ಕನ್ನಡ ಚಿತ್ರರಂಗ ಅಂದು ಇಂದು

ಕನ್ನಡದ ಮೊದಲ ಟಾಕೀ ಸಿನಿಮಾ ಸತಿ ಸುಲೋಚನದಿಂದ ಹಿಡಿದು ಇಂದಿನ ಕಾಂತಾರ ಮತ್ತು ಹೆಡ್ ಬುಷ್ ವರೆಗೂ ಕನ್ನಡ ಚಿತ್ರರಂಗ ಬೆಳೆದು ಬಂದ ದಾರಿಯ ಜೊತೆ ಅಂದಿನ ನಿರ್ದೇಶಕರು/ನಟರಿಗೂ ಇಂದಿನ ನಿರ್ದೇಶಕರು/ನಟರಿಗೂ ಇರುವ ವ್ಯತ್ಯಾಸದ ಕುರಿತಾದ ಒಂದು ವಸ್ತುನಿಷ್ಠ ವಿಶ್ಲೇಷಣೆ ಇದೋ ನಿಮಗಾಗಿ.… Read More ಕನ್ನಡ ಚಿತ್ರರಂಗ ಅಂದು ಇಂದು

ದೇವ, ದೈವ ಮತ್ತು ದೈವ ನರ್ತಕರು

ಕಾಂತಾರ ಸಿನಿಮಾ ಬಿಡುಗಡೆ ಆಗಿ ಪ್ರಪಂಚಾದ್ಯಂತ ಯಶಸ್ವಿ ಪ್ರದರ್ಶನವಾಗುತ್ತಿರುವಾಗ, ದೇವ ದೈವಗಳ ಕುರಿತಾಗಿ ಪರ ವಿರೋಧ ಚರ್ಚೆಗಳು ತಾರಕ್ಕಕ್ಕೆ ಏರುತ್ತಿರುವಾಗ, ದೇವ, ದೈವ ಮತ್ತು ದೈವ ನರ್ತಕರು ಎಂದರೆ ಯಾರು? ಈ ಸಮಾಜದಲ್ಲಿ ಅವರುಗಳ ಬಳಕೆ/ ದುರ್ಬಳಕೆ ಹೇಗೆ ನಡೆಯುತ್ತಿದೆ? ಎಂಬುದರ ಕುರಿತಾದ ವಾಸ್ತವಿಕ ಚಿತ್ರಣ ಇದೋ ನಿಮಗಾಗಿ… Read More ದೇವ, ದೈವ ಮತ್ತು ದೈವ ನರ್ತಕರು

ಗುರು ಶಿಷ್ಯರು ಸಿನಿಮಾ ವಿಮರ್ಶೆ

ಕನ್ನಡದಲ್ಲಿ ಕ್ರೀಡೆಗೆ ಸಂಬದ್ಧ ಪಟ್ಟ ಸಿನಿಮಾಗಳು ಕಡಿಮೆಯೇ ಇರುವಾಗ ನಿರ್ದೇಶಕ ಜಡೇಶ್ ಕಲ್ಪನೆಯನ್ನು ನಿರ್ಮಾಕಕರಾದ ತರುಣ್ ಸುಧೀರ್ ಮತ್ತು ಶರಣ್ ಕ್ರಿಕೆಟ್‌, ಫುಟ್‌ಬಾಲ್‌ ಆಟಗಳ ಮುಂದೆ ಸೊರಗಿ ಹೋಗಿ ಭಾಗಶಃ ಕಣ್ಮರೆಯೇ ಆಗಿ ಹೋಗುತ್ತಿರುವ ಅಪ್ಪಟ ದೇಸೀ ಆಟವಾದ ಕೊಕ್ಕೊ ಆಟವನ್ನು ಮುಂದಿಟ್ಟುಕೊಂಡು, ಮುಗ್ಧ ಹಳ್ಳಿಯ ಜನರು ಜಮೀನ್ದಾರನ ಪಾಳೇಗಾರಿಕೆಯನ್ನು ಹೇಗೆ ಮುರಿಯುತ್ತಾರೆ ಎಂಬುದರ ಕುರಿತಾದ ಸಿನಿಮಾವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.… Read More ಗುರು ಶಿಷ್ಯರು ಸಿನಿಮಾ ವಿಮರ್ಶೆ

