ಲೈಫ್ ಇಷ್ಟೇ ಗುರು

ಕುಟುಂಬದ ಮುಖ್ಯಸ್ಥರ ಮರಣದ ನಂತರ ಆಸ್ತಿ ಮತ್ತು ಹಣಕಾಸಿನೊಂದಿಗೆ ವ್ಯವಹರಿಸಿದ್ದವರ ಕಷ್ಟ ನಷ್ಟಗಳ ಕುರಿತಾದ ಈ ಸುದೀರ್ಘವಾದ ಲೇಖನವನ್ನು ಸ್ವಲ್ಪ ಸಮಯ ಕೊಟ್ಟು ಸಮಚಿತ್ತದಿಂದ ಓದ ಬೇಕೆಂದು ಕಳಕಳಿಯ ಮನವಿ. ಗಂಡ ಸಾಫ್ಟ್ ವೇರ್ ಇಂಜೀನಿಯರ್ ಆಗಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಅವರ ಮಡದಿ ಚಾರ್ಟಡ್ ಅಕೌಂಟೆಂಟ್ ಆಗಿದ್ದರು. ಇಬ್ಬರಿಗೂ ಕೈ ತುಂಬಾ ಕೆಲಸ ಜೋಬು ತುಂಬಿ ತುಳುಕುವಷ್ಟು ಹಣ ಇದ್ದ ಕಾರಣ ಮನೆ ಮಠ ಸಂಸಾರದ ಮಕ್ಕಳು ಮಾಡಿಕ್ಕೊಳ್ಳುವುದಕ್ಕೂ ಪುರುಸೊತ್ತು ಇಲ್ಲದಷ್ಟು ಇಬ್ಬರೂ ತಮ್ಮ… Read More ಲೈಫ್ ಇಷ್ಟೇ ಗುರು

ಮಹಿಳಾ ಸಭ್ಯತೆ ಮತ್ತು ಸಬಲೀಕರಣ

ಈ ವಾರದ ಅನೇಕ ಸುದ್ದಿಗಳಲ್ಲಿ ಎರಡು ಸುದ್ದಿಗಳು ರಾಜ್ಯ ಮತ್ತು ರಾಷ್ಟ್ರಾದ್ಯಂತ ಒಂದು ರೀತಿಯ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡುತ್ತಿವೆ. ಮೊದಲನೆಯದು ತನ್ನ ವಯಕ್ತಿಕ ತೆವಲಿಗೋ ಇಲ್ಲವೇ ಮತ್ತಾರದ್ದೋ ರಾಜಕೀಯ ತೆವಲಿಗೆ ದಾಳವಾಗಿ ಪ್ರಪಂಚಾದ್ಯಂತ ಬಟ್ಟ ಬಯಲಾದ ಮಹ್ಲಿಳೆಯೊಬ್ಬಳದ್ದಾದರೇ, ಮತ್ತೊಂದು ಮಹಿಳೆಯರ ಉಡುಪಿನ ಬಗ್ಗೆ ಕಾಳಜಿಯುಕ್ತ ಮಾತನಾಡಿದ ಉತ್ತರಾಖಂಡ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರನ್ನು ಪ್ರಿಯಾಂಕ ವಾದ್ರಾಳೂ ಸೇರಿದಂತೆ ತಮ್ಮನ್ನು ತಾವು ಪ್ರಗತಿಪರ ಎಂದು ತೋರಿಸಿಕೊಳ್ಳುಲು ಹಪಾಹಪಿ ಪಡುವ ಕೆಲ ಮಹಿಳೆಯರು ಹಿಗ್ಗಾ ಮುಗ್ಗಾ… Read More ಮಹಿಳಾ ಸಭ್ಯತೆ ಮತ್ತು ಸಬಲೀಕರಣ

ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ವೇ.ಬ್ರ.ಶ್ರೀ. ಹರೀಶ್ ಶರ್ಮಾರವರ ನೇತೃತ್ವದಲ್ಲಿ ಶ್ರೀ ಸನಾತನ ವೇದಪಾಠ ಶಾಲೆ ಕಳೆದ ನಾಲ್ಕು ವರ್ಷಗಳಿಂದಲೂ ಬೆಂಗಳೂರಿನ ವಿದ್ಯಾರಣ್ಯಪುರದ ಸುತ್ತಮುತ್ತಲಿನ ಆಸ್ತಿಕ ಬಂಧುಗಳಿಗೆ ಹೆಂಗಸರು ಮತ್ತು ಗಂಡಸರು ಎಂಬ ಬೇಧ ಭಾವವಿಲ್ಲದೇ, ವೇದ ಮಂತ್ರಗಳು, ದೇವಾತಾರ್ಚನೆ, ನಿತ್ಯಪೂಜೆ ಮತ್ತು ವೇದ ಮಂತ್ರಗಳನ್ನು ವಿದ್ಯಾರಣ್ಯಪುರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲಿಸುಕೊಡುತ್ತಿದ್ದಾರೆ. ತನ್ಮೂಲಕ ಆಬಾಲಾವೃದ್ಧರಾದಿಗಾಗಿ ನೂರಾರು ವಿದ್ಯಾರ್ಥಿಗಳು ಸಂಧ್ಯಾವಂದನೆ ಮಂತ್ರಗಳು, ರುದ್ರ, ಚಮಕ, ಎಲ್ಲಾ ದೇವಾನು ದೇವತೆಗಳ ಸೂಕ್ತವನ್ನು ಕಲಿತುಕೊಂಡು ಸನಾತನ ಧರ್ಮಾಧಾರಿತವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 2020-21ರಲ್ಲಿ… Read More ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ಅಮಾಯಕರು

ಉತ್ತರ ಪ್ರದೇಶದ ಅದೊಂದು ಹಳ್ಳಿ. ಹಳ್ಳಿ ಎಂದ ಮೇಲೆ ಅಲ್ಲಿ ಸವರ್ಣೀಯರು ಮತ್ತು ದಲಿತರು ಎಲ್ಲರೂ ವಾಸಿಸುತ್ತಿದ್ದರು ಎಂದು ಪ್ರತ್ಯೇಕವಾಗಿ ಹೇಳ ಬೇಕಿಲ್ಲ. ಅದೇ ರೀತಿ ಹಳ್ಳಿ ಎಂದ ಮೇಲೆ ನೆರೆ ಹೊರೆಯವರ ಜೊತೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದೊಂದು ದಿನ ಒಬ್ಬರು ತಮ್ಮ ಸೊಸೆಯೊಂದಿಗೆ ಸೀದಾ ಪೋಲೀಸ್ ಠಾಣೆಗೆ ಹೋಗಿ ವಿಷ್ಣು ಎಂಬ 25ರ ತರುಣ ತಮ್ಮ ಮನೆಯ ಗರ್ಭಿಣಿ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಹೊಡೆದ ಆರೋಪವನ್ನು ಮಾಡಿದ್ದಲ್ಲದೇ,… Read More ಅಮಾಯಕರು

ಶಿವರಾತ್ರಿಯಂದು ಶಿವನ ಪಾದ ಸೇರಿದ ಚಿಂಟು

ಕೆಲವು ವಾರಗಳ ಹಿಂದೆ ನಮ್ಮ ನಮ್ಮ ಮನೆಯ ಮುಂದಿನ ಮೋರಿಯಲ್ಲಿ ಅದೆಲ್ಲಿಂದಲೋ ಬಂದ ಹೆಣ್ಣು ನಾಯೊಂದು ಏಳೆಂಟು ಮರಿಗಳನ್ನು ಹಾಕಿ ಮೂರ್ನಾಲ್ಕನ್ನು ಇಲ್ಲಿಯೇ ಬಿಟ್ಟು ಉಳಿದ ನಾಲ್ಕೈದು ಮರಿಗಳನ್ನು ಪಕ್ಕದ ರಸ್ತೆಯ ಮತ್ತೊಂದು ಸುರಕ್ಷಿತ ತಾಣಕ್ಕೆ ಕರೆದುಕೊಂಡು ಹೊಗಿತ್ತು. ಮನೆಯ ಮುಂದಿನ ರಸ್ತೆಯಲ್ಲಿ ಕ್ರಿಕೆಟ್ ಆಡುವ ನನ್ನ ಮಗ ಮೋರಿಯಲ್ಲಿ ಬಿದ್ದ ತನ್ನ ಚೆಂಡನ್ನು ತೆಗೆದುಕೊಳ್ಳಲು ಹೋದಾಗ, ಇನ್ನೂ ಕಣ್ಣನ್ನೇ ತೆರೆಯದಿದ್ದ ಈ ಪುಟ್ಟ ನಾಯಿಮರಿಗಳು ಕುಂಯ್ ಕುಂಯ್ ಎಂದು ಶಬ್ಧ ಮಾಡುತ್ತಿದ್ದನ್ನು ನೋಡಿದ ತಕ್ಷಣ, ಕ್ರಿಕೆಟ್… Read More ಶಿವರಾತ್ರಿಯಂದು ಶಿವನ ಪಾದ ಸೇರಿದ ಚಿಂಟು

