ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ

ದ್ವಾಪರಯುಗಾಂತ್ಯದಲ್ಲಿ ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆದು ಕೌರವರನ್ನು ಸೆದೆಬಡೆದ ಪಾಂಡವರು ತಮ್ಮ ರಾಜ್ಯವನ್ನು ಮರಳಿ ಪಡೆಯುತ್ತಾರೆ ಎಂಬುದನ್ನು ನಮ್ಮ ಪುರಾಣ ಗ್ರಂಥವಾದ ಮಹಾಭಾರತದಲ್ಲಿ ಓದಿರುತ್ತೇವೆ. ಆದರೆ ಮಹಾಭಾರತ ಎಂಬುದು ನಡದೇ ಇಲ್ಲ. ಅದೊಂದು ಕಟ್ಟು ಕಥೆ ಎನ್ನುವವರಿಗೆ ಉತ್ತರ ನೀಡುವಂತೆಯೇ ವರಸೆಯಲ್ಲಿ ಧೃತರಾಷ್ಟ್ರನ ತಮ್ಮ ಮತ್ತು ಆತನಿಗೆ ಆಪ್ತಸಲಹೆಗಾರ ಮತ್ತು ಮಂತ್ರಿಯಾಗಿದ್ದ ವಿದುರನು ಕೌರವರ ದುಷ್ಟ ಬುದ್ದಿಗೆ ಬೇಸತ್ತು, ಉತ್ತರ ಭಾರತದಿಂದ ದಕ್ಷಿಣ ಭಾರತ ಅದರಲ್ಲೂ ಕರ್ನಾಟಕದ ಮತ್ತು ಆಂಧ್ರ ಪ್ರದೇಶದ ಗಡಿಯಲ್ಲಿ ಉತ್ತರ… Read More ವಿದುರಾಶ್ವಥ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿ ದೇವಸ್ಥಾನ

ತಿರುಪತಿ ಹಿಂದೂಗಳ ಶ್ರದ್ಧಾ ಕೇಂದ್ರವೋ?  ಇಲ್ಲವೇ ವ್ಯಾಪಾರೀ ತಾಣವೋ?

ದೇವಸ್ಥಾನ ಅಥವಾ ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾಗಿರುವ ಸ್ಥಳವಾಗಿದ್ದು ಅಲ್ಲಿ ನಮ್ಮ ಸನಾತನ ಧರ್ಮದ  ಆಧಾರದಲ್ಲಿ ಪೂಜೆ ಪುನಸ್ಕಾರಗಳು ನಡೆಯುವ ಮೂಲಕ ಶ್ರದ್ಧಾ ಕೇಂದ್ರಗಳಾಗಿವೆ. ಭಕ್ತಾದಿಗಳು ದೇವಾಲಯಕ್ಕೆ ಹೋಗಿ ತಮ್ಮ ಶಕ್ತ್ಯಾನುಸಾರ ದೇವರನ್ನು ಪೂಜಿಸಿ ನೈವೇದ್ಯವನ್ನು ಅರ್ಪಿಸಿ ಯಥಾ ಶಕ್ತಿ ಕಾಣಿಕೆಯನ್ನು ಅರ್ಪಿಸಿ ಬರುತ್ತಾರೆ. ಇನ್ನು ದೇವಾಲಯಗಳೂ ಸಹಾ ಭಕ್ತರಿಂದ ಆ ರೀತಿಯಾಗಿ ಪಡೆದ ದೇಣಿಗೆಯಿಂದ ಭಕ್ತಾದಿಗಳಿಗೆ ದಿನ ನಿತ್ಯವೂ ದಾಸೋಹ ನಡೆಸುವುದಲ್ಲದೇ, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಹೋಮ ಹವನಗಳನ್ನು ನಡೆಸುತ್ತಾ,… Read More ತಿರುಪತಿ ಹಿಂದೂಗಳ ಶ್ರದ್ಧಾ ಕೇಂದ್ರವೋ?  ಇಲ್ಲವೇ ವ್ಯಾಪಾರೀ ತಾಣವೋ?

