ನ್ಯಾಯಮೂರ್ತಿ, ಶ್ರೀ ರಾಮಾ ಜೋಯಿಸ್

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕ್ಕಿಗೂ ಮತ್ತು ಕನ್ನಡ ಸಾರಸ್ವತ ಲೋಕಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಎಂದರೂ ತಪ್ಪಾಗಲಾರದು. ನಾಡಿನ ಹೆಸರಾಂತ ಕವಿ, ಕನ್ನಡಕ್ಕೆ ಮೊತ್ತ ಮೊದಲ ಜ್ಣಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು, ಅವರ ಮಗ ಶ್ರೀ ಪೂರ್ಣಚಂದ್ರ ತೇಜಸ್ವೀ, ಕಾಂಬರಿಗಾರ್ತಿ ಶ್ರೀಮತಿ ಎಂ. ಕೆ. ಇಂದಿರಾ, ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಗಿರೀಶ್ ಕಾಸರವಳ್ಳಿ, ಕೂಡ್ಲು ರಾಮಕೃಷ್ಣ, ರಾಜಕೀಯ ಧುರೀಣರಾದ ಶ್ರೀ ಶಾಂತವೇರಿ ಗೋಪಾಲ ಗೌಡರ ಜೊತೆ ಕರ್ನಾಟಕದ ಘನತೆ ಮತ್ತು ಗೌರವವನ್ನು ದೇಶಾದ್ಯಂತ… Read More ನ್ಯಾಯಮೂರ್ತಿ, ಶ್ರೀ ರಾಮಾ ಜೋಯಿಸ್

ಮೂಲಂಗಿ ಚೆಟ್ನಿ

ಚೆಟ್ನಿ ಅಂದ ತಕ್ಷಣ ನಮಗೆ ಥಟ್ ಅಂತಾ ನೆನಪಾಗೋದೇ ಕಾಯಿ ಚೆಟ್ನಿ, ಹುರಿಗಡಲೆ ಇಲ್ಲವೇ ಕಡಲೇಕಾಯಿ ಬೀಜ ಚಟ್ನಿ. ಅಪರೂಪಕ್ಕೆ ಈರುಳ್ಳಿ ಚೆಟ್ನಿ ಇಲ್ಲವೇ ಟೋಮ್ಯಾಟೋ ಚಟ್ನಿ ಸಹಾ ಮಾಡುತ್ತಾರೆ. ಎಲ್ಲೆಡೆಯಲ್ಲಿಯೂ ಬಹಳ ಸುಲಭವಾಗಿ ಸಿಗುವ ಮತ್ತು ಅರೋಗ್ಯಕರವಾಗಿರುವ ಮೂಲಂಗಿ ಚಟ್ನಿಯನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಮೂಲಂಗಿ ಚೆಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ ದೊಡ್ಡ ಗಾತ್ರದ ಮೂಲಂಗಿ- 1 ಒಣ ಮೆಣಸಿನಕಾಯಿ- 2-3 ಕೊತ್ತಂಬರಿ… Read More ಮೂಲಂಗಿ ಚೆಟ್ನಿ