ಕಾಂತಾರ ಒಂದು ದಂತಕಥೆ

ಮಾನವ ಹಾಗೂ ಪರಿಸರದ ನಡುವಿನ ಸಂಘರ್ಷ, ಜಮೀನ್ದಾರರ ಕಾಡು ಒತ್ತುವರಿ, ಅರಣ್ಯಾಧಿಕಾರಿಗಳ ಕಿರಿಕಿರಿಯ ಜೊತೆಗೆ ಕರಾವಳಿಯ ಸಂಸ್ಕೃತಿ, ಕಂಬಳದ ಸೊಬಗು, ಭೂತಕೋಲದ ಬಗ್ಗೆ ಅಲ್ಲಿಯ ಜನರ ನಂಬಿಕೆಯನ್ನು ಅಧ್ಭುತವಾಗಿ ತೆರೆ ಮೇಲೆ ತರಲಾಗಿರುವ ಕಾಂತಾರ ಚಿತ್ರದ ವಸ್ತುನಿಷ್ಠ ವಿಮರ್ಶೆ ಇದೋ ನಿಮಗಾಗಿ.… Read More ಕಾಂತಾರ ಒಂದು ದಂತಕಥೆ

ಕನ್ನಡ ಚಳುವಳಿ ಅಂದು ಇಂದು

ಹೆಗಲು ಮೇಲೆ ಕೆಂಪು ಹಳದಿ ವಸ್ತ್ರವನ್ನು ಹಾಕಿಕೊಂಡು ಬೀದಿಗಿಳಿದು, ಬಂದ್ ಮಾಡಿಸುವುದು, ಬೋರ್ಡುಗಳಿಗೆ ಮಸಿ ಬಳಿಯುವುದೇ ಕನ್ನಡ ಹೋರಾಟ ಎನ್ನುವ ಇಂದಿನ ಉಟ್ಟು ಖನ್ನಢ ಓಲಾಟಗಾರರಿಗೆ, ನಿಜವಾದ ಕನ್ನಡ ಹೋರಾಟ ಎಂದರೆ ಏನು? ಅದರ ಸ್ವರೂಪ ಹೇಗಿತ್ತು? ನಿಸ್ವಾರ್ಥ ಕನ್ನಡ ಹೋರಾಟಗಾರರ ಜವಾಬ್ಧಾರಿ ಏನಿತ್ತು? ಅಂತಹ ಹೋರಾಟಗಾರರು ಯಾರು? ಎಂಬೆಲ್ಲಾ ಕುರಿತಾದ ಸವಿವರಗಳು ಇದೋ ನಿಮಗಾಗಿ.… Read More ಕನ್ನಡ ಚಳುವಳಿ ಅಂದು ಇಂದು

ವಿಶ್ವ ಜನಸಂಖ್ಯಾ ದಿನ

ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲಗಳ ಅವಶ್ಯಕತೆ ಅತ್ಯಗತ್ಯ ಎನ್ನುವುದು ಸತ್ಯವಾದರೂ, ದೇಶಕ್ಕಿಂತಲೂ ನಮಗೆ ಧರ್ಮವೇ ಮುಖ್ಯ ಎಂದು ದೇಶದ ಕಾನೂನನ್ನೇ ಧಿಕ್ಕರಿಸಿ, ವಿಪರೀತವಾಗಿ ಮಕ್ಕಳನ್ನು ಹುಟ್ಟಿಸುವುದೂ ಸಹಾ ದೇಶದ ಅಭಿವೃದ್ಧಿಗೆ ಕಳಕವಳಕಾರಿಯಾಗಿದೆ. ಹಾಗಾಗಿ ಜನಸಂಖ್ಯಾ ನಿಯಂತ್ರಣದತ್ತ ಗಮನ ಹರಿಸುವುದು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯವಾಗಿದೆ. … Read More ವಿಶ್ವ ಜನಸಂಖ್ಯಾ ದಿನ