ಕೈದಾಳ ಶ್ರೀ ಚನ್ನಕೇಶವ

ಹೇಳೀ ಕೇಳಿ ಕರ್ನಾಟಕ ಶಿಲ್ಪಕಲೆಗಳ ತವರೂರಾಗಿದೆ. ಬೇಲೂರು ಹಳೇಬೀಡು ಶ್ರವಣ ಬೆಳಗೋಳ ಹಂಪೆಯಂತ ಪುಣ್ಯಕ್ಷೇತ್ರಗಳಲ್ಲಿ ಶಿಲ್ಪಿಗಳು ಕಲ್ಲಿನಲ್ಲಿ ಅರಳಿಸಿರುವ ಕೆತ್ತನೆಗಳು ಜಗತ್ರ್ಪಸಿದ್ಧವಾದರೆ, ಕರ್ನಾಟಕದ ಸಾವಿರಾರು ಊರುಗಳಲ್ಲಿ ಬೆಳಕಿಗೇ ಬಾರದಂತಹ ವೈಶಿಷ್ಟ್ಯತೆಯುಳ್ಳ ದೇವಾಲಯಗಳ ಸಂಖ್ಯೆ ಅಗಣಿತವಾಗಿದೆ. ನಾವಿದು ತುಮಕೂರಿನಿಂದ ಕೇವಲ 7 ಕಿ.ಮೀ ದೂರದಲ್ಲಿ ಅತ್ಯಂತ ಸುಂದರವಾದ ಹೊಯ್ಸಳ ಶೈಲಿಯ ಚನ್ನಕೇಶವನ ದೇವಾಲಯವಿರುವ ಕೈದಾಳದ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ. ಕಲ್ಪತರು ನಾಡು ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುವ ರಸ್ತೆಯಲ್ಲಿ ಸುಮಾರು 6 ಕಿ.ಮೀ ಪ್ರಯಾಣಿಸಿದಲ್ಲಿ ಎಡಗಡೆಗೆ ಇತಿಹಾಸ… Read More ಕೈದಾಳ ಶ್ರೀ ಚನ್ನಕೇಶವ

ಶ್ರೀ ಮಧ್ವಾಚಾರ್ಯರು

ನಮಗೆಲ್ಲರಿಗೂ ತಿಳಿದಿರುವಂತೆ 7ನೇ ಶತಮಾನದ ಸಮಯದಲ್ಲಿ ಬೌದ್ಧ ಮತ್ತು ಜೈನಮತಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಹಿಂದೂ ಧರ್ಮದ ಬಹುತೇಕರು ನಾನಾ ಕಾರಣಗಳಿಂದಾಗಿ ಮತಾಂತರವಾಗಿ ಹಿಂದೂಧರ್ಮದ ಅವಸಾನದತ್ತ ಸಾಗುತ್ತಿದ್ದಾಗ, ಆಚಾರ್ಯ ತ್ರಯರಾದ ಶಂಕರಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ನಮ್ಮ ದೇಶದಲ್ಲಿ ಹಿಂದೂ ಧರ್ಮದ ಪುನರುತ್ಥಾನ ಮಾಡಿದ ಸಂತರು ಎಂದರೂ ತಪ್ಪಾಗದು. ಶ್ರೀ ಶಂಕರಾಚಾರ್ಯರು ಅಹಂ ಬ್ರಹ್ಮಾಸ್ಮಿ ಎಂದು ಎಲ್ಲರಲ್ಲೂ ಭಗವಂತನು ಇದ್ದಾನೆ ಎಂಬ ಅದ್ವೈತ ತತ್ವವನ್ನು ಪ್ರತಿಪಾದಿಸಿದರೆ, ಶ್ರೀ ರಾಮಾನುಜಾಚಾರ್ಯರು ಹರಿಯೇ ಸರ್ವೋತ್ತಮ ಎಂಬ ವಿಶಿಷ್ಠಾದ್ವೈತವನ್ನು ಪ್ರತಿಪಾದಿಸಿದರು. ಕ್ರಿ.ಶ.1238 ರಲ್ಲಿ… Read More ಶ್ರೀ ಮಧ್ವಾಚಾರ್ಯರು

