ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿಯೇ ಮಾಯ

ಅರೇ ಇದೇನಿದು? ಇಂತಹ ತರೆಬರಹ ಎಂದು ಯೋಚನೆ ಮಾಡುತ್ತಿದ್ದೀರಾ? ಪ್ರತ್ಯಕ್ಷವಾಗಿ ನೋಡಿದರೂ ಪ್ರಮಾಣಿಸಿ ನೋಡೂ.. ಎನ್ನುವಂತೇ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಚಿತ್ರಗಳನ್ನು ಒಮ್ಮೆ ನೋಡಿ, ಮೈ ನಖಶಿಖಾಂತ ಉರಿಯದೇ ಹೋದ್ರೇ, ಆತ ನಿಜವಾದ ಕನ್ನಡಿಗನೇ ಅಲ್ಲ.. ನಮಗೆಲ್ಲಾ ಕನ್ನಡ ಅಂದ ತಕ್ಷಣ ನೆನಪಾಗೋದೇ ನಮ್ಮ ಹಳದಿ ಮತ್ತು ಕೆಂಪು ಬಾವುಟದ ಜೊತೆ ತಾಯಿ ಭುವನೇಶ್ವರಿ. ಅದರೆ ದುರಾದೃಷ್ಟವಷಾತ್ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯ ಆ ಫಲಕದಲ್ಲಿ ಕನ್ನಡಾಂಬೆಯ ಸ್ಥಾನದಲ್ಲಿ… Read More ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಭುವನೇಶ್ವರಿಯೇ ಮಾಯ

ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ

ಪ್ರಪಂಚದಾದ್ಯಂತ ನೂರಾರು ಧರ್ಮಗಳು ಮತ್ತು ಆಧ್ಯಾತ್ಮಿಕ ನಂಬಿಕೆಗಳು ಅಸ್ತಿತ್ವದಲ್ಲಿದ್ದು ಕಾಲಕಾಲಕ್ಕೆ ನಾನಾರೀತಿಯ ಆಕ್ರಮಣಕ್ಕೆ ಸಿಕ್ಕು ತಮ್ಮ ತನವನ್ನು ಕಳೆದುಕೊಂಡಿದೆ. ಆದರೆ ಸತತವಾಗಿ ಸಾವಿರಾರು ವರ್ಷಗಳ ಕಾಲ ಹಲವಾರು ಆಕ್ರಮಣಕಾರರ ಹೊಡತಕ್ಕೆ ಸಿಕ್ಕು ರಾಜಕೀಯವಾಗಿ ಸ್ವಾತಂತ್ಯ್ರವನ್ನೇ ಕಳಿದುಕೊಂಡರೂ, ತನ್ನ ಸಹಿಷ್ಣುತೆ, ಶ್ರೇಷ್ಠತೆ ಮತ್ತು ವಿಶಾಲತೆಯ ಕಾರಣದಿಂದಾಗಿ ಇಂದಿಗೂ ಜಗತ್ತಿನಲ್ಲಿ ತಲೆ ಎತ್ತಿ ವಿಶ್ವಗುರುವಾಗಲು ಹೊರಟಿರುವ ಧರ್ಮವೆಂದರೆ ನಮ್ಮ ಸನಾತನ ಧರ್ಮ. ಇಂತಹ ಸನಾತನ ಧರ್ಮದಲ್ಲಿ ಮತ್ತು ಇಂತಹ ಧರ್ಮದಲ್ಲಿ ಹುಟ್ಟಲು ಅದು ಎಷ್ಟು ಜನ್ಮ ಪುಣ್ಯ ಮಾಡಿರಬೇಕು. ನಮ್ಮ… Read More ಮಾಡ್ದೋರ ಪಾಪಾ ಆಡ್ದೋರ ಬಾಯಲ್ಲಿ

