ಪೊಗರು ಇಳಿಸಿದ ಪರಿ

ಕಳೆದ ಶುಕ್ರವಾರ ಬಹು ನಿರೀಕ್ಷಿತ ನಂದಕಿಶೋರ್ ನಿರ್ದೇಶಿಸಿದ ಮತ್ತು ಧೃವ ಸರ್ಜಾ ನಟಿಸಿದ ಪೊಗರು ಚಿತ್ರ, ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಇದೇ ಚಿತ್ರಕ್ಕಾಗಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಸಣ್ಣ ಮತ್ತು ದಪ್ಪ ಮಾಡಿಕೊಂಡಿದ್ದ ಧೃವ ಸರ್ಜಾ ಬಗ್ಗೆ ಎಲ್ಲರೂ ಹಾಡಿ ಹೊಗಳುತ್ತಿದ್ದದ್ದನ್ನು ಓದಿ, ಕೇಳಿ ಎಲ್ಲರೂ ಪುಳಕಿತಗೊಂಡಿದ್ದಂತೂ ಸುಳ್ಳಲ್ಲ. ಆದರೆ ಶುಕ್ರವಾರ ಸಂಜೆ ಆಗುತ್ತಿದ್ದಂತೆಯೇ ಚಿತ್ರದಲ್ಲಿ ಒಂದು ಸಮುದಾಯವನ್ನು ಬಹಳ ಕೀಳಾಗಿ ಚಿತ್ರೀಕರಿಸಲ್ಪಟ್ಟಿದೆ ಎಂಬ… Read More ಪೊಗರು ಇಳಿಸಿದ ಪರಿ

ಬೌದ್ಧಿಕ ದಿವಾಳಿತನ

ಒಂದು ಸಿನಿಮಾದಲ್ಲಿನ ಸನ್ನಿವೇಶಕ್ಕಾಗಿ ಬ್ರಾಹ್ಮಣರು ಇಷ್ಟೊಂದು ಆವೇಶಗೊಳ್ಳುವ ಅವಶ್ಯಕತೆ ಇರಲಿಲ್ಲ. ಸಿನಿಮಾ ಒಂದು ಕಲಾಮಾಧ್ಯಮ. ಅದರಲ್ಲಿನ ಸನ್ನಿವೇಶಕ್ಕೆ ಬ್ರಾಹ್ಮಣರ ಮೇಲೆ ಕಾಲಿಟ್ಟಿದ್ದಕ್ಕೆ ಬ್ರಾಹ್ಮಣರು ಇಷ್ಟೊಂದು ಅಸಹನೆ ತೋರಿಸುವುದು ಬ್ರಾಹ್ಮಣರಲ್ಲಿ ಬೆಳೆಯುತ್ತಿರುವ ಮೂಲಭೂತವಾದವನ್ನು ತೋರಿಸುತ್ತದೆ. ಬ್ರಾಹ್ಮಣರು ತಮ್ಮ ಜಾತಿಗೆ ಅವಮಾನ ಮಾಡಲಾಗಿದೆ ಆ ಪೂಜಾರಿ ಪಾತ್ರಧಾರಿಯ ಹೆಗಲಮೇಲೆ ಕಾಲಿಟ್ಟ ದೃಶ್ಯವನ್ನು ಕತ್ತರಿಸಬೇಕೆಂದು ಪ್ರತಿಭಟನೆ ಮಾಡುತ್ತಾರಂತೆ..😛 ಆದರೆ ಮತ್ತೊಬ್ಬ ಸಹಕಲಾವಿದನ ತಲೆಯಮೇಲೆ ಕಾಲಿಟ್ಟರು ಅದನ್ನು ಕೇಳುವವರು ಯಾರಿಲ್ಲ ಯಾಕೆಂದರೆ ಇಲ್ಲಿ ಮನುಷ್ಯನಿಗಿಂತ ಆತ ಪ್ರತಿನಿಧಿಸುವ ಜಾತಿಗೆ ಹೆಚ್ಚು ಪ್ರಾಮುಖ್ಯತೆ ಇದೆ…🤨… Read More ಬೌದ್ಧಿಕ ದಿವಾಳಿತನ

ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇಕಾಯಿ

ಅವರೊಬ್ಬರು ಹಿರಿಯ ರಾಜಕಾರಣಿಗಳು. ಬಹಳ ವರ್ಷಗಳಿಂದ ಹೋರಾಟದ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಯೆಯನ್ನು ಮೂಡಿಸಿಕೊಂಡಿದ್ದರು. ಮಾತೆತ್ತಿದ್ದರೆ, ನಾನು ಅಂಬೇಡ್ಕರ್ ಅವರ ಅನುಯಾಯಿ, ನನ್ನನ್ನು ಒಂದು ಧರ್ಮಕ್ಕೆ ಮೀಸಲಾಗಿಸ ಬೇಡಿ ನನಗೆ ನನ್ನ ಧರ್ಮ ಗ್ರಂಥಕ್ಕಿಂತಲೂ ಅಂಬೇಡ್ಕರ್ ಅವರ ಸಂವಿಧಾನವೇ ಮುಖ್ಯ ಎಂದು ಓತಪ್ರೋತವಾಗಿ ಮಾತನಾಡುತ್ತಾ, ಜನರುಗಳನ್ನು ಜಾತಿ ಮತ್ತು ಉಪಜಾತಿಗಳ ಮೂಲಕ ಒಡೆಯುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ, ಅಧಿಕಾರದಲ್ಲಿ ಇರಲೀ ಇಲ್ಲದಿರಲೀ ಅತ್ಯುನ್ನತ ಅಧಿಕಾರವನ್ನು ಪಡೆಯುವುದರಲ್ಲಿ ಸಫಲರಾಗಿದ್ದರು. ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ, ತಮ್ಮ… Read More ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇಕಾಯಿ

ಮುಂದಿನ ಪೀಳಿಗೆಗೆ ಉಳಿಸಬೇಕಿದೆ ತಿಪ್ಪಗೊಂಡನಹಳ್ಳಿ ಜಲಾಶಯ

ಸ್ವಾತಂತ್ರ್ಯ ಪೂರ್ವದ 1930ರ ಸಮಯದಲ್ಲಿ ಬೆಂಗಳೂರಿನಲ್ಲಿ ಬಹಳ ಕಾಲ ಮಳೆಯಿಲ್ಲದೇ ಬೀಕರ ಬರಗಾಲ ಉಂಟಾಗಿ ಜನರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರಿಗೂ ತೊಂದರೆಯುಂಟಾದಾಗ ನೀರಿನ  ಅಗತ್ಯವನ್ನು ಅರಿತ ಅಂದಿನ ಮೈಸೂರು ಸಂಸ್ಥಾನದ ಒಡೆಯರಾಗಿದ್ದ ಶ್ರೀ ನಾಲ್ಮಡಿ ಚಾಮರಾಜ ಒಡೆಯರ್ ಅವರು ಮುಖ್ಯ ಇಂಜೀನಿಯರ್ ಆಗಿದ್ದ ಶ್ರೀ ಸರ್.ಎಂ.ವಿಶ್ವೇಶ್ವರಯ್ಯನವರಿಗೆ ಇದಕ್ಕೊಂದು ಪರಿಹಾರವನ್ನು ನೀಡಲು ಸೂಚಿಸಿದ ಪರಿಣಾಮವೇ, ಬೆಂಗಳೂರಿನಿಂದ ಪಶ್ಚಿಮಕ್ಕೆ 35 ಕಿ.ಮೀ ದೂರದಲ್ಲಿರುವ ಮಾಗಡಿ ಬಳಿಯ ಅರ್ಕಾವತಿ ನದಿ ಮತ್ತು ಕುಮುದಾವತಿ ನದಿಯ ಸಂಗಮದಲ್ಲಿ ಈ ಬೃಹತ್ತಾದ ತಿಪ್ಪಗೊಂಡನಹಳ್ಳಿ… Read More ಮುಂದಿನ ಪೀಳಿಗೆಗೆ ಉಳಿಸಬೇಕಿದೆ ತಿಪ್ಪಗೊಂಡನಹಳ್ಳಿ ಜಲಾಶಯ

ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ಗುರು ವಿದ್ಯಾರಣ್ಯರು ತಮ್ಮ ಪಾಂಡಿತ್ಯವನ್ನೆಲ್ಲಾ ಧಾರೆ ಎರೆದು ಮತ್ತು ಅಷ್ಟೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು 3600 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯ ವೈಭವದಿಂದ ಮೆರೆಯಬೇಕು ಎಂದು ಬಯಸಿದ್ದರೂ, ವಿಧಿಯಾಟದ ಮುಂದೆ ಅವರ ಯೋಜನೆಗಳೆಲ್ಲವೂ ತಲೆಕೆಳಗಾದ ಘನ ಘೋರ ಇತಿಹಾಸ ಇದೋ ನಿಮಗಾಗಿ… Read More ವಿಜಯನಗರ ಸಂಸ್ಥಾನದ ಸಂಸ್ಥಾಪನಾ ದಿನ ಮತ್ತು ಹಕ್ಕ- ಬುಕ್ಕರ ಜನ್ಮದಿನ

ಸೌರಶಕ್ತಿಯ ಮಿಲಿಟರಿ ಡೇರೆಗಳು

ಬೆಂಗಳೂರಿನಲ್ಲಿನ ಉಷ್ಣಾಂಶ 17 ಕ್ಕಿಂತ ಕಡಿಮೆ ಇಳಿದರೆ ಸಾಕು. ಜನರು ಅಹಹಾ! ಚಳಿ ಚಳಿ ತಾಳೆನು ಈ ಚಳಿಯಾ. ಅಂತ ಚೆಚ್ಚನೆಯ ವಸ್ತ್ರಗಳನ್ನು ಧರಿಸಿ ಬಿಸಿ ಬಿಸಿಯಾದ ಕಾಫೀ, ಟೀ ಹೀರುತ್ತಾ ಮನೆಯಿಂದ ಹೊರಗೇ ಕಾಲು ಇಡುವುದಿಲ್ಲ. ಅದರೆ ಅದೇ, ಹಿಮಚ್ಛಾದಿತ ಪ್ರದೇಶಗಳಲ್ಲಿ ದೇಶದ ಗಡಿಯನ್ನು ಕಾಯುವ ಸೈನಿಕರ ಪಾಡು ನಿಜಕ್ಕೂ ಹೇಳ ತೀರದು. ರಾತ್ರಿಹೊತ್ತಿನಲ್ಲಂತೂ ಹೊರಗಿನ ಕನಿಷ್ಠ ತಾಪಮಾನ ಕೆಲವೊಮ್ಮೆ -20 – 40ರ ವರೆಗೂ ತಲುಪಿರುತ್ತದೆ ಎಂದರೆ ಅಲ್ಲಿನ ಸಮಸ್ಯೆಗಳನ್ನು ಉಹಿಸಿಕೊಳ್ಳಬಹುದು. ನೀರು ಕುದಿಸಿ… Read More ಸೌರಶಕ್ತಿಯ ಮಿಲಿಟರಿ ಡೇರೆಗಳು

ರವೇ ಪಾಯಸ

ನಮ್ಮೆಲ್ಲರಿಗೂ ತಿಳಿದಿರುವಂತೆ ತಂದೆ ತಾಯಿಯರನ್ನು ಹೊರತು ಪಡಿಸಿ ಕಣ್ಣಿಗೆ ಕಾಣುವ ದೇವರುಗಳೆಂದರೆ ಸೂರ್ಯ ಮತ್ತು ಚಂದ್ರ. ಇವತ್ತು ರಥಸಪ್ತಮಿ ಅರ್ಥಾತ್ ಸೂರ್ಯನ ಹುಟ್ಟು ಹಬ್ಬ ಎಂದರೂ ತಪ್ಪಾಗಲಾರದು. ಹಾಗಾಗಿ ಸೂರ್ಯನ ಪ್ರಿಯವಾದ ನೈವೇದ್ಯವಾದ ರವೇ ಪಾಯಸ ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಸುಮಾರು 4-5 ಜನರು ಸವಿಯಬಹುದಾದಷ್ಟು ರವೇ ಪಾಯಸ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ಸಣ್ಣ ರವೆ – 1 ಬಟ್ಟಲು ಗಸಗಸೆ – 1 ಚಮಚ ಬೆಲ್ಲದ ಪುಡಿ – 3… Read More ರವೇ ಪಾಯಸ

