ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಮನೆಯಲ್ಲಿ ಮೊಸರು ಹೆಚ್ಚಿಗೆ ಉಳಿದು ಬಿಟ್ಟಲ್ಲಿ ಅಥವಾ ಮನೆಗೆ ಇದ್ದಕ್ಕಿದ್ದಂತೆಯೇ ಯಾರಾದ್ರೂ ಸಂಬಂಧೀಕರು ಬಂದು ಬಿಟ್ಟಲ್ಲಿ ಅಷ್ಟು ಹೊತ್ತಿನಲ್ಲಿ ಹುಳಿ, ಸಾರು ಮುಂತಾದವುಗಳನ್ನು ಮಾಡಲು ಪುರುಸೊತ್ತು ಇಲ್ಲದಿದ್ದಲ್ಲಿ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಮಜ್ಜಿಗೆ ಹುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಎಳೆಯ ಸೌತೇಕಾಯಿ – 1 ತೆಂಗಿನತುರಿ – 1… Read More ಸೌತೆಕಾಯಿ ಹಸೀ‌ ಮಜ್ಜಿಗೆ ಹುಳಿ

ಸೌತೇಕಾಯಿ ಹಸೀ ಗೊಜ್ಜು

ದೋಸೆ, ಚಪಾತಿ ಅನ್ನದ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಬಗೆ ಬಗೆಯ ಗೊಜ್ಜುಗಳನ್ನು ಮಾಡುವುದು ಸಹಜ. ಈ ಎಲ್ಲಾ ಗೊಜ್ಜುಗಳನ್ನು ಮಾಡಲು ಬಹಳಷ್ಟು ಸಮಯ ಬೇಕಾಗುತ್ತದೆ. ಅದಕ್ಕಾಗಿಯೇ, ದಿಡೀರ್ ಎಂದು ತಯಾರಿಸಬಹುದಾದ ಮತ್ತು ಈ ಬೇಸಿಗೆಯಲ್ಲಿ ತಣ್ಣಗೆ ದೇಹದ ಆರೋಗ್ಯಕ್ಕೂ ಉತ್ತಮವಾದ ಸೌತೇಕಾಯಿ ಹಸೀ ಗೊಜ್ಜು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 4-5 ಜನರು ಸವಿಯಬಹುದಾದಷ್ಟು ಸೌತೇಕಾಯಿ ಹಸೀ ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು ಎಳೆಯ ಸೌತೇಕಾಯಿ – 1 ತೆಂಗಿನತುರಿ… Read More ಸೌತೇಕಾಯಿ ಹಸೀ ಗೊಜ್ಜು

ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ವೇ.ಬ್ರ.ಶ್ರೀ. ಹರೀಶ್ ಶರ್ಮಾರವರ ನೇತೃತ್ವದಲ್ಲಿ ಶ್ರೀ ಸನಾತನ ವೇದಪಾಠ ಶಾಲೆ ಕಳೆದ ನಾಲ್ಕು ವರ್ಷಗಳಿಂದಲೂ ಬೆಂಗಳೂರಿನ ವಿದ್ಯಾರಣ್ಯಪುರದ ಸುತ್ತಮುತ್ತಲಿನ ಆಸ್ತಿಕ ಬಂಧುಗಳಿಗೆ ಹೆಂಗಸರು ಮತ್ತು ಗಂಡಸರು ಎಂಬ ಬೇಧ ಭಾವವಿಲ್ಲದೇ, ವೇದ ಮಂತ್ರಗಳು, ದೇವಾತಾರ್ಚನೆ, ನಿತ್ಯಪೂಜೆ ಮತ್ತು ವೇದ ಮಂತ್ರಗಳನ್ನು ವಿದ್ಯಾರಣ್ಯಪುರದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲಿಸುಕೊಡುತ್ತಿದ್ದಾರೆ. ತನ್ಮೂಲಕ ಆಬಾಲಾವೃದ್ಧರಾದಿಗಾಗಿ ನೂರಾರು ವಿದ್ಯಾರ್ಥಿಗಳು ಸಂಧ್ಯಾವಂದನೆ ಮಂತ್ರಗಳು, ರುದ್ರ, ಚಮಕ, ಎಲ್ಲಾ ದೇವಾನು ದೇವತೆಗಳ ಸೂಕ್ತವನ್ನು ಕಲಿತುಕೊಂಡು ಸನಾತನ ಧರ್ಮಾಧಾರಿತವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 2020-21ರಲ್ಲಿ… Read More ಶ್ರೀ ಸನಾತನ ವೇದಪಾಠ ಶಾಲೆಯ ಅವಿಸ್ಮರಣೀಯ ಮಹಾ ರುದ್ರಯಾಗ

