ಆರ್.ಟಿ.ಓ. ಆಫೀಸ್ ಅವಾಂತರ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನನ್ನ ವಾಹನ ಪರವಾನಗಿಯನ್ನು ನವೀಕರಿಸಬೇಕಿತ್ತು. ದುರಾದೃಷ್ಟವಷಾತ್ ಕರೋನಾಕ್ಕೆ ತುತ್ತಾಗಿ ಆರು ವಾರಗಳ ಕಾಲ ಮನೆಯಿಂದ ಹೊರಗೇ ಬಾರದ ಕಾರಣ, ನವೀಕರಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರವೂ ಸಹಾ ಇಂತಹ ಪರಿಸ್ಥಿತಿಯನ್ನು ಅರಿತುಕೊಂಡೇ ಪರವಾನಗಿಯ ಅವಧಿ ಮುಗಿದ್ದರೂ ನವೀಕರಿಸಲು ಆರು ತಿಂಗಳುಗಳ ಕಾಲ ಅನುಮತಿ ನೀಡಿತ್ತು. ಡಿಸಂಬರ್ ತಿಂಗಳಿನಲ್ಲಿ ಪರವಾನಗಿಯನ್ನು ನವೀಕರಿಸಲು online ಮುಖಾಂತರವೇ ಪ್ರಯತ್ನಿಸಬೇಕು ಎಂಬ ಹೊಸಾ ನಿಯಮದಂತೆ https://parivahan.gov.in/parivahan/ ವೆಬ್ ಸೈಟಿಗೆ ಹೋಗಿ ನನ್ನ ಲೈಸೆನ್ಸ್ ನಂಬರ್ ಎಂಟರ್ ಮಾಡಿದರೆ, ನನ್ನ ನಂಬರ್… Read More ಆರ್.ಟಿ.ಓ. ಆಫೀಸ್ ಅವಾಂತರ

ರೈತರ ಟ್ರಾಕ್ಟರ್ ಪೆರೇಡ್

ಕಳೆದ ಎರಡು ವರ್ಷಗಳಿಂದ ವಿದ್ಯಾರಣ್ಯಪುರದಲ್ಲಿ ಸ್ವದೇಶೀ ಜಾಗರಣ ಮಂಚ್ ಆಶ್ರಯದಲ್ಲಿ ಸಾವಯವ ಸಂತೆಯನ್ನು ನಡೆಸಿಕೊಂಡು ಹೋಗುವ ಸೌಭ್ಯಾಗ್ಯ ವಯಕ್ತಿಕವಾಗಿ ನನಗೆ ಲಭಿಸಿದೆ. ಸಾವಯವ ಕೃಷಿಯಾಧಾರಿತವಾಗಿ ಬೆಳೆದ ಬಗೆಬೆಗೆಯ ತರಕಾರಿಗಳು, ಸೊಪ್ಪುಗಳು ಮತ್ತು ಹಣ್ಣುಗಳನ್ನು ರೈತರೇ ಯಾವುದೇ ಮಧ್ಯವರ್ತಿಗಳ ನೆರವೆಲ್ಲದೇ ನೇರವಾಗಿ ಗ್ರಾಹಕರುಗಳಿಗೆ ಮಾರಾಟ ಮಾಡುವ ವೇದಿಕೆಯನ್ನು ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರು ತಾಜಾ ತಾಜ ಮತ್ತು ನಿಜವಾಗಿಯೂ ಸಾವಯವವಾಗಿ ಬೆಳೆದದ ಕೃಷಿ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸುವ ಮೂಲಕ ರೈತರಿಗೆ ಅಧಿಕ ಲಾಭಗಳಿಸಲು ಸಹಾಯ ಮಾಡುತ್ತಿದ್ದಾರೆ. ರೈತರು, ಈ… Read More ರೈತರ ಟ್ರಾಕ್ಟರ್ ಪೆರೇಡ್