ಲುಟಿಯನ್ಸ್ ದೆಹಲಿ

ದೇಶದ ಖ್ಯಾತ ಪತ್ರಕರ್ತ ಮತ್ತು ಸದ್ಯಕ್ಕೆ ರಿಪಬ್ಲಿಕ್ ಟಿವಿಯ ಮಾಲಿಕ ಅರ್ಣಾಬ್ ಗೋಸ್ವಾಮಿ ಆರಂಭದಿಂದಲೂ ತಮ್ಮ ಟಿವಿ ಛಾನೆಲ್ಲನ್ನು ದೇಶದ ರಾಜಕೀಯ ಆಗುಹೋಗುಗಳ ಪ್ರಮುಖ ಕೇಂದ್ರವಾದ ರಾಜಧಾನಿ ದೆಹಲಿಯಲ್ಲಿ ಆರಂಭಿಸಿದೇ, ದೇಶದ ಪ್ರಮುಖ ವಾಣಿಜ್ಯ ಕೇಂದ್ರವಾದ ಮುಂಬೈನಲ್ಲಿ ಪ್ರಾರಂಭಿಸಿ ತಮ್ಮ ಟಿವಿ ಷೋಗಳಲ್ಲಿ ಪದೇ ಪದೇ ಲೂಟಿಯನ್ಸ್ ಮಾಧ್ಯಮ, ಲೂಟಿಯನ್ಸ್ ಎಂಬ ಪದವನ್ನು ಬಹಳಷ್ಟು ಬಾರಿ ಬಳಸುತ್ತಲೇ ಇರುತ್ತಾರೆ. ಲೂಟಿಯನ್ಸ್ ಪದ ಕೇಳಿದ ತಕ್ಷಣ ಅದನ್ನು ಲೂಟಿ ಮಾಡುವವರು ಅರ್ಥಾತ್ ದೋಚುವವರು ಎಂಬ ಅರ್ಥವನ್ನು ಕಲ್ಪಿಸಿಕೊಂಡು ಅರೇ,… Read More ಲುಟಿಯನ್ಸ್ ದೆಹಲಿ

ಸೈನ್ಯಕ್ಕೆ ಸೇರಲು ನಾ ಪಟ್ಟ ಸಾಹಸಗಳು

ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಂಡಾಯವೆದ್ದು ದೇಶಾದ್ಯಂತ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಹಾಳು ಮಾಡಿದಾಗ, ಅಗ್ನಿಪಥ್ ಯೋಜನೆ ಫಲಾಫಲಗಳೇನು? ಅದು ಯುವಕರಿಗೆ ಹೇಗೆ ಪ್ರಯೋಜನವಾಗುತ್ತದೆ ಎಂಬುದರ ಸಂಪೂರ್ಣ ವಿವರಗಳನ್ನು ತಿಳಿಸಿದಾಗ, ಓದುಗರೊಬ್ಬರು, ನಿಮಗೆ ಸೈನಿಕ ಎಂದರೆ ಏನು ಗೊತ್ತಾ? ನೀವ್ಯಾಕೆ ಸೈನಿಕರಾಗಿಲ್ಲ? ನಿಮ್ಮ ಮಕ್ಕಳನ್ನು ಸೈನ್ಯಕ್ಕೆ ಏಕೆ ಸೇರಿಸಿಲ್ಲ? ಎಂಬ ಅಕ್ಷೇಪ ಎತ್ತಿದ್ದರು. ಹಾಗಾಗಿ ನಾನು ಯೌವನಾವಸ್ಥೆಯಲ್ಲಿದ್ದಾಗ ಸೈನ್ಯಕ್ಕೆ ಸೇರಲು ನಾನು ಮಾಡಿದ ಸಾಹಸಗಳ ಪರಿಯ  ಮೋಜಿನ… Read More ಸೈನ್ಯಕ್ಕೆ ಸೇರಲು ನಾ ಪಟ್ಟ ಸಾಹಸಗಳು

ಕಶ್ಮೀರ್ ಫೈಲ್ಸ್ ಅನುಭವ

ಮಾರ್ಚ್ ೧೧ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಎಂದರೂ ತಪ್ಪಾಗದು. ಏಕೆಂದರೆ ಸಾವಿರಾರು ವರ್ಷಗಳ ಇತಿಹಾಸವನ್ನು ಕರಾರುವಾಕ್ಕಾಗಿ ತಿಳಿದಿರುವ ನಮಗೆ ಕೇವಲ 32 ವರ್ಷಗಳ ಹಿಂದೆ ನಡೆದಿದ್ದ ಕಾಶ್ಮೀರೀ ಪಂಡಿತರ ನರಮೇಧದ ಕುರಿತಾಗಿ ನಿಜವಾದ ಇತಿಹಾಸವನ್ನೇ ತಿಳಿಯದಿದ್ದ ನಮಗೆ ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿಯವರ ಕಾಶ್ಮೀರಿ ಫೈಲ್ಸ್ ಚಲನಚಿತ್ರ ಬಿಡುಗಡೆಯಾದ ದಿನ. ಈ ಚಿತ್ರದ ಮೂಲಕ ಆ ನಿರ್ದೇಶಕ ಕಾಶ್ಮೀರದ ಕುರಿತಾದ ನೈಜ ಇತಿಹಾಸನ್ನು ಜಗತ್ತಿಗೇ ತಿಳಿಸಿದ್ದಕ್ಕಾಗಿ ಮೊದಲು ಅಭಿನಂದನೆಗಳನ್ನು ಸಲ್ಲಿಸೋಣ. ಚಿತ್ರ… Read More ಕಶ್ಮೀರ್ ಫೈಲ್ಸ್ ಅನುಭವ