ಮೊದಲು ಮನೆ ಗೆದ್ದು, ನಂತರ ಮಾರು ಗೆಲ್ಲು

ಈ ರಾಜ್ಯದ ಮುಖ್ಯಮಂತ್ರಿ ಪಟ್ಟ ಎನ್ನುವುದು ರಾಜ್ಯದ ಪ್ರಭಲ ಜಾತಿಗಳಾದ ಲಿಂಗಾಯತರು, ಒಕ್ಕಲಿಗರು ಮತ್ತು ಕುರುಬರಿಗಷ್ಟೇ ಸೀಮಿತವೇ? ಹಾಗಾದರೆ ಮಾತಿಗೆ ಮುಂಚೆ ಅಂಬೇಡ್ಕರ್ ಸಂವಿಧಾನ, ಜಾತ್ಯಾತೀತತೇ, ಧರ್ಮ ನಿರಪೇಕ್ಷತೆ ಎಂದು ಗಂಟೆಗಟ್ಟಲೆ ಬಡಾಯಿ ಕೊಚ್ಚುವ ಕುಮಾರಸ್ವಾಮಿಯರೇ ಬ್ರಾಹ್ಮಣರು ಈ ರಾಜ್ಯದ ಮುಖ್ಯಾಮಂತ್ರಿಗಳು ಏಕಾಗಬಾರದು?… Read More ಮೊದಲು ಮನೆ ಗೆದ್ದು, ನಂತರ ಮಾರು ಗೆಲ್ಲು

ಶತಾಯುಷಿ V/S ಅಲ್ಪಾಯುಷಿ

ಈ ತಿಂಗಳಿನ ಸಂಪದ ಸಾಲು ಪತ್ರಿಕೆಯಲ್ಲಿ ಪ್ರಕಟವಾಗಿರುವ, ಶತಾಯುಷಿಗಳಾಗಿದ್ದ ನಮ್ಮ ಪೂರ್ವಜರ ವಂಶವಾಹಿನಿಯಲ್ಲಿ ನಾವೇಕೇ ಅಲ್ಪಾಯುಷಿಗಳಾಗುತ್ತಿದ್ದೇವೆ ಮತ್ತು ಮತ್ತೆ ಆರೋಗ್ಯಪೂರ್ಣ ದೀರ್ಘಾಯುಷ್ಯವನ್ನು ಹೇಗೆ ಪಡೆದುಕೊಳ್ಳಬಹುದು ಎಂಬೆಲ್ಲಾ ಕುರಿತಾದ, ಆಬಾಲವೃದ್ಧರಾದಿಯಾಗಿ ಎಲ್ಲರೂ ಓದಲೇ ತಿಳಿಯಲೇ ಬೇಕಾದ ಮಾಹಿತಿ ಇದೋ ನಿಮಗಾಗಿ… Read More ಶತಾಯುಷಿ V/S ಅಲ್ಪಾಯುಷಿ

ಹಿತ್ತಲ ಗಿಡ ಮದ್ದಲ್ಲ

ಸತತವಾಗಿ ಹತ್ತು ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಯಲ್ಲೇ ಕಳೆದು 75ವರ್ಷಗಳ ಹಿಂದೆ ಸ್ವತಂತ್ರ ದೇಶವಾದರೂ, ಇಂದಿಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಭಾರತೀಯರಾದ ಅದಾನಿ, ಅಂಬಾನಿ, ರಾಮ್ ದೇವ್, ಮಹೇಂದ್ರ, ಟಿವಿಎಸ್ ಸುಂದರಂ ಅವರ ಹೆಸರುಗಳನ್ನು ಕೇಳುತ್ತಿದ್ದಂತೆಯೇ ಕೆಲವರು ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಎಲ್ಲಿಲ್ಲದ ಆಕ್ರೋಶ ಮತ್ತು ಪ್ರತಿರೋಧ ವ್ಯಕ್ತಪಡಿಸುವುದು ನಿಜಕ್ಕೂ ವಿಪರ್ಯಾಸ ಎನಿಸುತ್ತದೆ. ಇಲ್ಲಿ ಯಾರನ್ನೂ ಸಮರ್ಥನೆ ಮಾಡಿಕೊಳ್ಳದೇ ವಸ್ತುನಿಷ್ಟ ವಿಷಯದ ಪ್ರಸ್ತುತಿ ಇದೋ ನಿಮಗಾಗಿ… Read More ಹಿತ್ತಲ ಗಿಡ ಮದ್ದಲ್ಲ

