿಮೀ ದೂರದಲ್ಲಿರುವ, ಚಿಕ್ಕನಾಯಕನ ಹಳ್ಳಿಯಿಂದ ತಿಪಟೂರಿಗೆ ಹೋಗುವ ಮಾರ್ಗದ ಮಧ್ಯದಲ್ಲಿರುವ ಹೋಬಳಿಯೇ ಶೆಟ್ಟೀಕೆರೆ. ಹತ್ತಿರ ಹತ್ತಿರ ಸಾವಿರ ಮನೆಗಳು ಇರಬಹುದಾದ ಒಂದು ರೀತಿಯ ಸ್ಥಳೀಯ ವಾಣಿಜ್ಯ ನಗರಿ. ಸಾಂಪ್ರದಾಯಿಕವಾಗಿ ಹಾಸನ ಜಿಲ್ಲೆಯ ಸೊಗಡನ್ನು ಮೈದಳೆದಿರುವ ವಾಣಿಜ್ಯವಾಗಿ ಚಿತ್ರದುರ್ಗ ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಪಟ್ಟಣವೆಂದರೂ ತಪ್ಪಾಗಲಾರದು. ಬೆಂಗಳೂರಿನ ಕೃಷ್ಣರಾಜ ಪುರದಲ್ಲಿ ಎಲೆ ಮರಿಮಲ್ಲಪ್ಪ ಶೆಟ್ಟರು ಲೋಕ ಕಲ್ಯಾಣಕ್ಕಾಗಿ ವಿಶಾಲವಾದ ಕೆರೆಯನ್ನು… Read More ಶೆಟ್ಟೀಕೆರೆ

ಮದರಸ ಮತಾಂಧರನ್ನು ತಯಾರಿಸುವ ಕಾರ್ಖಾನೆಯೇ?

ಕೆಲವು ತಿಂಗಳುಗಳ ಹಿಂದೆ ಉತ್ತರಾಖಂಡದಿಂದ ರಾತ್ರೋರಾತ್ರಿ ಸರಿ ಸುಮಾರು 2,00,000 ಮುಸ್ಲಿಂ ಮಕ್ಕಳು ಕಣ್ಮರೆಯಾದ ಭೀಕರ ಸತ್ಯ ಹೊರ ಬಂದು ಪ್ರಧಾನಿಗಳನ್ನೂ ಒಳಗೊಂಡು ಎಲ್ಲರೂ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಇದನ್ನೇ ನೆಪವಾಗಿಸಿಕೊಂಡು ದೇಶದ ಮುಸ್ಲಿಮರಲ್ಲಿ ಒಂದು ರೀತಿಯ ಚಡಪಡಿಕೆ ಮತ್ತು ಅಭದ್ರತೆಯ ಭಾವನೆ ಇದೆ ಎಂದು ಮಾಜಿ ಉಪಾಧ್ಯಕ್ಷ ಹಮೀದ್ ಅನ್ಸಾರಿ ಹೇಳಿಕೆ ಕೊಟ್ಟೇ ಬಿಟ್ಟರು. ದೇಶದ ಉಪರಾಷ್ಟ್ರಪತಿಗಳಾಗಿದ್ದ ಹಮೀದ್ ಅನ್ಸಾರಿ ಅವರಂತಹ ಜನರು ಈ ರೀತಿಯಲ್ಲಿ ಏಕೆ ಅಭದ್ರತೆ ಮತ್ತು ಅಸಹಿಷ್ಣುತೆ ಬೆಳೆಯುತ್ತಿದೆ ಎಂಬುದನ್ನು… Read More ಮದರಸ ಮತಾಂಧರನ್ನು ತಯಾರಿಸುವ ಕಾರ್ಖಾನೆಯೇ?

