ನೂಲಿನಂತೆ ಸೀರೆ ತಾಯಿಯಂತೆ ಮಗಳು

ತಾಯಿ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿ, ಮಗಳು ಇಂಗ್ಲೇಂಡಿನ ಪ್ರಧಾನ ಮಂತ್ರಿಯ ಪತ್ನಿಯಾಗಿ ಇಂಗ್ಲೇಂಡಿನ ದೇಶದ ಪ್ರಥಮ ಮಹಿಳೆ. ಅವರಿಬ್ಬರು ಅಷ್ಟು ದೊಡ್ಡ ಗಣ್ಯ ಮಹಿಳೆಯರಾಗಿದ್ದರೂ ಮೊನ್ನೆ ರಾಷ್ಟ್ರಪತಿಗಳ ಭವನದಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಅನನ್ಯ, ಅದ್ಭುತ ಮತ್ತು ಅನುಕರಣಿಯ. ಅಮ್ಮಾ ಮಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ನೂಲಿನಂತೆ ಸೀರೆ ತಾಯಿಯಂತೆ ಮಗಳು

ನಂದಿನಿ ಮತ್ತು ಅಮುಲ್ ವಾಸ್ತವ ಚಿತ್ರಣ

ಕಳೆದ ಡಿಸೆಂಬರ್ ನಲ್ಲಿ ಮನ್ ಮೂಲ್ ಕಾರ್ಯಕ್ರಮಕ್ಕಾಗಿ ಮಂಡ್ಯಾಕ್ಕೆ ಆಗಮಿಸಿದ್ದ ದೇಶದ ಗೃಹಮಂತ್ರಿಗಳಾದ ಅಮಿತ್ ಶಾ, 1970ರಲ್ಲಿ ಕೇರಳ ಮೂಲದ ವರ್ಗೀಸ್_ಕುರಿಯನ್ ಗುಜರಾತಿನಲ್ಲಿ ಯಾವುದೇ ಜಾತಿ ಮತ ಪಂಥಗಳ ಯಾವದೇ ರಾಗ ದ್ವೇಷವಿರದೇ ಅಮೂಲ್ ಎಂಬ ಸಹಕಾರಿ ಸಂಘದ ಮೂಲಕ ಗುಜರಾತ್ ನಲ್ಲಿ ಕಳೆದ ಐದು ದಶಕಗಳಿಂದಲೂ ಈ ದೇಶದಲ್ಲಿ ಕ್ಷೀತ್ರಕ್ರಾಂತಿಯನ್ನುಂಟು ಮಾಡಿದ್ದನ್ನು ಹೊಗಳುತ್ತಾ, ಅದೇ ರೀತಿ ದೇಶದಲ್ಲಿ ಹಾಲಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ KMF ನಂದಿನಿ ಎರಡೂ ಸಹಾ ಪರಸ್ಪರ ಸಹಯೋಗದೊಂದಿಗೆ ಹೋದಲ್ಲಿ ಈ ದೇಶದಲ್ಲಿ… Read More ನಂದಿನಿ ಮತ್ತು ಅಮುಲ್ ವಾಸ್ತವ ಚಿತ್ರಣ

ಸ್ವಯಂಕೃತ ಅಪರಾಧ

https://enantheeri.com/2023/03/25/rahul_ghandhi/

ಉಗುರಿನಲ್ಲಿ ಚಿವುಟಿ ಹಾಕಬಹುದಾಗಿದ್ದದ್ದಕ್ಕೆ ಕೊಡಲಿಯನ್ನು ತೆಗೆದುಕೊಂಡರು ಎನ್ನುವಂತೆ, ರಾಹುಲ್ ಗಾಂಧಿ ತನ್ನ ಸಡಿಲ ನಾಲಿಕೆ, ಸ್ವಪ್ರತಿಷ್ಟೆ, ಅಹಂಮಿಕೆ ಮತ್ತು ಈ ಪ್ರಕರಣದ ಗಂಭೀರತೆ ಅರಿಯದೇ ಉಡಾಫೆ ತನದಿಂದ ಸ್ವಯಂ ಕೃತ ಅಪರಾಧವಾಗಿ ಮಾದಿದ್ದುಣ್ಣೋ ಮಹರಾಯ ಎನ್ನುವಂತೆ ಶಿಕ್ಷ ಅನುಭವಿಸಬೇಕಾಗಿದೆಯೇ ಹೊರತು ಬಿಜೆಪಿ, ಕೇಂದ್ರ ಸರ್ಕಾರ ಮೋದಿಯವರ ಮೇಲೆ ಹರಿ ಹಾಯುತ್ತಿರುವುದು ಹಾಸ್ಯಾಸ್ಪದವಾಗಿದೆ ಅಲ್ವೇ?… Read More ಸ್ವಯಂಕೃತ ಅಪರಾಧ

ಐಎಡಿಎಂಕೆ ಜೊತೆ ಮೈತ್ರಿ ಆದರೆ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?