ಅಮಾಯಕರು

ಉತ್ತರ ಪ್ರದೇಶದ ಅದೊಂದು ಹಳ್ಳಿ. ಹಳ್ಳಿ ಎಂದ ಮೇಲೆ ಅಲ್ಲಿ ಸವರ್ಣೀಯರು ಮತ್ತು ದಲಿತರು ಎಲ್ಲರೂ ವಾಸಿಸುತ್ತಿದ್ದರು ಎಂದು ಪ್ರತ್ಯೇಕವಾಗಿ ಹೇಳ ಬೇಕಿಲ್ಲ. ಅದೇ ರೀತಿ ಹಳ್ಳಿ ಎಂದ ಮೇಲೆ ನೆರೆ ಹೊರೆಯವರ ಜೊತೆ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅದೊಂದು ದಿನ ಒಬ್ಬರು ತಮ್ಮ ಸೊಸೆಯೊಂದಿಗೆ ಸೀದಾ ಪೋಲೀಸ್ ಠಾಣೆಗೆ ಹೋಗಿ ವಿಷ್ಣು ಎಂಬ 25ರ ತರುಣ ತಮ್ಮ ಮನೆಯ ಗರ್ಭಿಣಿ ಸೊಸೆಯ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಹೊಡೆದ ಆರೋಪವನ್ನು ಮಾಡಿದ್ದಲ್ಲದೇ,… Read More ಅಮಾಯಕರು

ಶಿವರಾತ್ರಿಯಂದು ಶಿವನ ಪಾದ ಸೇರಿದ ಚಿಂಟು

ಕೆಲವು ವಾರಗಳ ಹಿಂದೆ ನಮ್ಮ ನಮ್ಮ ಮನೆಯ ಮುಂದಿನ ಮೋರಿಯಲ್ಲಿ ಅದೆಲ್ಲಿಂದಲೋ ಬಂದ ಹೆಣ್ಣು ನಾಯೊಂದು ಏಳೆಂಟು ಮರಿಗಳನ್ನು ಹಾಕಿ ಮೂರ್ನಾಲ್ಕನ್ನು ಇಲ್ಲಿಯೇ ಬಿಟ್ಟು ಉಳಿದ ನಾಲ್ಕೈದು ಮರಿಗಳನ್ನು ಪಕ್ಕದ ರಸ್ತೆಯ ಮತ್ತೊಂದು ಸುರಕ್ಷಿತ ತಾಣಕ್ಕೆ ಕರೆದುಕೊಂಡು ಹೊಗಿತ್ತು. ಮನೆಯ ಮುಂದಿನ ರಸ್ತೆಯಲ್ಲಿ ಕ್ರಿಕೆಟ್ ಆಡುವ ನನ್ನ ಮಗ ಮೋರಿಯಲ್ಲಿ ಬಿದ್ದ ತನ್ನ ಚೆಂಡನ್ನು ತೆಗೆದುಕೊಳ್ಳಲು ಹೋದಾಗ, ಇನ್ನೂ ಕಣ್ಣನ್ನೇ ತೆರೆಯದಿದ್ದ ಈ ಪುಟ್ಟ ನಾಯಿಮರಿಗಳು ಕುಂಯ್ ಕುಂಯ್ ಎಂದು ಶಬ್ಧ ಮಾಡುತ್ತಿದ್ದನ್ನು ನೋಡಿದ ತಕ್ಷಣ, ಕ್ರಿಕೆಟ್… Read More ಶಿವರಾತ್ರಿಯಂದು ಶಿವನ ಪಾದ ಸೇರಿದ ಚಿಂಟು

