ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಇಲ್ಲಿ ನನ್ನದೇನಿದೆ, ಎಲ್ಲವೂ ಭಗವಂತನದು. ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತಿದ್ದ ನಿಸ್ವಾರ್ಥ ನಿಶ್ಕಲ್ಮಶರಾದ ಅಪರೂಪದ ಯೋಗಿಗಳಾಗಿದ್ದ ಶ್ರೀ ಸಿದ್ದೇಶ್ವಸ್ವಾಮಿಗಳ ವ್ಯಕ್ತಿ, ವ್ಯಕ್ತಿತ್ವದ ಜೊತೆ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಫುಟ್ಬಾಲ್ ದಂತ ಕಥೆ ಜರ್ಸಿ #10, ಪೀಲೆ

ಬ್ರೆಜಿಲ್ಲಿನ ಸಾಮಾನ್ಯ ಕಪ್ಪು ಜನರ ಹುಡುಗ, ತನ್ನ ಅಮೋಘವಾದ ಆಟದಿಂದಾಗಿ ತನ್ನ ದೇಶ ಬ್ರಿಜಿಲ್ಲಿಗೆ ಮೂರು ಬಾರಿ ವಿಶ್ವಕಪ್ ಗೆಲ್ಲಿಸಿಕೊಡುವ ಮೂಲಕ ವಿಶ್ವವಿಖ್ಯಾತನಾಗಿದ್ದ ಪುಟ್ಬಾಲ್ ಆಟಗಾರ ಪೀಲೆ ನೆನ್ನೆ ಸಂಜೆ ನಿಧನರಾಗಿರುವುದು ನಿಜಕ್ಕೂ ಬೇಸರ ಸಂಗತಿಯಾಗಿದೆ. ಪೀಲೆ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಫುಟ್ಬಾಲ್ ದಂತ ಕಥೆ ಜರ್ಸಿ #10, ಪೀಲೆ

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಪತ್ರಕರ್ತರೊಬ್ಬರು ಅಚಾನಕ್ ಆಗಿ ಅಪರೂಪ/ಅನುರೂಪದ ರಾಜಕಾರಣಿಯಾಗಿ, ಹಿರಿಯ ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಅಂತಿಮವಾಗಿ ದೇಶ ಕಂಡ ಶ್ರೇಷ್ಥ ಪ್ರಧಾನ ಮಂತ್ರಿಯಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವರು ದೇಶಕ್ಕೆ ನೀಡಿದ ಕೊಡುಗೆಯ ಜೊತೆಗೆ ಅವರ ಕುರಿತಾದ ವಿಶೇಷವಾದ ಮಾಹಿತಿಗಳು ಇದೋ ನಿಮಗಾಗಿ… Read More ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ಗವಾಸ್ಕರ್ ಅವರ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ತಮ್ಮದೇ ಆದ ಅಪೂರ್ವ ರೀತಿಯಾದ ಹೊಡೀ ಬಡೀ ಶೈಲಿಯ ಬ್ಯಾಟಿಂಗ್ ನಿಂದ ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗನ್ನು ತಂದು ಕೊಡುವ ಮೂಲಕ ಇಂದಿಗೂ ಸಹಾ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರ ಕ್ರಿಕೆಟ್ ಜಗತ್ತಿನ ಏಳು ಬೀಳುಗಳ ಸುಂದವಾದ ಇಣುಕು ನೋಟ ಇದೋ ನಿಮಗಾಗಿ… Read More ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

ದುಡುಕಿದರೇ ದತ್ತಾ ವೈ ಎಸ್ ವಿ

ಜಾತ್ಯಾತೀತ ಜನತಾದಳದ ಹಿರಿಯ ನಿಷ್ಟಾವಂತ ನಾಯಕರಾದ ವೈ.ಎಸ್.ವಿ. ದತ್ತಾ ಅವರು, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅವರ ಸುದೀರ್ಘವಾದ ರಾಜಕೀಯ ಜೀವನ ಮತ್ತು ಈ ನಿರ್ಧಾರವು ಮುಂಬರುವ ಚುನಾವಣೆಯ ಫಲಿತಾಂಶಕ್ಕೆ ಹೇಗೆ ದಿಕ್ಸೂಚಿಯಾಗಿದೆಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ದುಡುಕಿದರೇ ದತ್ತಾ ವೈ ಎಸ್ ವಿ

ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು

ನಾನು ದೇವನು ಅಲ್ಲಾ ದೇವ ಮಾನವನೂ ಅಲ್ಲಾ ನಾನೊಬ್ಬ ನಿಮ್ಮಂತೆಯೇ ಸಾಮಾನ್ಯ ಮನುಷ್ಯ ಎಂದು ಹೇಳುತ್ತಲೇ ಲಕ್ಷಾಂತರ ಭಕ್ತರನ್ನು ಹೊಂದಿದ್ದಂತಹ ಕಡೂರು ತಾಲೂಕಿನ ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ಬಗ್ಗೆ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿದುಕೊಳ್ಳೋಣ… Read More ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು

ಕೆರೆಯ ನೀರನು ಕೆರೆಗೆ ಚಲ್ಲುವ ಸ್ಯಾಡಿಯೊ ಮಾನೆ

ಆಫ್ರಿಕನ್ ಖಂಡದ ಸೆನೆಗಲ್ ಎಂಬ ದೇಶದ ಅತ್ಯದ್ಭುತ ಫುಟ್ಬಾಲ್ ವೃತ್ತಿ ಪರ ಆಟಗಾರನಾದ ತಮ್ಮ ಒತ್ತುವಿಕೆ, ಡ್ರಿಬ್ಲಿಂಗ್ ಮತ್ತು ವೇಗಕ್ಕೆ ಹೆಸರುವಾಸಿಯಾಗಿ ಆಫ್ರಿಕ ಖಂಡದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ, ತಮ್ಮ ಸಂಪಾದನೆಯಿಂದ ವರ್ಷಕ್ಕೆ $14 ಮಿಲಿಯನ್ ಹಣವನ್ನು ತಮ್ಮ ದೇಶದಲ್ಲಿ ಅಗತ್ಯ ಇರುವವರಿಗೆ ದಾನ ಮಾಡಲೆಂದೇ ಮೀಸಲಾಗಿಡುವ ಮೂಲಕ ಹೆಸರುವಾಸಿಯಾಗಿರುವ ಸ್ಯಾಡಿಯೊ ಮಾನೆ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕೆರೆಯ ನೀರನು ಕೆರೆಗೆ ಚಲ್ಲುವ ಸ್ಯಾಡಿಯೊ ಮಾನೆ

ಕುಂಬ್ಲೆ ಸುಂದರ ರಾವ್

ಮಾತೃಭಾಷೆ ಮಲೆಯಾಳಂ ಆಗಿದ್ದರೂ, ಕನ್ನಡದಲ್ಲಿ ಯಕ್ಷಗಾನ ಮತ್ತು ತಾಳ-ಮದ್ದಳೆಯ ಖ್ಯಾತ ಕಲಾವಿದರೂ, ಬರಹಗಾರರು, ವಾಗ್ಮಿಗಳೂ, ಸರಳ ಸಜ್ಜನ ಮಾಜಿ ಶಾಸಕರಾಗಿ ರಾಜಕಾರಣಿಯಾಗಿಯೂ ಪ್ರಖ್ಯಾತರಾಗಿದ್ದ ಇಂದು ಬೆಳಿಗ್ಗೆ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದ ಶ್ರೀ ಕುಂಬ್ಲೆ ಸುಂದರ್ ರಾವ್ ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕುಂಬ್ಲೆ ಸುಂದರ ರಾವ್

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್

ಎನ್ನಡ ಎನ್ನುವ ಭಾಷೆಯವರಾಗಿದ್ದು ಕನ್ನಡ ಎನ್ನುತ್ತಾ, ಧಾರ್ಮಿಕ ಮತ್ತು ಸಾರಸ್ವತ ಲೋಕದಲ್ಲಿ ಸದ್ದಿಲ್ಲದೇ ನಿರಂತರವಾಗಿ ಕನ್ನಡ ಸೇವೆಯನ್ನು ಮಾಡುತ್ತಿರುವ ಕನ್ನಡದ ಕಟ್ಟಾಳು, ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಅವರ ಕುರಿತಾಗಿ ಹೆಚ್ಚಿನವರಿಗೆ ತಿಳಿಯದೇ ಇರುವ ಕುತೂಹಲಕಾರಿಯಾದ ವಿಶೇಷವಾದ ವಿಚಾರಗಳು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್