ಸ್ವಾಮಿ ಹರ್ಷಾನಂದರು

ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ 3 ನೇ ರ‌್ಯಾಂಕ್ ಮತ್ತು ಹನ್ನೆರಡನೇ ತರಗತಿಯಲ್ಲಿ ರಾಜ್ಯಕ್ಕೆ 5 ನೇ ರ‌್ಯಾಂಕ್ ಪಡೆದ ನಂತರ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗಿನಲ್ಲಿ ಚಿನ್ನದ ಪದಕದೊಂದಿಗೆ ಮೊದಲನೇ ರ‌್ಯಾಂಕ್ ಗಳಿಸಿ ಕೈತುಂಬ ಸಂಬಳ ತರುವ ಹೆಚ್.ಎ.ಎಲ್ ಕಾರ್ಖಾನೆಯನ್ನು ಸೇರಿದ ಎರಡೇ ವಾರಗಳಲ್ಲಿ ಎಲ್ಲವನ್ನೂ ತ್ಯಜಿಸಿ, ಉಟ್ಟ ಬಟ್ಟೆಯಲ್ಲಿಯೇ ರಾಮಕೃಷ್ಣ ಆಶ್ರಮ ಸೇರಿ, ಕಾವಿ ನಿಲುವಂಗಿಯನ್ನು ಧರಿಸಿ ಧೀರ ಸನ್ಯಾಸಿಗಳಾಗಿ ನಂತರ ಸ್ವಾಮಿ ಹರ್ಷಾನಂದರಾಗಿ ದೇಶಾದ್ಯಂತ ರಾಮಕೃಷ್ಣ ಆಶ್ರಮದ ವಿವಿಧ ಶಾಖೆಗಳಲ್ಲಿ… Read More ಸ್ವಾಮಿ ಹರ್ಷಾನಂದರು

ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಈ ವರ್ಷದದ ಆರಂಭದಲ್ಲಿ ಪ್ರಪಂಚಾದ್ಯಂತ ಧುತ್ತೆಂದು ಕಾಣಿಸಿಕೊಂಡ ಕರೋನ ಮಹಾಮಾರಿಯನ್ನು ತಡೆಗಟ್ಟಲು ಮೊದಲ ಮೂರ್ನಾಲ್ಕು ತಿಂಗಳುಗಳ ಕಾಲ ಲಾಕ್ಡೌನ್ ಮಾಡಿದ ನಂತರ ಪರಿಸ್ಥಿತಿ ತಹಬಂದಿಗೆ ಬಾರದ್ದದರೂ, ಆರ್ಥಿಕವಾಗಿ ಎಲ್ಲರನ್ನೂ ಹೈರಾಣು ಮಾಡಿದ ಫಲವಾಗಿ ಸರ್ಕಾರವೂ ಕೆಲವೊಂದು ಕಠಿಣ ನಿರ್ಣಯಗಳನ್ನು ತೆಗೆದುಕೊಂಡು ಜನ ಸಾಮಾನ್ಯರು ಸಾಮಾನ್ಯ ಸ್ಥಿತಿಗೆ ಬರುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಹಾಗೆ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡುವುದು,‌ನಮ್ಮ ಸುತ್ತ ಮುತ್ತಲಿನ ಸ್ವಚ್ಚತೆ ಕಾಪಾಡುವುದು ಮತ್ತು ಸಾರ್ವಜನಿಕವಾಗಿ ಒಬ್ಬರು ಗೊಬ್ಬರು ಅಂತರವನ್ನು ಕಾಪಾಡಿಕೊಳ್ಳುವುದು ಎಂದಿತ್ತು. ಸರ್ಕಾರ… Read More ದಂಡವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇ?

ಈ ಸಾವಿಗೆ ಹೋಣೆಗಾರರು ಯಾರು?