ಮಲ್ಲೇಶ್ವರಂ ಶಿಶುವಿಹಾರದ ಗೆಳೆಯರ ಸ್ನೇಹಮಿಲನ ಎಂಬ ಬೂಸ್ಟರ್ ಡೋಸ್

ಇಂದಿನ Mobile, Facebook, WhatsApp, Instagram ಮುಂತಾದವುಗಳ ಮೂಲಕ ಪರಸ್ಪರ ಸಂಪರ್ಕದಲ್ಲಿ ಇರಬಹುದಾದರೂ,
ಒಂದು ಸಣ್ಣ ಸಮಾರಂಭಕ್ಕೆ ಪರಿಚಿತ ಬಂಧು ಮಿತ್ರರನ್ನೇ ಒಟ್ಟಿಗೆ ಒಂದೆಡೆ ಸೇರಿಸುವುದೇ ಕಷ್ಟ ಎನಿಸಿರುವಂತಹ ಸಮಯದಲ್ಲೂ, ಮಲ್ಲೇಶ್ವರಂ ಶಿಶಿವಿಹಾರದ ಹಿರಿಯ ವಿದ್ಯಾರ್ಥಿಗಳು ಪ್ರತೀ ವರ್ಷವೂ ವಯಸ್ಸು, ಅಂತಸ್ತು, ಎಲ್ಲವನ್ನೂ ಮರೆಗು ಒಂದೆಡೆ ಒಟ್ಟಾಗಿ ಸೇರಿ ಸಂಭ್ರಮಿಸಿದ ಪರಿ ನಿಜಕ್ಕೂ ಅವರ್ಣನೀಯ. ಅಂತಹ ಸುಂದರ ರಸಕ್ಷಣಗಳ ಝಲಕ್ ಇದೋ ನಿಮಗಾಗಿ

Read More ಮಲ್ಲೇಶ್ವರಂ ಶಿಶುವಿಹಾರದ ಗೆಳೆಯರ ಸ್ನೇಹಮಿಲನ ಎಂಬ ಬೂಸ್ಟರ್ ಡೋಸ್

ವಸಂತ ಪಂಚಮಿ, ಸರಸ್ವತಿ ಪಂಚಮಿ, ಮದನ ಪಂಚಮಿ

ದೇಶಾದ್ಯಂತ ಮಾಘ ಮಾಸದ ಪಂಚಮಿಯಂದು ಆಚರಿಸಲ್ಪಡುವ ವಸಂತ ಪಂಚಮಿ ಹಬ್ಬದ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ವೈಶಿಷ್ಟ್ಯತೆಗಳೇನೂ? ಆ ಹಬ್ಬದ ಪ್ರಾಮುಖ್ಯತೆಗಳೇನು? ಆ ಹಬ್ಬವನ್ನು ಎಲ್ಲೆಲ್ಲಿ ಹೇಗೆ ಮತ್ತು ಯಾವ ರೀತಿಯಲ್ಲಿ ಆಚರಿಸುತ್ತಾರೆ? ಎಂಬೆಲ್ಲದರ ಸವಿವರಗಳು ಇದೋ ನಿಮಗಾಗಿ… Read More ವಸಂತ ಪಂಚಮಿ, ಸರಸ್ವತಿ ಪಂಚಮಿ, ಮದನ ಪಂಚಮಿ