ಮದನ ಮತ್ತು ಮಾನಿನಿ

ಸೂರ್ಯವಂಶದ ಕೌಶಿಕ ಮಹಾರಾಜ ವಸಿಷ್ಠ ಮುನಿಗಳ ಆಶ್ರಮದಲ್ಲಿ ಅವಮಾನಿತನಾಗಿ. ಘೋರ ತಪಸ್ಸನ್ನು ಮಾಡಿ ವಿಶ್ವಾಮಿತ್ರ ಎಂಬ ರಾಜರ್ಷಿ ಪಟ್ಟವನ್ನು ಪಡೆಯುತ್ತಾನೆ. ನಂತರ ತನ್ನ ಅನುಯಾಯಿ ತ್ರಿಶಂಕುವನ್ನು ಸ್ವರ್ಗಕ್ಕೆ ಸೇರಿಸಿಕೊಳ್ಳಲು ಒಪ್ಪದ ಇಂದ್ರನ ವಿರುದ್ಧವೇ ಸಿಡಿದೆದ್ದು ತ್ರಿಂಶಂಕು ಸ್ವರ್ಗವನ್ನೇ ಸೃಷ್ಟಿಸಿದ್ದಲ್ಲದೇ, ಇಂದ್ರ ಪಟ್ಟವನ್ನೇ ಪಡೆಯಬೇಕೆಂದು ನಿರ್ಧರಿಸಿದ ವಿಶ್ವಾಮಿತ್ರರು ಘನ ಘೋರ ತಪಸ್ಸನ್ನು ಮಾಡುವುದನ್ನು ಗಮನಿಸಿದ ಇಂದ್ರ, ಭಯಭೀತನಾಗಿ ಪರಮ ಸುಂದರಿಯಾದ ಮೇನಕೆಯನ್ನು ವಿಶ್ವಾಮಿತ್ರರ ತಪ್ಪಸ್ಸನ್ನು ಭಂಗ ಮಾಡಲು ಕಳುಹಿಸಿ ಯಶಸ್ವಿಯಾಗಿದ್ದಲ್ಲದೇ, ಅವರಿಬ್ಬರ ದಾಂಪತ್ಯದ ಫಲವಾಗಿ ಶಕುಂತಲೆಯ ಜನನಕ್ಕೆ ಕಾರಣೀಭೂತವಾಗುತ್ತದೆ.… Read More ಮದನ ಮತ್ತು ಮಾನಿನಿ

ಪೊಗರು ಇಳಿಸಿದ ಪರಿ

ಕಳೆದ ಶುಕ್ರವಾರ ಬಹು ನಿರೀಕ್ಷಿತ ನಂದಕಿಶೋರ್ ನಿರ್ದೇಶಿಸಿದ ಮತ್ತು ಧೃವ ಸರ್ಜಾ ನಟಿಸಿದ ಪೊಗರು ಚಿತ್ರ, ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಇದೇ ಚಿತ್ರಕ್ಕಾಗಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಪಾತ್ರಕ್ಕೆ ತಕ್ಕಂತೆ ತನ್ನ ದೇಹವನ್ನು ಸಣ್ಣ ಮತ್ತು ದಪ್ಪ ಮಾಡಿಕೊಂಡಿದ್ದ ಧೃವ ಸರ್ಜಾ ಬಗ್ಗೆ ಎಲ್ಲರೂ ಹಾಡಿ ಹೊಗಳುತ್ತಿದ್ದದ್ದನ್ನು ಓದಿ, ಕೇಳಿ ಎಲ್ಲರೂ ಪುಳಕಿತಗೊಂಡಿದ್ದಂತೂ ಸುಳ್ಳಲ್ಲ. ಆದರೆ ಶುಕ್ರವಾರ ಸಂಜೆ ಆಗುತ್ತಿದ್ದಂತೆಯೇ ಚಿತ್ರದಲ್ಲಿ ಒಂದು ಸಮುದಾಯವನ್ನು ಬಹಳ ಕೀಳಾಗಿ ಚಿತ್ರೀಕರಿಸಲ್ಪಟ್ಟಿದೆ ಎಂಬ… Read More ಪೊಗರು ಇಳಿಸಿದ ಪರಿ