ಚಿಂಟು ಕಾಣೆಯಾಗಿದ್ದಾನೆ

ಮನುಷ್ಯ ಸಂಘಜೀವಿ. ಹಾಗಾಗಿ ಒಬ್ಬಂಟಿಯಾಗಿ ಇರಲು ಮನಸ್ಸಾಗದೇ ಕುಟುಂಬವನ್ನು ಬೆಳಸಿಕೊಂಡ. ಹಾಗೆಯೇ ತನ್ನ ಜೊತೆಯಲ್ಲಿ ಹಸುಗಳು, ಎಮ್ಮೆ, ನಾಯಿ, ಬೆಕ್ಕು, ಕೋಳಿ, ಕುರಿ, ಆಡು, ಗಿಳಿ, ಪಾರಿವಾಳಗಳಂತಹ ಸಾಕು ಪ್ರಾಣಿ ಅಥವಾ ಪಕ್ಷಿಗಳನ್ನು ಸಾಕತೊಡಗಿದ. ಈ ಸಾಕು ಪ್ರಾಣಿಗಳು/ಪಕ್ಷಿಗಳು ನ್ನು ತನ್ನ ಹೆತ್ತ ಮಕ್ಕಳಂತೆಯೇ ಜತನದಿಂದ ನೋಡಿಕೊಳ್ಳುತ್ತಿದ್ದ ಕಾರಣ ಅವುಗಳೂ ಸಹಾ ಮನುಷ್ಯನಿಗೆ ಅತ್ಯಂತ ಪ್ರೀತಿಯನ್ನು ತೋರಿಸುತ್ತಿದ್ದವು. ಅದರಲ್ಲಿಯೂ ನಾಯಿಗಳಂತೂ ಅತ್ಯಂತ ನಂಬಿಕಸ್ತ ಪ್ರಾಣಿಗಳೆನಿಸಿ ಮನುಷ್ಯರಿಗೆ ಅತ್ಯಂತ ಪ್ರೀತಿ ಪಾತ್ರರೆನಿಸಿಕೊಂಡವು. ಮಹಾಭಾರತದಲ್ಲಿ ಜೀವಂತವಾಗಿಯೇ ಸ್ವರ್ಗಲೋಕವನ್ನು ತಲುಪಿದ ಧರ್ಮರಾಯನೊಂದಿಗೆ… Read More ಚಿಂಟು ಕಾಣೆಯಾಗಿದ್ದಾನೆ

ದಲಿತರು ಮತ್ತು ಮತಾಂತರ

ನಮ್ಮ ಅಜ್ಜ ಮೂಲತಃ ಬೆಳ್ಳೂರಿನವರಾದರೂ ಕೋಲಾರದ ಜಿನ್ನದ ಗಣಿಯಲ್ಲಿ ಹಿರಿಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರಿಂದ ನಾನು ಹುಟ್ಟಿದ್ದು ಕೆ.ಜಿ.ಎಫ್ ನಲ್ಲಿಯೇ ಹಾಗಾಗಿ ನಾನು ಚಿನ್ನದ ಹುಡುಗ ಎಂಬ ಹೆಮ್ಮೆಯಿದೆ. ಕೋಲಾರ ಕನ್ನಡನಾಡಿನ ಭಾಗವಾದರೂ ತೆಲುಗಿನವರದ್ದೇ ಪ್ರಾಭಲ್ಯವಾದರೆ, ಕೋಲಾರದಿಂದ ಕೇವಲ 31 ಕಿಮೀ ದೂರದಲ್ಲಿರುವ ಕೋಲಾರದ ಚಿನ್ನದ ಗಣಿ‌ ಪ್ರದೇಶ ಕೆ.ಜಿ.ಎಫ್ ತಮಿಳು ಮಯ. ನಮ್ಮ ಕನ್ನಡಿಗರು ಆಳದ ಚಿನ್ನದ ಗಣಿಗಳಲ್ಲಿ ಇಳಿದು ಕೆಲಸ ಮಾಡಲು‌ ಮನಸ್ಸು ಮಾಡದ ಕಾರಣ ಪಕ್ಕದ ಕೃಷ್ಣಗಿರಿಯಿಂದ ತಮಿಳು ಭಾಷಿಗರು ಇಲ್ಲಿಗೆ ಬಂದು… Read More ದಲಿತರು ಮತ್ತು ಮತಾಂತರ