ಮಹಾ ಶಿವರಾತ್ರಿ

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಹಬ್ಬವೂ ಒಂದಾಗಿದ್ದು ಇದು ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ದಿನ ಬಹುತೇಕ ಶಿವಭಕ್ತರು ಇಡೀ ದಿನ ಉಪವಾಸವಿದ್ದು ಶ್ರದ್ಧಾಭಕ್ತಿಯಿಂದ ಶಿವಪೂಜೆಯನ್ನು ಮನೆಗಳಲ್ಲಿ ಮಾಡಿ ನಂತರದ ಹತ್ತಿರದ ಶಿವನ ದೇವಸ್ಥಾನಕ್ಕೆ ಹೋಗಿ ಪರಶಿವನ ದರ್ಶನ ಪಡೆದ ನಂತರ ಇಡೀ ರಾತ್ರಿ ನಿದ್ದೆ ಮಾಡದೇ ಶಿವಧ್ಯಾನ ಮಾಡುತ್ತಾ ಜಾಗರಣೆ ಮಾಡಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಆಸ್ತಿಕ ಭಕ್ತ ಮಹಾಶಯರ ನಂಬಿಕೆಯಾಗಿದೆ. ಶಿವರಾತ್ರಿಯ ಕುರಿತಾಗಿ ಅನೇಕ… Read More ಮಹಾ ಶಿವರಾತ್ರಿ

ಸ್ವರಾಂಜಲಿ

ರಘೋತ್ತಮ ಧನ್ವಂತ್ರಿ ಎಲ್ಲರ ಪ್ರೀತಿಯ ರಘು, ಬೆಂಗಳೂರಿನ ಪ್ರತಿಷ್ಟಿತ ಶೇಷಾದ್ರಿಪುರದಲ್ಲಿ ಹುಟ್ಟಿ ಬೆಳೆದ ಹುಡುಗ. ಬಾಲ್ಯದಿಂದಲೂ ಬಹಳ ಬುದ್ದಿವಂತ ಮತ್ತು ಚುರುಕಿನ ಹುಡುಗನಾಗಿದ್ದ. ಬಾಲ್ಯದಲ್ಲಿರುವಾಗಲೇ ಮನೆಯ ಪಕ್ಕದಲ್ಲಿಯೇ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಡೆಗೆ ಆಕರ್ಷಿತನಾಗಿ, ಅಣ್ಣನ ಜೊತೆ ನಿತ್ಯ ಶಾಖೆಗೆ ಹೋಗುತ್ತಿದ್ದ. ಅನೇಕರಿಗೆ ಈಗಾಗಲೇ ತಿಳಿದಿರುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಿಗೆ ಬರುವ ಹುಡುಗರಿಗೆ ಆಟಗಳು ಮತ್ತು ಅನುಶಾಸನಗಳ ಮುಖಾಂತರ ಶಾರೀರಿಕ ಮತ್ತು ದೈಹಿಕ ಬೆಳವಣಿಗೆಯಲ್ಲದೇ, ಆ ಹುಡುಗರಿಗೇ ಗೊತ್ತಿಲ್ಲದಂತೆಯೇ ಹಾಡು, ಶ್ಲೋಕ, ಅಮೃತವಚನ ಮತ್ತು… Read More ಸ್ವರಾಂಜಲಿ