ಯಾವುದೇ ವಿದ್ಯಾರ್ಹತೆ ಇಲ್ಲದೇ, ಅಕ್ರಮ ಸಂಪಾದನೆಯ ಹಣದಿಂದಲೋ, ಕುಟುಂಬ ರಾಜಕಾರಣದಿಂದಲೋ ರಾಜಕೀಯಕ್ಕೆ ಬಂದು ಅಕ್ರಮವಾಗಿ ಅಸ್ತಿ ಸಂಪಾದನೆ ಮಾಡುವವರ ನಡುವೆ ವಿದ್ಯಾವಂತರಾಗಿ, ಐಪಿಎಸ್ ಅಧಿಕಾರಿಗಳಾಗಿದ್ದಂತಹವರು, ದೇಶದ ಹಿತದೃಷ್ಟಿಯಿಂದ ಶುದ್ಧವಾದ ರಾಜಕೀಯ ಮಾಡಲು ಬಂದಿರುವಂತಹ, ಪ್ರಾಮಾಣಿಕ ಮತ್ತು ದೂರದರ್ಶಿತ್ವ ಹೊಂದಿರುವಂತಹ ನಾಯಕರುಗಳ ಕೈ ಬಲ ಪಡಿಸುವುದು ಪ್ರತಿಯೊಬ್ಬ ಜವಾಬ್ಧಾರೀ ನಾಗರೀಕರ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?
Read More ಐಎಡಿಎಂಕೆ ಜೊತೆ ಮೈತ್ರಿ ಆದರೆ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?

ಅಟ್ಟ ಹತ್ತಿದ ನಂತರ ಏಣಿಯ ಹಂಗೇಕೇ?

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು, ಈ ಹುಟ್ಟು ಬೆಂಗಳೂರಿಗನಿಗೆ, ಕನ್ನಡದಲ್ಲಿ ಮಾತನಾಡಿ ಎಂದಿದ್ದೇ ಅಪಮಾನ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ, ಕನ್ನಡ ಮತ್ತು ಕನ್ನಡಿಗರಿಗೆ ಅವಮಾನ ಮಾಡಿದ್ದರೂ, ಇಂದೀ ಏರಿಕೆ ಹೆಂದು ಹಬ್ಬರಿಸುವ ಉಟ್ಟು ಖನ್ನಡ ಓಲಾಟಗಾರರು ಮತ್ತು ಪ್ರತಿಯೊಂದರಲ್ಲೂ ನಂದೆಲ್ಲಿಡ್ಲೀ ನಂದ ಗೋಪಾಲ ಎಂದು ಮೂಗು ತೂರಿಸುವ Just As(s)king ನಟ ಪ್ರಕಾಶ್ ರೈ ಇದುವರೆವಿಗೂ ಚಕಾರ ಎತ್ತದೇ ಇರುವುದು ಅನೇಕ ಅನುಮಾನಗಳಿಗೆ ಏಡೆ ಮಾಡಿಕೊಡುತ್ತಿದೆ.

ಏನಂತೀರೀ?… Read More ಅಟ್ಟ ಹತ್ತಿದ ನಂತರ ಏಣಿಯ ಹಂಗೇಕೇ?

ಮನೆಗೆ ಮಾರಿ ನೆರ ಮನೆಗೆ ಉಪಕಾರಿ

ವ್ಯಕ್ತಿ ಇಂದು ಇರುತ್ತಾನೆ ನಾಳೆ ಸತ್ತು ಹೊಗುತ್ತಾನೆ? ಅದರೆ ದೇಶ ನೆನ್ನೆ ಇತ್ತು. ಇಂದು ಇದೆ ಮತ್ತು ನಾಳೆಯೂ ಇರುವ ಕಾರಣ, ನಮ್ಮ ನಿಷ್ಟೆ ಮತ್ತು ಭಕ್ತಿ ಎಂದಿಗೂ ವ್ಯಕ್ತಿ ಕೇಂದ್ರೀಕೃತವಾಗದೇ ಅದು ದೇಶದ ಕುರಿತಾಗಿ ಇರಬೇಕು. ತನ್ನ ಸ್ವಾರ್ಥಕ್ಕಾಗಿ ಅದರಲ್ಲೂ ಅಧಿಕಾರದ ಅಸೆಗಾಗಿ ವಿದೇಶಗಳಲ್ಲಿ ಭಾರತದ ಮಾನವನ್ನು ಇಲ್ಲ ಸಲ್ಲದ ರೀತಿ ಹರಾಜು ಹಾಕುವಂತಹ ವ್ಯಕ್ತಿಗಳು ನಮ್ಮ ನಾಯಕರಾಗಿರಲು ಎಷ್ಟು ಅರ್ಹರು? ನಮಗೆ ದೇಶ ಮುಖ್ಯವೋ? ಇಂತಹ ವ್ಯಕ್ತಿ ಮುಖ್ಯವೋ?