ಮಾಮರವೆಲ್ಲೋ ಕೋಗಿಲೆ ಎಲ್ಲೋ, ನಾ ಕಂಡಂತೆ ಎಸ್ಪಿಬಿ

ಎಪ್ಪತರ ದಶಕದಲ್ಲಿ ನನಗೆ ಆಗಿನ್ನೂ ಬುದ್ಧಿ ಬಂದ ಸಮಯದಲ್ಲಿ ನಾನು ಬಹಳ ಕಾಲ ಗುನುಗುತ್ತಿದ್ದ ಮತ್ತು ಈಗಲೂ ನನಗೆ ನೆನಪಿನಲ್ಲಿ ಇರುವ ದೇವರಗುಡಿ ಚಿತ್ರದ ಚಿ.ಉದಯಶಂಕರ್ ಸಾಹಿತ್ಯ ರಚನೆಯ, ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿ ಶ್ರೀ ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿರುವ ಮಾಮರವೆಲ್ಲೋ ಕೋಗಿಲೆ ಎಲ್ಲೋ, ಏನೀ ಸ್ನೇಹ ಸಂಬಂಧ, ಎಲ್ಲಿಯದೋ ಈ ಅನುಬಂಧ ಹಾಡು ಇಂದಿನ ದಿನಕ್ಕೆ ನಿಜಕ್ಕೂ ಅನ್ವರ್ಥವಾಗಿದೆ. ಜೂನ್ 4, 1946 ರಲ್ಲಿ ಆಂಧ್ರ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿ ತಮಿಳುನಾಡಿನ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡಿ… Read More ಮಾಮರವೆಲ್ಲೋ ಕೋಗಿಲೆ ಎಲ್ಲೋ, ನಾ ಕಂಡಂತೆ ಎಸ್ಪಿಬಿ

ಕೊಡುಗೈ ರಾಜು

ಅದು 1998. ನನ್ನ ಮದುವೆಗಾಗಿ ಹೆಣ್ಣು ನೋಡುತ್ತಿದ್ದ ಸಮಯದಲ್ಲಿ ತಮ್ಮ ಮಗಳ ಜಾತಕವನ್ನು ಹಿಡಿದುಕೊಂಡು ಮೊತ್ತ ಮೊದಲ ಬಾರಿಗೆ ಸುಮಾರು 6 ಅಡಿಯಷ್ಟು ಎತ್ತರದ ಸುಂದರ ಮೈಕಟ್ಟಿನ ನಡು ವಯಸ್ಸಿನವರು ನಮ್ಮ ಮನೆಗೆ ಬಂದು ತಮ್ಮನ್ನು ತಾವು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಳ್ಳುತ್ತಾರೆ. ಒಂದು ಗಂಡಿಗೆ ಒಂದು ಹೆಣ್ಣು ಎಂದು ಹುಟ್ಟಿಸುವಾಗಲೇ ಬ್ರಹ್ಮ ಬರೆದು ಕಳುಹಿಸಿರುತ್ತಾನೆ ಎಂಬಂತೆ ಜಾತಕಗಳೆಲ್ಲವೂ ಕೂಡಿ ಬಂದ ಕಾರಣ, ಅದೇ ಗುರುವಾರ ಸಂಜೆ ನನ್ನ ಜೀವನದಲ್ಲಿಯೇ ಪ್ರಪ್ರಥಮವಾಗಿ ಮತ್ತು ಅಧಿಕೃತವಾಗಿ… Read More ಕೊಡುಗೈ ರಾಜು

ನನಗೆ ಹಿಂದೀ ಬರೋದಿಲ್ಲ, ನಾವು ದ್ರಾವಿಡರು

ಕಳೆದ ಒಂದೂವರೆ ವರ್ಷಗಳಿಂದ ಕೂರೋನಾ ಮಹಾಮಾರಿ ವಕ್ಕರಿಸಿ ಇಡೀ ವಿಶ್ವವೇ ಒಂದು ರೀತಿ ಸ್ಥಬ್ಧವಾಗಿದ್ದು ಎಲ್ಲೆಡೆಯೂ ಲಾಕ್ ಡೌನ್ ಪರಿಸ್ಥಿತಿ ಇದ್ದು ಈಗ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿಯೋ ಇಲ್ಲವೇ, ನಾವೇ ಅದರೊಂದಿಗೇ ಜೀವನ ನಡೆಸುವ ಕಲೆಯನ್ನು ಕಲಿತುಕೊಂಡಿದ್ದೇವೆ ಎನ್ನಬಹುದಾದ ಪರಿಸ್ಥಿತಿಯಲ್ಲಿ, ಕೂರೋನಾಕ್ಕಿಂತಲೂ ಹೆಚ್ಚಾಗಿ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಪ್ರತೀ ದಿನವೂ ಮಾಧ್ಯಮದವರ ಕೂರೋನಾ ಕುರಿತಾದ ಕಾರ್ಯಕ್ರಮಗಳಿಂದ ಭಯಭೀತರನ್ನಾಗಿ ಮಾಡಿಸುವ ಜೊತೆಗೆ ಹಾಗೇ ಸುಮ್ಮನೆ ವಿಷಯಾಂತರ ಮಾಡುತ್ತಾ,, ಪ್ರಕಾಶ್ ರೈ ಕೆ.ಜಿ.ಎಫ್ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ,… Read More ನನಗೆ ಹಿಂದೀ ಬರೋದಿಲ್ಲ, ನಾವು ದ್ರಾವಿಡರು

