ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಕಾಫಿ ಎಂಬುದು ಹುರಿದ ಕಾಫಿ ಬೀಜಗಳಿಂದ ತಯಾರಿಸಿದ ಗಾಢ ಬಣ್ಣದ ಸ್ವಲ್ಪ ಕಹಿ ಮತ್ತು ಸ್ವಲ್ಪ ಆಮ್ಲೀಯ ಇರುವ ಪಾನೀಯವಾಗಿದ್ದು, ಅದರಲ್ಲಿರುವ ಕೆಫಿನ್ ಎಂಬ ಅಂಶ ಕುಡಿದವರ ಮೇಲೆ ಅಲ್ಪಪ್ರಮಾಣದ ಉತ್ತೇಜಕ ಪರಿಣಾಮವನ್ನು ಬೀರಿ ಅವರನ್ನು ಚೈತನ್ಯದಯಕವಾಗಿ ಇಡುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರಪಂಚಾದ್ಯಂತ ಕಾಫೀ ಒಂದು ಜನಪ್ರಿಯ ಪಾನೀಯವಾಗಿದೆ. ಹಾಗಾಗಿ ಅತ್ಯುತ್ತಮವಾದ ಕಾಫೀ ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ ಹಬೆಯಾಡುವ ಬಿಸಿನೀರಿನಿಂದ ಅದರ ಕಷಾಯ (decoction)ವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು… Read More ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

NOTA ಮತ್ತು ಮತದಾನಕ್ಕೆ ಗೈರುಹಾಜರಿ

ಚುನಾವಣಾ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ನೋಟಾ ಎಂಬುದು ಸರಿ ಎನಿಸಿದರೂ, ತಾರ್ಕಿಕವಾಗಿ ನೋಟಾ ಎಂಬುದು ನಿರರ್ಥಕ ಪ್ರಯತ್ನವಾಗಿದೆ. ಮತದಾನ ಮಾಡದವರಿಗೂ ಮತ್ತು ನೋಟಾ ಒತ್ತುವವರಿಗೂ ಪ್ರಜಾಪ್ರಭುತ್ವದ ಕುಂದು ಕೊರತೆಗಳನ್ನು ಪ್ರಶ್ನಿಸುವ ನೈತಿಕ ಹಕ್ಕು ಇರುವುದಿಲ್ಲವಾದ ಕಾರಣ, ನಾವೆಲ್ಲರೂ ನಾಳೆಯ ಚುನಾವಣೆಯಲ್ಲಿ ನಮ್ಮ ತಾಳ್ಮೆಯಿಂದ ಜಾಣ್ಮೆಯಿಂದ ಸಮರ್ಥ ಅಭ್ಯರ್ಥಿಗೆ ಮತದಾನ ಮಾಡೋಣ ಅಲ್ವೇ?… Read More NOTA ಮತ್ತು ಮತದಾನಕ್ಕೆ ಗೈರುಹಾಜರಿ

ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಬೆಂಗಳೂರಿನ ಹೃದಯಭಾಗದಲ್ಲಿರುವ ಪುರಭವನಕ್ಕೆ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಎಂಬ ಹೆಸರು ಇಡಲು ಕಾರಣವೇನು? ಆ ಕಟ್ಟಡದ ಇತಿಹಾಸ ಮತ್ತು ವೈಶಿಷ್ಟ್ಯತೆಗಳೇನು? ಆ ಕಟ್ಟಡದ ಮುಂದೆಯೇ ಪ್ರತಿಭಟನೆಗಳು ಏಕೆ ನಡೆಯುತ್ತವೆ? ಸರ್ ಪುಟ್ಟಣ್ಣ ಚೆಟ್ಟಿ ಎಂದರೆ ಯಾರು? ಅವರ ಯಶೋಗಾಧೆ ಏನು? ಎಂಬೆಲ್ಲಾ ಕುತೂಹಲಕಾರಿ ವಿಷಯಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸರ್. ಕೆ.ಪಿ. ಪುಟ್ಟಣ್ಣ ಚಟ್ಟಿ ಪುರಭವನ

ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಪ್ರತಿಭೆಯ ಜೊತೆಗೆ ಕಠಿಣ ಪರಿಶ್ರಮ ಇದ್ದರೂ, ಆರ್ಥಿಕವಾಗಿ ಸದೃಢರಾಗಿರದಿದ್ದ ಕಾರಣ, ಉತ್ತರ ಪ್ರದೇಶದ ಯುವ ಕ್ರಿಕೆಟಿಗ, ಮುಂಬೈನ ಆಜಾದ್ ಮೈದಾನದಲ್ಲೇ ಆಶ್ರಯ ಪಡೆದು, ಜೀವನೋಪಾಯಕ್ಕಾಗಿ ಪಾನಿಪುರಿ ಮಾರುತ್ತಾ, ಅಂತಿಮವಾಗಿ ಭಾರತದ ಕಿರಿಯರ ತಂಡದ ಅತ್ಯಂತ ಯಶಸ್ವಿ ಆಟಗಾರನಾಗಿ ಈ ಬಾರಿಯ 9 ಐಪಿಎಲ್ ಪಂದ್ಯಗಳಲ್ಲಿ,47.56 ಸರಾಸರಿಯಲ್ಲಿ 428 ಓಟಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಾಗಿ ಫಾಫ್ ಡ್ಲೂಪ್ಲೆಸೀಯ ಜೊತೆಯಲ್ಲಿ ಹಗ್ಗ ಜಗ್ಗಾಟದಲ್ಲಿ ಇರುವ 21ರ ಹರೆಯದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಯಶೋಗಾಥೆ ನಿಜಕ್ಕೂ ನಮ್ಮ ಇಂದಿನ ಯುವ ಜನರಿಗೆ ಪ್ರೇರಣೆಯಾಗುವಂತಿದೆ.… Read More ಪಾನಿಪುರಿ ಹುಡುಗ, ಯಶಸ್ವಿ ಜೈಸ್ವಾಲ್ ಯಶೋಗಾಥೆ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಮೊನ್ನೆ ಮಂತ್ರಾಲಯದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಭಕ್ತಾದಿಗಳನ್ನು ದೇವಾಲಯದ ಪ್ರಾಕಾರದಲ್ಲಿ ಕಾಪಾಡಿ ಗಳಿಸಿಕೊಂಡಿದ್ದ ನಂಬಿಕೆಯನ್ನು ನೆನ್ನೆ ವಿಗ್ರಹ ಆರಾಧನೆಯನ್ನೇ ನಂಬದವರನ್ನು ಕರೆಸಿ ರಾಯರ ಸನ್ನಿಧಾನದಲ್ಲಿ ರಂಜಾನ್ ಹಬ್ಬವನ್ನು ಆಚರಿಸುವ ಮೂಲಕ ಹಿಂದೂಗಳ ನಂಬಿಕೆಗಳನ್ನು ಮಣ್ಣು ಪಾಲು ಮಾಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಸೌಹಾರ್ದತೆ ಎಂದರೆ ನಮ್ಮ ನಂಬಿಕೆಗಳ ವಿರುದ್ಧವಾಗಿ ಮತ್ತೊಂದು ಧರ್ಮದ ಆಚರಣೆಗಳನ್ನು ನಮ್ಮ ಶ್ರದ್ದೇಯ ಧಾರ್ಮಿಕ ಸ್ಥಳಗಳಲ್ಲಿ ಮಾಡುವುದು ಎಂದು ಯಾವ ಧರ್ಮ ಗ್ರಂಥದಲ್ಲಿ ಬರೆದಿದೆ? … Read More ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಂಜಾನ್ ಆಚರಣೆ

ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ಸಾಧಾರಣವಾಗಿ ನಮಗೆ ಅವಶ್ಕಕತೆ ಇರುವುದೆಲ್ಲವೂ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ನಮ್ಮಾಕಿ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ.. ದಿನಾಗಲೂ ಅದೇ ಹುಳಿ, ಸಾರು ಪಲ್ಯಾನಾ… ಎಂದು ಗೊಣಗುತ್ತಾ ಅಗ್ಗಾಗ್ಗೆ… Read More ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು.

ನೂಲಿನಂತೆ ಸೀರೆ ತಾಯಿಯಂತೆ ಮಗಳು

ತಾಯಿ ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿ, ಮಗಳು ಇಂಗ್ಲೇಂಡಿನ ಪ್ರಧಾನ ಮಂತ್ರಿಯ ಪತ್ನಿಯಾಗಿ ಇಂಗ್ಲೇಂಡಿನ ದೇಶದ ಪ್ರಥಮ ಮಹಿಳೆ. ಅವರಿಬ್ಬರು ಅಷ್ಟು ದೊಡ್ಡ ಗಣ್ಯ ಮಹಿಳೆಯರಾಗಿದ್ದರೂ ಮೊನ್ನೆ ರಾಷ್ಟ್ರಪತಿಗಳ ಭವನದಲ್ಲಿ ನಡೆದುಕೊಂಡ ರೀತಿ ನಿಜಕ್ಕೂ ಅನನ್ಯ, ಅದ್ಭುತ ಮತ್ತು ಅನುಕರಣಿಯ. ಅಮ್ಮಾ ಮಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ನೂಲಿನಂತೆ ಸೀರೆ ತಾಯಿಯಂತೆ ಮಗಳು

ಬೆಂಗಳೂರು ಕರಗ

ಬೆಂಗಳೂರಿನ ಹೃದಯ ಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬಹಳ ಸಡಗರ ಸಂಭ್ರಮಗಳಿಂದ ಬಹಳ ಅದ್ದೂರಿಯಾಗಿ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆ, ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಬೆಂಗಳೂರು ಕರಗ

ಸಕಲಕಲಾ ವಲ್ಲಭ ಸಿ. ಆರ್. ಸತ್ಯ

ಎ.ಆರ್. ಕೃಷ್ನಶಾಸ್ತ್ರಿಗಳ ಮೊಮ್ಮ್ಗಗ, ಅಬ್ದುಲ್ ಕಲಾಂ ಅವರ ಒಡನಾಡಿ, ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ, ಹಾಸ್ಯಲೇಖಕ, ವೈಜ್ಞಾನಿಕ ಲೇಖಕ, ಸಂಗೀತಗಾರ. ಸಾಹಿತಿ, ಪರಿಸರ ಪ್ರೇಮಿ, ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ಎಂಬ ಹಾಸ್ಯಮಯ ವಿಂಡಬಣಾತ್ಮಕ ಕೃತಿಯಿಂದ ನಾಡಿದ ಮನೆಮಾತಾಗಿದ್ದ ಬಹುಮುಖ ಪ್ರತಿಭೆ ಶ್ರೀ ಸಿ.ಆರ್ ಸತ್ಯಾರವರು ಇಂದು ವಿಧಿವಶರಾಗಿದ್ದಾರೆ. ಸತ್ಯಾರವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಸ್ಥೂಲ ಪರಿಚಯ ಇದೋ ನಿಮಗಾಗಿ… Read More ಸಕಲಕಲಾ ವಲ್ಲಭ ಸಿ. ಆರ್. ಸತ್ಯ