ಆಪರೇಷನ್ ಬ್ಲೂ ಸ್ಟಾರ್

ಅದು ಎಂಭತ್ತರ ದಶಕ. ಈಗಿನಂತೆ ದೃಶ್ಯ ಮಾಧ್ಯಮಗಳ ಹಾವಳಿಯೇ ಇರಲಿಲ್ಲ. ಸುದ್ಧಿಯ ಮೂಲವೆಂದರೆ, ಸರ್ಕಾರಿ ಸುಪರ್ಧಿಯಲ್ಲಿದ್ದ ರೇಡಿಯೋ ಇಲ್ಲವೇ ವೃತ್ತ ಪತ್ರಿಕೆಗಳು ಮಾತ್ರ. ರೇಡಿಯೋದಲ್ಲಿನ ವಾರ್ತೆಗಳಲ್ಲಿ ಮತ್ತು ಪ್ರತಿ ದಿನ ಪತ್ರಿಕೆಗಳಲ್ಲಿ ಕಂಡು ಬರುತ್ತಿದ್ದ   ಒಂದೇ ಒಂದು ಅಂಶವೆಂದರೆ, ಪಂಜಾಬಿನಲ್ಲಿ ಇವತ್ತು ಉಗ್ರಗಾಮಿಗಳ ಧಾಳಿಯಿಂದಾಗಿ ಇಷ್ಟು ಜನ ಮೃತಪಟ್ಟರು ಅಷ್ಟು ಜನ ಮೃತಪಟ್ಟರು ಎಂಬುದೇ ಆಗಿತ್ತು. ಆರಂಭದಲ್ಲಿ  ಎಲ್ಲರೂ ಇದರ ಬಗ್ಗೆ ಆತಂಕ ಪಟ್ಟು ಕೊಳ್ಳುತ್ತಿದ್ದರಾದರೂ ನಂತರದ ದಿನಗಳಲ್ಲಿ ದಿನ ಸಾಯುವವರಿಗೆ ಅಳುವವರು ಯಾರು? ಎನ್ನುವಂತಾಗಿತ್ತು.  ಇನ್ನು… Read More ಆಪರೇಷನ್ ಬ್ಲೂ ಸ್ಟಾರ್

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು

ಅದು ಎಂಬತ್ತರ ದಶಕ ಆಗಿನ್ನೂ ದೂರದರ್ಶನ ಅಷ್ಟಾಗಿ ಪ್ರಖ್ಯಾತಿ ಹೊಂದಿರದಿದ್ದ ಕಾಲದಲ್ಲಿ ರೇಡಿಯೋ ಮನೋರಂಜನೆಯ ಪ್ರಮುಖ ಪಾತ್ರವಹಿಸುತ್ತಿತ್ತು. ಆಗೆಲ್ಲಾ ರೇಡಿಯೋಈ ಗಳಲ್ಲಿ ಚಲನಚಿತ್ರಗೀತೆಗಳು ಮತ್ತು ಭಾವಗೀತೆಗಳು ಪ್ರಸಾರವಾಗುವ ಮುಂಜೆ ಉದ್ಘೋಷಕಿಕರು ಆ ಹಾಡುಗಳ ಸಂಪೂರ್ಣ ವಿವರವನ್ನು ತಿಳಿಸುತ್ತಿದ್ದರು. ಗೀತೆ ಸಂಗೀತ, ಸಾಹಿತ್ಯ ಎಲ್ಲವನ್ನೂ ತಿಳಿಸುತ್ತಿದ್ದಾಗ ನಮಗೆ ಪದೇ ಪದೇ ಕೇಳಿ ಬರುತ್ತಿದ್ದ ಹೆಸರುಗಳೆಂದೆರೆ ಸಾಹಿತ್ಯ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ ಸಂಗೀತ ಸಿ. ಅಶ್ವಥ್. ಇಂದಿನ ಬಹುತೇಕ ಮಧ್ಯವಯಸ್ಕರು ಭಟ್ಟರ ಸಾಹಿತ್ಯವನ್ನು ಕೇಳಿಕೊಂಡು ಬೆಳೆದವರು ಎಂದರೂ ತಪ್ಪಾಗಲಾರದು.… Read More ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು