ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

ಸೃಷ್ಟಿ, ಸ್ಥಿತಿ ಮತ್ತು ಲಯಕರ್ತರಾದ ತ್ರಿಮೂರ್ತಿಗಳ ಸಂಯೋಜಿತ ರೂಪ ಎಂದೇ ನಂಬಲಾಗಿರುವ, ಮಾರ್ಗಶಿರ ಮಾಸದ ಪೌರ್ಣಿಮೆಯಂದು ಜನಿಸಿರುವ ಗುರು ದತ್ತಾತ್ರೇಯರ ಜಯಂತಿಯನ್ನು ದತ್ತ ಜಯಂತಿಯೆಂದು ಬಹಳ ಶ್ರದ್ಧಾ ಭಕ್ತಿಯಿಂದ ‌ಆಚರಿಸಲಾಗುತ್ತದೆ. ಶ್ರೀ ದತ್ತಾತ್ರೇಯರ ಜನ್ಮ ರಹಸ್ಯ, ದತ್ತ ಜಯಂತಿಯ ಆಚರಣಾ ಪಧ್ಧತಿ, ಮಹತ್ವ ಮತ್ತು ಫಲಶೃತಿಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

ಡಿಸೆಂಬರ್ 6, ಶೌರ್ಯ ದಿವಸ

ದಾಸ್ಯದ ಪ್ರತೀಕವಾಗಿದ್ದಂತಹ ಕಟ್ಟಡವೊಂದನ್ನು 1992 ಡಿಸೆಂಬರ್ 6ರಂದು ಕರಸೇವಕರು ಕುಟ್ಟಿ ಪುಡಿ ಪುಡಿ ಮಾಡಿದ ದಿನ ಕೇವಲ ಶೌರ್ಯದ ದಿನವಾಗಿರದೇ, ಅದರ ಹಿಂದೆ ಸುಮಾರು 500 ವರ್ಷಗಳ ಕರಾಳ ಇತಿಹಾಸವಿದೆ. ಅಯೋಧ್ಯೆ ರಾಮ ಮಂದಿರದ ಆ ಸುಧೀರ್ಘವಾದ ಹೋರಾಟ ಮತ್ತು ಆ ಕಾರ್ಯದಲ್ಲಿ ಬಲಿದಾನ ಗೈದ ಲಕ್ಷಾಂತರ ರಾಮಭಕ್ತರ ಸವಿವರಗಳು ಇದೋ ನಿಮಗಾಗಿ … Read More ಡಿಸೆಂಬರ್ 6, ಶೌರ್ಯ ದಿವಸ

ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

ಪುಟ್ಬಾಲ್ ಆಟ ಆಟಗಾರರ ಕಾಲ್ಚಳಕದ ಅನುಗುಣವಾಗಿ ಅತ್ಯಂತ ವೇಗವಾಗಿ ಆಡುವ ಆಟವಾಗಿದ್ದು, ಚಂಡಿನ ಚಲನವಲನದ ಬಗ್ಗೆ ನಿಖರವಾದ ತೀರ್ಪು ನೀಡುವುದು ತುಸು ತ್ರಾಸವಾಗಿರುವುದನ್ನು ಮನಗಂಡ FIFA, ಈ ಬಾರಿಯ ಕತಾರ್ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶೇಷ ತಂತ್ರಜ್ಣಾನ ಅಳವಡಿಸಿರುವ ಅಲ್ ರಿಹ್ಲಾ ಚಂಡುಗಳನ್ನು ಬಳಸುತ್ತಿರುವುದು ವಿಶೇಷವಾಗಿದೆ.

ಹಾಗಾದರೆ ಈ ಅಲ್ ರಿಹ್ಲಾ ಚಂಡುಗಳ ವಿಶೇಷತೆ ಏನು? ಅದನ್ನು ಆವಿಷ್ಕರಿಸಿದವರು ಯಾರು? ಈ ಚಂಡುಗಳು ಪಂದ್ಯಗಳ ಫಲಿತಾಂಶದ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎಂಬುದರ ಸವಿವರ ಇದೋ ನಿಮಗಾಗಿ… Read More ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು

ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಕೇಳಿದಷ್ಟು ಹಣವನ್ನು ಕೊಟ್ಟ ಪೋಷಕರ ಔದಾರ್ಯತೆ, ಮನೆ ಮತ್ತು ಶಾಲೆಗಳ ಉತ್ತಮ ಸಂಸ್ಕಾರದ ಕೊರತೆ, ಸಿನಿಮಾ, ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ, ಇನ್ನೂ ಮಕ್ಕಳಂತೆ ಆಟವಾಡ ಬೇಕಾದ ವಯಸ್ಸಿನಲ್ಲಿ, ಮಕ್ಕಳನ್ನು ಮಾಡಿಕೊಳ್ಳುವ ಆಟವನ್ನು ಕದ್ದು ಮುಚ್ಚಿ ಆಡುವಷ್ಟ್ರ ಮಟ್ಟಿಗೆ ಬೆಳೆದು ಬಿಟ್ಟಿರುವುದು ದೇಶದ ಹಿತದೃಷ್ಟಿಯಿಂದ ಮಾರಕವೇ ಸರಿ. ನಿಜವಾಗಿಯೂ ಕಾಲ ಕೆಟ್ಟಿಲ್ಲ, ಕೆಟ್ಟಿರುವುದು ನಮ್ಮ ಮನಸ್ಥಿತಿ ಮತ್ತು ಆನುಚರಣೆ ಅಲ್ವೇ?… Read More ಬೇಲಿಯೇ ಎದ್ದು ಹೊಲಮೇಯ್ದರೆ, ಹೊಲವನ್ನು ಕಾಯುವವರಾರು?