ಜೀವನ ಮತ್ತು ರೈಲು ಗಾಡಿ

ನಮ್ಮ ಜೀವನದ ಪಯಣ ಎನ್ನುವುದು ಒಂದು ರೀತಿಯಲ್ಲಿ ರೈಲು ಗಾಡಿ ಇದ್ದಂತೆ. ಬಾಲ್ಯ, ಪ್ರೌಢ, ಯೌವನ ಮತ್ತು‌ ವೃದ್ದಾಪ್ಯಗಳು ನಮ್ಮ ಪಯಣದಲ್ಲಿ ಬರುವ ನಿಲ್ದಾಣಗಳು. ಈ ಸುದೀರ್ಘ ಪಯಣದಲಿ, ನಮ್ಮೊಂದಿಗೆ ಬಂದು ಹೋಗುವ ಬಂಧು-ಮಿತ್ರರೆಲ್ಲರೂ, ಸಹ ಪ್ರಯಾಣಿಕ ರಾಗಿ, ಅವರವರ ನಿಲ್ದಾಣಗಳು ಬಂದಾಗ ನಮ್ಮೀ ಬೋಗಿಯಿಂದ ಇಳಿದು‌ ಹೋಗುವರು. ಆದರೆ, ನಮ್ಮೀ ಭೋಗಿಯನ್ನು ಸರಾಗವಾಗಿ ಎಳೆದುಕೊಂಡು ಹೋಗುವ ಇಂಜಿನ್ಗಳು, ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ತಂದೆ-ತಾಯಿಯರಾದರೇ, ಯೌವ್ವನದಲ್ಲಿ, ಬಾಳಸಂಗಾತಿ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳುಗಳು. ಈ ಎಂಜೀನ್‌ಗಳು ಸ್ವಲ್ಪ ಆಚೀಚೆಯಾದರೂ… Read More ಜೀವನ ಮತ್ತು ರೈಲು ಗಾಡಿ

ಅರ್ನಾಬ್ ಗೋಸ್ವಾಮೀ ಬಂಧನದ ಕುರಿತಂತೆ ವಸ್ತುನಿಷ್ಠ ವಿಶ್ಲೇಷಣೆ

ಈಗಾಗಾಲೇ ಎಲ್ಲರಿಗೂ ತಿಳಿದಿರುವಂತೆ ಎರಡು ದಿನಗಳ ಹಿಂದೆ ಖ್ಯಾತ ಪತ್ರಕರ್ತ ಮತ್ತು ರಿಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿಯವರನ್ನು ಮುಂಬೈ ಪೋಲಿಸರು ರಾತ್ರೋ ರಾತ್ರಿ ಅವರ ಮನೆಯಿಂದ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಕುರಿತಂತೆ ದೇಶದಲ್ಲಿ ಭೂಕಂಪವೇ ಆಗಿಹೋದಂತೇ ಪತ್ರಿಕಾ ವೃತ್ತಿ ಧರ್ಮಕ್ಕೇ ಕೊಳ್ಳಿ ಬಿದ್ದಂತಾಗಿದೆ ಎಂದು ಕೆಲವು ಮಾಧ್ಯಮಗಳು ಬಿಂಬಿಸಿದರೇ, ಅರ್ನಾಬ್ ಅವರ ವಿರೋಧಿ ಮಾಧ್ಯಮಗಳು ಪೋಲೀಸರ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿವೆ. ಇಬ್ಬರ ಪರವಾಗಿಯೂ ಎಗ್ಗಿಲ್ಲದೇ, ದಿನದ 24 ಗಂಟೆಗಳೂ ಜೋರು ಗಂಟಲಿನ ಚರ್ಚೆ ಎಂಬ… Read More ಅರ್ನಾಬ್ ಗೋಸ್ವಾಮೀ ಬಂಧನದ ಕುರಿತಂತೆ ವಸ್ತುನಿಷ್ಠ ವಿಶ್ಲೇಷಣೆ

ಆಟಗಾರರ ಆಯ್ಕೆ ಮತ್ತು ಆಟಗಾರರ ವರ್ತನೆ

ಕ್ರಿಕೆಟ್ ಪ್ರಿಯರಿಗೆಲ್ಲರಿಗೂ ನೆನಪಿರುವಂತೆ ಎಂಭತ್ತರ ದಶಕದಲ್ಲಿ ಪಂಜಾಬ್ ಪರವಾಗಿ ಆಡುತ್ತಿದ್ದ ಎಡಗೈ ಸ್ಪಿನ್ನರ್ ರಾಜೇಂದರ್ ಸಿಂಗ್ ಗೋಯಲ್ ರಣಜೀ ಪಂದ್ಯಾವಳಿಗಳಲ್ಲಿ 637 ವಿಕೆಟ್ ಪಡೆದಿರುವ ದಾಖಲೆಯನ್ನು ಇದುವರೆಗೂ ಯಾರೋಬ್ಬರಿಗೂ ಮುರಿಯುವುದಿರಲಿ ಅದರ ಹತ್ತಿರಕ್ಕೂ ಬರಲು ಸಾಧ್ಯವಾಗಿಲ್ಲ. ಅದೇ ರೀತಿ ದೆಹಲಿ ತಂಡಕ್ಕೆ ಆಡುತ್ತಿದ್ದ ಭಾಸ್ಕರ್ ಪಿಳ್ಳೆ ದೇಶೀಯ ಕ್ರಿಕೆಟ್ಟಿನಲ್ಲಿ ಸಾವಿರಾರು ರನ್ನುಗಳ ಸರದಾರ. ಭಾರತ ಕ್ರಿಕೆಟ್ ತಂಡದ ಹೆಸರಾಂತ ಆರಂಭಿಕ ಆಟಗಾರ ಸುನೀಲ್ ಗವಾಸ್ಕರ್ ಕ್ರಿಕೆಟ್ಟಿನಿಂದ ನಿವೃತ್ತಿ ಹೊಂದಿದಾಗ ಆವರ ಸ್ಥಾನವನ್ನು ತುಂಬುವ ಸಾಮರ್ಥ್ಯ ಯಾರಿಗಿದೇ ಎಂದು… Read More ಆಟಗಾರರ ಆಯ್ಕೆ ಮತ್ತು ಆಟಗಾರರ ವರ್ತನೆ

ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಅದು ಎಂಭತ್ತರ ದಶಕದ ಸಮಯ. ನನ್ನ ವಿದ್ಯಾಭ್ಯಾಸದ ಸಲುವಾಗಿ ನಾವು ನೆಲಮಂಗಲದಿಂದ ಬೆಂಗಳೂರಿನ ಬಿಇಎಲ್ ಕಾರ್ಖಾನೆ ಹಿಂದಿನ ಲೊಟ್ಟೇಗೊಲ್ಲಹಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಂಡು ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹೋಗುತ್ತಿದ್ದ ನನಗೆ ನಮ್ಮ ಮನೆಯ ಬಳಿ ಯಾವುದೇ ಶಾಖೆ ಇರದಿದ್ದದ್ದು ತುಸು ಬೇಸರವೆನಿಸಿತ್ತು, ನಮ್ಮ ಶಾಲೆ ಮಧ್ಯಾಹ್ನನದ ಪಾಳಿಯಲ್ಲಿದ್ದು 1 – ಸಂಜೆ 5:30ಕ್ಕೆ ಮುಗಿಯುತ್ತಿತ್ತು. ಅದೊಂದು ದಿನ ನಮ್ಮ ಶಾಲೆಯ ಹಿಂಬಾಗದಲ್ಲಿದ್ದ ಬಿಇಎಲ್ ಸೊಸೈಟಿಯ ಪಕ್ಕದಲ್ಲಿ ಶಾಖೆ ನಡೆಯುವುದನ್ನು ನೋಡಿ ಆನಂದವಾಗಿ… Read More ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಮಾರ್ವಾಡಿಗಳು ನಮ್ಮವರು

ಅದು ತೊಂಬತ್ತರ ದಶಕ ಅಂತ್ಯದ ಸಮಯ. ಆಗ ತಾನೇ ಮದುವೆಯಾಗಿದ್ದ ನಮಗೆ ಮಧುಚಂದ್ರಕ್ಕೆ ಹೋಗಬೇಕೆನ್ನುವ ತವಕ. ಈಗಿನಂತೆ ವಿದೇಶಕ್ಕೆ ಹೋಗುವ ಅರ್ಥಿಕ ಸಧೃಡತೆಯಾಗಲೀ, ಅನುಕೂಲತೆಗಳು ಇಲ್ಲದಿದ್ದಾಗ, ಜೈಪುರ್, ಉದಯಪುರ್, ಬಾಂಬೆಯ ಕಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿಯಾಗಿತ್ತು. ಇದೇ ಸ್ಥಳಗಳಿಗೆ ಹೋಗಲು ತೀರ್ಮಾನಿಸಿದ್ದರ ಹಿಂದೆಯೂ ಒಂದು ಬಲವಾದ ಕಾರಣವಿದ್ದು, ನಮ್ಮಾಕಿಯ ಜೊತೆ ಬಾಲ್ಯದಿಂದಲೂ ನೆರೆಹೊರೆಯವರಾಗಿದ್ದು, ಸಹಪಾಠಿಯೂ ಆಗಿದ್ದು ಆಕೆಯ ಮದುವೆಯೂ ಸಹಾ ನಮ್ಮ ಮದುವೆಯಾಗಿ 15-20 ದಿನಗಳ ನಂತರ ದೂರದ ರಾಜಾಸ್ಥಾನದ ಮಾರ್ವಾಡ್ ಗಂಜಿನ ದೇವಗಡ್ ಮಜಾರಿಯಾ ಎಂಬ ಊರಿನ… Read More ಮಾರ್ವಾಡಿಗಳು ನಮ್ಮವರು