ನಮಗೇನಿದ್ದರೂ, Nation first. Everything is next. ನಿಮಗೇ??… Read More ಮನೆಗೆ ಮಾರಿ ನೆರ ಮನೆಗೆ ಉಪಕಾರಿ

ಜನರ ದಿಕ್ಕು ತಪ್ಪಿಸುವ ಸಮಯ ಸಾಧಕತೆ

ಇನ್ನು ದಿನೇ ದಿನೇ ಹದಗೆಡುತ್ತಿರುವ ಆರೋಗ್ಯದ ಜೊತೆ, ಜಟಿಲವಾಗುತ್ತಿರುವ ಕುಟುಂಬ ಕಲಹದ ಒತ್ತಡದಲ್ಲಿ ಕುಮಾರಸ್ವಾಮಿಯವರ ಮಾನಸಿಕ ಸ್ಥಿಮಿತ ದಿನೇ ದಿನೇ ಕುಂಠಿತವಾಗುತ್ತಾ, ತಮ್ಮ ತಟ್ಟೆಯಲ್ಲೇ ದೊಡ್ಡ  ಹೆಗ್ಗಣ ಸತ್ತು ಬಿದ್ದು ನಾತ ಬೀರುತ್ತಿದ್ದರೂ,ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿ ತೋರಿಸುವ ಮೂಲಕ ಹಾಸ್ಯಾಸ್ಪದ ವ್ಯಕ್ತಿ ಆಗ್ತಾ ಇದ್ದಾರೆ ಅಲ್ವೇ?… Read More ಜನರ ದಿಕ್ಕು ತಪ್ಪಿಸುವ ಸಮಯ ಸಾಧಕತೆ

ಹಿತ್ತಲ ಗಿಡ ಮದ್ದಲ್ಲ

ಸತತವಾಗಿ ಹತ್ತು ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಯಲ್ಲೇ ಕಳೆದು 75ವರ್ಷಗಳ ಹಿಂದೆ ಸ್ವತಂತ್ರ ದೇಶವಾದರೂ, ಇಂದಿಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಭಾರತೀಯರಾದ ಅದಾನಿ, ಅಂಬಾನಿ, ರಾಮ್ ದೇವ್, ಮಹೇಂದ್ರ, ಟಿವಿಎಸ್ ಸುಂದರಂ ಅವರ ಹೆಸರುಗಳನ್ನು ಕೇಳುತ್ತಿದ್ದಂತೆಯೇ ಕೆಲವರು ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಎಲ್ಲಿಲ್ಲದ ಆಕ್ರೋಶ ಮತ್ತು ಪ್ರತಿರೋಧ ವ್ಯಕ್ತಪಡಿಸುವುದು ನಿಜಕ್ಕೂ ವಿಪರ್ಯಾಸ ಎನಿಸುತ್ತದೆ. ಇಲ್ಲಿ ಯಾರನ್ನೂ ಸಮರ್ಥನೆ ಮಾಡಿಕೊಳ್ಳದೇ ವಸ್ತುನಿಷ್ಟ ವಿಷಯದ ಪ್ರಸ್ತುತಿ ಇದೋ ನಿಮಗಾಗಿ… Read More ಹಿತ್ತಲ ಗಿಡ ಮದ್ದಲ್ಲ

ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!

ಪ್ರಪಂಚದಾದ್ಯಂತ ಇರುವ 196 ದೇಶಗಳಲ್ಲಿ ಸುಮಾರು 7,117 ಭಾಷೆಗಳಲ್ಲಿ ಮಾತನಾಡುತ್ತಾರೆ. ಭಾರತದಲ್ಲಿ ಸುಮಾರು 700ಕ್ಕೂ ಹೆಚ್ಚು ಭಾಷೆಗಳಿದ್ದು 22 ಅಧಿಕೃತ ಭಾಷೆಗಳಿದ್ದು, 2000ಕ್ಕೂ ಹೆಚ್ಚಿನ ಉಪಭಾಷೆಗಳಿದ್ದು, ವಿಶಾಲವಾದ ಭಾಷಾ ಸಂಪತ್ತನ್ನು ಹೊಂದಿದ್ದರೂ, ಬ್ರಿಟೀಷರ ದಾಸ್ಯದ ಸಂಕೇತವಾಗಿರುವ ಇಂಗ್ಲೀಷ್ ಭಾಷೆಯನ್ನೇ ಇಂದಿಗೂ ಭಾರತೀಯರು ಒಪ್ಪಿಕೊಂಡು ಅಪ್ಪಿಕೊಂಡಿರುವುದು ನಿಜಕ್ಕೂ ನಮ್ಮ ದೇಶದ ಸಂಪ್ರದಾಯ ಮತ್ತು ಸಂಸ್ಕಾರಕ್ಕೆ ಮಾಡುವ ಅಪಮಾನವೇ ಸರಿ.… Read More ಭಾರತದ ಭಾಷೆಗಳ ತಕ್ಕಡಿಯಲ್ಲಿ ಆಂಗ್ಲ ಭಾಷೆ!