ಕುಂಬ್ಲೆ ಸುಂದರ ರಾವ್

ಮಾತೃಭಾಷೆ ಮಲೆಯಾಳಂ ಆಗಿದ್ದರೂ, ಕನ್ನಡದಲ್ಲಿ ಯಕ್ಷಗಾನ ಮತ್ತು ತಾಳ-ಮದ್ದಳೆಯ ಖ್ಯಾತ ಕಲಾವಿದರೂ, ಬರಹಗಾರರು, ವಾಗ್ಮಿಗಳೂ, ಸರಳ ಸಜ್ಜನ ಮಾಜಿ ಶಾಸಕರಾಗಿ ರಾಜಕಾರಣಿಯಾಗಿಯೂ ಪ್ರಖ್ಯಾತರಾಗಿದ್ದ ಇಂದು ಬೆಳಿಗ್ಗೆ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದ ಶ್ರೀ ಕುಂಬ್ಲೆ ಸುಂದರ್ ರಾವ್ ಅವರ ಯಶೋಗಾಥೆಯನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕುಂಬ್ಲೆ ಸುಂದರ ರಾವ್

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್

ಎನ್ನಡ ಎನ್ನುವ ಭಾಷೆಯವರಾಗಿದ್ದು ಕನ್ನಡ ಎನ್ನುತ್ತಾ, ಧಾರ್ಮಿಕ ಮತ್ತು ಸಾರಸ್ವತ ಲೋಕದಲ್ಲಿ ಸದ್ದಿಲ್ಲದೇ ನಿರಂತರವಾಗಿ ಕನ್ನಡ ಸೇವೆಯನ್ನು ಮಾಡುತ್ತಿರುವ ಕನ್ನಡದ ಕಟ್ಟಾಳು, ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಅವರ ಕುರಿತಾಗಿ ಹೆಚ್ಚಿನವರಿಗೆ ತಿಳಿಯದೇ ಇರುವ ಕುತೂಹಲಕಾರಿಯಾದ ವಿಶೇಷವಾದ ವಿಚಾರಗಳು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್

ಜಿ. ಕೆ. ವೆಂಕಟೇಶ್

ಹೈದರಾಬಾದಿನಲ್ಲಿ ಹುಟ್ಟಿ, ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು, ಗಾಯಕ, ಸಂಗೀತ ನಿರ್ದೇಶಕ, ನಟ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಅನೇಕ ಪ್ರಥಮಗಳಿಗೆ ಕಾರಣೀಭೂತರಾಗಿದ್ದ, ದಕ್ಷಿಣ ಭಾರತದ ಅಷ್ಟೂ ಚಿತ್ರರಂಗದಲ್ಲಿ ಕನ್ನಡದ ಸಂಗೀತ ನಿರ್ದೇಶಕರು ಎಂದೇ ಪ್ರಖ್ಯಾತರಾಗಿದ್ದ ಶ್ರೀ ಜಿ.ಕೆ. ವೆಂಕಟೇಶ್ ಅವರ ಸಾಧನೆಗಳ ಇಣುಕು ನೋಟವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಜಿ. ಕೆ. ವೆಂಕಟೇಶ್

ಎಂ.ಪಿ ಪ್ರಕಾಶ್

ರಾಜಕೀಯದದಲ್ಲಿ ಸೋಲು ಗೆಲುವುಗಳನ್ನು ಸಮ ಪ್ರಮಾಣದಲ್ಲಿ ಅನುಭವಿಸಿದ್ದರೂ, ಸಿಕ್ಕ ಅವಕಾಶಗಳಲ್ಲೇ ನೂರಾರು ಜನಪರ ಕೆಲಸಗಳ ಜೊತೆ ಸಾಹಿತಿ, ನಟ, ನಿರ್ದೇಶಕ, ರಂಗಕರ್ಮಿ ಮತ್ತು ಸಮಾಜವಾದಿ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿ, ಕರ್ನಾಟಕದ ರಾಜಕೀಯದಲ್ಲಿ ಒಬ್ಬ ಸರಳ ಸಜ್ಜನರೆಂದೇ ಪ್ರಖ್ಯಾತರಾಗಿ, ರಾಜ್ಯದ ಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೂ ಆಗಿದ್ದ ಶ್ರೀ ಎಂ.ಪಿ. ಪ್ರಕಾಶ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಎಂ.ಪಿ ಪ್ರಕಾಶ್

ಕಾಡಿನರಾಜ ಎಂ. ಪಿ. ಶಂಕರ್

ಹಲವಾರು ಸದಭಿರುಚಿಯ ಚಿತ್ರಗಳಲ್ಲಿ ನಟಿಸಿದ್ದಲ್ಲದೇ ಕಾಡು ಮತ್ತು ಕಾಡು ಪ್ರಾಣಿಗಳ ಸಂರಕ್ಷಣೆಯ ಕುರಿತಾದ ಗಂಧದ ಗುಡಿ, ಮೃಗಾಲಯ, ಕಾಡಿನ ರಾಜ, ಕಾಡಿನ ರಹಸ್ಯ, ರಾಮಾ ಲಕ್ಷ್ಮಣ ಮುಂತಾದ ಪರಿಸರದ ಕುರಿತಾದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶನ ಮಾಡುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಸರಳ ಸಜ್ಜನ, ಶ್ರೀ ಎಂ.ಪಿ. ಶಂಕರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಚಿತ್ರರಂಗದ ಸಾಧನೆಗಳನ್ನು ನಮ್ಮ ಇಂದಿನ್ಗ ಕನ್ನಡದ ಕಲಿಗಳು ಮಾಲಿಕೆಯುಲ್ಲಿ ಇದೋ ನಿಮಗಾಗಿ… Read More ಕಾಡಿನರಾಜ ಎಂ. ಪಿ. ಶಂಕರ್