ಭೀಷ್ಮಾಷ್ಟಮಿ

ಇಂದು ಮಾಘ ಮಾಸದ ಶುದ್ಧ ಅಷ್ಟಮಿ. ಆಜೀವ ಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸುತ್ತೇನೆ ಎಂದು ಶಪಥ ಮಾಡಿ,  ಮಹಾಭಾರತದಲ್ಲಿ  ಅತ್ಯಂತ ಮಹತ್ತರವಾದ ಪಾತ್ರವನ್ನು ವಹಿಸಿ ಪಿತಾಮಹರೇ ಎನಿಸಿದ್ದ ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದ ಇಚ್ಛಾಮರಣಿಗಳಾಗಿ ತಮ್ಮ ಜೀವನವನ್ನು ತ್ಯಜಿಸಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾಯುತ್ತಿದ್ದ   ಶ್ರೀ ಭೀಷ್ಮಾಚಾರ್ಯರು ತಮ್ಮ ದೇಹತ್ಯಾಗವನ್ನು ಮಾಡಿದ ದಿನ ಹಾಗಾಗಿ ಈ ದಿನವನ್ನು ಭೀಷ್ಮಾಷ್ಟಮಿ  ಎಂದೂ ಕರೆಯಲಾಗುತ್ತದೆ. ಮಹಾಭಾರತದಲ್ಲಿ ಶಂತನು ಮತ್ತು ಗಂಗಾದೇವಿಯ ಪುತ್ರನಾಗಿ ಜನಿಸಿದ್ದ ದೇವವ್ರತ ಸಹಜವಾಗಿಯೇ ಶಂತನುವಿನ ಉತ್ತರಾಧಿಕಾರಿಗಳಾಗಿರುತ್ತಾರೆ. ವಯಸ್ಸಿಗೆ ಬಂದ ಮಗನಿದ್ದರೂ… Read More ಭೀಷ್ಮಾಷ್ಟಮಿ

ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ

ಏಳನೇ ಶತಮಾನದಲ್ಲಿ ಬೌದ್ಧ ಮತ್ತು ಜೈನಮತಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದು ನಾನಾ ಕಾರಣಗಳಿಂದಾಗಿ ಹಿಂದೂಧರ್ಮದ ಅನೇಕರು ಮತಾಂತರಗೊಂಡು ಹಿಂದೂ ಧರ್ಮದ ಅವಸಾನವಾಗಲಿದೇ ಎಂದೇ ಕಳವಳಗೊಂಡಿದ್ದಾಗ,  ಹಿಂದೂ ಧರ್ಮದ ಪುನರುತ್ಥಾನಕ್ಕೆ ಆ ಭಗವಂತನೇ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಎಂಬ ಆಚಾರ್ಯತ್ರಯರ ಮೂಲಕ ಮನುಷ್ಯ ಸ್ವರೂಪವಾಗಿ ಭಾರತದಲ್ಲಿ ಹುಟ್ಟಿ ಬಂದು ಸನಾತನ ಧರ್ಮದ ಬಗ್ಗೆ ಇದ್ದ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ ಸನಾತನಧರ್ಮವನ್ನು ಸರಳೀಕರಿಸಿ ಮತ್ತೆ ನಮ್ಮ ದೇಶದಲ್ಲಿ ಹಿಂದೂ ಧರ್ಮ ತಲೆ ಎತ್ತುವಂತೆ ಮಾಡಿದ ಮಹಾನುಭಾವರು. ಕ್ರಿ.ಶ 788 ರಲ್ಲಿ… Read More ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ

ಮೃಗವಧೆ

ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಹೆಸರಿನೊಂದಿಗೆ ಇರುವ ಉಪನಾಮಗಳು ಇಲ್ಲವೇ ಅವರ ಊರಿನ ಹೆಸರು ಒಂದೊಂದು ಇತಿಹಾಸವನ್ನು ಹೇಳುತ್ತವೆ. ದುರಾದೃಷ್ಟವಷಾತ್ ನಾವು ಆ ಊರಿನ ಹೆಸರು ಮತ್ತು ಇತಿಹಾಸವನ್ನು ತಿಳಿದುಕೊಳ್ಳದೇ ಅವುಗಳನ್ನು ಬದಲಾಯಿಸಲು ಮುಂದಾಗಿರುವುದು ವಿಪರ್ಯಾಸವೆನಿಸುತ್ತದೆ. ಇತ್ತೀಚೆಗೆ ನನಗೆ ಪರಿಚಿತರಾದ ಗೆಳೆಯರೊಬ್ಬರ ಹೆಸರಿನೊಂದಿಗೆ ಮೃಗವಧೆ ಎಂದಿದ್ದದ್ದನ್ನು ಕೇಳಿದಾಗ ನನ್ನ ಕಿವಿಗಳು ಚುರುಕಾಗಿ ಅವರ ಊರಿನ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದಾಗಲೇ ನಮ್ಮ ದೇಶದಲ್ಲಿ ನಡೆದ ಮತ್ತು ಈಗ ಅವುಗಳನ್ನು ಕಥೆಗಳ ರೂಪದಲ್ಲಿ ಓದುತ್ತಿರುವ ರಾಮಾಯಣ ಮತ್ತು ಮಹಾಭಾರತದ ಬಗ್ಗೆ… Read More ಮೃಗವಧೆ

ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ

ನಮ್ಮ ಸನಾತನ ಧರ್ಮದಲ್ಲಿ ನಮಗೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತಹ ಅಧ್ಭುತವಾದ ಪುರಾಣ ಪುಣ್ಯ ಗ್ರಂಥಗಳು ಮತ್ತು  ಕಥೆಗಳೇ ಪವಿತ್ರವಾಗಿದ್ದು ಅದರ ಆಧಾರದಲ್ಲಿ ನಮ್ಮ ಜೀವನ ಪದ್ದತಿಯನ್ನು ರೂಡಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಕೆಲವರು ಈ ರೀತಿಯ ಪುರಾಣ ಪುಣ್ಯ ಕಥೆಗಳೆಲ್ಲವೂ  ಕೇವಲ ಕಾಲ್ಪನಿಕ ಕಥೆಯಷ್ಟೇ ಆ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡದೇ ಇಲ್ಲಾ ಎನ್ನುವ ವಿತಂಡ ವಾದವೂ ಇದೆ. ಆದರೆ  ಇಂತಹವರಿಗೆ ಸೂಕ್ತವಾದ ಉತ್ತರವನ್ನು ನೀಡಬಹುದಾದ ಮತ್ತು  ಜಗತ್ತಿನಲ್ಲಿ ಅತಿ ವಿರಳವಾಗಿ ಕಂಡು ಬರುವ… Read More ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ

ಕೂರ್ಮಗಢ ಶ್ರೀ ನರಸಿಂಹ ಸ್ವಾಮಿ

ಹಿರಣ್ಯಕಷಿಪುವಿನ ಮಗ ಮಗ ಪ್ರಹ್ಲಾದ ಭಗವಾನ್ ವಿಷ್ಣು ಸರ್ವಾಂತರ್ಯಾಮಿ. ಆತ ಎಲ್ಲೆಡೆಯಲ್ಲಿಯೂ ಇದ್ದಾನೆ ಎನ್ನುತ್ತಾನೆ. ಆಗ ಕೋಪಗೊಂಡ ಹರಿಯ ವೈರಿ ಹಿರಣ್ಯಕಶಿಪು ಆ ನಿನ್ನ ಹರಿ ಇಲ್ಲಿರುವನೇ? ಅಲ್ಲಿರುವನೇ, ಆಕಾಶದಲ್ಲಿ ಇರುವನೇ, ಭೂಮಿಯಲ್ಲಿ ಇರುವನೇ ನೀರಿನಲ್ಲಿ ಇರುವನೇ? ಎಂದು ಕೇಳಿದಾಗ ಹೌದು ತಂದೆ ಆ ಹರಿ ಎಲ್ಲೆಲ್ಲೂ ಇದ್ದಾನೆ ಎಂದಾಗ ಸಿಟ್ಟಿನಲ್ಲಿ ತನ್ನ ಅರಮನೆಯ ಕಂಬವನ್ನು ತೋರಿಸಿ ಇಲ್ಲಿರುವನೇ ನಿನ್ನ ಹರಿ ಎಂದು ಆ ಕಂಭಕ್ಕೆ ಹೊಡೆದಾಗ ಆ ಕಂಬದಿಂದ ಹರಿ ನರಸಿಂಹಾವತಾರದಲ್ಲಿ ಬಂದು ಹಿರಣ್ಯಕಶಿಪುವನ್ನು ಸಾಯಿಸಿದ… Read More ಕೂರ್ಮಗಢ ಶ್ರೀ ನರಸಿಂಹ ಸ್ವಾಮಿ