ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

ಇತ್ತೀಚೆಗೆ ಕಸಾಪ ಸಮ್ಮೇಳನದ ಪರ್ಯಾಯವಾಗಿ ಜನ ಸಾಹಿತ್ಯ ಸಮ್ಮೇಳನ ನಡೆಸಿ, ಜನಾಂಗ ದ್ವೇಷ ಅಳಿಯಲಿ ಎಂದು ಬಾಯಿಮಾತಿನಲ್ಲಿ ಹೇಳಿದ ಎಡಬಿಡಂಗಿಗಳೇ, ಅದು ಕೇವಲ ಬಾಯಿ ಮಾತಾಗಿರದೇ, ಕೃತಿಯಲ್ಲಿಯೂ ಮೂಡಿಸ ಬೇಕು. ಈ ದೇಶದ ಬಹುಸಂಖ್ಯಾತರು ವಿವಿಧತೆಯಲ್ಲಿ ಏಕತೆಯನ್ನು ತೋರಿದರೆ, ಅಲ್ಪಸಂಖ್ಯಾತರು ಮಾತ್ರಾ ಅದೇ ಏಕತೆಯನ್ನು ಧಿಕ್ಕರಿಸುತ್ತಿರುವುದರಿಂದಲೇ ಆವರಿಗೆ ಈ ದೇಶದಲ್ಲಿ ಅಭದ್ರತೆ ಕಾಡುತ್ತಿದೆ ಅಲ್ವೇ? … Read More ವಿವಿಧತೆಯಲ್ಲಿ ಏಕತೆ V/S ಏಕತೆಯಲ್ಲಿ ಭಿನ್ನತೆ

ತಿರುವಳ್ಳುವರ್

ಕನ್ನಡದಲ್ಲಿ ಸರ್ವಜ್ಞ ಕವಿಯಂತೆ ತಮಿಳಿನಲ್ಲಿ ತಿರುವಳ್ಳುವರ್ ಕವಿಯು ತಿರುಕ್ಕುರಳ್ ಎಂಬ ದ್ವಿಪದಿಗಳ ಮೂಲಕ, ಓದು ಬರಹ ತಿಳಿಯದ ಅನಕ್ಷರಸ್ಥರೂ ಜೀವನದ ಕಲೆಯ ಬಗ್ಗೆ ತಿಳಿಯುವಂತೆ ಮಾಡುವ ಮೂಲಕ ಪ್ರಸಿದ್ದಿಯಾಗಿದ್ದು ಅಂತಹ ಮಹಾನ್ ಸಾಧಕರ ಜನ್ಮದಿನದಂದು ಅವರ ಬಗ್ಗೆ ತಿಳಿಯೋಣ ಬನ್ನಿ.… Read More ತಿರುವಳ್ಳುವರ್

ಸಂಕಟ ಬಂದಾಗ ವೆಂಕಟರಮಣ

ತಾನೊಬ್ಬ ಮಾಸ್ ಲೀಡರ್ ಎನ್ನುವ ಹುಂಬತನದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುಲಭವಾಗಿ ಗೆಲ್ಲಲು ಒಂದು ಸುರಕ್ಷಿತ ಕ್ಷೇತ್ರವಿಲ್ಲವೇ? ಮಾಂಸ ಸೇವಿಸಿ ಹಿಂದೂ ಶ್ರೀಕ್ಷೇತ್ರಗಳಿಗೆ ಭೇಟಿ ನೀಡುವ ಸಿದ್ದು, ಕೋಲಾರ ಕ್ಷೇತ್ರ ಸುರಕ್ಷಿತವಲ್ಲಾ ಎಂದು ಎರಡನೇ ಟಿಕೆಟ್ ಗಳಿಸಿಕೊಳ್ಳಲು, ತಮ್ಮೂರಿನ ದೇವತೆಯು ಮೊರೆ ಹೊಕ್ಕಿರುವುದು, ಯಾಕೋ ಕಾಂತಾರ ಸಿನಿಮಾದಲ್ಲಿನ ಧಣಿ, ದೈವ ನರ್ತಕ ಗುರವನಿಗೆ ಆಮಿಷವೊಡ್ಡಿ ತಾನು ಹೇಳಿದಂತೆ ದೈವ ನುಡಿಯಬೇಕೆಂದು ತಾಕೀತು ಮಾಡಿದಂತಿದೆ ಎನಿಸುತ್ತಿದೆ ಅಲ್ವೇ?… Read More ಸಂಕಟ ಬಂದಾಗ ವೆಂಕಟರಮಣ

ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

ಮುಸ್ಲಿಂ ಹೆಣ್ಣುಮಕ್ಕಳು ಶಾಲೆಗೆ ಹೋಗ ಬಾರದು ಎಂಬ ನಿರ್ಭಂಧ ಇದ್ದಂತಹ ದಿನಗಳಲ್ಲಿಯೇ ಮೆಟ್ರಿಕ್ ವರೆಗೂ ಓದಿ, ಹೆಣ್ಣು ಮಕ್ಕಳ ಕುರಿತಾಗಿ ಮುಸ್ಲಿಮ್ಮರಲ್ಲಿದ್ದ ಧೋರಣೆಯನ್ನು ಮಹಿಳಾ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಚಿಂತನೆಯ ದೃಷ್ಟಿಯಿಂದ ಕಟುವಾಗಿ ಟೀಕಿಸುತ್ತಾ, ಅದರಲ್ಲೂ ಅರೇಬಿಯಾ ಮೂಲದ ವಹಾಬಿಸಂ ವಿರುದ್ಧ ಗಟ್ಟಿಯಾದ ಧನಿ ಎತ್ತುತ್ತಿದ್ದ ಶ್ರೀಮತಿ ಸಾರಾ ಅಬ್ಬೂಬ್ಬಕರ್ ತಮ್ಮ 86ನೇ ವಯಸ್ಸಿನಲ್ಲಿ 10.01.2023 ಮಂಗಳವಾರ ಮವಯೋಸಹಜ ಕಾರಣಗಳಿಂದ ನಿಧನರಾಗುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದರೂ ತಪ್ಪಾಗದು… Read More ಪ್ರಗತಿಪರ ಮುಸ್ಲಿಂ ಚಿಂತಕಿ ಸಾರಾ ಅಬೂಬ್ಕರ್

ಕೆ. ಸತ್ಯನಾರಾಯಣ (ಕನ್ನಡಪ್ರಭ ಸತ್ಯ)

ಆರು ದಶಕಗಳ ಕಾಲ ಪತ್ರಕರ್ತರಾಗಿ ಪತ್ರಿಕಾಗೋಷ್ಠಿಗಳಿಗೆ ಪೂರ್ಣ ತಯಾರಿ ಮಾಡಿಕೊಂಡು ಸೂಕ್ತ ಪ್ರಶ್ನೆಗಳ ಮೂಲಕ ರಾಜಕಾರಣಿಗಳನ್ನು ಪೇಚಿಗೆ ಸಿಲುಕಿಸುತ್ತಿದ್ದ ಮತ್ತು ಪೂರ್ವಗ್ರಹವಿಲ್ಲದೇ ವಸ್ತುನಿಷ್ಠ ವರದಿಯನ್ನು ಪ್ರಕಟಿಸುವ ಮೂಲಕ ಸರ್ಕಾರವನ್ನು ಸರಿದಾರಿಗೆ ತರುತ್ತಿದ್ದ ಕೆ. ಸತ್ಯನಾರಾಯಣ (ಸತ್ಯ) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕೆ. ಸತ್ಯನಾರಾಯಣ (ಕನ್ನಡಪ್ರಭ ಸತ್ಯ)