ಇಂದು ಬೆಳ್ಳಂಬೆಳಿಗ್ಗೆ ವ್ಯಾಯಾಮವನ್ನು ಮುಗಿಸಿ, ಏನಪ್ಪಾ ಇವತ್ತಿನ ವಿಷಯ ಎಂದ ಮೊಬೈಲ್ನಲ್ಲಿ ವಾರ್ತೆಗಳನ್ನು ನೋಡುತ್ತಿದ್ದಂತೆ ಎದೆ ಧಸಕ್ ಎಂದಿತು. ಕೆಲ ದಿನಗಳವರೆಗೂ ಚಿಕ್ಕಮಗಳೂರಿನ ಹೊರಗೀನಾಚೆ ಆಷ್ಟೇನೂ ಪರಿಚಯವಿರದಿದ್ದ ವಿಧಾನ ಪರಿಷತ್ ಉಪ ಸಭಾಪತಿಗಳಾಗಿದ್ದ ಶ್ರೀ ಎಸ್.ಎಲ್. ಧರ್ಮೇಗೌಡ ಅವರು ನೆನ್ನೆ ರಾತ್ರಿ ಕಡೂರು ತಾಲ್ಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಓದಿ ನಿಜಕ್ಕೂ ಬೇಸರವೆನಿಸಿತು. ಮೂಲತಃ ಕಡೂರು ತಾಲೂಕು ಸಖರಾಯಪಟ್ಟಣ ಸಮೀಪದ ಸರಪನಹಳ್ಳಿಯವರಾಗಿದ್ದ, ಬೀರೂರಿನ ಮಾಜೀ ಶಾಸಕ ಲಕ್ಷ್ಮಯ್ಯನವರ ಪುತ್ರರಾಗಿ ರಾಜಕೀಯ… Read More ಈ ಸಾವಿಗೆ ಹೋಣೆಗಾರರು ಯಾರು?

ಜಾತ್ಯಾತೀತತೆ

ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಎಲ್ಲಾ ಡಾಟ್ ಕಾಂ ಕಂಪನಿಗಳು ಇದ್ದಕ್ಕಿಂದ್ದಂತೆಯೇ ಕುಸಿದು ಹೋಗಿ ಅನೇಕ ಉದ್ಯೋಗಸ್ಥರು ರಾತ್ರೋ ರಾತ್ರಿ ನಿರುದ್ಯೋಗಿಗಳಾಗಿ ಹೋಗಿದ್ದರು. ಸುಮಾರು ಐದಾರು ತಿಂಗಳುಗಳ ಕಾಲ ಚೇತರಿಸಿಕೊಂಡು ಒಂದೊಂದೇ ಸಣ್ಣ Startups ಕಂಪನಿಗಳು ಆರಂಭವಾಗಿದ್ದ ಕಾಲ. ಭಾರತೀಯರೇ ಆದರಲ್ಲೂ ಹಿಂದೂಗಳೇ ಆಗಿದ್ದವರೊಬ್ಬರು ಸುಮಾರು ವರ್ಷಗಳ ಕಾಲ ಅಮೇರೀಕಾದಲ್ಲಿ ಉದ್ಯೋಗ ಮಾಡುತ್ತಲೇ ಅಲ್ಲಿಯೇ ಒಂದು ಕಂಪನಿಯೊಂದನ್ನು ಆರಂಭಿಸಿ, ಬೆಂಗಳೂರಿನಲ್ಲಿ ತಮ್ಮ ಮತ್ತೊಂದು Indian MNC ಶಾಖೆಯೊಂದರನ್ನು ಜೂನ್ ತಿಂಗಳಿನಲ್ಲಿ ಆರಂಭಿಸಿದ ಕಾಲದಲ್ಲಿ ನಾನು ಆ… Read More ಜಾತ್ಯಾತೀತತೆ

ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಇಡೀ ದೇಶದಲ್ಲಿ ಕಮಲವನ್ನು ಅರಳಿಸುವುದು ಒಂದು ರೀತಿಯಾದರೇ, ದಕ್ಷಿಣ ಭಾರತದ ಕೇರಳ ಮತ್ತು ಪೂರ್ವ ಭಾಗದ ಪಶ್ಚಿಮ ಬಂಗಳದ್ದೇ ಒಂದು ಸಾಹಸ ಗಾಥೆ. ಕೇರಳದಲ್ಲಿ ಕಮ್ಯೂನಿಷ್ಟರ ಕಾಟವಾದರೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರ ತದ್ರೂಪಾಗಿರುವ ತೃಣಮೂಲ ಕಾಂಗ್ರೇಸ್ಸಿಗರ ಜೊತೆಗಿನ ಹೋರಾಟ. ತಲೆ ತಲಾಂತರಗಳಿಂದಲೂ ಎರಡೂ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಮತ್ತೊಂದು ಘನ ಘೋರ ದುರ್ದೈವವೇ ಸರಿ. ಈ ಎರಡೂ ರಾಜ್ಯಗಳಲ್ಲಿರುವ ಹಿಂದೂಗಳು ಪರಮ ದೈವ ಭಕ್ತರಾದರೂ, ರಾಜಕೀಯವಾಗಿ ಅದೇಕೋ ಕಮ್ಯೂನಿಷ್ಟರನ್ನು… Read More ಕಮ್ಯೂನಿಸ್ಟ್ ಕೇರಳದಲ್ಲೂ ಕಮಲದ ಕಲರವ

ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ದಿನಕಳೆದಂತೆ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮನುಷ್ಯರಿಗೆ ಭೂಮಿಯ ಮೇಲಿನ ಆಸೆ ಹೆಚ್ಚಾದಂತೆಲ್ಲಾ ನಮ್ಮ ಪೂರ್ವಜರು ನೆಟ್ಟು ಹೋಗಿದ್ದ ಅಥವಾ ಸ್ವಾಭಾವಿಕವಾಗಿಯೇ ನೆಟ್ಟಿದ್ದ ಗಿಡ, ಮರ ಮತ್ತು ಕಾಡುಗಳನ್ನೆಲ್ಲಾ ಕಡಿದು ನಾಡು ಮಾಡುತ್ತಿದ್ದಂತೆಯೇ ಪ್ರಾಕೃತಿಕ ವ್ಯವಸ್ಥೆಗಳು ವೆತ್ಯಾಸವಾಗಿ ಕಾಲ ಕಾಲಕ್ಕೆ ಮಳೆ ಬೆಳೆ ಸರಿಯಾಗಿ ಆಗದೇ ಇದ್ದಾಗ ಗಿಡಿ ನೆಡಿ, ಮರ ಬೆಳೆಸಿ ವನ್ಯ ಸಂಪತ್ತನ್ನು ಉಳಿಸಿ ಎನ್ನುತ್ತಾ ಆಗ್ಗಾಗ್ಗೇ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚುಮಾಡಿ ವನ ಮಹೋತ್ಸವ ಮಾಡಿ ಕಾಟಾಚಾಕಕ್ಕೆ ಕೆಲವೊಂದು ಗಿಡಗಳನ್ನು ನೆಟ್ಟು ಫೋಟೋಗಳನ್ನು ತೆಗೆಸಿಕೊಂಡು… Read More ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ಮದುವೆ ಮತ್ತು ಸಾಮಾಜಿಕ ಜಾಲತಾಣ

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ತುಂಬಾನೇ ವೈರಲ್ ಆಗಿತ್ತು. ಈ ವಯಸ್ಸಿನಲ್ಲಿ ಈ ಮುದುಕನಿಗೆ ಅಷ್ಟು ಚಿಕ್ಕ ವಯಸ್ಸಿನ ಹುಡುಗಿಯೊಂದಿಗೆ ಮದುವೆ ಬೇಕಿತ್ತಾ? ಅರವತ್ತಕ್ಕೆ ಮೂವತ್ತರ ಆಸೆಯೇ?, ಚಪಲ ಚೆನ್ನಿಗರಾಯ, ದುಡ್ಡಿದ್ದವರು ಅಮಾಯಕ ಹೆಣ್ಣು ಮಕ್ಕಳ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ? ಹೀಗೇ ಹಾಗೇ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಆದರೆ ಈ ಮದುವೆಯ ಹಿಂದೆ ಇದ್ದ ಅಸಲೀ ಕಾರಣ ತಿಳಿದ ಮೇಲೆ ಬಹುತೇಕರು ಆ ವಯಸ್ಸಾದವರನ್ನು ಹಾಡಿ ಹೊಗಳಿದ ಕಥೆ… Read More ಮದುವೆ ಮತ್ತು ಸಾಮಾಜಿಕ ಜಾಲತಾಣ