ಬೌದ್ಧಿಕ ದಿವಾಳಿತನ

ಒಂದು ಸಿನಿಮಾದಲ್ಲಿನ ಸನ್ನಿವೇಶಕ್ಕಾಗಿ ಬ್ರಾಹ್ಮಣರು ಇಷ್ಟೊಂದು ಆವೇಶಗೊಳ್ಳುವ ಅವಶ್ಯಕತೆ ಇರಲಿಲ್ಲ. ಸಿನಿಮಾ ಒಂದು ಕಲಾಮಾಧ್ಯಮ. ಅದರಲ್ಲಿನ ಸನ್ನಿವೇಶಕ್ಕೆ ಬ್ರಾಹ್ಮಣರ ಮೇಲೆ ಕಾಲಿಟ್ಟಿದ್ದಕ್ಕೆ ಬ್ರಾಹ್ಮಣರು ಇಷ್ಟೊಂದು ಅಸಹನೆ ತೋರಿಸುವುದು ಬ್ರಾಹ್ಮಣರಲ್ಲಿ ಬೆಳೆಯುತ್ತಿರುವ ಮೂಲಭೂತವಾದವನ್ನು ತೋರಿಸುತ್ತದೆ. ಬ್ರಾಹ್ಮಣರು ತಮ್ಮ ಜಾತಿಗೆ ಅವಮಾನ ಮಾಡಲಾಗಿದೆ ಆ ಪೂಜಾರಿ ಪಾತ್ರಧಾರಿಯ ಹೆಗಲಮೇಲೆ ಕಾಲಿಟ್ಟ ದೃಶ್ಯವನ್ನು ಕತ್ತರಿಸಬೇಕೆಂದು ಪ್ರತಿಭಟನೆ ಮಾಡುತ್ತಾರಂತೆ..😛 ಆದರೆ ಮತ್ತೊಬ್ಬ ಸಹಕಲಾವಿದನ ತಲೆಯಮೇಲೆ ಕಾಲಿಟ್ಟರು ಅದನ್ನು ಕೇಳುವವರು ಯಾರಿಲ್ಲ ಯಾಕೆಂದರೆ ಇಲ್ಲಿ ಮನುಷ್ಯನಿಗಿಂತ ಆತ ಪ್ರತಿನಿಧಿಸುವ ಜಾತಿಗೆ ಹೆಚ್ಚು ಪ್ರಾಮುಖ್ಯತೆ ಇದೆ…🤨… Read More ಬೌದ್ಧಿಕ ದಿವಾಳಿತನ

ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇಕಾಯಿ

ಅವರೊಬ್ಬರು ಹಿರಿಯ ರಾಜಕಾರಣಿಗಳು. ಬಹಳ ವರ್ಷಗಳಿಂದ ಹೋರಾಟದ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಯೆಯನ್ನು ಮೂಡಿಸಿಕೊಂಡಿದ್ದರು. ಮಾತೆತ್ತಿದ್ದರೆ, ನಾನು ಅಂಬೇಡ್ಕರ್ ಅವರ ಅನುಯಾಯಿ, ನನ್ನನ್ನು ಒಂದು ಧರ್ಮಕ್ಕೆ ಮೀಸಲಾಗಿಸ ಬೇಡಿ ನನಗೆ ನನ್ನ ಧರ್ಮ ಗ್ರಂಥಕ್ಕಿಂತಲೂ ಅಂಬೇಡ್ಕರ್ ಅವರ ಸಂವಿಧಾನವೇ ಮುಖ್ಯ ಎಂದು ಓತಪ್ರೋತವಾಗಿ ಮಾತನಾಡುತ್ತಾ, ಜನರುಗಳನ್ನು ಜಾತಿ ಮತ್ತು ಉಪಜಾತಿಗಳ ಮೂಲಕ ಒಡೆಯುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ, ಅಧಿಕಾರದಲ್ಲಿ ಇರಲೀ ಇಲ್ಲದಿರಲೀ ಅತ್ಯುನ್ನತ ಅಧಿಕಾರವನ್ನು ಪಡೆಯುವುದರಲ್ಲಿ ಸಫಲರಾಗಿದ್ದರು. ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ, ತಮ್ಮ… Read More ಹೇಳೋದು ಶಾಸ್ತ್ರ ತಿನ್ನೋದು ಮಾತ್ರಾ ಬದನೇಕಾಯಿ