ರೋಲ್ಸ್ ರಾಯ್ ಗರ್ವಭಂಗ

ಅದು 1920ರ ಸಮಯ ಅಲ್ವಾರ್ ಮಹಾರಾಜ ಜೈ ಸಿಂಗ್ ಪ್ರಭಾಕರ್ ಅವರು  ಅಸಾಧಾರಣ ಶ್ರೀಮಂತರಾಗಿದ್ದರು, ಸುಮಾರು ಹತ್ತಾರು ತಲೆಮಾರುಗಳ ಕಾಲ ಸುಮ್ಮನೇ ಕುಳಿತು ತಿಂದರೂ ಕರಗದಷ್ಟು ಆಸ್ತಿ ಅವರ ಬಳಿ ಇತ್ತು. ಅದೊಮ್ಮೆ ಅವರು  ಲಂಡನ್ನಿಗೆ ಹೋಗಿದ್ದಾಗ ನಗರ ಪ್ರದಕ್ಷಿಣೆಗಾಗಿ ಸಾಧಾರಣವಾದ ಬಟ್ಟೆಗಳನ್ನು ಧರಿಸಿ, ಯಾವುದೇ ಆಳುಗಳ ಬೆಂಗಾವಲು ಇಲ್ಲದೇ ಹೋಗುತ್ತಿದ್ದಾಗ ಅವರು  ರಸ್ತೆಯಲ್ಲಿದ್ದ ರೋಲ್ಸ್ ರಾಯ್ಸ್ ಕಾರಿನ ಶೋ ರೂಂ ನೋಡಿದರು.  1906 ರಲ್ಲಿ ಆರಂಭವಾದ ರೋಲ್ಸ್ ರಾಯ್ಸ್  ಬ್ರಾಂಡ್ 1920ರ ಹೊತ್ತಿಗೆ ವಿಶ್ವದ ನಂಬರ್… Read More ರೋಲ್ಸ್ ರಾಯ್ ಗರ್ವಭಂಗ

ಭೂವರಾಹಸ್ವಾಮಿ ದೇವಸ್ಥಾನ ಕಲ್ಲಹಳ್ಳಿ

ವರಾಹ ನಾಥ ಕಲ್ಲಹಳ್ಳಿ  ಮಂಡ್ಯ ಜಿಲ್ಲೆಯ ಕೆ .ಅರ. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ ಕೆ.ಅರ. ಪೇಟೆ ಯಿಂದ 18.ಕಿ.ಮಿ.,ಮೈಸೂರಿನಿಂದ 43 ಕಿ.ಮಿ. ದೂರದಲ್ಲಿದೆ. ಮೈಸೂರಿನಿಂದ ಕೆ.ಆರ್.ಎಸ್ ಮಾರ್ಗವಾಗಿ ಕನ್ನಂಬಾಡಿ ಊರನ್ನು ದಾಟಿ ಕೆ.ಆರ್.ಎಸ್ ಹಿನ್ನಿರನ್ನು ಅನುಸರಿಸಿಕೊಂಡು ಅರ್ಧ ಮುಕ್ಕಾಲು ಗಂಟೆ ಪ್ರಯಣಿಸಿದರೆ,  ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ನಿರ್ಮಾಣದ ಹಂತದಲ್ಲಿರುವ ಕಲ್ಲಹಳ್ಳಿಯ ಭೂವರಾಹ ಸ್ವಾಮಿಯ  ದೇವಾಲಯವನ್ನು ಕಾಣಬಹುದಾಗಿದೆ. ಬೆಂಗಳೂರಿನಿಂದ ಬರುವ ಭಕ್ತಾದಿಗಳು ಮಂಡ್ಯ ಮತ್ತು ಶ್ರೀ ರಂಗಪಟ್ಟಣ ಮಾರ್ಗವಾಗಿ ಬಂದು… Read More ಭೂವರಾಹಸ್ವಾಮಿ ದೇವಸ್ಥಾನ ಕಲ್ಲಹಳ್ಳಿ