ಧೈರ್ಯಂ  ಸರ್ವತ್ರ ಸಾಧನಂ

ಮುಖಪುಟದ ಮುಖಾಂತರವೇ ಪರಿಚಯವಾದ ಮೂಲತಃ ಮುಧೋಳದವರಾದರೂ ಸದ್ಯ ಕೊಪ್ಪಳದಲ್ಲಿರುವ ಶ್ರೀ ಶಿವಶರಣಪ್ಪ ಬಳಿಗಾರ್ ಅವರು ಕಳೆದ ಮೂರ್ನಾಲ್ಕು ವಾರಗಳಿಂದಲೂ ಸಾಮಾಜಿಕ ಜಾಲ ತಾಣಗಳಲ್ಲಿ ಅಷ್ಟೊಂದು ಕಾಣಸಿಗಲಿಲ್ಲ, ಎನೋ ಕೆಲಸ ಕಾರ್ಯದಲ್ಲಿ ನಿರತರಾಗಿ ಇರಬಹುದೇನೋ ಎಂದು ಕೊಂಡಿದ್ದರೆ ಇಂದು ಬೆಳಿಗ್ಗೆ ಅವರ ಮುಖಪುಟದ ಗೋಡೆಯಲ್ಲಿ ಅವರದ್ದೇ ಲೇಖನ ಓದಿ ಒಂದು ಕಡೆ ಮತ್ತೊಂದೆಡೆ ಸಂತೋಷವಾಯಿತು. ಅವರ ಬರೆದದ್ದನ್ನು ಹಾಗೆಯೇ ಇಲ್ಲಿ ಪ್ರಕಟಿಸುತ್ತಿದ್ದೇನೆ. ಅವ್ವನಿಗೆ ಕಾಲುಸೆಪ್ಟೆಕ್ ಆದ ಕಾರಣ ಯಲಬುರ್ಗಾ ತಾಲ್ಲೂಕಿನ ಸರಕಾರಿ ಆಸ್ಪತ್ರೆಯಲ್ಲಿ 4-5 ದಿನ ಚಿಕಿತ್ಸೆ ಗಾಗಿ… Read More ಧೈರ್ಯಂ  ಸರ್ವತ್ರ ಸಾಧನಂ

ಗೋಗಳ್ಳರು

ನಾವೆಲ್ಲರೂ ಚಿಕ್ಕಂದಿನಿಂದಲೂ, ಪಂಚತ್ರಂತ್ರ ಮತ್ತು ಅಕ್ಬರ್ ಬೀರ್ಬಲ್ ಕಥೆಗಳನ್ನು ಕೇಳಿಕೊಂಡು ಬೆಳೆದವರೇ ಆಗಿದ್ದು, ಅಲ್ಲಿ ಕಳ್ಳರು ಬಹಳ ಚಾಣಕ್ಯತನದಿಂದ ಎಲ್ಲರನ್ನೂ ಬೇಸ್ತುಗೊಳಿಸಿ ತಮ್ಮ ಕೈಚಳಕವನ್ನು ತೋರಿಸುವುದನ್ನು ಕೇಳಿದ್ದೇವೆ, ಓದಿದ್ದೇವೆ. ಪ್ರಸ್ತುತವೂ ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅದಕ್ಕೆ ಉದಾಹರಣೆಯಾಗಿ ಒಂದು ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಸಾಮಾನ್ಯವಾಗಿ ರಾತ್ರಿಯ ಹೊತ್ತು ದನಗಳನ್ನು ಕದಿಯಲು ಬರುವ ಕಳ್ಳರು ಮಾಡುವ ಮೊದಲ ಕೆಲವೆಂದರೆ, ಹಸುಗಳ ಕುತ್ತಿಗೆಗೆ ಕಟ್ಟಲಾಗಿರುವ ಗಂಟೆಗಳನ್ನು ಶಬ್ಧ ಬಾರದಂತೆ ತೆಗೆದುಬಿಡುತ್ತಾರೆ ನಂತರ ಹಸುಗಳ ಬಾಯಿಗೆ ಶಬ್ಧ ಮಾಡದಂತೆ ಸಣ್ಣ ಬುಟ್ಟಿಯನ್ನು… Read More ಗೋಗಳ್ಳರು