ಛಲದಂಕಮಲ್ಲ ಸತೀಶ್ ಬಕ್ಷಿ

ವಿದ್ಯೆ ಯಾರ ಸ್ವತ್ತೂ ಅಲ್ಲಾ. ಮನಸ್ಸು ಮಾಡಿದಲ್ಲಿ ಯಾರು ಬೇಕಾದರೂ ಕಲಿತು, ಎಂತಹ ಸಾಧನೆಗಳನ್ನು ಬೇಕಾದರೂ ಮಾಡಬಹುದು ಎಂದು ಆಡು ಮುಟ್ಟದ ಸೊಪ್ಪಿಲ್ಲ ನಮ್ಮ ಸತೀಶ್ ಭಕ್ಷಿಗೆ ಗೊತ್ತಿಲ್ಲದ ವಿಷಯವಿಲ್ಲ ಎನ್ನುವಂತೆ ತನ್ನ ಬುದ್ಧಿವಂತಿಕೆ ಮತ್ತು ಧೀಶಕ್ತಿಯಿಂದ ಹಿಡಿದ ಕೆಲಸವನ್ನು ಮಾಡಿ ಮುಗಿದುತ್ತಿದ್ದಂತಹ ಸ್ನೇಹ ಜೀವಿ, ಗೆಳೆಯ ಸತೀಶ್ ಭಕ್ಷಿ, ಇದೋ ನಿನಗೆ ನನ್ಖಹೃದಯಪೂರ್ವಕ ಆಶ್ರುತರ್ಪಣ.… Read More ಛಲದಂಕಮಲ್ಲ ಸತೀಶ್ ಬಕ್ಷಿ

ಅಭಿಮಾನಿಗಳೇ ದೇವರುಗಳು, ಅಭಿಮಾನವೇ ಪ್ರಶಸ್ತಿ ಪುರಸ್ಕಾರ

ಎಲೆ ಮರೆಕಾಯಿಯಂತೆ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಕೆಲ ಉದಯೋನ್ಮುಖ ಕಲಾವಿದರುಗಳು ಮತ್ತು ಲೇಖಕರುಗಳು ಸಾರಸ್ವತ ಲೋಕದಲ್ಲಿ ತೊಡಗಿಸಿಕೊಂಡಿರುವರನ್ನು ಯಾರಾದರೂ ಗುರುತಿಸಿ, ಅಭಿಮಾನ ಪೂರ್ವಕವಾಗಿ ನಾಲ್ಕು ಮಾತುಗಳನ್ನು ಆಡಿಸಿದರೂ ಸಾಕು ಅವರು ಮಾಡಿದ ಕೆಲಸಕ್ಕೆ ಸಾರ್ಥಕತೆ ದೊರೆಯುತ್ತದೆ ಎನ್ನುವುದಕ್ಕೆ ಕೆಲವು ಜ್ವಲಂತ ಪ್ರಸಂಗಗಳು ಇದೋ ನಿಮಗಾಗಿ… Read More ಅಭಿಮಾನಿಗಳೇ ದೇವರುಗಳು, ಅಭಿಮಾನವೇ ಪ್ರಶಸ್ತಿ ಪುರಸ್ಕಾರ

ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ ಬ್ರಾಹ್ಮಿ ನದಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.… Read More ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ

ಮೈಸೂರು ಸಂಸ್ಥಾನದ ಕುಲದೇವತೆ ಮತ್ತು ಕನ್ನಡಿಗರ ನಾಡದೇವಿ ಶ್ರೀ ಚಾಮುಂಡೇಶ್ವರಿ ದೇವಿ ಮೈಸೂರಿನ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಆವರು ಸ್ವಪ್ನದಲ್ಲಿ ಬಂದು ನಂತರ ಅವರ ಅಮೃತ ಹಸ್ತದಲ್ಲೇ ಏಕಶಿಲೆಯಲ್ಲಿ ದ್ವಿಮುಖಿ ಚಾಮುಂಡೇಶ್ವರಿಯಾಗಿ ವಿಶ್ವವಿಖ್ಯಾತ ಜೋಗದ ಜಲಪಾತದಲ್ಲಿ ಪ್ರತಿಷ್ಠಾಪನೆಯಾದ ಇತಿಹಾಸದ ಜೊತೆಗೆ ‍ಮೈಸೂರು ಮಹಾರಾಜರು ಮತ್ತು ವಿಶ್ವೇಶ್ವರಯ್ಯನವರು ಕನ್ನಡಿಗರಿಗೆ ಹೇಗೆ ಪ್ರಾಥಃಸ್ಮರಣೀಯರಾಗುತ್ತಾರೆ ಎಂಬ ರೋಚಕ ಪ್ರಸಂಗ ಇದೋ ನಿಮಗಾಗಿ… Read More ಏಕಶಿಲಾ ದ್ವಿಮುಖಿ ಶ್ರೀ ಚಾಮುಂಡೇಶ್ವರಿ