ತೂಕ ಮತ್ತು ಅಳತೆ

ಅದೊಂದು ಕೋಳಿ ಅಂಗಡಿ ಇನ್ನೇನು ಅಂಗಡಿಯನ್ನು ಮುಚ್ಚಬೇಕು ಎನ್ನುವ ಸಮಯದಲ್ಲಿ ಅಂಗಡಿಗೆ ಬಂದ ಮಹಿಳೆಯೊಬ್ಬಳು ಇನ್ನೂ ಕೋಳಿ ಸಿಗುತ್ತದೆಯೇ? ಎಂದು ವಿಚಾರಿಸುತ್ತಾಳೆ. ಕಟುಕ ತನ್ನ ಆಳವಾದ ಫ್ರೀಜರ್ ಅನ್ನು ತೆರೆದುನೋಡಿ ಅಲ್ಲಿ ಉಳಿದಿದ್ದ ಏಕೈಕ ಕೋಳಿಯನ್ನು ಹೊರತೆಗೆದು ತಕ್ಕಡಿಯಮೇಲಿಟ್ಟು 1.5 ಕೆ.ಜಿ. 🐓 ಇದೆ ಕೊಡ್ಲಾ ಎಂದು ಕೇಳುತ್ತಾನೆ. ತಕ್ಷಣವೇ ಮಹಿಳೆಯು ಕೋಳಿಯ ಗಾತ್ರ ಮತ್ತು ಪ್ರಮಾಣವನ್ನು ನೋಡಿ, ಇದಕ್ಕಿಂತ ಸ್ವಲ್ಪ ದೊಡ್ಡದಿದ್ದರೆ ಕೋಡ್ತೀರಾ ಎಂದು ವಿನಮ್ರವಾಗಿ ಕೇಳುತ್ತಾಳೆ. ಕೂಡಲೇ ಕಟುಕನು ಆ ಕೋಳಿಯನ್ನು ಮತ್ತೆ ತನ್ನ… Read More ತೂಕ ಮತ್ತು ಅಳತೆ

ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ

ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗ ಬೇಕಾದ ಅನಿವಾರ್ಯ ಸಂದರ್ಭಗಳು ಬಂದಾಗ ಎಲ್ಲೋ ಉಳ್ಳವರು ತಮ್ಮದೇ ವಾಹನಗಳಲ್ಲಿಯೋ ಇಲ್ಲವೇ, ಬಾಡಿಗೆ ವಾಹನ ಮಾಡಿಕೊಂಡು ಹೋದರೆ ಬಹುತೇಕರು ವಿಧಿ ಸರ್ಕಾರಿ/ಖಾಸಗೀ ಬಸ್ ಇಲ್ಲವೇ ರೈಲುಗಳನ್ನು ಅವಲಂಭನೆ ಮಾಡಲೇ ಬೇಕಾಗುತ್ತದೆ. ಹಾಗೆ ಪರ ಊರಿಗೆ ಹೋಗುವಾಗ ಸಮಯ ಉಳಿಸುವ ಸಲುವಾಗಿ ಬಹುತೇಕರು ರಾತ್ರಿಯ ಪ್ರಯಾಣ ಮಾಡಲು ಇಚ್ಚಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಲೀಪರ್ ಅಥವಾ ಸೆಮಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಸೀಟ್ ಬುಕ್ ಮಾಡಿ, ರಾತ್ರಿ ತಮ್ಮ ಕೆಲಸವನ್ನು ಮುಗಿಸಿಕೊಂಡು ಊಟ… Read More ಸಹ ಪ್ರಯಾಣಿಕರೊಂದಿಗೆ ಎಚ್ಚರವಿರಲಿ