ತೈಲಬೆಲೆ ಏರಿಕೆ, ಸತ್ಯ-ಮಿಥ್ಯ

ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯವೆಂದರೆ ತೈಲಬೆಲೆಯ ಏರಿಕೆ. ಸದ್ಯದ ಪರಿಸ್ಥಿತಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ 85-90ರ ಆಸುಪಾಸಿನಲ್ಲಿದ್ದು ಇನ್ನು ಕೆಲವೇ ವಾರಗಳಲ್ಲಿ ಶತಕದತ್ತ ಧಾಪುಗಾಲು ಹಾಕಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಿರೋಧ ಪಕ್ಷ ಅದರಲ್ಲೂ ಪ್ರಮುಖವಾಗಿ ಕಾಂಗ್ರೇಸ್ ಪಕ್ಷ ಇದೇ ಏನೂ ಅಚ್ಚೇ ದಿನ್? ಎನ್ನುವ ಶೀರ್ಷಿಕೆಯಲ್ಲಿ, ಭಾರತವು ಪೆಟ್ರೋಲ್ / ಡೀಸೆಲ್ / ಎಲ್ಪಿಜಿ ಬೆಲೆಗಳಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ ಎಂದು ಹೇಳುತ್ತಾ ಈ ಕೆಳಕಂಡ ಅಂಕಿ… Read More ತೈಲಬೆಲೆ ಏರಿಕೆ, ಸತ್ಯ-ಮಿಥ್ಯ

ಮಾತು ಬಲ್ಲವನಿಗೆ ಸಮಸ್ಯೆಯೇ ಇಲ್ಲ.

ರಷ್ಯಾದ ಯಹೂದಿಯೊಬ್ಬನಿಗೆ ಅಂತಿಮವಾಗಿ ತನ್ನ ತಾಯ್ನಾಡಾದ ಇಸ್ರೇಲ್‌ಗೆ ವಲಸೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಮಾಸ್ಕೋ ವಿಮಾನ ನಿಲ್ದಾಣದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಆತನ ಸಾಮಾನು ಸರಂಜಾಮುಗಳಲ್ಲಿ ಲೆನಿನ್ ಪ್ರತಿಮೆಯನ್ನು ಕಂಡು, ಅರೇ ಇದು ಏನು? ಎಂದು ಪ್ರಶ್ನಿಸಿದರು. ಕೂಡಲೇ ಆ ವ್ಯಕ್ತಿ, ಸರ್ ಇದು ಏನು? ಎಂಬುದು ತಪ್ಪಾದ ಪ್ರಶ್ನೆ. ಅದರ ಬದಲು ಇವರು ಯಾರು? ಎಂದು ನೀವು ಕೇಳಬೇಕಾಗಿತ್ತು ಎಂದು ಹೇಳಿ, ಇವರು ಕಾಮ್ರೇಡ್ ಲೆನಿನ್. ಸಮಾಜವಾದದ ಅಡಿಪಾಯವನ್ನು ಹಾಕಿದ ಮಹಾನ್ ವ್ಯಕ್ತಿಯಲ್ಲದೇ, ರಷ್ಯಾದ ಜನರ ಭವಿಷ್ಯ… Read More ಮಾತು ಬಲ್ಲವನಿಗೆ ಸಮಸ್ಯೆಯೇ ಇಲ್ಲ.

ಆರ್.ಟಿ.ಓ. ಆಫೀಸ್ ಅವಾಂತರ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನನ್ನ ವಾಹನ ಪರವಾನಗಿಯನ್ನು ನವೀಕರಿಸಬೇಕಿತ್ತು. ದುರಾದೃಷ್ಟವಷಾತ್ ಕರೋನಾಕ್ಕೆ ತುತ್ತಾಗಿ ಆರು ವಾರಗಳ ಕಾಲ ಮನೆಯಿಂದ ಹೊರಗೇ ಬಾರದ ಕಾರಣ, ನವೀಕರಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರವೂ ಸಹಾ ಇಂತಹ ಪರಿಸ್ಥಿತಿಯನ್ನು ಅರಿತುಕೊಂಡೇ ಪರವಾನಗಿಯ ಅವಧಿ ಮುಗಿದ್ದರೂ ನವೀಕರಿಸಲು ಆರು ತಿಂಗಳುಗಳ ಕಾಲ ಅನುಮತಿ ನೀಡಿತ್ತು. ಡಿಸಂಬರ್ ತಿಂಗಳಿನಲ್ಲಿ ಪರವಾನಗಿಯನ್ನು ನವೀಕರಿಸಲು online ಮುಖಾಂತರವೇ ಪ್ರಯತ್ನಿಸಬೇಕು ಎಂಬ ಹೊಸಾ ನಿಯಮದಂತೆ https://parivahan.gov.in/parivahan/ ವೆಬ್ ಸೈಟಿಗೆ ಹೋಗಿ ನನ್ನ ಲೈಸೆನ್ಸ್ ನಂಬರ್ ಎಂಟರ್ ಮಾಡಿದರೆ, ನನ್ನ ನಂಬರ್… Read More ಆರ್.ಟಿ.ಓ. ಆಫೀಸ್ ಅವಾಂತರ

ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ದುರ್ಗಾವಸತಿಯ ಬಡಾವಣೆಗಳನ್ನು ನಿಶ್ಚಯಿಸಿದಾಗ ಅದರ ವಿಸ್ತೀರ್ಣವನ್ನು ನೋಡಿಯೇ ತಲೆ ತಿರುರುಗುವ ಹಾಗಿತ್ತು. ನಂಜಪ್ಪ ವೃತ್ತದಿಂದ ಹಿಡಿದು ವಿದ್ಯಾರಣ್ಯಪುರದ ಮುಖ್ಯರಸ್ತೆಯ ಸಂಪೂರ್ಣ ಬಲಭಾಗ ಬಿಇಎಲ್, ಹೆಚ್.ಎಂ.ಟಿ, ಐಇಸಿಹೆಚ್ ಬಡಾವಣೆ, ಜ್ನಾನೇಶ್ವರಿ ಬಡಾವಣೆ, ವೆಂಕಟಸ್ವಾಮಪ್ಪ ಬಡಾವಣೆ, ಬಸವಸಮಿತಿ, ನರಸೀಪುರ, ದುರ್ಗಾ ಬಡಾವಣೆ, ಆಂಜನೇಯಸ್ವಾಮಿ ಬಡಾವಣೆ ಉಫ್ ಹೇಳುವುದಿರಲಿ ನೆನೆಸಿಕೊಂಡರೇ ಸಾಕು ಮೈ ಜುಮ್ಮೆನೆಸುವಷ್ಟು ವಿಸ್ತೀರ್ಣ ಹೊಂದಿದ ಪ್ರದೇಶಗಳಿಂದ ಕೂಡಿತ್ತು. ಬೈಠಕ್ಕಿಗೆ ಬಂದ ಕಾರ್ಯಕರ್ತರ ಸಂಖ್ಯೆ ನೋಡಿದಾಗ, ಇದೇನು ಸಮಸ್ಯೆಯಾಗದು ಒಂದೆರಡು… Read More ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ

ದಕ್ಷಿಣ ಭಾರತೀಯ ಪಾಕಶಾಸ್ತ್ರದಲ್ಲಿ ಟೋಮ್ಯಾಟೋ ಹಣ್ಣುಗಳಿಗೆ ಬಹಳ ಪ್ರಾಶಸ್ತ್ಯ. ಯಾವುದೇ ತರಕಾರಿಗಳೊಂದಿಗೆ ಟೋಮ್ಯಾಟೋ ಹಣ್ಣುಗಳು ಸುಲಭವಾಗಿ ಒಗ್ಗಿಕೊಂಡು ಹೋಗುತ್ತದೆ ಇಲ್ಲವೇ ಕೇವಲ ಟೋಮ್ಯಾಟೋ ಹಣ್ಣುಗಳಿಂದಲೇ, ಬಗೆ ಬಗೆಯ ಸಾರುಗಳು, ಗೊಜ್ಜುಗಳನ್ನು ತಯಾರಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಟೋಮ್ಯಾಟೋ ಬಹಳ ಸುಲಭದಲ್ಲಿ ಎಲ್ಲೆಡೆಯೂ ಸಿಗುತ್ತಿರುವ ಕಾರಣ, ಬಿಸಿ ಬಿಸಿ ಅನ್ನ, ದೋಸೆ, ಚಪಾತಿಗಳ ಜೊತೆ ನೆಂಚಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ, ರುಚಿಕರವಾದ ಮತ್ತು ಥಟ್ ಅಂತ ಮಾಡಬಹುದಾದ ಟೋಮ್ಯಾಟೋ ಹಣ್ಣಿನ ದಿಢೀರ್ ಬಿಸಿ ಉಪ್ಪಿನಕಾಯಿ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ… Read More ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