ಸಹಾಯ ಮಾಡುವವರ ಪರಿಸ್ಥಿತಿ

ಇತ್ತೀಚೆಗೆ ದುಡ್ಡು ಇರೋರೆಲ್ಲಾ ಬಡವರಿಗೆ ಸಹಾಯ ಮಾಡಲೇ ಬೇಕು ಎಂಬ ಅಲಿಖಿತ ನಿಯಮವನ್ನು ಅನೇಕರು ಹೊರಡಿಸಿದ್ದಾರೆ. ಹಾಗೆ ಅವರು ನಿರೀಕ್ಷಿಸಿದಷ್ಟು ಉಳ್ಳವರು ಕೊಡದೇ ಹೋದಾಗ, ಅವರಿಗೆ ಹಿಡಿ ಶಾಪವನ್ನು ಹಾಕುವಂತಹವರು ಈ ಪ್ರಸಂಗವನ್ನು ಓದಲೇ ಬೇಕು.… Read More ಸಹಾಯ ಮಾಡುವವರ ಪರಿಸ್ಥಿತಿ

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಇಲ್ಲಿ ನನ್ನದೇನಿದೆ, ಎಲ್ಲವೂ ಭಗವಂತನದು. ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತಿದ್ದ ನಿಸ್ವಾರ್ಥ ನಿಶ್ಕಲ್ಮಶರಾದ ಅಪರೂಪದ ಯೋಗಿಗಳಾಗಿದ್ದ ಶ್ರೀ ಸಿದ್ದೇಶ್ವಸ್ವಾಮಿಗಳ ವ್ಯಕ್ತಿ, ವ್ಯಕ್ತಿತ್ವದ ಜೊತೆ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಡಿಸೆಂಬರ್ 6, ಶೌರ್ಯ ದಿವಸ

ದಾಸ್ಯದ ಪ್ರತೀಕವಾಗಿದ್ದಂತಹ ಕಟ್ಟಡವೊಂದನ್ನು 1992 ಡಿಸೆಂಬರ್ 6ರಂದು ಕರಸೇವಕರು ಕುಟ್ಟಿ ಪುಡಿ ಪುಡಿ ಮಾಡಿದ ದಿನ ಕೇವಲ ಶೌರ್ಯದ ದಿನವಾಗಿರದೇ, ಅದರ ಹಿಂದೆ ಸುಮಾರು 500 ವರ್ಷಗಳ ಕರಾಳ ಇತಿಹಾಸವಿದೆ. ಅಯೋಧ್ಯೆ ರಾಮ ಮಂದಿರದ ಆ ಸುಧೀರ್ಘವಾದ ಹೋರಾಟ ಮತ್ತು ಆ ಕಾರ್ಯದಲ್ಲಿ ಬಲಿದಾನ ಗೈದ ಲಕ್ಷಾಂತರ ರಾಮಭಕ್ತರ ಸವಿವರಗಳು ಇದೋ ನಿಮಗಾಗಿ … Read More ಡಿಸೆಂಬರ್ 6, ಶೌರ್ಯ ದಿವಸ

ಮಡಿಕೇರಿ ದಸರಾ

ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯುವ ದಸರಾದಂತೆಯೇ ಕೊಡಗಿನ ಮಡಿಕೇರಿಯ ದಸರಾ ಆಚರಣೆಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇಂತಹ ಅದ್ದೂರಿಯಾದ ಮಡಿಕೇರಿ ದಸರಾ ಹಬ್ಬದ ಹಿನ್ನೆಲೆ ಮತ್ತು ಆಚರಣೆಯ ಬಗ್ಗೆ ಸವಿಸ್ತಾರವಾಗಿ ತಿಳಿದು ಕೊಳ್ಳೋಣ. ಮೈಸೂರಿನ ದಸರಾಕ್ಕಿರುವ ಇತಿಹಾಸದಂತೆಯೇ ಮಡಿಕೇರಿ ದಸರಾಕ್ಕೂ ಪುರಾತನವಾದ ಇತಿಹಾಸವಿದ್ದು,… Read More ಮಡಿಕೇರಿ ದಸರಾ